Posts

ಇತ್ತೀಚಿನ ಲೇಖನಗಳು..

ವಿಶ್ವಗುರು ಬಸವಣ್ಣನವರ ವಚನದಲ್ಲಿ ಆರ್ಥಿಕತೆ ವಿಶ್ಲೇಷಣೆ - #ಲೋಕೇಶ್_ಎನ್_ಮಾನ್ವಿ.

Image
ಶ್ರಿಗುರುಬಸವಲಿಂಗಾಯ ನಮಃ  •ವಿಶ್ವಗುರು ಬಸವಣ್ಣನವರ ವಚನದಲ್ಲಿ ಆರ್ಥಿಕತೆ.• ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು. ಕಳ್ಳನಾಣ್ಯ ಸಲುಗೆಗೆ ಸಲ್ಲದು, ಕಳ್ಳನಾಣ್ಯವ ಸಲ್ಲಲೀಯರಯ್ಯಾ. ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ ಕೂಡಲಸಂಗಮದೇವಾ. ಭಾವಾರ್ಥ- ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು. ಬಸವಾದಿ ಶರಣರದ್ದು   ಕಾಯಕ ಮತ್ತು ದಾಸೋಹ ಪ್ರಧಾನವಾದ ಜೀವನ, ಉತ್ಪಾದನೆ ಮತ್ತು ವಿತರಣೆ  ದೇಶದ ಅರ್ಥಿಕತೆಯ ಬಹುದೊಡ್ಡ ಮೂಲ, ಇಲ್ಲಿ ದುಡಿತ ಕೇವಲ ತಮಗಾಗಿ ಮಾತ್ರವಲ್ಲ, ಲೋಕ ಹಿತಕ್ಕಾಗಿ, ತನ್ನೊಂದಿಗೆ ಸಮಾಜದ ಏಳಿಗೆಗಾಗಿ ಶ್ರಮಿಸುವುದೆ ಕಾಯಕ ತತ್ವ, ಭಂಡವ (ತ್ರಿಜೋರಿ)  ತುಂಬಿದ ಬಳಿಕ ಅದಕ್ಕೆ ಸುಂಕ (ತೆರಿಗೆ) ಕಟ್ಟಲೇ ಬೇಕು‌. ಇಲ್ಲದಿದ್ದರೆ. ಅದು ಕಪ್ಪುಹಣವಾಗುತ್ತದೆ ಅದು ಹೋಗಲು ಬಾರದು ಚಲಾವಣೆಗೆ ನಿಷಿದ್ಧವೆನ್ನುತ್ತಾರೆ ಬಸವಣ್ಣನವರು, ಕಳ್ಳನಾಣ್ಯ ಸಲುಗೆಗೆ ಸಲ್ಲದು, ಕಳ್ಳನಾಣ್ಯವ ಸಲ್ಲಲೀಯರಯ್ಯಾ. ತನಗಾಗಿ ತನ್ನ ಹೆಂಡಿರು ಮಕ್ಕಳಿಗಾಗಿ ಎಂದು ತೆರಿಗೆ ಕಟ್ಟದೆ, ಆದಾಯವನ್ನು  ನಾಳೆಗೆಂದು ಕೂಡಿಟ್ಟು, ನಾಳಿನ ದಿನ ದುಡಿಯದೆಯೆ ಕುಳಿದು ತಿನ್ನುವುದು, ದೇಶದ ಅರ್ಥಿಕ ವ್ಯವಸ್ಥೆಗೆ ಅದು ಮಾರಕವಾಗುತ್ತದೆ, ಅಂದರೆ ಹಣ ತ್ರಿಜೋರಿ (ಲಾಕರ್) ಸೇರದೇ ಸಮಾಜದಲ್ಲಿ ಚಲಾವಣೆಯಲ್ಲಿರಬೇಕು. ನಿತ್ಯ ನಿರಂತರ ಕಾಯಕ, ದೇಶದ ಅಭಿವೃದ್ಧಿಗೆ ಪೂರಕ, ಒಂದು ದಿನವೂ ಒಬ್ಬ ವ್ಯಕ್ತಿಯೂ ಕಾಯಕ ಮಾಡದೇ ಉಣ...

‘ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ’ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ವಚನದ ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ ಇವರಿಂದ.

Image
‘ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ’ ಬಟ್ಟಬಯಲೆಲ್ಲ ಗಟ್ಟಿಗೊಂಡಡೆ ಸ್ವರ್ಗ ಮತ್ರ್ಯ ಪಾತಾಳಕ್ಕೆ ಠಾವೆಲ್ಲಿಯದೊ ? ಮೇಘನಿರ್ಮಳಜಲವೆಲ್ಲ ಮುತ್ತಾದಡೆ ಸಪ್ತಸಾಗರಂಗಳಿಗೆ ಉದಕವೆಲ್ಲಿಯದೊ ? ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದಡೆ ಮುಂದೆ ಭವದ ಬಳ್ಳಿ ಬೆಳೆಯಲಿನ್ನೆಲ್ಲಿಯದೊ ,?   ಇದು ಕಾರಣ ಕೂಡಲಚೆನ್ನಸಂಗಯ್ಯಾ ಲಕ್ಷಕ್ಕೊಬ್ಬ ಭಕ್ತ  ಕೋಟಿಗೊಬ್ಬ ಶರಣ,.                                   ಭಾವಾರ್ಥ- ಬಟ್ಟಬಯಲೆಲ್ಲ ಗಟ್ಟಿಗೊಂಡಡೆ ಸ್ವರ್ಗ ಮತ್ರ್ಯ ಪಾತಾಳಕ್ಕೆ ಠಾವೆಲ್ಲಿಯದೊ ? ಎಡೆಯಿಲ್ಲದ ಕಡೆಯಿಲ್ಲದ, ಆರಂಭವೂ ಇಲ್ಲದ, ಅಂತ್ಯವೂ ಇಲ್ಲದ, ಕಾಲಕಲ್ಪನೆಗಳಿಗೆ ಗೋಚರಿಸದ ಖಗೋಳ ವಿಜ್ಞಾನಕ್ಕೂ ನಿಲುಕದ ವಿಸ್ಮಯ ಕೌತುಕ, ಸೂರ್ಯ_ಚಂದ್ರ_ಭೂಮಿಗಳಂಥಹ ಸಹಸ್ರ ಸಹಸ್ರ ಗ್ರಹಗಳನ್ನೊಳಗೊಂಡಿರುವ ಬ್ರಹ್ಮಾಂಡ (Galaxy), ಅಂತಪ್ಪ  ಸಹಸ್ರ ಸಹಸ್ರ (Galaxy) ಬ್ರಹ್ಮಾಂಡಗಳನ್ನೇ ತನ್ನೊಳು ಕಿಂಚಿತ್ತಾಗಿ ಇಟ್ಟುಕೊಂಡದ್ದೇ ಶರಣರು ಹೇಳುವ   ಬಯಲು_ಬಟ್ಟಬಯಲು, ಅಂತಹ ಬಟ್ಟಬಯಲು ಭೂಮಿ,ನೀರು,ಅಗ್ನಿ,ವಾಯು,ಆಕಾಶವನ್ನೊಳಗೊಂಡ ಬಟ್ಟಬಯಲು ಪ್ರಕೃತಿಯೇ ಹೆಪ್ಪಾಗಿ ಗಟ್ಟಿಕೊಂಡರೆ, ಉಸಿರಾಟಕ್ಕೆ ಆಮ್ಲಜನಕವಿಲ್ಲ, ಕುಡಿಯಲು ನೀರಿಲ್ಲ, ಚಲನೆಯಿಲ್ಲದ ಆಕಾಶ, ಹೆಪ್ಪುಗಟ್ಟಿದ ಅಂತರ್ಜಲದಿಂದ   ಜಲಚರ_ಕ್ರಿಮಿಕೀಟ_ಪಶುಪಕ...

ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ? ಹಡಪದ ಅಪ್ಪಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ? ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ ? ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ ? ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ? ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ. ✍🏾-; ನಿಜಸುಖಿ ಹಡಪದ ಅಪ್ಪಣ್ಣನವರು. ಭಾವಾರ್ಥ - ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ? ಈ ಭೂಮಿಯ ಮೇಲಿಹ ಕೆರೆ, ಹೊಳೆ, ನದಿ ದಾಂಟಲು ಅರಗೋಲುಗಳ ಅವಶ್ಯಕತೆ ಇದೆಯೇ ಹೊರತು, ಆಕಾಶದ ಮೋಡದಲ್ಲಿಹ ಮೇಘಜಲವನ್ನು ದಾಂಟಲು ಯಾವ ಅರಗೋಲಿನ ಅವಶ್ಯಕತೆಯ ಹಂಗಿಲ್ಲ. ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ ? ಮರೆವು ಅಳಿದು, ಅರಿವಿನ ಕಣ್ತೆರೆದು, ಪಂಚೇಂದ್ರಿಯಗಳೆಲ್ಲ ಜ್ಞಾನೇಂದ್ರಿಯಗಳಾಗಿ ತನ್ನ ಮನಸ್ಸನ್ನು  ನಿರಾಕಾರ ಸೃಷ್ಟಿಕರ್ತನ ಬಯಲಲ್ಲಿರಿಸಿದ  ಶಿವಶರಣರಿಗೆ ಯಾವುದೇ (ಮನುಜ ಕಲ್ಪಿತ) ಸಾಕಾರದ ಹಂಗಿಲ್ಲ ಅವಶ್ಯಕತೆಯೂ ಇಲ್ಲ. ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ ? ಬೇಕು ಬೇಡಗಳಿಂದಾಚೆ, ಆಸೆ ಆಮಿಷಗಳಿಂದಾಚೆ, ನಾನು ನನ್ನದೆಂಬ ಭ್ರಮೆಯಿಂದಾಚೆ,  ನನ್ನದು ತನ್ನದೆಂಬ ಮೋಹದಿಂದಾಚೆಗೆ  ಇರುವ ಶಿವಶರಣರಿಗೆ ಯಾವುದೇ ಈ ಲೋಕದ ಹಂಗಿಲ್ಲ.. ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ? ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ. ಇಂತೀ ತನ್ನ ತಾನರಿದು ನಿಮ್ಮ...

ಸಿದ್ಧಿಪುರುಷ ಸದ್ಗುರು ಯಲ್ಲಾಲಿಂಗಪ್ರಭು ಮಹಾರಾಜರು,

Image
ಪರಮತ್ಯಾಗಿ ಘನವೈರಾಗಿ,  ಅಲ್ಲಮನಂತೆ ಬದುಕಿದ ಯೋಗಿ , ಸಿದ್ಧಿಪುರುಷ ಸದ್ಗುರು ಯಲ್ಲಾಲಿಂಗಪ್ರಭು ಮಹಾರಾಜರು , ಮುಗಳಖೋಡ   ಗ್ರಾಮದ ಸ್ಮಶಾನ ಭೂಮಿಯನ್ನೇ ಮುಕ್ತಿ ಮಂದಿರವಾಗಿದ ಯೋಗಿ , ಇಂದಿಗೆ 138 ವರ್ಷಗಳ ಹಿಂದೆ ಶರಣರ ನಾಡು ವಿಜಯಪುರದ ಇಂಡಿ ತಾಲೂಕಿನ ಮಿರಗಿ ಎಂಬ ಪುಟ್ಟ ಗ್ರಾಮದಲ್ಲಿ ಶಿವಪ್ಪ ಕಾಶಿಬಾಯಿ ಎಂಬ ಪುಣ್ಯ ದಂಪತಿಗಳ ಮಗನಾಗಿ ಜನಿಸಿ ಬಂದ ಮಗುವೇ ಯಲ್ಲಪ್ಪ   ಎಂಟು ವರ್ಷ ಪ್ರಾಯದಲ್ಲೇ ಶಿವ ಧ್ಯಾನ ನಿರತನಾಗಿ   ಕುರಿ ಕಾಯುವ ಕಾಯಕ ಮಾಡುತ್ತಿದ್ದರು , ಇಪ್ಪತ್ತು ವರ್ಷ ತುಂಬುವಷ್ಟರಲ್ಲಿ ಗರಡಿ ಮನೆಯಲ್ಲಿ ಪಳಗಿ ಕುಸ್ತಿ ಪಟುವಾಗಿದ್ದ ಯಲ್ಲಪ್ಪ , ಮನೆಯವರ ಬಲವಂತಕ್ಕೆ ಒಲ್ಲದ ಮನಸ್ಸಿನಿಂದಲೇ ಹೊನ್ನಮ್ಮ ಎಂಬವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು , ಸಂಸಾರವೂ ಅನ್ಯೂನ್ಯವಾಗಿ ಸಾಗಿತ್ತು ಮಡದಿ ಗರ್ಭವತಿಯಾದಳು , ನವಮಾಸಗಳು ತುಂಬುವಷ್ಟರಲ್ಲೇ ತಾಯಗರ್ಭದಲ್ಲೇ ಶಿಶು ಸತ್ತಿತು ಅದರೊಂದಿಗೆ ಯಲ್ಲಪ್ಪನ ಮಡದಿ ಹೊನ್ನಮ್ಮಳು ಕೂಡ ಕೊನೆಉಸಿರೆಳೆದು ಬಾರದ ಲೋಕಕ್ಕೆ ಹೊರಟಳು , ಸುತ್ತಮುತ್ತಲ ಗ್ರಾಮಗಳಲ್ಲಿ   ಕುಸ್ತಿ ಪಂದ್ಯಾವಳಿಗಳನ್ನು ಗೆದ್ದು ಜಗಜಟ್ಟಿಯಾಗಿ ಖುಷಿಯಿಂದ ಬಂದ ಯಲ್ಲಪ್ಪ , ಗರ್ಭಿಣಿಯಾದ ತನ್ನ ಮಡದಿ ಹಾಗೂ ಮಗುವನ್ನು ಕಳೆದು ಕೊಂಡ ಯಲ್ಲಪ್ಪ , ಅದೇ ಚಿತೆಯಲ್ಲಿ ಸಂಸಾರ ...

‘ರಾಜ_ಬಿಜ್ಜಳನ_ಸೊಕ್ಕು_ಮುರಿದ_ಶರಣ_ಮಾಚಯ್ಯ’👍🏻👌 ✍🏾ವಿಶೇಷ ಲೇಖನ-;#ಲೋಕೇಶ್_ಎನ್_ಮಾನ್ವಿ.

Image
‘#ರಾಜ_ಬಿಜ್ಜಳನ_ಸೊಕ್ಕು_ಮುರಿದ_ಶರಣ_ಮಾಚಯ್ಯ’👍🏻👌 ಈ ಭಾವಚಿತ್ರವನ್ನು ಬಹುತೇಕರು ನೋಡಿರುತ್ತೀರಿ ಇದರ ಹಿಂದಿನ ರೋಚಕವಾದ ನೈಜ ಕಥೆನ್ನು ತಿಳಿಯೋಣ ಬನ್ನಿ, ೧೨ನೇ ಶತಮಾನದಲ್ಲಿ ಮಹಾಮಾನತಾವಾದಿ, ವಿಶ್ವಗುರು ಬಸವಣ್ಣನವರು ಕಲ್ಯಾಣ ರಾಜ್ಯದ ಪ್ರಧಾನಮಂತ್ರಿಯಾಗಿರುತ್ತಾರೆ, ಪ್ರತಿದಿನ ಬಸವಣ್ಣನವರು ರಾಜ ಬಿಜ್ಜಳನ ಸಭೆಗೆ ಹೋಗುತ್ತಿರುತ್ತಾರೆ ಪ್ರತಿಬಾರಿ ಹೋದಾಗಲೂ ಅವರ ವಸ್ತ್ರಗಳು ಪಳಪಳನೆ ಹೊಳೆಯುತ್ತಿರುತ್ತವೆ, ಇದನ್ನು ಕಂಡ ಕೊಂಡೆ ಮಂಚಣ್ಣ ರಾಜ ಬಿಜ್ಜಳನಿಗೆ ಕಿವಿ ಊದುತ್ತಾನೆ, ಪ್ರಧಾನಿ ಬಸವರಸರ ವಸ್ತ್ರಗಳು ಎಷ್ಟು ಶುಭ್ರವಾಗಿವೆ ಪಳಪಳನೇ ಮಿಂಚುತ್ತಿವೆ, ಇದನ್ನು ಒಗೆಯುವಾತ ಮಾಡಿವಾಳ ಮಾಚಿದೇವ ಅವನಿಗೆ ನಿಮ್ಮ ವಸ್ತ್ರವನ್ನು ಒಗೆಯಲು ಕಳಿಸಿದರೆ ನಿಮ್ಮ ವಸ್ತ್ರವೂ ಸುಂದರವಾಗಿ ಕಾಣುತ್ತವೆ ಎಂದಾಗ, ಬಿಜ್ಜಳ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಲು ಬಸವಣ್ಣನಿಗೆ ದುಂಬಾಲು ಬಿದ್ದ, ಮಡಿವಾಳಯ್ಯ ಪರಮ ಭಕ್ತ , ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿ ಹೇಳಿದ , ಅದನ್ನು ರಾಜ ಲೆಕ್ಕಿಸದೆ ಮಾಸಿದ ತನ್ನ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ ,  ಮಾಚಯ್ಯ ಶರಣರ ಬಟ್ಟೆ ಮಡಿಮಾಡುವಾಗ ಒಂದು ಕೈಯಲ್ಲು ಘಂಟೆ ಇನ್ನೊಂದು ಕೈಯಲ್ಲು ಖಡ್ಗ ವಿರುತ್ತಿತ್ತು, ಭವಿಗಳು ಶರಣರ ಬಟ್ಟೆ ಮುಟ್ಟಲು ಬರಬಾರದು ಎಂದು ಬರುವಾಗಲೇ ಘಂಟೆಯ ನಾದ ಮಾಡುತ್ತಿದ್ದರು ಮಾಚಯ್ಯ. ಬಸವಣ್ಣನ ಬಟ್ಟೆ ಮಡಿಮಾಡುತ್ತಿರುವಾಗ ಭವಿ ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ...

ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, -: ಅಲ್ಲಮಪ್ರಭುದೇವರ ವಚನ. ✍🏾-;ವಿಶ್ಲೇಷಣೆ- ಲೋಕೇಶ್_ಎನ್_ಮಾನ್ವಿ.

Image
ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ. ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ. ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.                  ವಚನ-;ಅಲ್ಲಮಪ್ರಭುದೇವರು. ಅಲ್ಲಮರ ಈ ವಚನ ಲಿಂಗಾನುಸಂಧಾನದ ನಂತರ ಅದಕ್ಕೂ ಮೀರಿದ ಪರಿಪೂರ್ಣ ನಿಜ ಸುಖದ  ಬಯಲ ಬಿಡಾಡಿಗಳಿಗೆ ಲಭಿಸುವ ಅನಂತತೆಯ ಆನಂದವಾಗಿದೆ. ಕಣ್ಣಿಂಗೆ ಕಣ್ಣು,  ಕಣ್ಮುಚ್ಚಿ ಮಲಗಿದರೂ ಇಡೀ ಜಗತ್ತನ್ನೇ ತಂದು ತೋರುವ ಮನಸ್ಸು, ನೋಡದ ವಸ್ತುವನ್ನು, ಕಲ್ಪಿಸುವಷ್ಟರಲ್ಲಿ ಅದರ ಚಿತ್ರವನ್ನೇ ತಂದಿಡಬಲ್ಲ ಮನಸ್ಸು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ,  ಅದು ಮನಸ್ಸಿಗೇ ಮನಸ್ಸು ಅರಿವೆಂಬ ಕಣ್ಣು, ಕಂಡಿದ್ದನ್ನು  ಪ್ರಮಾಣಿಸಿ ನೋಡುವ ಅರಿವಿನ ಕಣ್ಣು , ಅದೇ ನೇತ್ರ. ಆ ನೇತ್ರವೇ (ಅರಿವಿನ ದೃಷ್ಠಿಯೇ) ಲಿಂಗವನ್ನು ಅನುಸಂಧಾನಿಸುವ ಸೂತ್ರ, ಆ ಸೂತ್ರವಿಡಿದು ಜ್ಯೋತಿವಿಡಿದು ಜ್ಯೋತಿಯಾದಂತೆ ಸೂತ್ರವೇ ಲಿಂಗ, ಲಿಂಗವೆ ಗುಹ್ಯ, ಹಿಡಿದ ಸೂತ್ರ ಕಾಣಲಾರದ ಪಟ, ಅದುವೇ ಪ್ರಕೃತಿಯ ಅಗೋಚರ ಸತ್ಯ ಗುಹ್ಯ. ಗುಹ್ಯಕ್ಕೆ ಗುಹ್ಯ, ಅಗೋಚರಕ್ಕೂ ಅಗೋಚರ ಪರಮ ವಿಸ್ತ್ರುತ ವಿಸ್ತಾರ ಸತ್ಯವದು,  ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೂ ರಹಸ್ಯ ಸೃಷ್ಠಿಯ ಪ್ರತಿ ಚಲನೆಯೂ   ಕ್ಷಣಕ್ಷಣಕ್ಕೂ ...