ವಿಶ್ವಗುರು ಬಸವಣ್ಣನವರ ವಚನದಲ್ಲಿ ಆರ್ಥಿಕತೆ ವಿಶ್ಲೇಷಣೆ - #ಲೋಕೇಶ್_ಎನ್_ಮಾನ್ವಿ.

ಶ್ರಿಗುರುಬಸವಲಿಂಗಾಯ ನಮಃ •ವಿಶ್ವಗುರು ಬಸವಣ್ಣನವರ ವಚನದಲ್ಲಿ ಆರ್ಥಿಕತೆ.• ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು. ಕಳ್ಳನಾಣ್ಯ ಸಲುಗೆಗೆ ಸಲ್ಲದು, ಕಳ್ಳನಾಣ್ಯವ ಸಲ್ಲಲೀಯರಯ್ಯಾ. ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ ಕೂಡಲಸಂಗಮದೇವಾ. ಭಾವಾರ್ಥ- ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು. ಬಸವಾದಿ ಶರಣರದ್ದು ಕಾಯಕ ಮತ್ತು ದಾಸೋಹ ಪ್ರಧಾನವಾದ ಜೀವನ, ಉತ್ಪಾದನೆ ಮತ್ತು ವಿತರಣೆ ದೇಶದ ಅರ್ಥಿಕತೆಯ ಬಹುದೊಡ್ಡ ಮೂಲ, ಇಲ್ಲಿ ದುಡಿತ ಕೇವಲ ತಮಗಾಗಿ ಮಾತ್ರವಲ್ಲ, ಲೋಕ ಹಿತಕ್ಕಾಗಿ, ತನ್ನೊಂದಿಗೆ ಸಮಾಜದ ಏಳಿಗೆಗಾಗಿ ಶ್ರಮಿಸುವುದೆ ಕಾಯಕ ತತ್ವ, ಭಂಡವ (ತ್ರಿಜೋರಿ) ತುಂಬಿದ ಬಳಿಕ ಅದಕ್ಕೆ ಸುಂಕ (ತೆರಿಗೆ) ಕಟ್ಟಲೇ ಬೇಕು. ಇಲ್ಲದಿದ್ದರೆ. ಅದು ಕಪ್ಪುಹಣವಾಗುತ್ತದೆ ಅದು ಹೋಗಲು ಬಾರದು ಚಲಾವಣೆಗೆ ನಿಷಿದ್ಧವೆನ್ನುತ್ತಾರೆ ಬಸವಣ್ಣನವರು, ಕಳ್ಳನಾಣ್ಯ ಸಲುಗೆಗೆ ಸಲ್ಲದು, ಕಳ್ಳನಾಣ್ಯವ ಸಲ್ಲಲೀಯರಯ್ಯಾ. ತನಗಾಗಿ ತನ್ನ ಹೆಂಡಿರು ಮಕ್ಕಳಿಗಾಗಿ ಎಂದು ತೆರಿಗೆ ಕಟ್ಟದೆ, ಆದಾಯವನ್ನು ನಾಳೆಗೆಂದು ಕೂಡಿಟ್ಟು, ನಾಳಿನ ದಿನ ದುಡಿಯದೆಯೆ ಕುಳಿದು ತಿನ್ನುವುದು, ದೇಶದ ಅರ್ಥಿಕ ವ್ಯವಸ್ಥೆಗೆ ಅದು ಮಾರಕವಾಗುತ್ತದೆ, ಅಂದರೆ ಹಣ ತ್ರಿಜೋರಿ (ಲಾಕರ್) ಸೇರದೇ ಸಮಾಜದಲ್ಲಿ ಚಲಾವಣೆಯಲ್ಲಿರಬೇಕು. ನಿತ್ಯ ನಿರಂತರ ಕಾಯಕ, ದೇಶದ ಅಭಿವೃದ್ಧಿಗೆ ಪೂರಕ, ಒಂದು ದಿನವೂ ಒಬ್ಬ ವ್ಯಕ್ತಿಯೂ ಕಾಯಕ ಮಾಡದೇ ಉಣ...