ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

 // ಶ್ರೀಗುರು ಬಸವಲಿಂಗಾಯ ನಮಃ //


~ವಿಶ್ವದ ಮೊಟ್ಟಮೊದಲ ಸಂಸತ್ತು~

‘ಅನುಭವ ಮಂಟಪ’

ಇದು ಕಲ್ಲುಗಳಿಂದ ಕಟ್ಟಿದ್ದಲ್ಲ, ಪವಿತ್ರ ಮನಸ್ಸುಗಳಿಂದ ಕಟ್ಟಿದ್ದು,



The Kalyana Files


ಜಗವೇ ಅಜ್ಞಾನದ ಅಂಧಕಾರದಲ್ಲಿ ಬಿದ್ದಿರಲು 

ಬಸವಣ್ಣನವರು ಜ್ಞಾನ ಜ್ಯೋತಿಯಾಗಿ ಬಂದರು 

ಈಗಿನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ  ಬ್ರಾಹ್ಮಣ ಮನೆತನದ ಅಗ್ರಹಾರದ ಒಡೆಯನಾದ ಮಾದರಸ ಮತ್ತು ಪರಮ ಶಿವಭಕ್ತೆ ಮಾದಲಾಂಬಿಕೆಯವರ ಗರ್ಭದಲ್ಲಿ ಬಸವಣ್ಣ ಜನಿಸಿ ಬರುತ್ತಾರೆ, ಇವರ ತಾಯಿಯ ತವರು ಮನೆಯಾದ ಇಂಗಳೇಶ್ವರದಲ್ಲಿ ಬಸವಣ್ಣನವರ ಜನನವಾಗುತ್ತದೆ, ಸುದ್ದಿಯು ಬಾಗೇವಾಡಿಯಲ್ಲಿರುವ ಅವರ  ತಂದೆ ಮಾದರಸ ತಲುಪಿಸುವ ಸಂದರ್ಭದಲ್ಲಿ, ಅಲ್ಲಿ ಒಂದು ಘಟನೆ ನಡೆಯುತ್ತಿರುತ್ತದೆ, ಬಸವರು ಹುಟ್ಟುವ ಮುನ್ನ ಮೇಲ್ಜಾತಿ ಎನಿಸಿಕೊಂಡವರಲ್ಲದೆ ಮತ್ತಾರು ಕೂಡ ಶಾಲೆ ಕಲಿಯಬಾರದು, ಪೂಜೆ ನೋಡಬಾರದು, ನೋಡಿದರೆ ಕೇಳಿದರೆ ಅವರ ಕಿವಿಯಲ್ಲಿ ಕಾದ ಕಬ್ಬಿಣದ ರಸವನ್ನು ಹಾಕುತ್ತಿದ್ದರು, ಕದ್ದು ನೋಡಿದರೆ ಅವನ ಕಣ್ಣನ್ನೇ ಕೀಳುತ್ತಿದ್ದರುಹೀಗಿರುವಾಗ ದಲಿತನೊಬ್ಬ. ಗುರುಕುಲದ ಬಳಿ ನಿಂತು  ಪಾಠವನ್ನು ಕದ್ದು ಕೇಳಿದನೆಂದು, ಪಂಚಾಯಿತಿ ಸೇರಿಸಿ ಅಗ್ರಹಾರದ ಒಡೆಯನಾದ ಮಾದರಸರನ್ನು ಕರೆಸಿ ಶಿಕ್ಷೆ ವಿಧಿಸುವಂತೆ ಪಟ್ಟು ಹಿಡಿದಿರುತ್ತಾರೆ ಮೇಲ್ಜಾತಿ ಎನಿಸಿದವರು, ಇನ್ನೇನು ಮಾದರಸರು ಶಿಕ್ಷೆ ವಿಧಿಸಬೇಕು ಅಷ್ಟರಲ್ಲೇ ಇಂಗಳೇಶ್ವರದಿಂದ ಒಂದು ಸುದ್ಧಿ ಬರುತ್ತದೆ, ಅದರಲ್ಲಿ ಮಾದರಸರಿಗೆ ಗಂಡು ಮಗುವಾದ ಸುದ್ದಿ ತಿಳಿದು, ಸಂತಸಗೊಂಡ ಮಾದರಸ ಅಂದು ವಿಧಿಸುತ್ತಿದ್ದ ಶಿಕ್ಷೆಯನ್ನು ರದ್ಧು ಮಾಡಿ ದಲಿತನಿಗೆ ಬಿಡುಗಡೆ ಮಾಡುತ್ತಾನೆ, ನೋಡಿ ಬಸವಣ್ಣನವರು ಹುಟ್ಟಿದ ಸುದ್ದಿಯೇ  ಎದೆಷ್ಟೋ ಜೀವಗಳಿಗೆ ವರದಾನವಾಗಿಯ್ತು ಅಲ್ಲವೇ, ಮೂರು ತಿಂಗಳಲ್ಲಿ ಮಗುವಿಗೆ ಬಸವಾ ಎಂದು ನಾಮಕರಣ ಮಾಡುತ್ತಾರೆ, ನಂತರ ಮಾದಲಾಂಬಿಕೆಯ   ಮಡಿಲಿನಲ್ಲಿ  ಬಾಗೇವಾಡಿಗೆ ಬರುತ್ತಾರೆ ಬಾಲ ಬಸವ



ಚಿಕ್ಕಂದಿನಲ್ಲೇ ಅಹಿಂಸೆಯ ಪರ, ಅಸಮಾನತೆಯ ವಿರುದ್ಧ ನಿಲುವು

ಹೊಂದಿದ್ದ ಬಸವಣ್ಣನವರು, ಅಪಾರವಾದ ಭಕ್ತಿ-ಜ್ಞಾನ ಹೊಂದಿ, ಅತ್ಯಂತ ತೇಜೆಸ್ಸಿನಿಂದ ಕಂಗೊಳಿಸುತ್ತಿದ್ದರು, ಜಾತೀಯತೆ ತುಂಬಿದ ವ್ಯವಸ್ಥೆಯ ಮೌಢ್ಯತೆಯನ್ನು ದಿಕ್ಕರಿಸಿ, ಇತರರನ್ನು ತನ್ನಂತೆ ಕಂಡು ಗುರುಕುಲಕ್ಕೆ ಕರೆದ್ಯೊದರು ಆದರೆ ಜಿಟ್ಟುಗಟ್ಟಿದ ಸಮಾಜ ಅದನ್ನು ಒಪ್ಪದಾಗ ತಾನೇ ಎಲ್ಲರೊಂದಿಗೆ ಬೆರೆತು ಆಟವಾಡುತ್ತಾ , ಜೊತೆಜೊತೆಗೆ ತಾನು ಕಲಿತ ಅಕ್ಷರಜ್ಞಾನವನ್ನು  ಇತರ ಮಕ್ಕಳಿಗೂ ಕಲಿಸತೊಡಗಿದರು, ಆ ಚಿಕ್ಕ ವಯಸ್ಸಿಗೆ ಬಡವರ ಬಾಳಿಗೊಂದು ಆಶಾ ಕಿರಣವಾಗಿ ಒರಹೊಮ್ಮಿದ  ಬಸವಣ್ಣನವರು, ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುತ್ತಾರೆ, ಪ್ರಾಣಿಗಳ ಚರ್ಮ ಸುಲಿದು ಪಾದರಕ್ಷೆ ಮಾಡುವವರು ಕೀಳುಜಾತಿ ಅಂಥವರನ್ನು ಮುಟ್ಟಿದರೆ ಮೈಲಿಗೆ ಎಂದಾದರೆ  ಅವರೇ ಮಾಡಿದ ಚರ್ಮದ ಪಾದರಕ್ಷೆಗಳನ್ನು ಹಾಕಿಕೊಂಡು ತಿರುಗುವ  ನೀವು ಮತ್ತು ನಿಮ್ಮ ಮನಸ್ಥತಿ ಕೊಳಕು ಮೈಲಿಗೆ ಯಾಗಿದೆ ಎಂದು ಕಟುವಾಗಿ ಟೀಕಿಸುತ್ತಾರೆ, ನೊಂದವರ ಬೆಂದವರ ಕಣ್ಣೀರು ಒರೆಸಿ ಮಮ್ಮಲ  ಮರಗುತ್ತಾರೆ  , ಅಷ್ಟರಲ್ಲೇ ಬಸವಣ್ಣನವರಿಗೆ 8 ವರ್ಷ ತುಂಬುತ್ತವೆ, ಮನೆಯಲ್ಲಿ  ಬ್ರಾಹ್ಮಣ-ವೈಧಿಕ ಸಂಪ್ರದಾಯದಂತೆ ಉಪನಯನ ಜನಿವಾರ ಧಾರಣೆ ಮಾಡಲು ತಯ್ಯಾರಿ ನಡೆದಿರುತ್ತದೆ, ಇದನ್ನು ಕಂಡ ಬಸವಣ್ಣನವರು ಏನು ವಿಶೇಷ ಮನೆಯಲ್ಲಿ ಎಂದು ತನ್ನ ತಾಯಿಯನ್ನು ಕೇಳುತ್ತಾರೆ, ಮಾದಲಾಂಬಿಕೆಯವರು ಕೇಳುತ್ತಾರೆ ಮಗು ಬಸವಾ ನಿನಗೆ ಉಪನಯನ ಮಾಡ್ತಿದಾರೆ ಕಂದ, ಎಂದು ಮರುಕ್ಷಣವೇ ಬಸವಣ್ಣ  ಕೇಳುತ್ತಾರೆ ತನ್ನ ಅಕ್ಕನಿಗೆ ಉಪನಯವ ಆಗಿದೆಯೇ.?  ಎಂದು, ಅವರ ತಾಯಿ ಉತ್ತರಿಸುತ್ತಾಳೆ ಇಲ್ಲ ಕಂದ ನಾವು ಸ್ತ್ರೀಯರು ಮುಟ್ಟು ಮೈಲಿಗೆ ಇರುತ್ತದೆ ಅದಕ್ಕಾಗಿ ನಮಗೆ ಧಾರ್ಮಿಕ ಸ್ವಾತಂತ್ರ್ಯ ಇಲ್ಲ, ನಾವು ಗಂಡಿಗಿಂತ ಕನಿಷ್ಠರಂತೆ, ಅದಕ್ಕೆ ನನಗೂ ಜನಿವಾರ ಇಲ್ಲ, ನಿಮ್ಮ ಅಕ್ಕನಿಗೂ ಜನಿವಾರ ಧಾರಣೆ ಮಾಡಿಸಿಲ್ಲ, ನಮ್ಮ ಪಾಲು ಎರಡೆಳೆ ದಾರ ನಮ್ಮ ಗಂಡನಾದವನೇ ಹಾಕಿಕೊಳ್ಳಬೇಕಂತೆ ನಾವು ಹೆಣ್ಣಾಗಿ ಹುಟ್ಟಿದ್ದೇ ತಪ್ಪಂತೆ ಹೆಣ್ಣು ಶೂಧ್ರಳಂತೆ ಬಸವಾ ಎಂದು ತಾಯಿ ಅಳುತ್ತಾರೆ, ಅಕ್ಕನನ್ನು ಕೇಳಿದಾಗ  -ಹೌದು ಬಸವಾ  ಜಿಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಹೋರಾಡುವವರು ಯಾರೂ ಇಲ್ಲವಲ್ಲ ಬಸವ ಎಂದು ಹೇಳಿದ್ದೆ ತಡ, ಬಸವಣ್ಣನವರು ನಾನಿದ್ದೇನೆ ಅಮ್ಮಾ , ನಾನಿದ್ದೇನೆ ಅಕ್ಕ, ನಿಮಗೆ ಇಲ್ಲದ ಜನಿವಾರ ಅದು ನನಗೂ ಬೇಡ, ಇದು ನಮ್ಮ ಸಮಾಜಕ್ಕೆ ಅಂಟಿದ ನೇಣುದಾರ ಕಳಂಕ ಎಂದು ಹೇಳುತ್ತಾರೆ,-

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ ಜಲ-ಬಿಂದುವಿನ ವ್ಯವಹಾರ ಒಂದೇ
ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ. ಏನನೋದಿ
ಏನ ಕೇಳಿ
ಏನು ಫಲ ಕುಲಜನೆಂಬುದಕ್ಕೆ ಆವುದು ದೃಷ್ಟ ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ಎಂದುದಾಗಿ
ಕಾಸಿ ಕಮ್ಮಾರನಾದ
ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ
ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ ಇದು ಕಾರಣ ಕೂಡಲಸಂಗಮದೇವಾ
ಲಿಂಗಸ್ಥಲವನರಿದವನೆ ಕುಲಜನು.

ಇಲ್ಲಿ ಜಾತಿ ಅನ್ನೋದೇ ಇಲ್ಲ , ಗಂಡು ಹೆಣ್ಣು ಇಬ್ಬರೂ ಸಮಾನರು ಇಬ್ಬರಲ್ಲಿರುವ ಜೀವ ಚೈತನ್ಯ ಆತ್ಮವು ಒಂದೇ ಆಗಿದೆಮೇಲು ಕೀಳೆಂಬುದು ಹುಸಿ  ಎಲ್ಲರೂ ಸಮಾನರೇ ಎಂದು ವಾದಿಸಿ ಮನೆಯಲ್ಲಿ ನಡೆಯುತ್ತಿದ್ದ ಹೋಮವನ್ನು ನೋಡಿ ಅದಕ್ಕೆ ಹಾಕುತ್ತಿದ್ದ ಬಟ್ಟೆ ಅವಲಕ್ಕಿ ದ್ರವ್ಯಗಳನ್ನು ಕಂಡು ಹಸಿದವರ ಹೊಟ್ಟೆಯ ಮೂಲಕ ಶಿವನಿಗೆ ಅರ್ಪಿಸಿ ಎಂದು ತಿಳಿ ಹೇಳುತ್ತಾರೆ, ಇದನ್ನು ಒಪ್ಪದ ವೈದಿಕರು ನಾವು ಅಗ್ನಿಯ ಮೂಲಕವೇ ದೇವರಿಗೆ ಅರ್ಪಿಸುತ್ತೇವೆ ಎಂದಾಗ  ಹೋಮ ಮಾಡುತ್ತಿದ್ದ ಪುರೋಹಿತನ ಮನೆಗೆ ಬೆಂಕಿ ಬೀಳುತ್ತದೆ, ಆದರೆ ಬೆಂಕಿಗೆ ಬೈದು ಬೀದಿಯ ಮಣ್ಣನ್ನು ಬಚ್ಚಲ ನೀರನ್ನು ಸುರಿದು ಹಾಳಾದ ದೇವ್ರು ನಮ್ಮ ಮನೆಗೆ ಬೆಂಕಿ ಬಿಳಿಸಬೇಕಿತ್ತಾ ಎಂದು ಬೈಯ್ಯುತ್ತಾರೆ ಇದನ್ನು ಕಂಡ ಬಸವಣ್ಣನವರು ಕೆಳಗಿನ ವಚನವನ್ನು ಹೇಳುತ್ತಾರೆ,

ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು ಕಿಚ್ಚೆದ್ದು ಸುಡುವಾಗ ಬಚ್ಚಲ ನೀರ
ಬೀದಿಯ ದೂಳ ಹೊಯ್ದು ಬೊಬ್ಬಿಟ್ಟೆಲ್ಲರ ಕರೆವರಯ್ಯಾ. ಕೂಡಲಸಂಗಮದೇವಾ
ವಂದನೆಯ ಮರೆದು ನಿಂದಿಸುತ್ತಿದ್ದರು

ಅಗ್ನಿ ದೇವರಲ್ಲ, ಜಲ ದೇವರಲ್ಲ, ಮರ ದೇವರಲ್ಲ, ಕಲ್ಲು ಕಟ್ಟಿಗೆ ದೇವರಲ್ಲ, ಪಂಚಲೋಹದಲ್ಲಿ ಮಾಡಿರುವುದು ದೇವರಲ್ಲ, ತನ್ನ ತಾನರಿದು ತಾನಾರಂದು ತನ್ನ ನಿಜ ಸ್ಥಿತಿಯನ್ನು ತಿಳಿದವನೇ ದೇವರು, ನಿರಾಕಾರನಾದ ಸೃಷ್ಠಿಕರ್ತನು ಸಕಲ ಜೀವರಾಶಿಗಳಲ್ಲಿದ್ದಾನೆ, ಪ್ರತಿ ಜೀವಿಯ ಅಂತರಂಗದಲ್ಲೇ ಶಿವನಿದ್ದಾನೆ ಎಲ್ಲರನ್ನೂ ಪ್ರೀತಿಸಬೇಕು ಗೌರವಿಸಬೇಕು ಎಲ್ಲರೂ ಭಗವಂತನ ಚೈತನ್ಯದ ಅಂಶವೇ ಆಗಿದ್ದಾರೆ, ಇಲ್ಲಿ ಗಂಡು-ಹೆಣ್ಣು ಜಾತಿ_ಮತ_ಪಂಥ_ವರ್ಗ_ವರ್ಣವೆಂಬ ಭೇದವಿಲ್ಲ ಎಂದು ಹೇಳುತ್ತಾರೆ, ಇದನ್ನು ಒಪ್ಪದ ಅವರ ತಂದೆ ಇಡೀ ಅಗ್ರಹಾರವೇ ನನ್ನ ಮಾತನ್ನು ಮೀರದಿರುವಾಗ ನೀನು ನನ್ನ ಮಾತನ್ನು ದಿಕ್ಕರಿಸುವುದಾದರೆ, ನಿನಗೆ ಇಲ್ಲಿ ಜಾಗವಿಲ್ಲ ಎನ್ನುತ್ತಾರೆ ಮಾದರಸ, ಅಷ್ಟರಲ್ಲೇ ಬಸವಣ್ಣ ಹೆಣ್ಣಿಗೆ ಗೌರವವಿಲ್ಲದ, ಸಮಾನತೆಯಿಲ್ಲದ ಮನೆಯಲ್ಲಿ ಇರಲು ನನಗೂ ಇಷ್ಟವಿಲ್ಲವೆಂದು ಹೇಳಿ, ತನ್ನ 8ನೇ ವಯಸ್ಸಿಗೆ ಮನೆ ಬಿಟ್ಟು ಬರುತ್ತಾರೆ ಬಸವಣ್ಣ, ಆವಾಗ ಅವರ ತಾಯಿ ಮಾದಲಾಂಬಿಕೆಯವರು ಕಂದಾ ಬಸವಾ ತಾಯಿಗಾಗಿ ಆದರೂ ಸಹಿಸಿಕೊಂಡು ಇರಬಾರದೇ ಕೂಸೆ ಎನುತ್ತಾರೆ, ಆಗ ಬಸವಣ್ಣ ಹೇಳುತ್ತಾರೆ ಅಮ್ಮಾ ನಾನು ಮನೆ ಬಿಟ್ಟಿರುವುದು ನನ್ನ ಇಡೀ ತಾಯಂದಿರ ಪರವಾಗಿ ಸ್ತ್ರೀಕುಲದ ನ್ಯಾಯಕ್ಕಾಗಿ ಹೊರಡುವೆ, ಎಲ್ಲಿ ಹೆಣ್ಣಿಗೆ ಗೌರವ ಇಲ್ಲವೋ ಅದು ಮನೆಯಲ್ಲ ಮಸಣಕ್ಕೆ ಸಮವೆಂದು ಹೇಳಿ ಕಪ್ಪಡಿಸಂಗಮ ಈಗಿನ ಕೂಡಲಸಂಗಮಕ್ಕೆ ಹೊರಟು ಬರುತ್ತಾರೆ


ಬಸವಣ್ಣನ ಜೊತೆಗೆ ಅವರ ಅಕ್ಕ ಅಕ್ಕನಾಗಲಾಂಬಿಕೆಯವರು ಮತ್ತು ಭಾವ ಶಿವದೇವರು ಬರುತ್ತಾರೆ, ಸಂಗಮದಲ್ಲಿರುವ ಅವರ ಅಕ್ಕನ ಮನೆಯಲ್ಲಿ ವಾಸ್ತವ್ಯ ಮಾಡಿದ ಬಸವಣ್ಣನವರು, ನಂತರ ಸಂಗಮದಲ್ಲೇ ಶಿಕ್ಷಣವನ್ನು ಪಡೆದರು , ಅಲ್ಲಿನ ಕೆಲ ಮೂಢಾಚಾರಗಳನ್ನು ಕಂಡು ಅಲ್ಲಿನ ಜನರಿಗೆ ಹೀಗೆ ತಿಳಿ ಹೇಳಿದರು, - 

ನೀರ ಕಂಡಲ್ಲಿ ಮುಳುಗುವರಯ್ಯ, ಮರನ ಕಂಡಲ್ಲಿ ಸುತ್ತುವರಯ್ಯ, ಬತ್ತುವ ಜಲವ ಒಣಗುವ ಮರವ ನೆಚ್ಚಿದವರು ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ

ತಮ್ಮ ಅರಿವಿನ ನುಡಿಗಳ ಮೂಲಕ ಜನರ ಮನ ಗೆದ್ದರು, ತಮ್ಮ ಜ್ಞಾನ ವಿಕಸಿತವಾಗಿ ಸೃಷ್ಠಿ ಸಮಷ್ಠಿಯ ಸಂಕೇತವಾದ ತನ್ನರಿವಿನ ಕುರುಹಾಗಿ ಇಷ್ಟಲಿಂಗವನ್ನು ಆವಿಷ್ಕರಿಸಿದರು, ಎಲ್ಲರಿಗೂ ಲಿಂಗದೀಕ್ಷೆ ಕೊಟ್ಟರು ಪ್ರಥಮವಾಗಿ ತನ್ನ ಅಕ್ಕ ಅಕ್ಕನಾಗಲಾಂಬಿಕೆಯವರಿಗೆ ದೀಕ್ಷೆಯನ್ನಿಟ್ಟು, ಹೆಣ್ಣಿಗೂ ಸರ್ವ ಸಮಾನತೆಯ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದರು, ವ್ಯಕ್ತಿಯ ಶ್ರೇಷ್ಠತೆ ಹುಟ್ಟಿನಿಂದಲ್ಲ, ಅವನ ಗುಣ ನಡವಳಿಕೆಯಿಂದ ಎಂದು ಸಾರಿದರುಎಲ್ಲರಲ್ಲೂ  ಸದ್ವಿಚಾರಗಳ ಬಿತ್ತಿ ಶರಣರನ್ನಾಗಿ ಮಾಡುತ್ತಿದ್ದ ಅಣ್ಣಾ  ಬಸವಣ್ಣನವರ ಕೀರ್ತಿವಾರ್ತೆ ಕಲ್ಯಾಣಕ್ಕೆ ಮುಟ್ಟುತ್ತದೆ ಬಿಜ್ಜಳನು ಬಲದೇವವರಸರನ್ನು ಕಳಿಸಿ ಬಸವಣ್ಣನವರ ಬಗ್ಗೆ ತಿಳಿದುಕೊಂಡು ಬಾ ಎಂದು ಕಳಿಸುತ್ತಾರೆ, ಅಲ್ಲಿಗೆ ಬಂದ ಬಲದೇವರಸರಿಗೆ ಅಚ್ಚರಿ ಹಾಗೂ ಎಲ್ಲಿಲ್ಲದ ಸಂತಸವಾಗಿತ್ತು ಕಾರಣ, ತಾನು ಹುಡುಕಿಕೊಂಡು ಬಂದದ್ದು ಬೇರಾರನ್ನೂ ಅಲ್ಲ, ತನ್ನ ಸೋದರ ಅಳಿಯನನ್ನೇ ಎಂದು ತಿಳಿದು ಹಿರಿಹಿರಿ ಹಿಗ್ಗಿ , ಬಸವಣ್ಣನವರ ಪಾಂಡಿತ್ಯವನ್ನು ಕಣ್ಣಾರೆ ಕಂಡು ಅಕ್ಕನಾಗಲಾಂಬಿಕೆಯವರ ಬಳಿ ಒಂದು ಬಿನ್ನಹವನ್ನು ಇಡುತ್ತಾರೆ, ಬಸವಣ್ಣನಿಗೆ ತನ್ನ ಮಗಳಾದ ಗಂಗಾಬಿಕೆಯನ್ನು ಕೊಟ್ಟು ವಿವಾಹ ಮಾಡುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ, ಆದರೆ ಇದರ ಬಗ್ಗೆ ಬಸವಣ್ಣನನ್ನೇ ಕೇಳಬೇಕೆಂದಾಗ , ಅಕ್ಕನಾಗಲಾಂಬಿಕೆ ಮತ್ತು ಬಲದೇವರಸರು ಬಸವಣ್ಣನ ಬಳಿ ಹೋಗಿ ವಿವಾಹ ಪ್ರಸ್ತಾವನೆಯನ್ನಿಟ್ಟಾಗ ಬಸವಣ್ಣ ಸರಾ ಸಗಟಾಗಿ ನರಾಕರಿಸುತ್ತಾರೆ, ನಂತರ ಅಕ್ಕನ ಮಾತಿನಿಂದ ಪ್ರೇರೇಪಿತರಾಗಿ ಯೋಚಿಸುವುದಾಗಿ ಹೇಳಿ ಒಂದೆರೆಡು ದಿನ ಸಮಯವನ್ನು ಕೇಳುತ್ತಾರೆ, ಹಾಗೇ ಒಂದೆರೆಡು ದಿನಗಳು ಕಳೆದ ನಂತರ ಬಸವಣ್ಣನವರಿಗೆ ಸಂಗಯ್ಯನ ವಾಣಿ ಕೇಳಿ ಬಸವಾ ನೀನು ವಿವಾಹವಾಗು ಸಂಸಾರದಲ್ಲಿದ್ದು ಸದ್ಗತಿ ಹೊಂದು, ನಿನ್ನಂತೆ ನಿನ್ನ ಅನುಯಾಯಿಗಳು ಸಂಸಾರಿಗಳಾಗಿ ಸದ್ಗತಿ ಹೊಂದಲಿ, ಎಂದು ಆಶೀರ್ವಾಣಿ ಕೇಳಿತು, ನಂತರ ಒಪ್ಪಿದ ಬಸವಣ್ಣನವರು,



ಗಂಗಾಂಬಿಕೆಯವರನ್ನು ವಿವಾಹವಾಗಿ ಕಲ್ಯಾಣಕ್ಕೆ ಬರುತ್ತಾರೆ, ಅಲ್ಲಿನ ರಾಜ ಬಿಜ್ಜಣನು ಬಸವಣ್ಣನವರನ್ನು ರಾಜ ಸಭೆಗೆ ಆಹ್ವಾನಿಸುತ್ತಾರೆ, ರಾಜನ ಆಮಂತ್ರಣವನ್ನು ಮನ್ನಿಸಿ ಬಸವಣ್ಣನವರು ಅಲ್ಲಿಗೆ ಹೋದಾಗ ರಾಜಸಭೆಯಲ್ಲಿ ಹಣಕಾಸಿನ ಲೆಕ್ಕ ನಡೆಯುತ್ತಿರುತ್ತದೆ , ಅಲ್ಲೇ ಕುಳಿತ ಬಸವಣ್ಣನವರಿಗೆ ಹಣಕಾಸಿನ ವಿಚಾರದಲ್ಲಿ ರಾಜ್ಯದ ಬೊಕ್ಕಸಕ್ಕೆ ಮೋಸವಾದ ಬಗ್ಗೆ  ತಿಳಿದು ಕಳವಳಗೊಂಡು ರಾಜನಿಗೆ ವಿಷಯ ತಿಳಿಸುತ್ತಾರೆ, ದಾರಿತಪ್ಪಿಸಿದ ಲೆಕ್ಕವನ್ನು ಸರಿ ಮಾಡಿ ರಾಜ್ಯ ಬೊಕ್ಕಸಕ್ಕೆ ಅಪಾರ ಉಳಿತಾಯವನ್ನು ಮಾಡುತ್ತಾರೆ, ಇದರಿಂದ ಸಂತಸಗೊಂಡ ಬಿಜ್ಜಳ ರಾಜನು ಭಲೇ ಬಸವಣ್ಣನವರೇ ನಿಮ್ಮ ಬುದ್ಧಿಶಕ್ತಿ ಜ್ಞಾನ ಅಪಾರವಾದದ್ದಾಗಿದೆ ಭಲೇ ಬಸವರಸರೇ ನಮ್ಮ ರಾಜ್ಯದಲ್ಲಿ ಖಾಲಿ ಇರುವ ಹಣಕಾಸು ಖಾತೆಯ ಜವಾಬ್ದಾರಿ ನಿಮಗೆ ಒಪ್ಪಿಸುವೆ, ಇದಕ್ಕೆ  ನಿಮಗಿಂತ ಸಮರ್ಥರು ಇರಲಾರರು ಎಂದು ಬಸವಣ್ಣನವರಿಗೆ ಹಣಕಾಸಿನ ಜವಾಬ್ದಾರಿಯುತ ಸ್ಥಾನ ಕೊಟ್ಟನು ಬಿಜ್ಜಳನು , ನಂತರ ಕಲ್ಯಾಣದಲ್ಲಿ ಕ್ರಾತಿಕಾರಿ ಬದಲಾವಣೆಗಳು ಶುರುವಾದವು, ಅಲ್ಲಿನ ಜನರು ಜಾತಿ ಸಂಕರದಲ್ಲಿ ಸಿಲುಕಿರಲು ಬಸವಣ್ಣನವರು ಜಾತೀಯತೆಯ ಬುಡಬೇರ ಕಿತ್ತಿದರು, ಲಿಂಗ_ವರ್ಗ_ವರ್ಣ ತಾರತಮ್ಯವಿರುವ ಸಮಾಜದಲ್ಲೇ ಸಮಾನತೆಯ ಪ್ರೇಮದ ಸಾಮ್ರಾಜ್ಯವನ್ನು ಸ್ಥಾಪಿಸಿದರು, ಎಲ್ಲರನ್ನೂ ಒಪ್ಪಿ ಅಪ್ಪುವ  ಬಸವಣ್ಣನವರ ಲೋಹಚುಂಬಕ ವ್ಯಕ್ತಿತ್ವಕ್ಕೆ ಆಕರ್ಷಣೆಗೊಂಡು  ಜಗತ್ತಿನೆಲ್ಲೆಡೆಯಿಂದ ಜನಸಾಗರವೇ ಹರಿದು ಬಂದಿತು ಕಲ್ಯಾಣಕೆ, ಅಷ್ಟರಲ್ಲೇ ಬಿಜ್ಜಳನ ಆಸ್ಥಾನದಲ್ಲಿ ಚಿನ್ನದ ಪತ್ರವೊಂದು ಸಿಕ್ಕಿತು ಯಾರಿಗೂ ಓದಲಾಗದ ಪತ್ರವನ್ನು ಬಸವಣ್ಣನವರು ಓದಿ, ರಾಜ್ಯಕ್ಕೆ ಹಿಂದಿನ ರಾಜರು ಇಟ್ಟ ಬಂಗಾರ ನಿಧಿಯ ಕುರುಹನ್ನು ಪತ್ತೆ ಹಚ್ಚಿದರು, ಅದರಂತೆ ರಾಜನ ಆಸ್ಥಾನದಲ್ಲೇ ಸಹಸ್ರ ಸಹಸ್ರ ಚಿನ್ನದ ನಾಣ್ಯಗಳು ಸಿಕ್ಕವು, ಅವುಗಳನ್ನು ಸಮಾಜಕ್ಕೆ ಜನಸಾಮಾನ್ಯರ ಕಷ್ಟಕ್ಕೆ  ರಾಜ್ಯದ ಒಳಿತಿಗಾಗಿ ಬಳಸುವಂತೆ ಬಿಜ್ಜಳ ರಾಜನಿಗೆ ಬಸವಣ್ಣನವರು ಮಾರ್ಗದರ್ಶಿಸುತ್ತಾರೆ ಇದರಿಂದ ಪ್ರೇರೇಪಿತನಾದ ರಾಜ ಸತ್ಕಾರ್ಯಕ್ಕಾಗಿ ಬಳಸುತ್ತಾನೆ, ನಂತರ ತನ್ನ ರಾಜ್ಯದ ಪ್ರಧಾನಮಂತ್ರಿಯಾಗಿ ಜನ ಸೇವೆ ಮಾಡಬೇಕೆಂದು, ಬಸವಣ್ಣನವರಲ್ಲಿ ಕೇಳಿಕೊಂಡಾಗ ಜನ ಸೇವೆಯೇ ಸಂಗಯ್ಯನ ಸೇವೆಯೆಂದು  ಬಸವಣ್ಣನವರು ರೀತಿ ಪ್ರಮಾಣವಚನವನ್ನು ಸ್ವೀಕರಿಸುತ್ತಾರೆ

ಹೊನ್ನಿನೊಳಗೊಂದೊರೆಯ, ವಸ್ತ್ರದೊಳಗೊಂದೆಳೆಯ

ಅನ್ನದೊಳಗೊಂದಗುಳ

ಇಂದಿಂಗೆ ನಾಳಿಂಗೆ ಬೇಕೆಂದೆನಾದೆಡೆ

ನಿಮ್ಮಾಣೆ! ನಿಮ್ಮ ಪುರಾತರಾಣೆ!

ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ 

ಕೂಡಲಸಂಗಮದೇವಾ.

ಎಂದು ಅತ್ಯಂತ ಕಾಯಕ ನಿಷ್ಠರಾಗಿ ಜನಾನುರಾಗಿಗಳಾಗಿ ಜನ ಮಾನಸದಲ್ಲಿ ಹೆಸರಾಗುತ್ತಾರೆ, ಅಲ್ಲಿನ ಜಾತಿ ವ್ಯವಸ್ಥೆಗೆ ಸೆಡ್ಡು ಹೊಡೆದು ಸರ್ವರಿಗೂ ಲಿಂಗದೀಕ್ಷೆಯನಿಟ್ಟು ಲಿಂಗಗುಣ ಸಂಪನ್ನ ಶರಣರನ್ನಾಗಿ ಮಾಡುತ್ತಿದ್ದರು,

ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ ,


ಮೇಲ್ಜಾತಿ ಕೀಳು ಜಾತಿ ಎಂಬುದನ್ನು ಒಪ್ಪದ ಬಸವಣ್ಣನವರು,

ಬೀಸುವ ಗಾಳಿ_ ಕುಡಿವ ನೀರು, ದೇಹದಲ್ಲಿ ಹರಿವ ರಕ್ತಕ್ಕೆ ಜಾತಿಯುಂಟೆ ? ಎಂದು ಪ್ರಶ್ನಿಸಿ ವರ್ಣಾಶ್ರಮ ಪದ್ದತಿಯನ್ನು ಕಟುವಾಗಿ ವಿರೋಧಿಸಿಸ್ತ್ರೀಗೆ ಸಿಗದ ಧಾರ್ಮಿಕ ಸ್ವಾತಂತ್ರ್ಯವನ್ನು ಆಕೆಗೆ ನೀಡಿ,  ಜಾತಿ ಭೇದವಿಲ್ಲದೆ, ಲಿಂಗ ಭೇದವಿಲ್ಲದೇ ಸಕಲರಿಗೂ  ಇಷ್ಟಲಿಂಗವನ್ನು ದಯಪಾಲಿಸಿ, ಸರ್ವರನ್ನೂ ಶರಣರನ್ನಾಗಿ ಮಾಡಿದರು, ವಯಸ್ಕರ ಶಿಕ್ಷಣವನ್ನು ನೀಡಿ ಎಲ್ಲಾ ಕಾಯಕ ಜೀವಿಗಳಿಗು ಜ್ಞಾನ ದಾಸೋದಗೈದರು, ಕಲ್ಯಾಣದಲ್ಲಿ ಅಪ್ಪ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪಕ್ಕೆ ಎಲ್ಲೆಡೆಯಿಂದ ಜನ ಸಾಗರವೇ ಹರಿದು ಬಂದಿತು, ಅಣ್ಣಾ ಬಸವಣ್ಣನವರು ಇಟ್ಟ ಪ್ರತಿ ಹೆಜ್ಜೆಯೂ ಕ್ರಾಂತಿಕಾರಕ ಹೆಜ್ಜೆಗಳಾಗಿ ಉಳಿದವು ಅದರಲ್ಲಿ ಒಂದು ಅಣ್ಣಾ ಬಸವಣ್ಣನವರು ಸ್ಥಾಪಿಸಿದ ವಿಶ್ವದ ಮೊಟ್ಟಮೊದಲ ಸಂಸತ್ತು 



ಅನುಭವ ಮಂಟಪರಚಿಸಿ  ವೀರವೈರಾಗ್ಯ ಮೂರುತಿ ಅಲ್ಲಮಪ್ರಭುದೇವರನ್ನು ಅನುಭವ ಮಂಟಪಕ್ಕೆ ಅಧ್ಯಕ್ಷರನ್ನಾಗಿ ಮಾಡಿದ ಬಸವಣ್ಣನವರು, ಪ್ರತಿದಿನವೂ ಸಕಲ ಕಾಯಕ ಜೀವಿಗಳನ್ನು ಒಟ್ಟುಗೂಡಿಸಿ ಅವರಲ್ಲಿದ್ದ ಅಂಧಶ್ರದ್ಧೆ ಮೂಢನಂಬಿಕೆ ಕಂದಾಚಾರಗಳನ್ನು ಕಿತ್ತೊಗೆದು, ವೈಚಾರಿಕ ಚಿಂತನೆಗೈಯುತ್ತಿದ್ದರು, ಅರಿವೆಂಬ ಕಿಡಿ ಮುಂದೆ ಜ್ಞಾನಾಗ್ನಿಯಾಗಿ ಎಲ್ಲಡೆಯೂ ವಿಸ್ತರಿಸಿತು, ಜನರನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ವ ಮಹಾ ಕ್ರಾಂತಿಯೇ ಅದಾಯಿತು, ಅಪ್ಪ ಬಸವರು ಸ್ಥಾಪಿಸಿದ ಅನುಭವ ಮಂಟಪವು ಜಗತ್ತಿನ ಮೊಟ್ಟಮೊದಲ ಪಾರ್ಲಿಮೆಂಟ್ ಆಗಿತ್ತು ಅಲ್ಲಿ ಪರಿಪಕ್ವಗೊಂಡ ಶರಣ ಜೀವಿಗಳು , ಬಸವಣ್ಣನ ಗರಡಿ ಮನೆಯಲ್ಲಿ ಪಳಗಿ, ಕಾಯಕದ ಮಹತ್ವವನ್ನು ಅರಿತ ಜನರು ತಮ್ಮ ದುಡಿಮೆಯನ್ನು ಪ್ರೇಮಿಸತೊಡಗಿದರು, ಮಾಡುವ ಕಾಯಕ ಯಾವುದಾದರೇನು ಅದರ ಶ್ರೇಷ್ಠತೆ ಘನತೆ ಹೆಚ್ಚುವುದು , ಹಂಚಿಕೊಂಡು ತಿನ್ನುವುದರಿಂದ ಎಂದು ಹೇಳಿ, ಅನುಭವ ಮಂಟಪದ ಮುಖೇನ ದಾಸೋಹ ತತ್ವವನ್ನು ಜಾರಿಗೆ ತಂದರು ಅಪ್ಪ ಬಸವರು, ದುಡಿದು  ಸಂಪಾದನೆ ಮಾಡಿದ ಬಹುಪಾಲು ಸಮಾಜಕ್ಕೆ ಅರ್ಪಿಸಿ ಎಲ್ಲರೂ ನಿರಾಭಾರಿಗಳಾಗಿ, ಮತ್ತೆ ಕಾಯಕಕ್ಕೆ ಅಣಿಯಾಗುತ್ತಿದ್ದರು, ಜಗವೆಲ್ಲ ಇತ್ತ ಕಲ್ಯಾಣದತ್ತ ಆಕರ್ಷಣೆಗೊಂಡು ನೋಡುತ್ತಿತ್ತು, ಅತ್ತ ಕಾಶ್ಮೀರದ ಅರಸು ಮಹಾದೇವ ಭೋಪಾಲ, ಬಂದು ಕಟ್ಟಿಗೆ ಹೊರುವ ಕಾಯಕ ನೆಚ್ಚಿಕೊಂಡು ಮೋಳಿಗೆ ಮಾರಯ್ಯನಾಗಿ ಹೆಸರುವಾಸಿಯಾದ, ಅದೇ ರೀತಿಯಾಗಿ ದೂರದ ಅಫ್ಘಾನಿಸ್ಥಾನದಿಂದ ಬಂದ ಸೂಫಿ ಸಂತರು, ಮರಳ ಶಂಕರದೇವರಾಗಿ ಅಜರಾಮರರಾದರು, ಉಡುತಡಿಯಿಂದ ಅಕ್ಕಮಹಾದೇವಿ, ಗುಜರಾತಿನಿಂದ ಆದಯ್ಯ ಶರಣರು, ಆಂದ್ರಪ್ರದೇಶದಿಂದ ತೆಲುಗೇಶ ಮಸಣಯ್ಯ,  ತಮಿಳುನಾಡಿನಿಂದ ಮಾದಾರ ಚೆನ್ನಯ್ಯ, ದಿಕ್ಕು ದಿಕ್ಕಿನಿಂದ ಬಂದರು 770 ಅಮರಗಣಂಗಳು , ಲಕ್ಷದ ಮೇಲೆ ತೊಂಬತ್ತಾರು ಸಾವಿರ ಅನುಯಾಯಿಗಳು ಸೇರಿದರು ಇದನ್ನು ಕಂಡ ಅಲ್ಲಮಪ್ರಭುದೇವರು ತಮ್ಮ ವಚನದಲ್ಲಿ ಹೀಗೆ ಹೇಳುತ್ತಾರೆ,

ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು
ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ ! ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು. ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ ? ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ ? ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯಾ
ಎಂದರು ಅಲ್ಲಮಪ್ರಭುದೇವರು

                  ಇನ್ನು ಅಕ್ಕಮಹಾದೇವಿಯವರು 

ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತಯ್ಯಾ.

ಒಳಗೂ ಕಲ್ಯಾಣ, ಹೊರಗೂ ಕಲ್ಯಾಣ. ಇದರಂತುವನಾರು ಬಲ್ಲರಯ್ಯಾ

ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿಹುದಯ್ಯಾ.

ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ.

ಕಲ್ಯಾಣವು ಕಾಯಕ ಜೀವಿಗಳ ಕೈಲಾಸವಾಯಿತು, ಎಲ್ಲಿ ನೋಡಿದರಲ್ಲಿ ಕಾಯಕ, ದಾಸೋಹ,    ಜಂಗಮ ಸೇವೆ, ಜನ ಮಾನಸದಲ್ಲಿ ಬಸವಣ್ಣನೇ ಗುರು, ಬಸವಣ್ಣನೇ ಲಿಂಗ, ಬಸವಣ್ಣನೇ ಜಂಗಮ, ಇದನ್ನು ಕಂಡ ಮಾಡಿವಾಳ ಮಾಚಿದೇವರು ಹೀಗೆ ಹೇಳುತ್ತಾರೆ,

ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು.
ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು.
ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು.
ಬಸವಣ್ಣ ಮಾಡಲಿಕ್ಕೆ ಪ್ರಸಾದವಾಯಿತ್ತು.
ಬಸವಣ್ಣ ಮಾಡಲಿಕ್ಕೆ ಈರೇಳುಲೋಕವಾಯಿತ್ತು.
ಬಸವಣ್ಣನಿಂದಾದ ಕಲಿದೇವಯ್ಯ.


ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ,
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.
ಒತ್ತಿ ಹಿಂಡಿದಡೆ ಭಕ್ತಿ ಎಂಬ ರಸವಯ್ಯಾ.
ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ, ಸನ್ನಿಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ, ಜಂಗಮವು ಬಸವಣ್ಣನಿಂದ,
ಪಾದೋದಕ ಬಸವಣ್ಣನಿಂದ,ಪ್ರಸಾದ ಬಸವಣ್ಣನಿಂದ
ಅತ್ತ ಬಲ್ಲಡೆ ನೀವು ಹೇಳಿರೇ, ಇತ್ತ ಬಲ್ಲಡೆ ನೀವು ಕೇಳಿರೇ
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,
ಶೂನ್ಯ ಕಾಣಾ, ಕಲಿದೇವರದೇವಾ


ಎಲ್ಲೆಲ್ಲೂ ಬಸವಣ್ಣನವರ ಕೀರ್ತಿವಾರ್ತೆ ಕೇಳುತಲಿತ್ತು, ಕಳ್ಳರು ವ್ಯಸನಿಗಳು ಕೂಡ ತಮ್ಮ ವೃತ್ತಿಯನ್ನು ಬಿಟ್ಟು ಕಾಯಕ ಜೀವಿಗಳಾಗಿ ಶರಣರಾಗಿ ಅನುಭಾವಿಗಳಾದದ್ದು ಇತಿಹಾಸ,

ಹೀಗಿರುವಾಗ ವರ್ಣಾಶ್ರಮ ಪದ್ಧತಿಯನ್ನು ತೀವ್ರವಾಗಿ ಪ್ರತಿಪಾದಿಸುತ್ತಿದ್ದವರಿಗೆ ಹಿನ್ನಡೆಯಾಯ್ತು, ಅಣ್ಣಾಬಸವಣ್ಣನವರ ಮಾನವೀಯ ಮೌಲ್ಯಗಳ ತತ್ವ ಎಲ್ಲೆಡೆಯೂ ಪ್ರಬಲವಾಗಿ ಹಬ್ಬಿತು, ಹೀಗಿರುವಾಗ ಸಹಿಸಲಾಗದ ಕುತಂತ್ರಿಗಳು ಬಿಜ್ಜಳ ರಾಜನಿಗೆ  ಬಸವಣ್ಣನವರ ಬಗ್ಗೆ ಛಾಡಿ ಹೇಳಿದರು, ರಾಜ ಬಿಜ್ಜಳನು ಅದನ್ನು ಒಪ್ಪಲಿಲ್ಲ, ರಾಜನು ಕೂಡ ಬಸವಣ್ಣನ ತತ್ವಕ್ಕೆ ಮಾರು ಹೋಗಿದ್ದ, ಬಸವಣ್ಣನವರ ಕಾಯಕ ತತ್ವದಿಂದ ಕಲ್ಯಾಣದಲ್ಲಿ ಅತ್ಯಧಿಕ ತೆರಿಗೆ ಸಂಗ್ರಹವಾಗಿತ್ತುದಾಸೋಹ ತತ್ವದಿಂದ ಕಲ್ಯಾಣ ಹಸಿವು ಮುಕ್ತ ರಾಷ್ಟ್ರವಾಗಿತ್ತು, ಕಲ್ಯಾಣವು ಬೇಡುವವರಿಲ್ಲದಂತಾಗಿತ್ತು, ಎಲ್ಲರೂ  ಸ್ವಾಭಿಮಾನಿ ಕಾಯಕ ಜೀವಿಗಳೇ ದಾಸೋಹ ಪ್ರೇಮಿಗಳೇ ಆಗಿದ್ದರು ಹೀಗಿರುವಾಗ ತನ್ನ ಪ್ರಧಾನಮಂತ್ರಿಯಾದ ಬಸವಣ್ಣನವರ ಬಗ್ಗೆ  ಮಹಾರಾಜನಾದ ಬಿಜ್ಜಳನು ಹೇಗೆತಾನೆ ಕ್ರಮ ಕೈಗೊಳ್ಳುತ್ತಾನೆ, ಹೀಗಿರುವಾಗ ಅಣ್ಣ ಬಸವಣ್ಣನವರು  ಪಾದರಕ್ಷೆ ತಯಾರಿಸುವ ಹರಳಯ್ಯನವರ ಮನೆಯಲ್ಲಿ  ಪ್ರಸಾದಕ್ಕೆ ಹೋಗಿದ್ದರು ಪ್ರಸಾದ ಮುಗಿಸಿಕೊಂಡು ಹೊರಡುವಾಗ ಹರಳಯ್ಯನವರು ಶರಣು ಎನ್ನೊಡೆಯ ಎಂದರೆ, ಬಸವಣ್ಣನವರು ಅದಕ್ಕೆ ಪ್ರತಿಯಾಗಿ ತಲೆಬಾಗಿ ಶರಣು ಶರಣಾರ್ಥಿ ಎಂದು ಎರಡು ಬಾರಿ ವಂದಿಸುತ್ತಾರೆ. ಆಗ ಹರಳಯ್ಯನವರು- ಬಸವಣ್ಣನವರು ತನಗೆ ತೋರಿದ ಅತೀವ ಗೌರವ, ಪ್ರೀತಿಗೆ ಮನಸೋತು ಹರಳಯ್ಯನವರುಹೆಚ್ಚಿನ ಶರಣಾರ್ಥಿಯ ಭಾರಕ್ಕೆ ಹೇಗೆ ಮರಳಿಸಬೇಕು ಪ್ರತಿ ವಂದಿಸಬೇಕೆಂದು ಚಿಂತಿಸುತ್ತಾ  ಘಟನೆಯನ್ನು ತನ್ನ ಪತ್ನಿ ಕಲ್ಯಾಣಮ್ಮನ ಬಳಿ ಹೇಳಿದರು. ಬಸವಣ್ಣನವರ ಪ್ರೀತಿಗೆ ಏನಾದರೂ ಉಡುಗೊರೆ ಕೊಡಲೇ ಬೇಕೆಂದು ಕಲ್ಯಾಣಮ್ಮ ಚಿಂತಿಸಿ ತಮ್ಮ  ತೊಡೆಯ ಚರ್ಮ ತೆಗೆದು ಚಮ್ಮಾವುಗೆ ಮಾಡಲು ಗಂಡನಿಗೆ ಹೇಳುತ್ತಾಳೆ. ಹರಳಯ್ಯರು ಇದಕ್ಕೆ ಒಪ್ಪಿಕೊಂಡು ಹಲವು ದಿನಗಳ ಕಾಲ ಹಗಲು ರಾತ್ರಿ ಶ್ರಮಿಸಿ ತನ್ನ ಹಾಗು ತನ್ನ ಪತ್ನಿಯ ಮೈ ಚರ್ಮವನ್ನು ತೆಗೆದು ಸುಂದರವಾದ ಒಂದು ಜೊತೆ ಪಾದರಕ್ಷೆಯನ್ನು ತಯಾರು ಮಾಡಿ,



ಅವುಗಳನ್ನು ಶ್ವೇತ ವಸ್ತ್ರದಲ್ಲಿ ಸುತ್ತಿ, ಎದೆಗವಚಿಕೊಂಡು ಆಸ್ಥಾನಕ್ಕೆ ತೆರಳಿ ಬಸವಣ್ಣನವರಿಗೆ ಕೊಟ್ಟು, ಇವುಗಳನ್ನು ಧರಿಸಿ ತಾವು ಧರೆಯ ಮೇಲೆ ಓಡಾಡಿದರೆ ನನ್ನ ಜನ್ಮ ಸಾರ್ಥಕ ಎಂದು ಹರಳಯ್ಯ ದಂಪತಿಗಳು ಬಸವಣ್ಣನವರಲ್ಲಿ ಭಿನ್ನವಿಸಿಕೊಳ್ಳುತ್ತಾರೆ. ಹರಳಯ್ಯನ ಪ್ರೀತಿ, ಕಂಡು ಅಚ್ಛರಿಗೊಳಗಾದ ಬಸವಣ್ಣನವರು, ಪಾದುಕೆಗಳನ್ನು ಕಾಲಲ್ಲಿ ಧರಿಸುವಷ್ಟು ಯೋಗ್ಯ ನಾನಲ್ಲ, ಶರಣರ ಚರ್ಮದಿಂದ ಮಾಡಿದ ಚಮ್ಮಾವುಗೆಗಳು ದೇವರಿಗೆ ಮಾತ್ರ ಮೀಸಲು ಎಂದು ತಿಳಿಸಿ,



ಅವುಗಳನ್ನು ತನ್ನ ಶಿರದ ಮೇಲೆ ಹೊತ್ತುಕೊಂಡು ಮರಳಿ ಕೊಡುತ್ತಾರೆ.

ಹರಳಯ್ಯ ಚಮ್ಮಾವುಗೆಗಳನ್ನು ಮನೆಗೆ ತೆಗೆದುಕೊಂಡು ಹೋಗುವಾಗ ಬ್ರಾಹ್ಮಣರಾದ ಮಧುವರಸರು ಎದುರಾಗಿ ಸುಂದರವಾದ ಚಮ್ಮಾವುಗೆ ನೋಡಿ ಕೇಳಿ, ಕೊಡದಿದ್ದಾಗ ಅವುಗಳನ್ನು ಕಸಿದುಕೊಂಡು ಧರಿಸಿಕೊಳ್ಳಲು ಪ್ರಯತ್ನಿಸಿದಾಗ ಅವರ ಮೈಯಲ್ಲಾ ಉರಿ ಪ್ರಾರಂಭವಾಗುತ್ತದೆ. ಹರಳಯ್ಯನವರ ಮನೆಯ ಚರ್ಮ ತೊಳೆದ ನೀರಿನಿಂದ ಸ್ನಾನ ಮಾಡಿದಾಗ ಮೈ ಉರಿ ಕಡಿಮೆಯಾಯಿತು. ಘಟನೆಯಿಂದ ಶರಣರ ಮಹತ್ವವನ್ನು ಅರಿತ ಮಧುವರಸರು ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದರು.

ಸಮಗಾರ ಹರಳಯ್ಯನವರು ಮತ್ತು ಬ್ರಾಹ್ಮಣ ಮಧುವರಸರು ಇಷ್ಟಲಿಂಗ ದೀಕ್ಷೆ ಪಡೆದ ಕಾರಣ ಜಾತಿಸಂಕರಗೊಂಡು ಬಸವಣ್ಣನವರ ಜಾತ್ಯತೀತ ಧರ್ಮವಾದ ಲಿಂಗವಂತ ಧರ್ಮದ ಭಾಗವಾದರು. ನಡೆ ನುಡಿ ಸಿದ್ಧಾಂತದ ಶರಣರುಜಾತಿ ನಿರರ್ಥಕ, ನೀತಿ ಲೋಕರಕ್ಷಕಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟವರಾಗಿದ್ದರು. ಪ್ರತಿಯೊಬ್ಬರು ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನೀತಿವಂತರಾದಾಗ ಅವರ ವರ್ಣ, ಜಾತಿ ಮತ್ತು ಉಪಜಾತಿಗಳು ನಿರ್ನಾಮವಾಗಿ ಕೇವಲ ಶರಣರಾದರು. ಜಾತಿ ಮತ್ತು ಅಸ್ಪೃಶ್ಯತೆಯ ವಿಷವನ್ನು ನಮ್ಮ ಸಮಾಜದಿಂದ ಹೊರಹಾಕಿ ಎಲ್ಲರೀತಿಯ ಸಮಾನತೆಯನ್ನು ಸಾಧಿಸುವುದು ಶರಣರ ಉದ್ದೇಶವಾಗಿತ್ತು. ಇಂಥ ಘನ ಉದ್ದೇಶದಿಂದಲೇ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯನ್ನು ಶರಣರು ಏರ್ಪಡಿಸಿದರು. ವರ್ಣ ಮತ್ತು ಜಾತಿಪದ್ಧತಿಯ ಮೇಲೆ ನಿಂತ ಮನುಧರ್ಮದ ಸಮಾಜಕ್ಕೆ ದೊಡ್ಡ ಸವಾಲು ಒಡ್ಡಿ ಸಮಾನತೆಯ ಕ್ರಾಂತಿ ಕಹಳೆಯನ್ನು ಊದಿದರು. ಹರಳಯ್ಯನವರ ಮಗ ಶೀಲವಂತನ ಜೊತೆ ಮಧುವರಸರ ಮಗಳು ಲಾವಣ್ಯಳ ಮದುವೆ ಆಯಿತು.

ಆದರೆ ಮನುವಾದಿಗಳು ರೊಚ್ಚಿಗೆದ್ದರು. ಸಮಗಾರ ವರನಿಗೆ ಬ್ರಾಹ್ಮಣ ಕನ್ಯೆಯನ್ನು ಕೊಡುವುದು ಧರ್ಮಬಾಹಿರವಾದ ಅನುಲೋಮ ವಿವಾಹ ಎಂದು ಕಲ್ಯಾಣದ ದೊರೆ ಬಿಜ್ಜಳನ ಕಿವಿ ಚುಚ್ಚಿದರು. ಶರಣರು ಸಾವು ನೋವು ಮತ್ತು ಕಷ್ಟ ನಷ್ಟಗಳನ್ನು ಅನುಭವಿಸದರೂ ತಮ್ಮ ನಡೆ ನುಡಿ ಸಿದ್ಧಾಂತವನ್ನು ಬಿಡದೆ ಅದಕ್ಕಾಗಿ ಅವರು ಎಂಥ ತ್ಯಾಗಕ್ಕೂ ಸಿದ್ಧರಾದರು. ಅದಕ್ಕಾಗಿ ನಾಡು ಎಂದೂ ಕಂಡರಿಯದಂಥ ದುರಂತವನ್ನು ಅನುಭವಿಸಿದರು



ಕಣ್ಣು ಕೀಳಿಸಿಕೊಂಡು,



ಎಳೆಹೂಟ್ಟೆ ಶಿಕ್ಷೆ ಅನುಭವಿಸಿದ ಹರಳಯ್ಯ, ಶೀಲವಂತ ಮತ್ತು ಮಧುವರಸರು ಹುತಾತ್ಮರಾದರು. ಮನುವಾದಿ ಭಯೋತ್ಪಾದಕರಿಂದಾಗಿ ಕಲ್ಯಾಣದಲ್ಲಿ ಅಸಂಖ್ಯಾತ ಶರಣರ ಹತ್ಯಾಕಾಂಡವಾಯಿತು. ಶರಣರ ಸಹಸ್ರಾರು ವಚನ ಕಟ್ಟುಗಳನ್ನು ವೈದಿಕಶಕ್ತಿಗಳು ಸುಟ್ಟು ಹಾಕಿದವು, ಸಹಸ್ರಾರು ವಚನಕಟ್ಟುಗಳು ಬೆಂಕಿಗೆ ಆಹುತಿಯಾದವು. ಸಕಲ ಮಾನವರನ್ನು ವಿಮೋಚನೆಗೊಳಿಸುವಂಥ ವಚನಸಾಹಿತ್ಯವನ್ನು ಶರಣರನ್ನು ಮನುವಾದಿಗಳು ಸಂಪ್ರದಾಯವಾದಿಗಳು ಕಂಡಲ್ಲಿ ನಾಶ ಮಾಡ ತೋಡಗಿದರು. ಶರಣರು ಮತ್ತು ಬಿಜ್ಜಳನ ಸೈನಿಕರ ನಡುವೆ ವಚನ ಸಾಹಿತ್ಯಕ್ಕಾಗಿ ಹೋರಾಟ ನಡೆಯಿತು, ನಂತರ ನಡೆದ ದಂಗೆಯಿಂದ ಕೊಂಡೆ ಮಂಚಣ್ಣನ ಕಡೆಯಿಂದ ಬಿಜ್ಜಳನು ಕೊಲ್ಲಲ್ಪಡುತ್ತಾನೆ. ಆಗ ಬಿಜ್ಜಳನ ಮಗನ ಅಧಿಕಾರದಲ್ಲಿ   ೧೨ನೇ ಶತಮಾನದ ಕಲ್ಯಾಣ ಕ್ರಾಂತಿಯಾಗುತ್ತದೆ , ಅವರ ಸೈನ್ಯ ಶಸ್ತ್ರಾಸ್ತ್ರಗಳಿಂದ ಶರಣರ ಮೇಲೆ ದಾಳಿ ಮಾಡಿದರು ಕೂಡ ಶರಣರು ಅಹಿಂಸಾ ವಾದಿಗಳಾಗಿ ಪ್ರತಿಕೋಧ ವ್ಯಕ್ತಪಡಿಸಿದರೂ ಶಸ್ತ್ರಾಸ್ತ್ರ ಬಳಸದೇ ಪ್ರಾಣ ತ್ಯಾಗ ಮಾಡಿದರು ಶರಣರು, ಅನಿರೀಕ್ಷಿತ ಕ್ರಾಂತಿಯಿಂದ ಶರಣರು ಚೆಲ್ಲಾಪಿಲ್ಲಿಯಾಗುತ್ತಾರೆ. ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ವಿಧಿಸವಾಗುತ್ತದೆ, ರಾಜನಿಗಿಂತ ಜನಪ್ರಿಯರಾದ ಬಸವಣ್ಣನವರು ಹಗಲು ಕಲ್ಯಾಣ ತೊರೆದರೆ ಪ್ರಜೆಗಳೆಲ್ಲ ದಂಗೆ ಏಳುತ್ತಾರೆ ಎಂದು



ಮಧ್ಯೆರಾತ್ರಿ 12ಕ್ಕೆ ಬಸವಣ್ಣನವರನ್ನು ಗಡಿಪಾರು ಮಾಡಲಾಗುತ್ತದೆ, ಎಲ್ಲಾ ಇದ್ದರೂ ರಾಜಾಜ್ಞೆ ಮೀರದೆ ಕೂಡಲಸಂಗಮದತ್ತ ತೆರಳಲು ಸಿದ್ಧರಾದ ಬಸವಣ್ಣನವರನ್ನು ಕಂಡು ವೀರಗಣಾಚಾರಿ ಮಾಚಯ್ಯನವರು ಹೇಳುತ್ತಾರೆ, ಅಣ್ಣ ನೀವು ಒಂದು ಮಾತು ಹೇಳಿದರೆ ನನ್ನ ಗಣಾಚಾರದ ಖಡ್ಗದಿಂದ ಕಲ್ಯಾಣದ ಸೈನ್ಯವನ್ನೆಲ್ಲ ನಿರ್ನಾಮ ಮಾಡುತ್ತೇನೆ ಎಂದರು, ಇದಕ್ಕೆ ಒಪ್ಪದ ಬಸವಣ್ಣ ಬೇಡ ಮಾಚಿದೇವರೆ ಕ್ರಾಂತಿ ಶರಣರ ಸಮಾನತೆಯ ಅಸ್ಮಿತೆಯ ಕ್ರಾಂತಿಯಾಗಬೇಕೆ ವಿನಃ ರಕ್ತ ಕ್ರಾಂತಿಯಾಗಿ ಶರಣರನ್ನು ಗುರುತಿಸುವುದು ಬೇಡ ಎಂದರು, ಆಗ ಬಸವಣ್ಣನವರು ಕೂಡಲಸಂಗಮಕ್ಕೆ ಹೋದರು, ನಂತರ ನಡೆದದ್ದೇ ಬೇರೆ, ಕಲ್ಯಾಣದ ಕ್ರಾಂತಿಯು ಶರಣರ ರಕ್ತದಲ್ಲಿ ಕೊನೆಗೊಂಡಿತು, ಕಲ್ಯಾಣ ಕ್ರಾಂತಿ ಸಾಮಾಜಿಕ ಆರ್ಥಿಕ ಸಾಹಿತಿಕ ವೈಚಾರಿಕ ಹೀಗೆ ಎಲ್ಲಾ ಕ್ರಾಂತಿಗಳನ್ನು ಮಾಡಿ ಸಮಗ್ರ ಕ್ರಾಂತಿಯ ಅಂತ್ಯಕ್ಕೆ ರಕ್ತ ಕ್ರಾಂತಿಗೂ ದಾರಿಯಾಯಿತು. ಕಲ್ಯಾಣದಿ೦ದ ಉಳವಿಯ ಮಾರ್ಗದವರೆಗೆ ಹೊರಟಿದ್ದ ಅನೇಕ ಶರಣ-ಶರಣೆಯರು ತಮ್ಮ ತಲೆಯ ಮೇಲೆ ವಚನ ಕಟ್ಟುಗಳನ್ನು ಹೊತ್ತು, ಕಲ್ಲು ಮುಳ್ಳುಗಳ ಹಾದಿಯಲ್ಲಿ ನಡೆದರು, ಗುಡ್ಡ ಬೆಟ್ಟ ದಟ್ಟಾರಣ್ಯದಲ್ಲಿ ಮುನ್ನುಗ್ಗಿದರು, ಶರಣರಿಗೆ ಕಾಡು ಪ್ರಾಣಿಗಳಿಂದ ತೊಂದರೆ ಆಗಲ್ಲಿಲ್ಲ, ನಾಡಿನ ಕಾಡುವ ಪ್ರಾಣಿಗಳಿಂದ ತುಂಬಾ ಸಾವು ನೋವು ಅನುಭವಿಸಿದರು. ಶರಣ-ಶರಣೆಯರು ಬಿಜ್ಜಳನ ಮಗ ಸೋವಿದೇವನನ್ನು ಎದುರಿಸುತ್ತ ಪ್ರತಿರೋಧ ಒಡ್ಡಿ ಶರಣರ ಅಮೂಲ್ಯ ಸಾಹಿತ್ಯ ವಚನಗಳನ್ನು ಹೊತ್ತು ಅವರೊಂದಿಗೆ ಸೆಣಸಾಡಿ ನಡೆದ ಐತಿಹಾಸಿಕ ರಕ್ತ ಸಿಕ್ತ ಕ್ರಾಂತಿಯಲ್ಲಿ ಶರಣರು ಕಲ್ಯಾಣ ತೊರೆದು ಮೂರು ತಂಡಗಳಾಗಿ ಬೇರೆ ಬೇರೆ ಕಡೆಗೆ ಹೊರಟರು ಅಲ್ಲಮ ಪ್ರಭು ಶ್ರೀಶೈಲ ಕಡೆಗೆ, ಸಿದ್ಧರಾಮ, ಉರಲಿಂಗ ಪೆದ್ಧಿ ಸೊಲಾಪೂರ, ಲಾತುರ ಕಡೆಗೆ  ಇನ್ನು ಅನೇಕ ಶರಣರು ಯುವ ಕಣ್ಮಣಿ ಚೆನ್ನಬಸವಣ್ಣನವರ ನೇತ್ರತ್ವದಲ್ಲಿ ಉಳವಿಯ ಮಾರ್ಗಕ್ಕೆ ಹೊರಟರು


ಬೆಳಗಾವಿ ಜಿಲ್ಲೆ ಕಲ್ಯಾಣ ಕ್ರಾಂತಿಯ ರಕ್ತದ ಕಲೆಗಳನ್ನು ಈಗಲೂ ಗುರುತಿಸ ಬಹುದಾದ ಭೂ ಪ್ರದೇಶ 'ಖಾನಾಪುರ ಉಳವಿ' ಇದು ಕದ೦ಬರ ಆಡಳಿತಕ್ಕೆ ಒಳಪಟ್ಟಿತ್ತು. ಕದ೦ಬರ ವಿಕ್ರಮಾದಿತ್ಯ , ಕಲಚೂರ್ಯರ ನೂರ್ಮಡಿ ತೈಲಪ ಅರಸನ ದಾಯಾದಿಗಳು. ಬಿಜ್ಜಳನ ವಿರುದ್ಧ ಕದ0ಬರು ಶರಣರಿಗೆ ಆಶ್ರಯ ನೀಡಲು ಯೋಚಿಸಿದರು. ಹಿರೆಬಾಗೆವಾಡಿ, ಚಿಕ್ಕ ಬಾಗೇವಾಡಿ, ಮುರಗೋಡ , ಹುಣಶಿಕಟ್ಟಿ, ಮುರಗೋಡ , ಕಾದ್ರೋಳಿ, ಜಗಳ ಬೆಟ್ಟ, ಲಿಂಗನಮಠ , ಹೆಣ ಕೊಳ್ಳ ದಾಟಿ ಕೊನೆಗೆ ಉಳವಿಗೆ ಒಂದು ತಂಡ ಹೋಯಿತು. ಮುರಗೋಡದಲ್ಲಿ ಅರಿವಿನ ಮಾರಿ ತಂದೆಯ ಸಮಾಧಿ ಮತ್ತು ೨೦೦ ಶರಣರ ಅಜ್ಞಾತ ವಚನಕಾರರ ಸಮಾಧಿಗಳಿವೆ. ಮುರುಗೋಡ- ಇದು ಉಳವಿಯ ಹೆಬ್ಬಾಗಿಲು. ಚೆನ್ನ ಬಸವಣ್ಣನ ಸಹಾಯಕ ರುದ್ರಮುನಿ ದೇವ ಹುಣಸಿಕಟ್ಟಿಯಲ್ಲಿ ಐಕ್ಯನಾಗುತ್ತಾರೆ. ಕಾದ್ರೋಳಿಯಲ್ಲಿ ರಣಭೀಕರ ಯುದ್ಧವಾಗುತ್ತದೆ. ಕಾದಹಳ್ಳಿ ಯುದ್ಧ ಮಾಡಿದ ಹಳ್ಳಿ ಕಾದ್ರೋಳಿ . ಇಲ್ಲಿಯೇ ಮುಗುಟಖಾನ ಹುಬ್ಬಳ್ಳಿಯಲ್ಲಿ ಗಂಗಾಂಬಿಕೆ ಮತ್ತು ಬಾಲ ಸಂಗಯ್ಯನವರ ಸಮಾಧಿ ಇದೆ. ತಿಗಡಿಯಲ್ಲಿ ಹರಳಯ್ಯನವರ ಪತ್ನಿ ಕಲ್ಯಾಣಮ್ಮನವರ ಸಮಾಧಿ . ಕಕ್ಕೆರಿಯಲ್ಲಿ ಬಿಷ್ಟಾದೆವಿ ಹಾಗು ಕಕ್ಕಯನವರ ಸಮಾಧಿ . ಒಂದು ತಂಡ ಕಕ್ಕೇರಿ ಲಿಂಗನ ಮಠ ಮಾರ್ಗವಾಗಿ ಉಳವಿಗೆ ಹೋದರು. ಕೂಗು ಮಾರಿಯ ತಂದೆಯ ಕೂಗು ಮೈಲು ಮೈಲು ದೂರದ ಶರಣರ ಬಿಡಾರಗಳಿಗೆ ಕೇಳುತಿತ್ತು. ಕಾದ್ರೋಳಿಯ ಯುದ್ಧ ನಂತರ ಮಡಿವಾಳಯ್ಯ ಮುರಗೋಡದಲ್ಲಿ ಯುದ್ಧ ಮಾಡಿ ಅಲ್ಲಿಯೇ ಖಡ್ಗ ತೊಳೆಯುತ್ತಾನೆ, ಅದುವೇ ಕೆಂಗೇರಿ ಕೆಂಪಾದ ಕೆರೆ . ಮುಂದೆ ಕೆಲ ಶರಣರು ತೊರಗಲ್ಲ ಮುನವಳ್ಳಿ ಸವದತ್ತಿ ಹುಬ್ಬಳ್ಳಿ ಧಾರವಾಡ ಉಣಕಲ್ಲಕೆರೆ ಅಲ್ಲಿಯೇ ಚೆನ್ನಬಸವಣ್ಣ ಕೆಲ ಕಾಲ ತಂಗಿದ್ದರು. ನಂತರ ಅಲ್ಲಿಂದ ಒಂದು ತಂಡ ಹಳಿಯಾಳ ಮಾರ್ಗವಾಗಿ ಉಳವಿಗೆ ತಲುಪಿದರು. ಹುಬ್ಬಳಿಯಲ್ಲಿ ೩೦೦೦ ಸಾವಿರ ಶರಣರು ವಾಸ್ತವವಾಗಿದ್ದರು... ಹೀಗಾಗಿ ಅಲ್ಲಿ ಮೂರು ಸಾವಿರ ಮಠ ಮುಂದೆ ಚಾಲ್ತಿಗೆ ಬಂತು. ಅಲ್ಲಿಂದ ಅಕ್ಕ ನಾಗಮ್ಮ ಎಣ್ಣೆ ಹೊಳೆ , ಅಂಬಿಗರ ಚೌಡಯ್ಯನವರು ಚೌಡಯ್ಯದಾನಪುರದಲ್ಲಿ ಐಕ್ಯ ರಾಗುತ್ತಾರೆ. ಸಾವಿರಾರು ಶರಣರು ಕಲ್ಯಾಣದಿಂದ ಹೊರಟಿದ್ದರು ಕೊನೆಗೆ ಉಳವಿಯಲ್ಲಿ ಉಳಿದದ್ದು ಕೇವಲ ಬರಿ ನೂರು ಇನ್ನೂರು ಜನರು ಮಾತ್ರ . ಉಳವಿಯಿಂದಾ ಕಿಮಿ ದೂರದಲ್ಲಿ ಹೆಣಕೊಳ್ಳದ ಹತ್ತಿರ ಅನೇಕ ಶರಣರು ಸಾಯುತ್ತಾರೆ. ಆಗ ಅಲ್ಲಿದ್ದ ಕಂದಕಕ್ಕೆ ಅವರನ್ನು ತಳ್ಳುತ್ತಾರೆ  ಅದಕ್ಕೆ ಅದನ್ನು ಹೆಣಕೊಳ್ಳ ಎಂದು ಕರೆಯುತ್ತಾರೆ. ಎಚ್ಚರಕಾಯಕದ ರಾಮಿ ತಂದೆ ,ಎತ್ತಿನ ಕಾಯಕದ ಬಸಪ್ಪ ಮತ್ತು ಕೆಲ ಶರಣರು ಉಳವಿಯಲ್ಲಿ ಉಳಿಯುತ್ತಾರೆ, ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ತಮ್ಮ 24ನೇ ವಯಸ್ಯಿನಲ್ಲಿ ಉಳವಿಯಲ್ಲಿ ಐಕ್ಯರಾಗುತ್ತರೆ. ಕ್ರಾಂತಿಯು ಹೆಣ್ಣು_ಹೊನ್ನು_ಮಣ್ಣಿಗಾಗಿ  ನೆಡೆದ ಕ್ರಾಂತಿಯಲ್ಲ, ಮಾನವೀಯತೆ ಸಮಾನತೆಯ ಅಸ್ಮಿತೆಗಾಗಿ ಲೋಕೋದ್ಧಾರಕ್ಕಾಗಿ ನಡೆದ ಜಗತ್ತಿನ ಬಹುದೊಡ್ಡ ಕ್ರಾಂತಿ ಇದಾಗಿದೆ, ವಿಶ್ವದಲ್ಲೇ ಮೊಟ್ಟಮೊದಲ ಸಂಸತ್ತು ಅನುಭವ ಮಂಟಪ ನಿರ್ಮಿಸಿ, ಸರ್ವರಿಗೂ ಸಮಾನತೆ ನೀಡಿದ ನಮ್ಮೆಲ್ಲರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಮೂಲಭೂತ ಹಕ್ಕಿಗಾಗಿ ಮಾನವ ಸಂಕುಲಕ್ಕಾಗಿ ಶರಣರು ನೆತ್ತರು ಚೆಲ್ಲಿದರೂ ವಚನ ಸಾಹಿತ್ಯವನ್ನು ಉಳಿಸಿದರು, ಶರಣರು ತಮ್ಮ ಪ್ರಾಣ ಬಿಟ್ಟರೇ ವಿನಃ ತಲೆ ಮೇಲೆ ಹೊತ್ತ ವಚನಗಳ ಕಟ್ಟನ್ನು ಬಿಡಲಿಲ್ಲ, ರಕ್ತಸಿಕ್ತರಾಗಿ ಪ್ರಾಣ ಬಿಟ್ಟರು, ಅವರು ಬಿಟ್ಟ ಪ್ರಾಣ ಇಂದು ವಚನ ಸಾಹಿತ್ಯದಲ್ಲಿದೆ, ಅದನ್ನು ಓದಿದರೆ, ನಮಗಾಗಿ ಪ್ರಾಣತ್ಯಾಗ ಮಾಡಿದ ಶರಣರನ್ನು ಸ್ಮರಿಸಿದಂತೆ, ವಚನಗಳನ್ನು ಓದಿ_ಅನುಸರಿಸಿದರೆ  ರಕ್ತಸಿಕ್ತ ಕ್ರಾಂತಿಯಲ್ಲಿ ಮಡಿದ ಶರಣರನ್ನು ಗೌರವಿಸಿದಂತೆ,. 

ಜಗಜ್ಯೋತಿ ಬಸವಣ್ಣನವರ ಹಾಗೂ ಅಸಂಖ್ಯಾತ ಶರಣರು ಮಡಿದ ಕಲ್ಯಾಣ ಕ್ರಾಂತಿಯು ಇಡೀ  ಜಗತ್ತು ಕಂಡ ಕಾರಳತೆ ಸಾಕ್ಷಿಯಾಗಿದೆ,ಹಾಗು ಮನುಕುಲಕ್ಕಾಗಿ ನಡೆದ ಸಾಮಾಜಿಕ ನ್ಯಾಯದ ಶ್ರೇಷ್ಠ ಕ್ರಾಂತಿಯಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದೆ, ದಯವೇ ಧರ್ಮದ ಮೂಲವೆಂದ ಸಮಾಜಿಕ ನ್ಯಾಯದ ಹರಿಕಾರರಾದ ವಿಶ್ವಗುರು ಬಸವಣ್ಣನವರನ್ನೇ ಗಡಿಪಾರು ಮಾಡಿ ಬೀಕರವಾಗಿ ಕೊಂದ ಕರಾಳ ಸತ್ಯವೂ ನೆಲದಲ್ಲಿ ಹುದುಗಿ ಹೋಗಿದೆ,

ಮರಣಕ್ಕೂ ಮುನ್ನ ಬಸವಣ್ಣನವರು ಕಲ್ಯಾಣದಲ್ಲಿ ನಡೆದ ಕ್ರೌರ್ಯವನ್ನು ಕೆಳಗಿನ ವಚನದಲ್ಲಿ ಹೇಳುತ್ತಾರೆ,

ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯ
ನಾನು ನೀವು ಬಂದ ಕಾರ್ಯಕ್ಕೆ ಪ್ರಭುದೇವರು ಬಂದರಯ್ಯಾಕಲ್ಯಾಣವೆಂಬುದು ಪ್ರಣತೆಯಾಗಿತ್ತು ನಾನು ತೈಲವಾದೆನು ನೀವು ಬತ್ತಿಯಾದಿರಿ
ಪ್ರಭುದೇವರು ಜ್ಯೋತಿಯಾದರು ಪ್ರಣತೆ ಒಡೆದಿತ್ತು ತೈಲ ಚೆಲ್ಲಿತ್ತು ಬತ್ತಿ ಬಿದ್ದಿತ್ತು ಜ್ಯೋತಿ ನಂದಿತ್ತಯ್ಯಾ ನಮ್ಮ ಕೂಡಲಸಂಗನ ಶರಣರ ಮನ ನೊಂದಿತ್ತಯ್ಯಾ

ಇವೆಲ್ಲವನ್ನೂ ಕಂಡ ನಾಡು, ಬಿಕ್ಕಿ ಬಿಕ್ಕಿ ಅತ್ತಿದೆ, ಕಣ್ಣೀರು ಬತ್ತಿ ಕಣ್ಣಲ್ಲಿ ರಕ್ತವೇ ಹರಿದಿದೆ, ನೊಂದ ಜೀವಗಳ ಆರ್ಥನಾದ ಮುಗಿಲು ಮುಟ್ಟಿದೆ, ರಕ್ತಸಿಕ್ತ ಕಲ್ಯಾಣವು ಸ್ಮಶಾನವಾಗಿ ಬದುಕುಳಿದವರಿಗೆ ರಣಭೀಕರ ನೋವನ್ನುಂಟು ಮಾಡಿದೆಇದೆಲ್ಲವನ್ನೂ ಕಣ್ಣಾರೆ ಕಂಡ ಮೋಳಿಗೆ ಮಾರಯ್ಯನವರು ನೊಂದು ನುಡಿದ ವಚನ

ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ. ಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳುವೆಗೆ, ಪ್ರಭು ಕದಳಿಗೆ, ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ತಮ್ಮ ಲಕ್ಷಭಾವಕ್ಕೆ ಮುಕ್ತಿಯನೆಯ್ದಿಹರು. ನನಗೊಂದು ಬಟ್ಟೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.  

ಚೆಲ್ಲಾಪಿಲ್ಲಿ ಕಲ್ಯಾಣ, ಎಲ್ಲೆಲ್ಲೂ ಚೆಲ್ಲಿದ ರಕ್ತ, ಎಲ್ಲರಲ್ಲೂ ಮಡುಗಟ್ಟಿದ ಶೋಕ, ಬಿಕ್ಕಿ ಬಿಕ್ಕಿ ಅಳುತ್ತಿದೆ ಕಲ್ಯಾಣ, ಕಣ್ಣೀರೊರೆಸುವ ಬಸವನ ಕಳೆದುಕೊಂಡು ಅನಾಥವಾಗಿದೆ ಕಲ್ಯಾಣ, ನೋವಲ್ಲಿ ಬಿದ್ದು ಒದ್ದಾಡುತ್ತಿದೆ ಕಲ್ಯಾಣ, ನೊಂದರ ಬೆಂದವರ ಸಾತ್ವನಿಸುವ ಬಸವಪ್ಪನ ಕಳೆದುಕೊಂಡು, ಎದೆ-ಎದೆ ಬಡೆದುಕೊಂಡು ನೆಲ್ಲಕ್ಕೆ ಬಿದ್ದು ಒದ್ದಾಡುತ್ತಿದ್ದಾರೆ ಅನುಯಾಯಿಗಳು, ದಿಕ್ಕಾಪಾಲಗಿ ಹರಿದು ಹಂಚಿ ಹೋಗಿವೆ ವಚನಗಳು,. ಇಂದು ಮರಳಿ ನಮ್ಮೆಲ್ಲರ ಕೈಯಲ್ಲಿ ವಚನಗಳು ಸಿಕ್ಕಿವೆ ಅವುಗಳ ಅಸ್ಮಿತೆಯಲ್ಲಿ ಬಸವಣ್ಣನಿದ್ದಾನೆ, ಅಲ್ಲಮ, ಸಿದ್ಧರಾಮ, ಚೆನ್ನಬಸವಣ್ಣ, ಅಕ್ಕಮಹಾದೇವಿ, ಅಕ್ಕನಾಗಾಯಿ, ಎಲ್ಲರೂ ವಚನಗಳಲ್ಲಿ ಜೀವಂತವಾಗಿದ್ದಾರೆ, ಮರಳಿ ಅವರ ತತ್ವಗಳನ್ನು ಅನುಷ್ಠಾನಕ್ಕೆ ತರುವುದೇ ನಮ್ಮೆಲ್ಲರ ಗುರಿಯಾಗಬೇಕಿದೆ, ನನ್ನ ಅಪ್ರಮಾಣ ಚಿನ್ಮಯಲಿಂಗನ ಸಾಕ್ಷಿಗೂ ಎಂದಿಗೂ ಶರಣರ ತ್ಯಾಗ ಬಲಿದಾನ ವ್ಯರ್ಥವಾಗದು, ಅವರ ತತ್ವಗಳು ಇಂದಲ್ಲ ನಾಳೆ ಜಗತ್ತಿನಾದ್ಯಂತ ವಿಸ್ತರಿಸಲಿವೆ, ಜಗತ್ತಿಗೆ ಅವರ ವಚನಗಳೇ ಆದರ್ಶವಾಗಲಿವೆ, ಜಗತ್ತಿಗೆ ಬಸವಣ್ಣನ ಕಲ್ಯಾಣವೇ ಮಾದರಿಯಾಗಲಿದೆ, ಜಗವೇ ಕಲ್ಯಾಣವಾಗಲಿದೆ,.

ಮತ್ತೆ ಮೆರೆಲಿದೆ ಕಲ್ಯಾಣ ಇಂದಲ್ಲ ನಾಳೆ, ಇದು ಸತ್ಯ, ಇದು ಸತ್ಯ, ಇದು ಸತ್ಯ,.👏🏻👏🏻👏🏻


ಕಲ್ಯಾಣದ ಶರಣರ ನೆನಹಿನಲ್ಲಿ,.



✍🏾-;ಲೇಖನ- #ಲೋಕೇಶ್_ಎನ್_ಮಾನ್ವಿ,.

            -9972536176  


ಈ ಲೇಖನವನ್ನು ಓದಿದ ಎಲ್ಲರಿಗೂ ಧನ್ಯವಾದಗಳು ,..🙏🏻❤️


ಆದಷ್ಟು ನಿಮ್ಮೆಲ್ಲ ಸ್ನೇಹಿತರಿಗೆ ಶೇರ್ ಮಾಡಿ  ಹಂಚಿಕೊಳ್ಳಿ,…🙏🏻🙏🏻






Comments

  1. ಶರಣು ಶರಣಾರ್ಥಿಗಳು ಸರ್. ದಿ ಕಲ್ಯಾಣ ಫೈಲ್ಸ್. ಕಲ್ಯಾಣ ಕ್ರಾಂತಿ. ಬಸವ ಕಲ್ಯಾಣ 🙏🙏ಶರಣರ ಬಿಡು ಬಸವ ಕಲ್ಯಾಣ. ಸರ್ ಸಂಗ್ರಹಣೆ ಮಾಡಿ ಶ್ರಾವಣ ಮಾಸದ ಸಮಯದಲ್ಲಿ ನಮ್ಮ ಶರಣರಿಗೆ ಹೇಳುತೇನೆ. ನಿಮ್ಮ ಪ್ರತಿಯೊಂದು ಶರಣರ ಸಂದೇಶ ಸಾರೋಣ ಜೈ ಬಸವ 🙏🙏

    ReplyDelete
  2. ವೇದ ಗಳನ್ನ ವಿಂಗಡನೆ ಮಾಡಿದವರೆ ಮೇಲಜಾತಿ ಯವ ರು ಅಲ್ಲ...

    ReplyDelete

Post a Comment

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.