ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-
ಶ್ರೀಗುರುಬಸವಲಿಂಗಾಯ ನಮಃ
ಏನಿ ಬಂದಿರಿ
ಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ, ಕುಳ್ಳಿರೆಂದಡೆ ನೆಲ ಕುಳಿಹೋಹುದೆ, ಒಡನೆ ನುಡಿದಡೆ ಸಿರ ಹೊಟ್ಟೆಯೊಡೆವುದೆ, ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ .
✍🏾-; ವಿಶ್ವಗುರು_ಬಸವಣ್ಣನವರು.
ಭಾವಾರ್ಥ-
ಏನಿ ಬಂದಿರಿ
ಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ,
ಏನ್ರಿ ಈಗ ಬಂದಿರೆ, ಹೇಗಿದ್ದೀರಾ, ಸೌಖ್ಯವೇ, ಹೇಗಿತ್ತು ಪ್ರಯಾಣ, ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ, ಮತ್ತೇನು ಸಮಾಚಾರ ಎಂದು ಪ್ರೀತಿಯಿಂದ ಕೇಳಿ ವಿಚಾರಿಸಿದರೇನು ನಿಮ್ಮ ಮನೆಯ ಐಶ್ವರ್ಯ ಸಂಪತ್ತು ಹಾರಿ ಹೋಗುವುದೇ?
ಕುಳ್ಳಿರೆಂದಡೆ ನೆಲ ಕುಳಿಹೋಹುದೆ,
ಮನೆಗೆ ಬಂದ ಅತಿಥಿಗಳಿಗೆ, ಮೊದಲು ಮನೆಯ ಒಳಗಡೆ ಕರೆದು, ಕುಳಿತುಕೊಳ್ಳಿ ದಣಿವಾಗಿದೆಯೇ ನೀರು ಕುಡಿಯಿರಿ ಎಂದು ಉಪಚರಿಸುವುದು ಸಂಸ್ಕೃತಿ,
ಅದನ್ನು ಬಿಟ್ಟು ಬಂದ ಅತಿಥಿಗಳಿಗೆ ಗೌರವಿಸದೇ
ಅವರ ಭಾವನೆಗಳಿಗೆ ಬೆಲೆ ಕೊಡದೇ,
ಮನೆಯ ಅಂತೆಯೇ ನಿಲ್ಲಿಸಿ, ಮಾತಾಡಿ ಕಳಿಸಿದರೇನು.? ಬಂದು,
ಏಕೆ ಅವರು ಬಂದು ಕುಳಿತರು ನಿಮ್ಮ ಮನೆಯ,
"ನೆಲ ತೆಗ್ಗು ಗುಂಡಿ ಬೀಳುವುದೆ",. ?
ಎಂದು ಪ್ರಶ್ನಿಸುತ್ತಾರೆ ಬಸವಣ್ಣನವರು.
ಒಡನೆ ನುಡಿದಡೆ ಶಿರಹೊಟ್ಟೆಯೊಡೆವುದೆ,
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ,
ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ .
ಶರಣು ಬನ್ನಿ, ಕುಳಿತುಕೊಳ್ಳಿ, ಹೇಗಿತ್ತು ಪ್ರಯಾಣ ಮನೆಯಲ್ಲಿ ಎಲ್ಲರೂ ಸೌಕ್ಯವೇ ಎಂದು ವಿಚಾರಿಸಿದರೇನು ನಿಮ್ಮ ತಲೆ ಒಡೆದು ಹೋಗುತ್ತದೆಯೇ.? ಅಥವಾ ನಿಮ್ಮ ಹೊಟ್ಟೆ ಒಡೆದು ಹೋಗುತ್ತದೆಯೇ,?
ಬಂದ ಅತಿಥಿಗಳನ್ನು ಕೂಡಿಸದೇ, ಸರಿಯಾಗಿ ಮಾತಾಡಿಸದೇ, ನಿಮ್ಮ ಒಣ ಪ್ರತಿಷ್ಠೆಯನ್ನು ತೋರಿಸಿದರೆ ಏನು ಫಲ, ಅದು ವ್ಯರ್ಥ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಪ್ರೀತಿಯಿಲ್ಲದ ಮನೆ ಅದು ಸೆರೆಮನೆ, ಪ್ರೀತಿ ತುಂಬಿದ, ಮನೆ ಅದುವೇ ಮಹಾಮನೆ.
ಬಂದ ಅತಿಥಿಗಳಿಗೆ ಏನನ್ನು ಕೊಡಲಾಗದಿದ್ದರೂ ಇಲ್ಲ, ಕನಿಷ್ಠ ಗೌರವವನ್ನೂ ಕೊಡದಿದ್ದರೆ, ಮೂಗ ಕ್ವೊಯ್ವುದ ಮಾಂಬನೆ ಕೂಡಲಸಂಗಮದೇವಯ್ಯ,
ಇಂದಲ್ಲ ನಾಳೆ, ಸಮಾಜ ನಿನ್ನ ನಿಜ ಮುಖವನ್ನು ನೋಡಿ, ಅಹಂಕಾರಿ ಎನ್ನದೇ ಇರಲಾರದು,
ಸೃಷ್ಟಿಕರ್ತನು ನಿನ್ನ ಅಹಂಕಾರವನ್ನು ಕರಗಿಸದೇ ಬಿಡಲಾರೆ
ಎಂದು ಎಚ್ಚರಿಸುತ್ತಾರೆ ವಿಶ್ವಗುರು_ಬಸವಣ್ಣನವರು,.
ಎಲ್ಲರಿಗೂ ಶರಣು ಶರಣಾರ್ಥಿಗಳೊಂದಿಗೆ,
✍🏾ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ,.


Beautiful explanation
ReplyDeleteIf you have any translation copies of basava vachanas please contact me i wish to purchase.
ReplyDeleteDr B T Lawani
9370969607
b.t.lawani@gmail.com