ರಾಯಚೂರು ಜಿಲ್ಲೆಯ ಶರಣರು ಸರಣಿ -೦2, ಶರಣ ದಂಪತಿಗಳಾದ ಆಯ್ದಕ್ಕಿ ಲಕ್ಕಮ್ಮ ಮಾರಯ್ಯನವರು. ವಿಶೇಷ ಲೇಖನ -: ಲೋಕೇಶ್ ಎನ್ ಮಾನ್ವಿ
🌼#ರಾಯಚೂರು ಜಿಲ್ಲೆಯ ಶರಣರು ಸರಣಿ- 02🌼 ━━━━━━━━━━━━━━━━━━━━━━━━ ಶರಣ ದಂಪತಿಗಳಾದ ಆಯ್ದಕ್ಕಿ ಲಕ್ಕಮ್ಮ ಮಾರಯ್ಯನವರು 🔹ಶರಣ ದಂಪತಿಗಳಾದ, 🔶ಆಯ್ದಕ್ಕಿ ಲಕ್ಕಮ್ಮ ಮಾರಯ್ಯನವರು. ಹನ್ನೆರಡನೇ ಶತಮಾನದ ಬಸವಾದಿ ಶರಣರ, ಸಾಲಿನಲ್ಲಿ ಕಾಯಕ ನಿಷ್ಠೆ , ದಾಸೋಹ ಭಾವ, ಲಿಂಗ ಸಮಾನತೆಗೆ, ಹೆಸರಾದ ಮಹತ್ವದ ಶರಣರೇ, ಆಯ್ದಕ್ಕಿ ಲಕ್ಕಮ್ಮ ಹಾಗೂ ಮಾರಯ್ಯ ದಂಪತಿಗಳು, ಇವರು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ, ಅಮರೇಶ್ವರ ಗ್ರಾಮದವರು . 🔹ಆಯ್ದಕ್ಕಿ ಮಾರಯ್ಯನವರ ಅಂಕಿತನಾಮ-: " ಅಮರೇಶ್ವರಲಿಂಗ " ಲಭ್ಯವಿರುವ ವಚನಗಳು- 31 🔸ಆಯ್ದಕ್ಕಿ ಲಕ್ಕಮ್ಮನವರ ಅಂಕಿತನಾಮ -: ' ಮಾರಯ್ಯಪ್ರಿಯ ಅಮರೇಶ್ವರಲಿಂಗ " ಲಭ್ಯವಿರುವ ವಚನಗಳು- 25 ಲಿಂಗಸೂಗೂರಿನ ಅಮರೇಶ್ವರ ಗ್ರಾಮದವರಾದ ಶರಣ ದಂಪತಿಗಳು, ಶುದ್ಧ ಭಕ್ತಿ, ಹಾಗೂ ಕಾಯಕ ನಿಷ್ಠರಾಗಿದ್ದು, ಅಣ್ಣ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ಬಂದರು. ಕಲ್ಯಾಣ ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ೭೭೦ ಅಮರ ಗಣಂಗಳಲ್ಲಿ, ಇವರೂ ಪ್ರಮುಖರು. "ಮಹಾಮನೆ" ಎಂದರೆ ಇದು ಬರಿ ಕಲ್ಲುಗಳಿಂದ ಕಟ್ಟಿದ ಕಟ್ಟಡವಲ್ಲ, ಸಾವಿರಾರು ಜನರು, ಇಷ್ಟಲಿಂಗ ಪೂಜೆ, ಚಿಂತನ ಮಂಥನ, ಹಾಗೂ ಪ್ರಸಾದಕ್ಕೆ, ಒಟ್ಟುಗೂಡುವ ಸ್ಥಳವೇ ಅಣ್ಣ ಬಸವಣ್ಣನವರ ಪರಿಕಲ್ಪನೆಯ "ಮಹಾಮನೆ" ಬೇರೆ ಬೇರೆ ಊರುಗಳಿಂದ, ಬೇರೆ ಬೇರೆ ರಾಜ್ಯಗಳಿಂದ, ಬೇರೆ ಬೇರೆ ದೇಶಗ...