ರಾಯಚೂರು ಜಿಲ್ಲೆಯ ಶರಣರು -4 ಮಹಾಶರಣೆ ಮುಕ್ತಾಯಕ್ಕ.
🌼ರಾಯಚೂರು ಜಿಲ್ಲೆಯ ಶರಣರು- 4 🔶 ಮಹಾಜ್ಞಾನಿ ಶರಣೆ ಮುಕ್ತಾಯಕ್ಕ. ಅನುಭಾವದ ನೆಲೆಯಲ್ಲಿ ಅತ್ಯಂತ ಉನ್ನತ ಮಟ್ಟಕ್ಕೆ ತಲುಪಿದ ಶರಣೆ, ಇವರ ತವರೂರು ಗದಗ ಜಿಲ್ಲೆಯ ಲಕ್ಕುಂಡಿ, ಗಂಡನ ಊರು ಹಾಗೂ ಇವರು ಐಕ್ಯವಾದ ಸ್ಥಳ : ಇಂದಿನ ರಾಯಚೂರು ಜಿಲ್ಲೆಯ, ದೇವದುರ್ಗ ತಾಲೂಕಿನ ಮೊಸುಳೆಕಲ್ಲು ( ಮೊಸರುಕಲ್ಲು) ಗ್ರಾಮ ಇವರ ಕಾಲ -1160 ಅಂಕಿತನಾಮ - ಅಜಗಣ್ಣತಂದೆ, ಪ್ರಸ್ತುತ ಲಭ್ಯವಿರುವ ವಚನಗಳು - 37 ಕಾಯಕ - ಹೈನುಗಾರಿಕೆ. ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರಿಪ್ಪತ್ತು ವಚನ, ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತುವಚನ, ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ, ಅಜಗಣ್ಣನ ಐದು ವಚನಕ್ಕೆ ಕೂಡಲಚೆನ್ನಸಂಗಮದೇವಾ, ಮಹಾದೇವಿಯಕ್ಕಗಳದೊಂದೆ ವಚನ ನಿರ್ವಚನ. ಅಜಗಣ್ಣನ ವಚನವೆಂದರೆ ಅದು ಅತ್ಯಂತ ಅರ್ಥಪೂರ್ಣ, ಉತ್ಕೃಷ್ಟ ಆಧ್ಯಾತ್ಮಿಕ ನೆಲೆಯ ವಚನಗಳಾಗಿವೆ ಎಂಬುದನ್ನು ಮೇಲಿನ ವಚನದಲ್ಲಿ ಚೆನ್ನಬಸವಣ್ಣನವರು ತಿಳಿಸುತ್ತಾರೆ. ಅಜಗಣ್ಣ ಮುಕ್ತಾಯಕ್ಕನಿಗೆ ಬರಿ ಅಣ್ಣ ಮಾತ್ರವಲ್ಲ, ಆಕೆಯ ಗುರುವಾಗಿ ನಿಂತವನು, ಐಕ್ಯಸ್ಥಲದ ಶರಣ ಅಜಗಣ್ಣ. ಅಜ, ಎಂದರೆ ಜ್ಞಾನ, ಗಣ್ಣ, ಎಂದರೆ ಕಣ್ಣು, ಅಜಗಣ್ಣ ಅದ್ವಿತೀಯ ಜ್ಞಾನ ಸಾಧಕನಾಗಿದ್ದು ಅಷ್ಟೇ ತನ್ನ ಭಕ್ತಿಯನ್ನು ಹೊರಗಡೆತೋರುಗೊಡದೆ, ನಿರಾಡಂಬರ ಭಾವಲಿಂಗ ಪೂಜಕನಾಗಿ, ಗುಪ್ತಭಕ್ತನಾಗಿದ್ದ, ಆತನ ಅಂತರಂಗವು ಸದಾ ಲಿಂಗಧ್ಯಾನದಲ್ಲೇ ಇರುತ್ತಿತ್ತು ಅಂಕಿತನಾಮ : ಮಹಾಘನಸೋಮೇಶ್ವರ...