ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ? ಹಡಪದ ಅಪ್ಪಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.


 ಓಂ ಶ್ರೀಗುರುಬಸವಲಿಂಗಾಯ ನಮಃ



ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ?

ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ ?

ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ ?

ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ?

ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.


✍🏾-; ನಿಜಸುಖಿ ಹಡಪದ ಅಪ್ಪಣ್ಣನವರು.

ಭಾವಾರ್ಥ-


ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ ?

ಈ ಭೂಮಿಯ ಮೇಲಿಹ ಕೆರೆ, ಹೊಳೆ, ನದಿ ದಾಂಟಲು ಅರಗೋಲುಗಳ ಅವಶ್ಯಕತೆ ಇದೆಯೇ ಹೊರತು,

ಆಕಾಶದ ಮೋಡದಲ್ಲಿಹ ಮೇಘಜಲವನ್ನು ದಾಂಟಲು ಯಾವ ಅರಗೋಲಿನ ಅವಶ್ಯಕತೆಯ ಹಂಗಿಲ್ಲ.


ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ ?

ಮರೆವು ಅಳಿದು, ಅರಿವಿನ ಕಣ್ತೆರೆದು, ಪಂಚೇಂದ್ರಿಯಗಳೆಲ್ಲ ಜ್ಞಾನೇಂದ್ರಿಯಗಳಾಗಿ ತನ್ನ ಮನಸ್ಸನ್ನು  ನಿರಾಕಾರ ಸೃಷ್ಟಿಕರ್ತನ ಬಯಲಲ್ಲಿರಿಸಿದ  ಶಿವಶರಣರಿಗೆ ಯಾವುದೇ (ಮನುಜ ಕಲ್ಪಿತ) ಸಾಕಾರದ ಹಂಗಿಲ್ಲ ಅವಶ್ಯಕತೆಯೂ ಇಲ್ಲ.


ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ ?

ಬೇಕು ಬೇಡಗಳಿಂದಾಚೆ, ಆಸೆ ಆಮಿಷಗಳಿಂದಾಚೆ, ನಾನು ನನ್ನದೆಂಬ ಭ್ರಮೆಯಿಂದಾಚೆ,  ನನ್ನದು ತನ್ನದೆಂಬ ಮೋಹದಿಂದಾಚೆಗೆ ಇರುವ ಶಿವಶರಣರಿಗೆ ಯಾವುದೇ ಈ ಲೋಕದ ಹಂಗಿಲ್ಲ..


ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ, ಲೋಕದ ಮಾನವರಿಗುಂಟೆ? ನಿಮ್ಮ ನೆಲೆಯನರಿವುದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.


ಇಂತೀ ತನ್ನ ತಾನರಿದು ನಿಮ್ಮೊಳಗೆ ಏಕವಾಗಿ ಬೆರಸಿ ಬೇರಿಲ್ಲದಂತಿಪ್ಪ ಶಿವ ಶರಣರಿಗಲ್ಲದೆ , ಬಸವಪ್ರಿಯ ಕೂಡಲಚೆನ್ನಬಸವಣ್ಣನ ನಿಲುವನರಿಯಲು ಈ ಲೋಕದ ಮರುಳ ಮಾನವರಿಗೆ ಎಂದೂ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ನಿಜಸುಖಿ ಹಡಪದ ಅಪ್ಪಣ್ಣನವರು.💐


ಶರಣು ಶರಣಾರ್ಥಿಗಳೊಂದಿಗೆ

✍🏾ಲೋಕೇಶ್_ಎನ್_ಮಾನ್ವಿ.

9972536176

Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.