Posts

Showing posts from March, 2022

‘ದೇವರಿಗೂ ಕಾಯಕ ತತ್ವ ತಿಳಿಸಿದ ಶರಣ ದಂಪತಿಗಳು ‘ಆಯ್ದಕ್ಕಿ ಲಕ್ಕಮ್ಮ ಆಯ್ದಕ್ಕಿ ಮಾರಯ್ಯನವರು’ ವಿಶೇಷ ಲೇಖನ-; ಲೋಕೇಶ್ ಎನ್ ಮಾನ್ವಿ.

Image
ಶ್ರೀಗುರು ಬಸವಲಿಂಗಾಯ ನಮಃ ‘ ದೇವರಿಗೂ ಕಾಯಕ ತತ್ವ ತಿಳಿಸಿದ ಶರಣ ದಂಪತಿಗಳು ‘ ಆಯ್ದಕ್ಕಿ ಲಕ್ಕಮ್ಮ ಆಯ್ದಕ್ಕಿ ಮಾರಯ್ಯನವರು ’ ಇಡೀ ಜಗತ್ತಿಗೆ ‘ ಕಾಯಕವೇ ಕೈಲಾಸ ’ ವೆಂಬ ಅದ್ವಿತೀಯ ತತ್ವವನ್ನು ತಿಳಿಸಿದ ಮೊದಲಿಗರು ಶರಣೆ ಆಯ್ದಕ್ಕಿ ಲಕ್ಕಮ್ಮನವರು , ಇವರು ಶರಣ ಆಯ್ದಕ್ಕಿ ಮಾರಯ್ಯನವರ ಧರ್ಮಪತ್ನಿಯಾಗಿದ್ದರು , ಶರಣ   ಸತಿಪತಿಗಳಿಬ್ಬರೂ ಮೂಲತಃ ರಾಯಚೂರು ಜಿಲ್ಲೆ , ಲಿಂಗಸೂಗೂರು ತಾಲೂಕಿನ ಅಮರೇಶ್ವರ ಗ್ರಾಮದವರಾಗಿದ್ದರೂ ಕಲ್ಯಾಣದಲ್ಲಿ ಜಗಜ್ಯೋತಿ ಬಸವಣ್ಣನವರ ತತ್ವಾದರ್ಶಗಳಿಗೆ ಮಾರು ಹೋಗಿ ಕಲ್ಯಾಣಕ್ಕೆ ಬರುತ್ತಾರೆ , ಕಲ್ಯಾಣಕ್ಕೆ ಬಂದ ನಂತರ ಅನುಭವ ಮಂಟಪದಲ್ಲಿ ಇಬ್ಬರಿಗೂ ಆತ್ಮೀಯ ಸ್ವಾಗತ ಕೋರಲಾಗುತ್ತದೆ , ಆದರೆ ಲಕ್ಕಮ್ಮನವರು ಹೆಚ್ಚಾಗಿ ಕಾಯಕ ದಾಸೋಹದಲ್ಲೇ ತೊಡಗುತ್ತಾರೆ , ಕಲ್ಯಾಣದಲ್ಲಿ ಇವರ ಕಾಯಕ ಹೊಲಗಳಲ್ಲಿ ಕೆಲಸ ಮಾಡುವುದು , ಭತ್ತದ ಕಣವಾದ ನಂತರ ಮಾಲಿಕರು ಮನೆಗೆ ಭತ್ತ ಒಯ್ಯುವಾಗ ಅಳಿದುಳಿದು ಬಿದ್ದ ಭತ್ತವನ್ನೇ ಕೂಲಿಯಾಗಿ  ಆಯ್ದು  ತಂದು ಅದರಲ್ಲೇ ದಾಸೋಹ ಮಾಡಿ   ಮಿಕ್ಕಿದ್ದನ್ನು   ಸೇವಿಸಿ ಸಂತೃಪ್ತರಾಗುತ್ತಿದ್ದರು , ಹೀಗಿರುವಾಗ ಪತಿ ಮಾರಯ್ಯ ಕೂಲಿಗೆಂದು ಹೊಲದಲ್ಲಿ ದುಡಿದು ಬರುವಾಗ ದಿನಕ್ಕಿಂತ ಹೆಚ್ಚಿನ ಅಕ್ಕಿಯನ್ನು  ಆಯ್ದು  ತರುತ್ತಾನೆ , ಇದನ್ನು ಗಮನಿಸಿದ ಪತ್ನಿ ...

‘ಪರಮದಾಸೋಹಿ ಶರಣಬಸವರು’

Image
 ‘ಪರಮದಾಸೋಹಿ ಶರಣಬಸವರು’ ಪರಮದಾಸೋಹಿ ಶರಣಬಸವರು, ಊರ ಜನರೆಲ್ಲ ಜೋಳವನ್ನು ಬಿಟ್ಟು ಬೇರೆ ಬೆಳೆ ಆಶ್ರಯಿಸಿದಾಗ ತಾವು ಒಬ್ಬರೇ ಜೋಳವನ್ನು ಬಿತ್ತಿದ್ದರು, ಊರ ಜನರೆಲ್ಲ ನಿನ್ನ ಬೆಳೆ ಪಕ್ಷಿಗಳಿಗೆ ಆಹಾರವಾಗುತ್ತೆ ಎಂದು ನಗುತ್ತಿರುವಾಗ… ಪಾಪ ಜೋಳ ತಿಂದಾಗ ನೀರು ಬೇಕಲ್ಲ ಪಕ್ಷಿಗಳಿಗೆ ಎಂದು ಶರಣಬಸವರು ನೀರನ್ನು ಇಟ್ಟಾಗ ಊರ ಜನರೆಲ್ಲ ಶರಣನಿಗೆ ತಲೆ ಕೆಟ್ಟಿದೆ ಎಂದು ಮಾತಾಡಿದರು. ಜನರ ಬೆಳೆಗಳು ಕಣಕ್ಕೆ ಬರುವಷ್ಟರಲ್ಲಿಊರಿಗೆ ಊರೇ ಬರ ಬಿದ್ದು ಎಲ್ಲರ ಬೆಳೆ ಕೈಕೊಟ್ಟಿದ್ದವು, ಆದರೆ ಶರಣಬಸವರ ಜೋಳ ಬೆಳೆ ಎಂದಿಗಿಂತ ಹೆಚ್ಚಾಗಿ ದಾಖಲೆ ಪ್ರಮಾಣದಲ್ಲಿ ಬೆಳೆದಿತ್ತು ನಂತರ ಟೀಕೆ ಮಾಡಿದವರು ಶರಣಬಸವರಿಗೆ ಶರಣು ಎಂದರು, ಆಗ ಶರಣಬಸವರು ತಾವು ಬೆಳೆದ ಜೋಳವನ್ನೆಲ್ಲ ಊರ ಜನರಿಗೆ ಹಂಚಿ ಪರಮದಾಸೋಹಿ ಎನಿಸಿಕೊಂಡರು… ಇಂದು ಮಹಾದಾಸೋಹಿ ಶರಣಬಸವರ ೨೦೦ನೇ ಪುಣ್ಯದಿನ ಜಾತ್ರಮಹೋತ್ಸವದ ಭಕ್ತಿಪ್ರೇಮದ ಶರಣು ಶರಣಾರ್ಥಿಗಳು..🙏🏻💕🙏🏻 ✍🏾-ಲೋಕೇಶ್ ಎನ್ ಮಾನ್ವಿ.

‘ಸ್ತ್ರೀಕುಲೋದ್ಧಾರಕ ಬಸವಣ್ಣ’ ವಿಶೇಷ ಲೇಖನ -; ಚಿನ್ಮಯಿ ಲೋಕೇಶ್ ಮಾನವಿ.

Image
  ‘ಸ್ತ್ರೀಕುಲೋದ್ಧಾರಕ ಬಸವಣ್ಣ’ ಬಸವಣ್ಣ  ಎಂಬ ಜಗತ್ತಿನ ಮೊಟ್ಟಮೊದಲ ಸ್ವಾತಂತ್ರ್ಯ ವಿಚಾರವಾದಿ. ೯೦೦-ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವದ ಕನಸು ಕಂಡು ಅದನ್ನು  ಅನುಷ್ಠಾನಗೈದು, ಜಾತ್ಯಾತೀತ, ಧರ್ಮಾತೀತ, ವರ್ಗ ವರ್ಣಾತೀತ, ಲಿಂಗ ತಾರತಮ್ಯ ರಹಿತ, ಸರ್ವ ಸಮಾನತೆಯ ಕಲ್ಯಾಣ ರಾಜ್ಯ ಕಟ್ಟಿ, ಜಾತಿ ಶ್ರೇಣೀಕೃತ ಸಮಾಜದಲ್ಲಿ  ಜಾತ್ಯಾತೀತ ನಿಲುವು ತಾಳಿ, ತಳ ಸಮುದಾಯಗಳ ಮೇಲೆತ್ತುವ ಕಾರ್ಯ ಮಾಡಿ, ವರ್ಣಾಶ್ರಮ ಪದ್ದತಿಯಲ್ಲಿ  ತಳ ಸಮುದಾಯದವರು ಓದಲು ಅವಕಾಶವಿರಲಿಲ್ಲ. ಒಂದೊಮ್ಮೆ ಕದ್ದು ಕೇಳಿದರೂ ಕಿವಿಗೆ  ಸುಡುವ ಎಣ್ಣೆ ಸುರಿದು ಕಿವಿ ಕೀಳುತಿದ್ದರು. ಮತ್ತು ಊರೊಳಗೆ ತಿರುಗಾಡುವ ಹಾಗಿಲ್ಲ ಒಂದೊಮ್ಮೆ ಊರೊಳಗೆ ಕಾಲಿಡಬೇಕಾದರೆ ಚಪ್ಪಲಿ ಧರಿಸದೆ ಬರಬೇಕು, ತಮ್ಮ  ಹೆಜ್ಜೆ ಗುರುತುಗಳು ಉಳಿಯದಂತೆ ಮಾಡಲು ಬೆನ್ನಿಗೆ ಪೊರಕೆ, ಮತ್ತು ಉಗುಳಲು  ಕೊರಳಲ್ಲಿ  ಬಿದಿರು ಪುಟ್ಟಿ ಕಟ್ಟಿಕೊಂಡು ಊರೊಳಗೆ ಪ್ರವೇಶಿಸಬೇಕು. ಇಂಥ ಕೆಟ್ಟ ದಿನಮಾನಗಳಲ್ಲಿ ಮಹಿಳಾ ಸಮಾನತೆಯಂತೂ ಕೇಳಲೇ ಬಾರದಾಗಿತ್ತು.  ಅಸ್ಪುರ್ಶ್ಯ ಮಹಿಳೆಯರು ಮೇಲುಡುಗೆ ತೊಡುವಂತಿರಲಿಲ್ಲ. ಸ್ಪರ್ಶ್ಯ ಮೇಲ್ವರ್ಗದ ಮಹಿಳೆಯು ಮಾತ್ರ ಮೇಲುಡುಗೆ ಉಡಬಹುದು, ಎಂಬುದು ವರ್ಣಾಶ್ರಮದ ನಿಯಮವಾಗಿತ್ತು. ಇನ್ನು ಶಿಕ್ಷಣದ ವಿಚಾರಕ್ಕೆ ಬಂದರೆ ಅದು ಎಲ್ಲಾ ಸ್ತ್ರೀಯರಿಗೂ ಅಲಭ್ಯವಾಗಿತ್ತು, ಅಂದು ಸ್ತ್ರೀಕುಲವು ಶಿಕ್ಷಣ ಮತ್ತು ದಾರ್ಮಿಕ  ಸಮಾ...

ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ ! ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ ! ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಶಣೆ-; ಲೋಕೇಶ್ ಎನ್ ಮಾನ್ವಿಯವರು.

Image
  ಓಂ ಶ್ರೀಗುರು ಬಸವಲಿಂಗಾಯ ನಮಃ ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ ! ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ ! # ಕೂಡಲಸಂಗಮದೇವನಲ್ಲದೆ   ತಲೆದೋರುವ ದೈವಂಗಳನಂದೂ ಕಾಣೆನಿಂದೂ ಕಾಣೆ .   ✍🏾 -: ವಿಶ್ವಗುರು ಬಸವಣ್ಣನವರು . 👏🏻                  # ಭಾವಾರ್ಥ -: ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ ! ಯುಗ ಯುಗಗಳೇ ಲಯವಾದ ಕಾಲದಲ್ಲೂ ,  ರಾಜಾದಿ ರಾಜರೂ ಮಡಿದರು , ಕೋಟೆಕಟ್ಟಿ ಮೆರೆದವರು ಅಳಿದರು , ಕಾಲಕಾಲದಿಂದಲೂ ಅವರವರ ಸಂಸ್ಕೃತಿಗಳು ಬದಲಾದುತ್ತಾ ಬಂದಿವೆ , ಒಬ್ಬರು ಮತ್ತೊಬ್ಬರ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ , ಮನುಷ್ಯನು ತನ್ನ ಕಲ್ಪನೆಗೆ ಅನುಗುಣವಾಗಿ ದೇವರನ್ನು ಭಿನ್ನ - ವಿಭಿನ್ನವಾಗಿ ಚಿತ್ರಿಸುತ್ತಿದ್ದಾನೆ , ಮತ್ತೊಬ್ಬ ರಾಜ , ಇನ್ನೊಂದು ದೇಶ ಪ್ರದೇಶಗಳನ್ನು ಯುದ್ದ ಮಾಡಿ ಆಕ್ರಮಿಸಿಕೊಂಡಾಗ ,  ತನ್ನ ಚಿಂತನೆಯಂತೆ ದೇಶ ನಗರ ಮತ್ತು ಆಕಾರದ   ದೇವರ ರೂಪವನ್ನೇ ಬದಲಾಯಿಸುತ್ತಾ ಬಂದಿದ್ದಾರೆ , ಆದರೆ ಪ್ರಕೃತಿ ವಿಕೋಪವಾಗಿ ದೇಗುಲವೇ ಮುಳುಗಿದರೂ ಮನುಜ ಕಲ್ಪಿತ ರೂಪಗಳಿಗೆ ಜೀವ ಬರಲಿಲ್ಲ ,  ರಾಜ್ಯಗಳು ಅಳಿದರೂ ಸಾವಿರಾರು ಜನರು ಮಡಿದರೂ ಮನುಜ ಕಲ್ಪಿತ ರೂಪಗಳು ಕಣ್ಣು ಬ...

ಬಸವಣ್ಣರೆ ಎನ್ನಪ್ಪನೆಂದಿರಿ, ಶರಣರ ವಚನಂಗಳೆ ಎನ್ನುಸಿರೆಂದಿರಿ, ಅಥಣಿ ಶಿವಯೋಗಿಗಳಿಗೆ ಅರ್ಪಣೆ;

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಬಸವಣ್ಣರೆ ಎನ್ನಪ್ಪನೆಂದಿರಿ,   ಶರಣರ ವಚನಂಗಳೆ ಎನ್ನುಸಿರೆಂದಿರಿ,  ಅವ್ವನೀಲವ್ವೆಗಳೆ ತಾಯೆಂದು ,  ಶರಣಸಂಕುಲಕೆ ಶರಣೆಂದಿರಿ ,.  ಶಿವಯೋಗಿ ಹೊರಟಿರಿ ದಟ್ಟಾರಣ್ಯದೊಳ್   ಶರಣ ರೇಚಯ್ಯಗಳ ದರುಶನಕೆ   ಹುಲಿಯುಕಂಡಿವರ   ಸಾತ್ವಿಕತೆಗೆ ಶಿರಬಾಗಿ ಶರಣೆನ್ನುತಿರಲು  ಪ್ರಸನ್ನ ಶಿವಯೋಗಿ ತಾವಾದಿರಿ , ಜಾತಿ ವಿಜಾತಿ ಎಂಬ ಕಾಲದಿ  ಮುಂಜಾನೆ ಮಂಜಿನಲೆ ಮಂಜಪ್ಪಗೆ   ಕರೆದು ಲಿಂಗದೀಕ್ಷೆಯನಿತ್ತು ಹರಸಿದಿರಿ ,. ಕಾರುಣ್ಯ ರೂಪದಿಂ ಬಂದ ಭಕ್ತರ ಸಂತೈಪ ನಿಜಶರಣ ಶಿವಯೋಗಿವರ್ಯರೆ ತಾವಾದಿರಿ ,. ತಮಗೆ ಶರಣೆಂದು ಬಂದ ಬಾಲಗಂಗಾಧರ ತಿಲಕರಿಗೆ ಕರೆದು ’ ದೇಶಕೆ ಸ್ವಾತಂತ್ರ್ಯ ಸಿಗುವುದೆಂದು ಅಭಯವನಿಟ್ಟು ಕಳುಹಿದಿರಿ , ಅಪ್ಪಬಸವನನ್ನು ತತ್ವದಿ ಅಪ್ಪಿಕೊಂಡಿರಿ , ಪ್ರಭು ಅಲ್ಲಮನನ್ನು ಬೆರಗಿನ ಕಣ್ಣಲೆ ಕೂಡಿಕೊಂಡಿರಿ . ಚೆನ್ನಬಸವಣ್ಣನ ಚಿನ್ಮಯತವನಿಧಿಯಾಗಿ ತಾವು ಆಚಾರಲಿಂಗಿಯಾದಿರಿ . ಸೊಲ್ಲಾಪುರ ಸಿದ್ಧರಾಮನ ಯೋಗ ದೃಷ್ಟಿಯಲೆ ಕಂಡಿರಿ , ವೀರಮಾಚಯ್ಯಗಳ ದಿಟ್ಟನಿಲುವು ತಾವಾದಿರಿ , ಹಡಪದಪ್ಪಣ್ಣಗಳ ಕರುಣೆಗೆ ಕಣ್ಮಣಿಯಾದಿರಿ ,. ಚೆನ್ನಯ್ಯನ ಮನೆಯ ಅಂಬಲಿಗರು ತಾವೆಂದಿರಿ ’ ನಂಬಿ ಬಂದವರ ಭವ ದಾಟಿಪ ಅಂಬಿಗರು ತಾವಾದಿರಿ , ದಿವ್ಯಪುರುಷರು ತಾವು ಭವ್ಯದೃಷ್ಟಿಯ ...