Posts

ಶಿವಯೋಗಿ ಸಿದ್ಧರಾಮೇಶ್ವರರ ವಚನದ ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಕರಿಕೆಯ ಕಂಡು ಪಶುಗಳಾಶ್ರಯಿಸುವವು . ಔತಣ ಕಂಡು ದ್ವಿಜರಾಶ್ರಯಿಸುವರು . ಯುದ್ಧವ ಕಂಡು ಶೂರರಾಶ್ರಯಿಸುವರು . ಸಭೆಯ ಕಂಡು ವಿದ್ವಾಂಸರಾಶ್ರಯಿಸುವರು . ಇವರೆಲ್ಲ ಮಾಯಾಮೂಕರಲ್ಲದೆ ಮಾಯಾರಹಿತರಲ್ಲಯ್ಯಾ ಕಂಡು ಕಂಡು ಕಣ್ದೆರೆದು ನೋಡದ ಮಹಾಮಹಿಮ ಜಂಗಮನ ಪಾದಕ್ಕೆ ನಮೋ ನಮೋ ಎಂಬೆನಯ್ಯಾ , # ಕಪಿಲಸಿದ್ಧಮಲ್ಲಿಕಾರ್ಜುನ .     ✍🏾-; ಶಿವಯೋಗಿ ಸಿದ್ಧರಾಮೇಶ್ವರರು                   # ಭಾವಾರ್ಥ -; ಕರಿಕೆಯ ಕಂಡು ಪಶುಗಳಾಶ್ರಯಿಸುವವು . ಔತಣ ಕಂಡು ದ್ವಿಜರಾಶ್ರಯಿಸುವರು . ಯುದ್ಧವ ಕಂಡು ಶೂರರಾಶ್ರಯಿಸುವರು . ಸಭೆಯ ಕಂಡು ವಿದ್ವಾಂಸರಾಶ್ರಯಿಸುವರು . ಹೊಲದಲ್ಲಿ ಹಸಿಯಾದ ಗರಿಕೆ ಹುಲ್ಲನ್ನು ಕಂಡಾಗ ಪಶುಗಳು - ದನಗಳು ಓಡೋಡಿ ಬಂದು ತಮ್ಮ   ಹೊಟ್ಟೆಯ ತುಂಬಿಸಿಕೊಳ್ಳುವವು , ಔತಣ ಕೂಟವನ್ನು ಕಂಡಾಗ  ಭೋಜನ ಪ್ರಿಯರು ಓಡೋಡಿ ಹೋಗಿ   ಬಾಯಿ ಚಪ್ಪರಿಸಿ , ಬಾಡೂಟವನ್ನು ಸವಿದು ತುಂಬ ಖುಷಿಯಾಗಿ   ಹಿಂದಿರುಗುವರು . ಯುದ್ದ ಭೂಮಿಯನ್ನು ಕಂಡಾಗ  ಈ ಕಾಳಗವನ್ನು ಗೆದ್ದು ಹೆಸರುವಾಸಿಗಬೇಕೆಂದು ,  ಶೂರರು ಬಲಶಾಲಿಗಳು ಆಸೆ ಪಡುವವರು . ಸಭೆ ಸಮಾರಂಭಗಳನ್ನು ಕಂಡಾಗ  ವೇದಿಕೆಯಲ್ಲಿ ತನ್ನ ವಿದ್ವತ್ತನ್ನು ತೋರಪಡಿಸಬೇಕು ಜಗತ್ತಿಗೆ ತ...

ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ. ವಿಶ್ವಗುರು ಬಸವಣ್ಣನವರು. ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.

Image
ಓಂ ಶ್ರೀಗುರುಬಸವಲಿಂಗಾಯ ನಮಃ ತಾಳಮಾನ ಸರಿಸವನರಿಯೆ, ಓಜೆ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ. ✍🏾-;#ವಿಶ್ವಗುರು_ಬಸವಣ್ಣನವರು.                   ಭಾವಾರ್ಥ-; ಭಕ್ತನಾದವನು ದೇವನನ್ನು ಸ್ತುತಿಸಲು ರಾಗ_ತಾಳ,ವ್ಯಾಕರಣ ಛಂದಸ್ಸುಗಳ , ಅರಿಯಬೇಕಾಗಿಲ್ಲ, ಇಲ್ಲಿ ಭಾಷೆಯೂ ಪ್ರಾಮುಖ್ಯವಲ್ಲ, ಸಮಯ_ವೇಳೆಯೂ ಗಣನೆಗೆ ಬರುವುದಿಲ್ಲ ಇಲ್ಲಿ ಬೇಕಿರುವುದು ನಿಜ ಭಕ್ತನ ನಿಷ್ಕಲ್ಮಶ ಅಂತಃಕರಣದ ಭಕ್ತಿ ಭಾವನೆಯ ಧ್ವನಿ ಮಾತ್ರ, ದೇವಗಣ_ಅಮೃತಗಣಗಳೂ ಬೇಕಿಲ್ಲ, ಇದು ಭಕ್ತಿಯ ಮಧುರ ಭಾಷೆ, ಮೂಕನಾಗಿ ಗುಗ್ಗುವ ಧ್ವನಿಯಲ್ಲಿ ಭಕ್ತಿಯಲಿ ವಟವಟಿಸಿದರೂ ಅದು ದೇವನಿಗೆ ಪ್ರಿಯವಾದ ಭಾಷೆಯಾಗುತ್ತದೆ, ಅದು ದೇವರಿಗೆ ಪ್ರಿಯವಾದ ಗೀತೆಯಾಗುತ್ತದೆ,  ಮಾತು ಬಾರದ ಮುಗ್ದಮಗು ಯಾವ ರೀತಿಯಲ್ಲಿ ಕರೆದರೂ ತಾಯಿ ಬರುವಂತೆ, ನಿಷ್ಕಲ್ಮಶವಾದ ಭಕ್ತಿಯಿಂದ  ಒಲಿದಂತೆ, ಯಾವ ರಾಗ_ತಾಳ_ಸ್ವರವಿಲ್ಲದೆಯೇ ತಿಳಿದಂತೆ ಹಾಡಿದಡೂ ನಿನಗೆ ಕೇಡಿಲ್ಲವಾಗಿ,ನಿನ್ನಲ್ಲಿ ಬಿನ್ನತೆಯಿಲ್ಲವಾಗಿ ನಿಜ ಭಕ್ತಿಗೆ ನೀನೊಲಿದು ಕೈವಿಡಿವೆ, ಎಂಬುದನ್ನು ಬಸವಣ್ಣನವರು ತಿಳಿಸುತ್ತಾರೆ..                      ವಿಶ್ಲೇಷಣೆ-;           #ಲೋಕೇಶ್_ಎನ್_ಮಾನ...

‘ಶರಣ ಲಿಂಗವನಪ್ಪಿ ಮಹಾಲಿಂಗವೇ ತಾನಾದ ಪರಿಯನ್ನು ತಿಳಿಸುತ್ತಾರೆ ಎಡೆಯೂರ ಸಿದ್ಧಲಿಂಗೇಶ್ವರ ಶಿವಯೋಗಿಗಳು’ ವಿಶ್ಲೇಷಣೆ-;#ಲೋಕೇಶ್_ಎನ್_ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಗಾಳಿ ಗಂಧವನಪ್ಪಿದಂತೆ , ಬಯಲು   ಬಯಲನಪ್ಪಿದಂತೆ , ಬೆಳಗು ಬೆಳಗವಪ್ಪಿ ಮಹಾ ಬೆಳಗಾದಂತೆ , ಶರಣ ಲಿಂಗವನಪ್ಪಿ , ಮಹಾಲಿಂಗವೇ ತಾನು ತಾನಾಗಿ ,  ನಿರ್ವಯಲಾದನು ನೋಡಾ ,   ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ . ✍🏾 -;  ಎಡೆಯೂರ   ಸಿದ್ಧಲಿಂಗೇಶ್ವರ   ಶಿವಯೋಗಿಗಳು .                   ಭಾವಾರ್ಥ -: ‘ ಗಾಳಿ ಗಂಧವನಪ್ಪಿದಂತೆ ’ ತಂಪಾಗಿ ಬೀಸುವ ಗಾಳಿಯು   ಸುಗಂಧವನ್ನು ಸೂಸುವ  ಪರಿಮಳವನ್ನು ಕೂಡಿ  ತನ್ನೊಳಗೆ  ಗಾಳಿ - ಗಂಧವೆರಡು ಭಿನ್ನವಿಲ್ಲದೆ  ಬಿಡಿಸಲಾರದಂತೆ  ಒಂದಾದಂತೆ , ‘ ಬಯಲು ಬಯಲನಪ್ಪಿದಂತೆ  ಬೆಳಗು ಬೆಳಗವಪ್ಪಿ ಮಹಾ ಬೆಳಗಾದಂತೆ ’ ನಾನಾ ಹಳ್ಳಕೊಳ್ಳ ನದಿಗಳು ಬೇರೆ ಬೇರೆಯಾಗಿ ಹರಿಯುತ್ತಿರುವಾಗ ಭಿನ್ನ ಹೆಸರಿನಿಂದ ತುಂಗಾ - ಭದ್ರಾ ಗಂಗಾ , ಕಾವೇರಿ , ಗೋದಾವರಿ ಎಂದು ಗುರುತಿಸಬಹುದು , ಅದೇ ನದಿಗಳು ಸಾಗರದಲ್ಲಿ ಸೇರಿ  ಒಂದಾಗಿ ಕೂಡಿ ಬೆರೆತಾಗ ಎಲ್ಲದರ ಸ್ವಾದವೂ ಒಂದೇ ,  ಎಲ್ಲಿಯ ಭಿನ್ನತೆ , ಎಲ್ಲವೂ ಅದರ ಏಕತೆ , ನಿರ್ಗುಣ ನಿರಾಕಾರ ಬಯಲು ಬಯಲನಪ್ಪಿದಂತೆ ನಿರಾಳ .  ಬೆಳಕಿಗೂ ಬೇಧವಿಲ್ಲ , ಮಣ್ಣಿನ ಹಣತೆಯಲ್ಲಿ ಹಚ್ಚಿದರೇನು .? ಬಂಗಾರ...

‘ಜಗತ್ ಪ್ರೇಮಿ ಬಸವಣ್ಣ’ ವಿಶೇಷ ಲೇಖನ -; ಲೋಕೇಶ್ ಎನ್ ಮಾನ್ವಿ.

Image
ಶ್ರೀಗುರುಬಸವಲಿಂಗಾಯ ನಮಃ ‘ ಜಗತ್   ಪ್ರೇಮಿ ಬಸವಣ್ಣ ’ ಅಂಗದಲ್ಲಿ ಆಚಾರವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು . ಆಚಾರದಲ್ಲಿ ಪ್ರಾಣವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು . ಪ್ರಾಣದಲ್ಲಿ ಲಿಂಗವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು . ಲಿಂಗದಲ್ಲಿ ಜಂಗಮವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು . ಜಂಗಮದಲ್ಲಿ ಪ್ರಸಾದವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು . ಪ್ರಸಾದದಲ್ಲಿ ನಿತ್ಯವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು . ನಿತ್ಯದಲ್ಲಿ ದಾಸೋಹವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು . ದಾಸೋಹದಲ್ಲಿ ತನ್ನ ಮರೆದು ,  ನಿಶ್ಚಿಂತನಿವಾಸಿಯಾಗಿ ಐದಾನೆ ಗುಹೇಶ್ವರಲಿಂಗದಲ್ಲಿ ,  ಸಂಗನಬಸವಣ್ಣನ ಶ್ರೀಪಾದಕ್ಕೆ ಶರಣೆಂದು ಧನ್ಯರಾಗಬೇಕು ನಡೆಯಾ ಸಿದ್ಧರಾಮಯ್ಯಾ.🙏🏻 ✍️ -: ಅಲ್ಲಮಪ್ರಭು ದೇವರು. 👏🏻                                  ವಿಶ್ಲೇಷಣೆ-; ‘ಇದು ಅಲ್ಲಮಪ್ರಭು ದೇವರು ಸೊಲ್ಲಾಪುರಕ್ಕೆ ತೆರಳಿ ಶಿವಯೋಗಿ ಸಿದ್ಧರಾಮೇಶ್ವರರಿಗೆ ಜಗಜೋತಿ ಬಸವಣ್ಣನವರ ಮಹಿಮೆಯನ್ನು ಈ ವಚನದ ಮೂಲಕ ತಿಳಿಸಿ ಕಲ್ಯಾಣಕ್ಕೆ ಬರಲು   ಸಿದ್ಧರಾಮೇಶ್ವರರಿಗೆ ಆಹ್ವಾನ   ನೀಡಿದ ಬಗೆ   ಇದು ’ 👇🏻     ...