ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ. ವಿಶ್ವಗುರು ಬಸವಣ್ಣನವರು. ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ
ತಾಳಮಾನ ಸರಿಸವನರಿಯೆ,
ಓಜೆ ಬಜಾವಣೆಯ ಲೆಕ್ಕವನರಿಯೆ,
ಅಮೃತಗಣ ದೇವಗಣವನರಿಯೆ,
ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ.
✍🏾-;#ವಿಶ್ವಗುರು_ಬಸವಣ್ಣನವರು.
ಭಾವಾರ್ಥ-;
ಭಕ್ತನಾದವನು ದೇವನನ್ನು ಸ್ತುತಿಸಲು ರಾಗ_ತಾಳ,ವ್ಯಾಕರಣ ಛಂದಸ್ಸುಗಳ , ಅರಿಯಬೇಕಾಗಿಲ್ಲ,
ಇಲ್ಲಿ ಭಾಷೆಯೂ ಪ್ರಾಮುಖ್ಯವಲ್ಲ,
ಸಮಯ_ವೇಳೆಯೂ ಗಣನೆಗೆ ಬರುವುದಿಲ್ಲ
ಇಲ್ಲಿ ಬೇಕಿರುವುದು ನಿಜ ಭಕ್ತನ ನಿಷ್ಕಲ್ಮಶ ಅಂತಃಕರಣದ ಭಕ್ತಿ ಭಾವನೆಯ ಧ್ವನಿ ಮಾತ್ರ,
ದೇವಗಣ_ಅಮೃತಗಣಗಳೂ ಬೇಕಿಲ್ಲ,
ಇದು ಭಕ್ತಿಯ ಮಧುರ ಭಾಷೆ, ಮೂಕನಾಗಿ ಗುಗ್ಗುವ ಧ್ವನಿಯಲ್ಲಿ ಭಕ್ತಿಯಲಿ ವಟವಟಿಸಿದರೂ ಅದು ದೇವನಿಗೆ ಪ್ರಿಯವಾದ ಭಾಷೆಯಾಗುತ್ತದೆ, ಅದು ದೇವರಿಗೆ ಪ್ರಿಯವಾದ ಗೀತೆಯಾಗುತ್ತದೆ,
ಮಾತು ಬಾರದ ಮುಗ್ದಮಗು ಯಾವ ರೀತಿಯಲ್ಲಿ ಕರೆದರೂ ತಾಯಿ ಬರುವಂತೆ,
ನಿಷ್ಕಲ್ಮಶವಾದ ಭಕ್ತಿಯಿಂದ ಒಲಿದಂತೆ, ಯಾವ ರಾಗ_ತಾಳ_ಸ್ವರವಿಲ್ಲದೆಯೇ ತಿಳಿದಂತೆ ಹಾಡಿದಡೂ ನಿನಗೆ ಕೇಡಿಲ್ಲವಾಗಿ,ನಿನ್ನಲ್ಲಿ ಬಿನ್ನತೆಯಿಲ್ಲವಾಗಿ ನಿಜ ಭಕ್ತಿಗೆ ನೀನೊಲಿದು ಕೈವಿಡಿವೆ, ಎಂಬುದನ್ನು ಬಸವಣ್ಣನವರು ತಿಳಿಸುತ್ತಾರೆ..
ವಿಶ್ಲೇಷಣೆ-;
#ಲೋಕೇಶ್_ಎನ್_ಮಾನ್ವಿ.
-/ 9972536176
Comments
Post a Comment