Posts

Showing posts from May, 2022

‘ಗುರುವಿಲ್ಲದ ಗುಡ್ಡ ಬಸವಣ್ಣ’ ವಿಶ್ಲೇಷಣೆ- ಲೋಕೇಶ್ _ಎನ್_ಮಾನ್ವಿ.

Image
  ಅ ಣ್ಣ  ಬ ಸವಣ್ಣನವರ   ವ ಚನದಲ್ಲಿ  ‘ ಗು ರು ’ ಎ ನ್ನ ಗುರು ಪರಮಗುರು ನೀವೆ ಕಂಡಯ್ಯ , ಎ ನ್ನ ಗತಿಮತಿ ನೀವೆ ಕಂಡಯ್ಯ , ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ , ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ . ಕೂಡಲಸಂಗಮದೇವಾ , ನೀವೆನಗೆ ಗುರು , ನಾ ನಿಮಗೆ ಶಿಷ್ಯನೆಂಬುದನು ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು . -; # ವಿ ಶ್ವಗುರು_ಬಸವಣ್ಣನವರು.   ಭಾ ವಾರ್ಥ- ಲಿಂ ಗಾಯತ ಧರ್ಮದಲ್ಲಿ ಅಷ್ಟಾವರಣ ಎಂಟು ಆವರಣಗಳು ಪ್ರಮುಖವಾಗಿವೆ , ಇದರಲ್ಲಿ ಮೊದಲನೆಯದು ‘ ಗುರು ’ ಪರಮ ಜ್ಞಾನಿಗೆ ತನ್ನ ಅರಿವೇ ಗುರು , ಸಾಧಕನಿಗೆ ತನ್ನ ನಿಜದ ನಿಲುವನ್ನು ತೋರಬಲ್ಲವನೇ ಗುರು ,  ಇನ್ನು ಬಸವಣ್ಣನವರಿಗೆ ಯಾರು ಗುರು ..? ಎಂದರೆ ತನ್ನರಿವೇ ಗುರು , ಗುರುವಿಲ್ಲದ ಗುಡ್ಡ ಬಸವಣ್ಣ , ಜಗತ್ ಗುರುವಾದ ಬಸವಣ್ಣ , ತನಗೆ ಯಾರು ಗುರು ಎಂಬುದನ್ನು   ಮೇಲಿನ ವಚನದಲ್ಲಿ ಹೇಳಿದ್ದಾರೆ ,. ‘ ಎ ನ್ನ ಗುರು ಪರಮಗುರು ನೀವೆ ಕಂಡಯ್ಯಾ ’ ಇಲ್ಲಿ ಬಸವಣ್ಣನವರು ತಮ್ಮ ಗುರು ಪರಮಗುರು ಯಾರೆಂದರೆ ಕೂಡಲಸಂಗಮದೇವನಿಗೆ ಗುರುವೆಂದು ಕರೆಯುತ್ತಾರೆ , ಬಾಲ್ಯದಲ್ಲೇ ಮನೆ ಬಿಟ್ಟ ಅಪ್ಪ ಬಸವರು ಕೂಡಲಸಂಗಮದಲ್ಲಿ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದರೂ ಅವರು  ತಮ್ಮ  ಚಿಕ್ಕ ವಯಸ್ಸಿನಲ್ಲೇ ಸಕಲ ಭಾಷ ವಿ...

ಕಟ್ಟೇ ಕಟ್ಟುತ್ತೇವೆ ಕಲ್ಯಾಣ, ನಾವ್ ಮತ್ತೆ ಕಟ್ಟುತ್ತೇವೆ ಕಲ್ಯಾಣ, ✍🏾-ಲೋಕೇಶ್ ಎನ್ ಮಾನ್ವಿ.

Image
  ಕಟ್ಟೇ ಕಟ್ಟುತ್ತೇವೆ ಕಲ್ಯಾಣ, ನಾವ್ ಮತ್ತೆ ಕಟ್ಟುತ್ತೇವೆ ಕಲ್ಯಾಣ, ದುಷ್ಟರ ದೂಳೆಬ್ಬಿಸಿ, ಭ್ರಷ್ಟರ ಬಡೆದೋಡಿಸಿ, ಜಾತಿ ಬೇಧಗಳ ಬೇಲಿ ಸುಟ್ಟು ಸ್ವಚ್ಚ ಮಾಡುತ್ತೇವೆ ಕಲ್ಯಾಣ, ನಾವ್ ಮತ್ತೆ ಕಟ್ಟುತ್ತೇವೆ ಕಲ್ಯಾಣ, ನಾವ್ ಕಟ್ಟೇ ಕಟ್ಟುತ್ತೇವೆ ಕಲ್ಯಾಣ, ಮೌಢ್ಯತೆ ಅಸಮಾನತೆಯ ಅಡ್ಡ ಗೋಡೆ ತಗೆದು,  ಕಟ್ಟುತ್ತೇವೆ ಕಲ್ಯಾಣ, ನಾವ್ ಮತ್ತೆ ಕಟ್ಟುತ್ತೇವೆ ಕಲ್ಯಾಣ, ಮತ್ತೆ ಬರುತಾರ ಅಮರ ಗಣಂಗಳು, ಒಟ್ಟುಕೂಡುತಾರ ಸರ್ವ ಶರಣ ಬಂಧುಗಳು, ಕಟ್ಟೇ ಕಟ್ಟುತ್ತೇವೆ ಕಲ್ಯಾಣ, ನಾವ್ ಮತ್ತೆ ಕಟ್ಟುತ್ತೇವೆ ಕಲ್ಯಾಣ, ಬಂದೇ ಬರುತಾರ ಬಸವಣ್ಣ ಮತ್ತೆ ಬರುತಾರ ಚೆನ್ನಬಸವಣ್ಣ, ಗುಡುಗುತ ಬರುವ ಮಾಚಯ್ಯ, ಸಿಡಿಯುತ ಬರುವ ಚೌಡಯ್ಯ,  ಪ್ರಸಾದವ ತರುವ ಚೆನ್ನಯ್ಯಾ, ಚಂಡಮಾರುತವಾಗಿ ಬರುವ ಅಲ್ಲಮ ಪ್ರಭುರಾಯ, ಕಟ್ಟೇ ಕಟ್ಟುತ್ತೇವೆ ಕಲ್ಯಾಣ, ನಾವ್ ಮತ್ತೆ ಕಟ್ಟುತ್ತೇವೆ ಕಲ್ಯಾಣ, ಮತ್ತೆ ಕಾಣುವೆವು ಅನುಭವ ಮಂಟಪ , ಅರಿವಿನ ಮನೆ, ಅಪ್ಪಬಸವನ ಮಹಾಮನೆ,  ಕಟ್ಟೇ ಕಟ್ಟುವೆವು ಕಲ್ಯಾಣ ನಾವ್ ಮತ್ತೆ ಕಟ್ಟುವೆವು ಕಲ್ಯಾಣ, ಸೂರ್ಯ ಚಂದ್ರರ ಸಾಕ್ಷಿಗೂ ಮತ್ತೆ ಬಸವಣ್ಣ ಬರುವ ಬಂದೇ ಬರುವ,, ಅಪ್ರಮಾಣ ಚಿನ್ಮಯಲಿಂಗದಿ ಅಸಂಖ್ಯಾತ ಅನುಯಾಯಿಗಳ ಹೃದಯದಲ್ಲಿ ಹುಟ್ಟಿ ಬರುವ ನಮ್ ಬಸವಣ್ಣ, ರಚನೆ-; ಲೋಕೇಶ್ ಎನ್ ಮಾನ್ವಿ.

ಅಂತರಂಗ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಿಕೆಯ ಹೊರಗೆ ತೊಳೆದಂತೆ ಎನ್ನುತ್ತಾರೆ ವಿಶ್ವಗುರು ಬಸವಣ್ಣನವರು, ವಿಶ್ಲೇಷಣೆ- ಲೋಕೇಶ್_ಎನ್_ಮಾನವಿ

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಗಂಡ ಶಿವಲಿಂಗದೇವರ ಭಕ್ತ , ಹೆಂಡತಿ ಮಾರಿ ಮಸಣಿಯ ಭಕ್ತೆ . ಗಂಡ ಕೊಂಬುದು ಪಾದೋದಕ - ಪ್ರಸಾದ  ಹೆಂಡತಿ ಕೊಂಬುದು ಸುರೆ - ಮಾಂಸ . ಭಾಂಡ - ಭಾಜನ ಶುದ್ಧವಿಲ್ಲದವರ ಭಕ್ತಿ ಹೆಂಡದ ಮಡಿಕೆಯ ಹೊರಗೆ ತೊಳೆದಂತೆ ಕೂಡಲಸಂಗಮದೇವಾ .   -; ವಿಶ್ವಗುರು ಬಸವಣ್ಣನವರು ಭಾವಾರ್ಥ - ಶರಣರ ದೃಷ್ಠಿಯಲ್ಲಿ ಅರಿವು ಪತಿಯಾಗಿ , ಮನಸ್ಸು ಸತಿಯಾಗಿ ಬದುಕು ಅರಿವಿನ ಮಾರ್ಗದಲ್ಲಿ ನಡೆಯಬೇಕು ಎಂಬುದಾಗಿತ್ತು , ಗಂಡ ಶಿವಲಿಂಗದೇವರ ಭಕ್ತ ಹೆಂಡತಿ ಮಾರಿ ಮಸಣಿಯ ಭಕ್ತೆ .  ಇಲ್ಲಿ ಗಂಡ ಎಂದರೆ , ( ಅರಿವು ) ಎಂದರ್ಥ , ಅಂತಃಕರಣದ ಅರಿವು ಇಷ್ಟಲಿಂಗದ ಭಕ್ತನಾಗು ಎನ್ನುತ್ತಿದೆ , ಆದರೆ ಹೆಂಡತಿಯಾದ ಮನಸ್ಸು ಮಾರಿಮಸಣಿಯ ಭಕ್ತನಾಗು ಎನ್ನುತ್ತಿದೆ , ಏಕಾಗಿ ಹೀಗೆ ,? ಮುಂದೆ ನೋಡೋಣ ಬನ್ನಿ … ಗಂಡ ಕೊಂಬುದು ಪಾದೋದಕ - ಪ್ರಸಾದ ಹೆಂಡತಿ ಕೊಂಬುದು ಸುರೆ - ಮಾಂಸ .   ಗಂಡ -( ಅರಿವಿನ ) ಹಾದಿಯಲ್ಲಿ ಹೋದರೆ   ಲಭಿಸುವುದು ಪಾದೋದಕ ಪ್ರಸಾದ , ಪಾದೋದಕ ಕೊಂಬುದು ಎಂದರೆ ಅದೊಂದು ಚೈತನ್ಯ ಕಾರುಣ್ಯ ಪಡೆದಂತೆ , ಇನ್ನು ಪ್ರಸಾದ ವೆಂದರೆ ಬಂದುದನ್ನು ಸಂತೃಪ್ತಿಯಿಂದ ಸ್ವೀಕರಿಸಿ ಆನಂದಿಸುವ ಪರಿ ಬದುಕೇ ಪ್ರಸಾದಮಯ ,. ಇಲ್ಲಿ ಸಂತೃಪ್ತ ಜೀವನಕ್ಕೆ ಬೇಕಾದ ಮೌಲ್ಯಯುತ ಜ್ಞಾನದ ಅರಿವಿದೆ ಅದುವೇ ಪತಿ , ಹೆಂಡತಿ...

ಅಂದಣವನೇರಿದ ಸೊಣಗನಂತೆ, ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ -; ಲೋಕೇಶ್ ಎನ್ ಮಾನ್ವಿ.

Image
  ಶ್ರೀಗುರುಬಸವಲಿಂಗಾಯ ನಮಃ ಅಂದಣವನೇರಿದ ಸೊಣಗನಂತೆ ಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನು ಸುಡು , ಸುಡು ; ಮನವಿದು ವಿಷಯಕ್ಕೆ ಹರಿವುದು , ಮೃಡ , ನಿಮ್ಮನನುದಿನ ನೆನೆಯಲೀಯದು . ಎನ್ನೊಡೆಯನೇ , ಕೂಡಲಸಂಗಮದೇವ , ನಿಮ್ಮ ಚರಣವ ನೆನೆವಂತೆ ಕರುಣಿಸು , ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ . ✍🏾- ವಿಶ್ವಗುರು ಬಸವಣ್ಣನವರು . ಭಾವಾರ್ಥ - # ಅಂದಣವನೇರಿದ ಸೊಣಗನಂತೆ # ಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನು # ಸುಡು , ಸುಡು ; ಮನವಿದು ವಿಷಯಕ್ಕೆ ಹರಿವುದು , ಅಂದಣವೆಂದರೆ ಪಲ್ಲಕ್ಕಿ , ಒಂದೊಮ್ಮೆ ಬಂಗಾರದ ಪಲ್ಲಕ್ಕಿಯಲ್ಲಿ ಕೂಡಲು ಯೋಗ್ಯವಾದ ಆಮಂತ್ರಿತ ವ್ಯಕ್ತಿ ಬರದಿದ್ದಾಗ ( ಸೊಣಗ ) ನಾಯಿಯೊಂದನ್ನು ತಂದು ತರತರದ ಬಣ್ಣಗಳನ್ನು ಹಚ್ಚಿ ಸುಂದರವಾದ ವಸ್ತ್ರಗಳನ್ನು ಹೊದಿಸಿ , ಮೇಲೆ ಆಭರಣಗಳನ್ನು ಹಾಕಿ , ಯಾರಿಗೂ ಅದರ ಗುರುತು ಸಿಗದ ಹಾಗೆ   ಅಲಂಕರಿಸಿ ಪಲ್ಲಕ್ಕಿಯಲ್ಲಿ ಕುಡಿಸಿ ಇದೋ ಮೆರವಣಿಗೆ ಆರಂಭವಾಗಬೇಕು ಎನ್ನುವಷ್ಟರಲ್ಲಿ , ಅಲ್ಲೇ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಸತ್ತ ಪ್ರಾಣಿಯ ಮೂಳೆಯನ್ನು ಕಂಡ ತಕ್ಷಣ ನಾಯಿ   ತನ್ನ ಮುನ್ನಿನ ಸ್ವಭಾವವನ್ನು ಬಿಡದೇ ಬಂಗಾರದ ಪಲ್ಲಕ್ಕಿಯಲ್ಲಿ ಕುಳುತಿದ್ದರೂ , ಮೂಳೆಯತ್ತ ಟಣಕ್ ಎಂದು ಜಿಗಿದು ಹೋಗುವಂತೆ , ಇನ್ನೊಂದೆಡೆ ಅಧಿಕಾರವೆಂಬ ಪಲ್ಲಕ್ಕಿಯಲ್ಲಿ , ಯೋಗ್ಯ...