‘ಗುರುವಿಲ್ಲದ ಗುಡ್ಡ ಬಸವಣ್ಣ’ ವಿಶ್ಲೇಷಣೆ- ಲೋಕೇಶ್ _ಎನ್_ಮಾನ್ವಿ.

 ಣ್ಣ ಸವಣ್ಣನವರ ಚನದಲ್ಲಿ  ‘ಗುರು



ನ್ನ ಗುರು ಪರಮಗುರು ನೀವೆ ಕಂಡಯ್ಯ,

ನ್ನ ಗತಿಮತಿ ನೀವೆ ಕಂಡಯ್ಯ,

ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ,

ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ.

ಕೂಡಲಸಂಗಮದೇವಾ,

ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು

ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.


-; #ವಿಶ್ವಗುರು_ಬಸವಣ್ಣನವರು.

 

ಭಾವಾರ್ಥ-


ಲಿಂಗಾಯತ ಧರ್ಮದಲ್ಲಿ ಅಷ್ಟಾವರಣ ಎಂಟು ಆವರಣಗಳು ಪ್ರಮುಖವಾಗಿವೆ,

ಇದರಲ್ಲಿ ಮೊದಲನೆಯದು ಗುರು

ಪರಮ ಜ್ಞಾನಿಗೆ ತನ್ನ ಅರಿವೇ ಗುರು, ಸಾಧಕನಿಗೆ ತನ್ನ ನಿಜದ ನಿಲುವನ್ನು ತೋರಬಲ್ಲವನೇ ಗುರು

ಇನ್ನು ಬಸವಣ್ಣನವರಿಗೆ ಯಾರು ಗುರು..? ಎಂದರೆ ತನ್ನರಿವೇ ಗುರು, ಗುರುವಿಲ್ಲದ ಗುಡ್ಡ ಬಸವಣ್ಣ, ಜಗತ್ ಗುರುವಾದ ಬಸವಣ್ಣ,

ತನಗೆ ಯಾರು ಗುರು ಎಂಬುದನ್ನು  ಮೇಲಿನ ವಚನದಲ್ಲಿ ಹೇಳಿದ್ದಾರೆ,.


ನ್ನ ಗುರು ಪರಮಗುರು ನೀವೆ ಕಂಡಯ್ಯಾ

ಇಲ್ಲಿ ಬಸವಣ್ಣನವರು ತಮ್ಮ ಗುರು ಪರಮಗುರು ಯಾರೆಂದರೆ ಕೂಡಲಸಂಗಮದೇವನಿಗೆ ಗುರುವೆಂದು ಕರೆಯುತ್ತಾರೆ,

ಬಾಲ್ಯದಲ್ಲೇ ಮನೆ ಬಿಟ್ಟ ಅಪ್ಪ ಬಸವರು ಕೂಡಲಸಂಗಮದಲ್ಲಿ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದರೂ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಕಲ ಭಾಷ ವಿದ್ಯಾ ಪಾರಂಗತರಾಗಿದ್ದರು, ಅವರ ಪ್ರಕಾರ ಕೂಡಲಸಂಗಮದೇವ ಎಂಬುದು ತನ್ನ ತಾನರಿದವನ ಸ್ವಯಂ ಅರಿವು ಮತ್ತು ಜ್ಞಾನವಾಗಿದೆ,

ತನ್ನ ಅರಿವಿನ ಮೂಲ ವಸ್ತುಅರಿವಿನ ಬೀಜವೇ ತನ್ಮ ದೈವವಾದ ಸಂಗಯ್ಯನೇ ಬಸವಣ್ಣನಿಗೆಗುರು’  ಅರಿವೆಂಬ ಗುರುವೇ ಬಸವಣ್ಣನವರಿಗೆ ಗತಿಯು, ಮತಿಯು, ತನ್ನ ಅರಿವಿನ ಜ್ಯೋತಿಯೆಂದು ಹೇಳುತ್ತಾರೆ,

ಮತ್ತೆ ಮುಂದುವರೆದು ಎನ್ನ ಅಂತರಂಗದ ಮಹವು ನೀನೇ ಕಂಡಯ್ಯ ಎನ್ನುತ್ತಾರೆ ಎನ್ನ ಅಂತರಂಗದಲ್ಲಿ ಮತ್ತು ಇಡೀ ಸೃಷ್ಠಿಯಲ್ಲಿ   ಓತಪ್ರೋತವಾಗಿ ತುಂಬಿದ ಅಸಾಧ್ಯವಾದ ಅಧ್ವಿತೀಯ ಅಮೋಘ ಶಕ್ತಿಯು ನೀವೆ ಕೂಡಲಸಂಗಮದೇವ ಎನ್ನುತ್ತಾ,.

ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು

ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.

ಸೃಷ್ಠಿಕರ್ತನಾದ ನಿರಾಕಾರ ದೇವನೇ ನಿನ್ನ ನಿಜ ಸ್ಥತಿಯ ಅರಿವು, ಎನಗೆ ಗುರುವಾಗಿ ಉಪದೇಶಿಸುತ್ತಿದೆ, ನೀವೆನಗೆ ಗುರುವಾಗಿ ಅರಿವಾಗಿ, ವಿದ್ಯೆ, ಬುದ್ಧಿ, ಜ್ಞಾನ ಸಿದ್ಧಿಯಾಗಿ ಬಂದೆನ್ನ ಸಲಹಿದಿರಿ ನಾನು ನಿಮ್ಮ ಶಿಷ್ಯನೆಂಬುದ ನಿಮ್ಮ ಶರಣ ಸಿದ್ಧರಾಮಯ್ಯರೇ ಬಲ್ಲರು, ಎಂದು ತನಗೆ ತನ್ನಾತ್ಮದ ರಿವೇ ತನ್ನ ನಿಜವಾದ ಗುರುವೆಂಬುದನ್ನು ತಿಳಿಸುತ್ತಾರೆ,.



ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ

-/ 9972536176





Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.