‘ಸಂತೆ ಕೆಲ್ಲೂರು ಶ್ರೀ ಘನಮಠ ನಾಗಭೂಷಣ ಶಿವಯೋಗಿಗಳ’ ಕುರಿತ ವಿಶೇಷ ಲೇಖನ ಡಾ.ಸರ್ವಮಂಗಳ ಸಕ್ರಿ ರಾಯಚೂರು ಇವರಿಂದ.
‘ ಸಂತೆ ಕೆಲ್ಲೂರು ಶ್ರೀ ಘನಮಠ ನಾಗಭೂಷಣ ಶಿವಯೋಗಿಗಳು’ ಜಗತ್ತಿನ ಎಲ್ಲಾ ಕಾಲದಲ್ಲಿ ಎಲ್ಲಾ ದೇಶಗಳಲ್ಲಿ ಶರಣರು ಸಂತರು ಆಗಿ ಹೋಗಿದ್ದಾರೆ.ಅಂತೆಯೇ ಪರಶಿವ ಸ್ವರೂಪಿಗಳಾದ ಶರಣರ ಮಾರ್ಗ ಸರಳ ಮತ್ತು ನೇರ ವಾದದ್ದು . ಇಲ್ಲಿಜಾತಿ ಮತ ಪಂಥಗಳ ಕಡಿವಾಣವಿಲ್ಲ.ಉಚ್ಚ ನೀಚ ತಾರತಮ್ಯಗಳಿಲ್ಲ.ಧರ್ಮ ಸಾಧನೆಯ ಪ್ರಮುಖ ಉದ್ದೇಶ ಹೊಂದಿದ ಶರಣರು ಚಿತ್ತ ಶುದ್ದ ತೆಯಿಂದ ಶಿವನ ಉಪಾಸನೆ ಮಾಡ ಬೇಕೆಂದು ವ್ಯಾಖ್ಯಾನಿಸಿದರು.ಹೀಗಾಗಿ ಯಾರು ಅಂತರಂಗ ಶುದ್ದತೆಯಿಂದ ಆನಂದಮಯ ಭಕ್ತಿಯನ್ನು ಸ್ವೀಕರಿಸುತ್ತಾನೋ ಅವನೇ ಶರಣ. ಪರಶಿವನಲ್ಲಿ ಕಾಣುವ ಅಸ್ಮಿತಾ ಸಂವೇಧನೆಗೆ ಶರಣ ಎಂಬ ಶಬ್ದವಿದೆ. ಇದು ಸೃಷ್ಟಿಯ ಪ್ರಥಮ ತತ್ವ. ಶರಣ ಎನ್ನುವ ಪದ ಸಮಸ್ಥವಿಶ್ವದಶ೯ಕ. ಏನೇನು ಇಲ್ಲದ ಪರಮ ಸತ್ಯದಿಂದ ಮೊದಲು ಸ್ಪುರಿಸುವ ಆತ್ಮಿಕ ಸಂವೇಧನೆ ಪರಶಿವ. ಆ ಪರಶಿವನಿಗೆ ಶರಣ ಎನ್ನುವ ಪದ ಬಳಕೆಯಲ್ಲಿದೆ.ಏನೂ ಇಲ್ಲದ ವಸ್ತುವಿನಿಂದ ಉದಯಿಸಿದವನು ಶರಣನಾಗಿದ್ದಾನೆ. ಘನಮಠರ ಜೀವನ, ಸಾಧನೆ ಮತ್ತು ಅವರ ವ್ಯಕ್ತಿತ್ವ: ಕನ್ನಡ ನಾಡಿನ ಶರಣ ಮನಸ್ಸುಗಳ ಹೆಮ್ಮೆಯ ಗುರುಗಳಾಗಿರುವ ಘನಮಠ ನಾಗಭೂಷಣರು ಘನಮಠದಪ್ಪಗಳೆಂದೇ ಪ್ರಸಿದ್ದಿ ಪಡೆದಿದ್ದಾರೆ. ಇವರು ಹುಟ್ಟಿದ್ದು ಕರ್ನಾಟಕ ದಲ್ಲಲ್ಲ.ಆಂದ್ರ ಪ್ರದೇಶದ ಅತ್ರಾಫ್ ಬಲ್ದಾ ಜಿಲ್ಲೆಯ ಪಟ್ಲೂರು ತಾಲ್ಲೂಕಿನ ದೋರ್ವಾಡ ವೆಂಬ ಚಿಕ್ಕ ಹಳ್ಳಿಯಲ್ಲಿ .. ಶ್ರೀ ವೀರಯ್ಯ ಶ್ರೀಮತಿ ವೀರಮ್ಮ ಎಂಬ ಜಂಗಮ ದಂಪತಿಗಳಿಗೆ ಕ್ರಿ. ಶ.೧೮೨೮ ರಲ್ಲಿ ವಿರೋಧಿನಾಮ ...