Posts

Showing posts from September, 2021

‘ಸಂತೆ ಕೆಲ್ಲೂರು ಶ್ರೀ ಘನಮಠ ನಾಗಭೂಷಣ ಶಿವಯೋಗಿಗಳ’ ಕುರಿತ ವಿಶೇಷ ಲೇಖನ ಡಾ.ಸರ್ವಮಂಗಳ ಸಕ್ರಿ ರಾಯಚೂರು ಇವರಿಂದ.

Image
 ‘ ಸಂತೆ ಕೆಲ್ಲೂರು ಶ್ರೀ ಘನಮಠ ನಾಗಭೂಷಣ ಶಿವಯೋಗಿಗಳು’ ಜಗತ್ತಿನ ಎಲ್ಲಾ ಕಾಲದಲ್ಲಿ ಎಲ್ಲಾ ದೇಶಗಳಲ್ಲಿ ಶರಣರು ಸಂತರು ಆಗಿ ಹೋಗಿದ್ದಾರೆ.ಅಂತೆಯೇ ಪರಶಿವ ಸ್ವರೂಪಿಗಳಾದ ಶರಣರ ಮಾರ್ಗ ಸರಳ ಮತ್ತು ನೇರ ವಾದದ್ದು . ಇಲ್ಲಿಜಾತಿ ಮತ ಪಂಥಗಳ ಕಡಿವಾಣವಿಲ್ಲ.ಉಚ್ಚ ನೀಚ ತಾರತಮ್ಯಗಳಿಲ್ಲ.ಧರ್ಮ ಸಾಧನೆಯ ಪ್ರಮುಖ  ಉದ್ದೇಶ ಹೊಂದಿದ ಶರಣರು ಚಿತ್ತ ಶುದ್ದ ತೆಯಿಂದ ಶಿವನ ಉಪಾಸನೆ ಮಾಡ ಬೇಕೆಂದು ವ್ಯಾಖ್ಯಾನಿಸಿದರು.ಹೀಗಾಗಿ ಯಾರು ಅಂತರಂಗ ಶುದ್ದತೆಯಿಂದ ಆನಂದಮಯ ಭಕ್ತಿಯನ್ನು ಸ್ವೀಕರಿಸುತ್ತಾನೋ ಅವನೇ ಶರಣ. ಪರಶಿವನಲ್ಲಿ ಕಾಣುವ ಅಸ್ಮಿತಾ ಸಂವೇಧನೆಗೆ ಶರಣ ಎಂಬ ಶಬ್ದವಿದೆ. ಇದು ಸೃಷ್ಟಿಯ ಪ್ರಥಮ ತತ್ವ. ಶರಣ ಎನ್ನುವ ಪದ ಸಮಸ್ಥವಿಶ್ವದಶ೯ಕ. ಏನೇನು ಇಲ್ಲದ ಪರಮ ಸತ್ಯದಿಂದ ಮೊದಲು ಸ್ಪುರಿಸುವ ಆತ್ಮಿಕ ಸಂವೇಧನೆ ಪರಶಿವ. ಆ ಪರಶಿವನಿಗೆ ಶರಣ ಎನ್ನುವ ಪದ ಬಳಕೆಯಲ್ಲಿದೆ.ಏನೂ ಇಲ್ಲದ ವಸ್ತುವಿನಿಂದ ಉದಯಿಸಿದವನು ಶರಣನಾಗಿದ್ದಾನೆ. ಘನಮಠರ ಜೀವನ, ಸಾಧನೆ ಮತ್ತು ಅವರ ವ್ಯಕ್ತಿತ್ವ: ಕನ್ನಡ ನಾಡಿನ ಶರಣ ಮನಸ್ಸುಗಳ ಹೆಮ್ಮೆಯ ಗುರುಗಳಾಗಿರುವ ಘನಮಠ ನಾಗಭೂಷಣರು ಘನಮಠದಪ್ಪಗಳೆಂದೇ ಪ್ರಸಿದ್ದಿ ಪಡೆದಿದ್ದಾರೆ. ಇವರು ಹುಟ್ಟಿದ್ದು ಕರ್ನಾಟಕ ದಲ್ಲಲ್ಲ.ಆಂದ್ರ ಪ್ರದೇಶದ ಅತ್ರಾಫ್ ಬಲ್ದಾ ಜಿಲ್ಲೆಯ ಪಟ್ಲೂರು ತಾಲ್ಲೂಕಿನ ದೋರ್ವಾಡ ವೆಂಬ ಚಿಕ್ಕ ಹಳ್ಳಿಯಲ್ಲಿ .. ಶ್ರೀ ವೀರಯ್ಯ ಶ್ರೀಮತಿ ವೀರಮ್ಮ ಎಂಬ ಜಂಗಮ ದಂಪತಿಗಳಿಗೆ ಕ್ರಿ. ಶ.೧೮೨೮ ರಲ್ಲಿ ವಿರೋಧಿನಾಮ ...

ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ ! ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ ! ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ- ಲೋಕೇಶ್ ಎನ್ ಮಾನ್ವಿ.

Image
  ಓಂ ಶ್ರೀಗುರು ಬಸವಲಿಂಗಾಯ ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ  ! ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ ! ಕೂಡಲಸಂಗಮದೇವನಲ್ಲದೆ   ತಲೆದೋರುವ ದೈವಂಗಳನಂದೂ ಕಾಣೆನಿಂದೂ ಕಾಣೆ .   ✍🏾 -: ವಿಶ್ವಗುರು ಬಸವಣ್ಣನವರು .🙏🏻                   # ಭಾವಾರ್ಥ -: ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ ! ಯುಗ ಯುಗಗಳೇ ಲಯವಾದ ಕಾಲದಲ್ಲೂ ,  ರಾಜಾದಿ ರಾಜರೂ ಮಡಿದರು ,  ಕೋಟೆಕಟ್ಟಿ ಮೆರೆದವರು ಅಳಿದರು ,  ಕಾಲದಿ ಕಾಲದಿಂದಲೂ ಅವರವರ ಸಂಸ್ಕೃತಿಗಳು ಬದಲಾಗುತ್ತಿವೆ ,  ಒಬ್ಬರು ಮತ್ತೊಬ್ಬರ ಸಂಸ್ಕೃತಿಯ ಮೇಲೆ ದಾಳಿ   ಮಾಡುತ್ತಲೇ ಇದ್ದಾರೆ ,  ಮನುಷ್ಯನು ತನ್ನ ಕಲ್ಪನೆಗೆ ಅನುಗುಣವಾಗಿ  ದೇವರನ್ನು ಭಿನ್ನ - ವಿಭಿನ್ನವಾಗಿ ಚಿತ್ರಿಸುತ್ತಿದ್ದಾನೆ ,  ಮತ್ತೊಬ್ಬ ರಾಜ , ಆ ಪ್ರದೇಶವನ್ನು ಆಕ್ರಮಿಸಿಕೊಂಡಾಗ ,  ತನ್ನ ಚಿಂತನೆಯಂತೆ ಮತ್ತೆ ದೇವರ ರೂಪವನ್ನೇ ಬದಲಾಯಿಸುತ್ತಿದ್ದಾನೆ ,  ಆದರೆ ಪ್ರಕೃತಿ ವಿಕೋಪವಾಗಿ  ದೇಗುಲವೇ ಮುಳುಗಿದರೂ ಮನುಜ ಕಲ್ಪಿತ ರೂಪಗಳಿಗೆ ಜೀವ ಬರಲಿಲ್ಲ . ರಾಜ್ಯಗಳು ಅಳಿದರೂ ,  ಸಾವಿರಾರು ಜನರು ಮಡಿದರೂ ,  ಮನುಜ ಕಲ್ಪಿತ ರೂಪಗಳು ಕಣ್ಣು ಬಿಡಲಿಲ್...

‘ಚಿತ್ತರಗಿಯ ಚಿಜ್ಯೋತಿ ವಿಜಯಮಹಾಂತ ಶಿವಯೋಗಿಗಳ ಕುರಿತ’ ವಿಶೇಷ ಲೇಖನ-; ಸವಿತಾ ಮಾಟೂರ್, ಇಲಕಲ್ಲ, ಇವರಿಂದ.

Image
  ಓಂ ಶ್ರೀ ಗುರು ಬಸವ ಲಿಂಗಾಯ ನಮಃ ‘ವಿಜಯ ಮಹಾಂತ ಶಿವಯೋಗಿಗಳ ಚರಿತೆ’ 12 ನೇ ಶತಮಾನ ಸಮಾಜದಲ್ಲಿ ಅಚ್ಚಳಿಯದೆ ನಿಚ್ಚಳವಾಗಿ ಉಳಿಯುವ, ನಿತ್ಯ ಸತ್ಯತೆಯ ಸಮಷ್ಠಿಯ, ನೈಜ ಧರ್ಮದ, ಸತ್ಯ ಶುದ್ದ ಕರ್ಮ ಮಾರ್ಗವ ತೋರಿದ, ಸ್ವಾವಲಂಬನೆಯ, ಸ್ವಾಭಿಮಾನದ ಜೊತೆಗೆ ಆಧ್ಯಾತ್ಮಿಕ ಅನುಸಂಧಾನದಿ ಸಾಧನೆಯ ಶಿಖರವೇರಿದ ಸಾಹಿತ್ಯಾತ್ಮಕ ಅದ್ಬುತ ಯುಗವೆಂದರೆ ತಪ್ಪಾಗಲಾರದು. ಮುಂ ದೆ 15 ನೇಯ ಶತಮಾನದಲ್ಲಿ ಹುದುಗಿ ಹೋಗಿದ್ದ ಶರಣ ಧರ್ಮವನ್ನು ಮತ್ತೆ ಅರಿವಿನ ಬೆಳಕಿನಲ್ಲಿ ಆಚರಣೆಗೆ ತಂದು ಅದನ್ನು ಹೆಮ್ಮರವಾಗಿ ಬೆಳಸಿದವರು ಮಹಾತಪಸ್ವಿ ಯಡೆಯೂರು ತೋಂಟದ ಸಿದ್ದಲಿಂಗ ಯತಿಗಳು. ಇವರ ಪರಿಶ್ರಮದ ಫಲ ಇಂದು ಬೆಳೆದು ನಿಂತ ಅನೇಕ ಮಠ ಮಾನ್ಯಗಳು ಮತ್ತು ಸರಳ ಸುಂದರ ಮಾರ್ಗ ತೋರುವ ಬಸವ ತತ್ವ.  ಇಂತಹ ಮಠಗಳಲ್ಲಿ ಹೆಮ್ಮರದಂತೆ ಬೆಳೆದುನಿಂತ ಚಿತ್ತರಗಿ ಮಠವು ಒಂದು. ಒಮ್ಮೆ ಸಿದ್ದಲಿಂಗ ಯತಿಗಳು ತಮ್ಮ ನೂರೊಂದು ಶಿಷ್ಯರ ಜೊತೆ ಮಲಫ್ರಭಾ ನದಿ ದಂಡೆಯ ಮೇಲೆ ಹಾದು ಹೋಗುವಾಗ ಸುತ್ತಮುತ್ತ ಹಸಿರಿನ ಮಧ್ಯೆ ಕಂಗೊಳುಸುತ್ತಿರುವ ಚಿತ್ತರಗಿ ಗ್ರಾಮದಲ್ಲಿ ಒಂದು ಮಠವನ್ನು ನಿರ್ಮಿಸಿ ಅಲ್ಲಿ ತಮ್ಮ ಒಬ್ಬ ಶಿಷ್ಯನನ್ನು ಬಿಟ್ಟು ಹೋದರು. ಅಂತಹ ಮಹಾನ್ ಶಿವಯೋಗಿಯಿಂದ ನಿರ್ಮಾಣವಾದ ಶ್ರೇಷ್ಠ ತಾಣವೇ ‘ ಚಿತ್ತರಗಿ ಮಠ’ ಇಂದು ಭಕ್ತರ ತಪೋವನವಾಗಿದೆ . ಶತಮಾನಕ್ಕೊಬ್ಬ ಮಹಾ ಪುರುಷ ಸಮಾಜ ಬೆಳಗಲು ಪ್ರತಿಸೂರ್ಯನಾಗಿ ಭೂವಿಗೆ ಬರುತ್ತಾನೆ. ಅಂತಹ ದಿವ್ಯ ಚೇತನ, ಬಸವಾದಿ ಶರಣರ ಅಂ...

‘ಘನವೈರಾಗಿ ಜಂಗಮ ಜ್ಯೋತಿ ಅಥಣಿಯ ಶಿವಯೋಗಿಗಳ’ ಕುರಿತು ವಿಶೇಷ ಲೇಖನ ರೋಹಿಣಿ ಯಾದವಾಡ ಅಥಣಿಯವರಿಂದ..

Image
 ‘ಘನವೈರಾಗಿ ಜಂಗಮ ಜ್ಯೋತಿ ಅಥಣಿಯ ಶಿವಯೋಗಿಗಳು’ ಹ ನ್ನೆರಡನೆ ಶತಮಾನದ ಶರಣರ ಚಳುವಳಿಯ  ಮುಂದುವರಿಕೆಯಾಗಿ ಈ ಪುಣ್ಯನೆಲದಲ್ಲಿ ಅನೇಕ ಮಹಾಂತರು ಅಲ್ಲಲ್ಲಿ ಅವತರಿಸಿ ಜಗದ್ದೋದ್ಧಾರ ಕಾರ್ಯ ಮಾಡಿದರು. ಅಂಥವರಲ್ಲಿ ಎಡೆಯೂರ ಸಿದ್ಧಲಿಂಗೇಶ್ವರರು, ಜೇವರಗಿಯ ಷಣ್ಮುಖ ಶಿವಯೋಗಿಗಳು, ಹಾನಗಲ್ ಕುಮಾರಸ್ವಾಮಿಗಳು ಹಾಗೂ ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು.  ಅಥಣಿ ತಾಲೂಕಿನ ಕೃಷ್ಣಾತಟದ ಇಂಗಳಗಾವಿ    ಗ್ರಾಮದ ಬಾಗೋಜಿಕೊಪ್ಪ ಮನೆತನದ ಶರಣ ದಂಪತಿಗಳಾದ ರಾಚಯ್ಯ ನೀಲಮ್ಮ ದಂಪತಿಗಳ ಉದರದಲ್ಲಿ ಶಾಲಿವಾಹನ ಶಕೆ ೧೭೫೮ ನೇ ದುರ್ಮುಖಿ ಸಂವತ್ಸರದ ವೈಶಾಖ ಮಾಸದಲ್ಲಿ ಕ್ರಿ.ಶ ೧೮೩೬ ರಲ್ಲಿ ಜನಿಸಿದರು. ಕೇವಲ ಐದು ವರುಷದವರಿರುವಾಗಲೇ ಇವರನ್ನು ೧೮೪೧ ರಲ್ಲಿ ಅಥಣಿ ಗಚ್ಚಿನಮಠದ ಅಂದಿನ ಅಧಿಪತಿಗಳಾದ ಮರುಳಶಂಕರ ಶಿವಯೋಗಿಗಳಿಗೆ ಅರ್ಪಿಸಿದರು. ಶಿವಯೋಗಿಗಳ ಪೂರ್ವದ ಹೆಸರು ‘ಗುರುಲಿಂಗಯ್ಯ’  ಮುಂದೆ ಶ್ರೀ ಗುರುಶಾಂತ ಸ್ವಾಮಿಗಳು, ಇವರಿಗೆ   ‘ಮುರುಘ’ ಎಂಬ ಅಭಿದಾನ ನೀಡಿದರು. ಶಿವಯೋಗಿಗಳು ತೆಲಸಂಗ ಹಾಗೂ ಮಮದಾಪೂರ ಪೂಜ್ಯರಲ್ಲಿ ಯೋಗ, ಲಿಂಗಾಂಗ ಸಾಮರಸ್ಯ, ಸಾಂಖ್ಯ, ನ್ಯಾಯ ಮುಂತಾದ ವಿದ್ಯಾಭ್ಯಾಸ ಪಡೆದರು. ಮುಂದೆ " ಕೋಶ ಓದು, ದೇಶ ಸುತ್ತು " ಎಂಬಂತೆ ಪೂಜ್ಯರು ಮೂರು ದಶಕಗಳ ಕಾಲ ಹಳ್ಳಿಗೆ ರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ ಎಂಬ ನಿಯಮವನ್ನು ಪಾಲಿಸಿಕೊಂಡು ಕಾಲ್ನಡಿಗೆಯಿಂದ ದೇಶ ಸಂಚಾರಗೈದರು. ಈ ಅವದಿಯಲ್ಲಿ ತ್ರಿ...

‘ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ‘ ವಿಶ್ವಗುರು ಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ -; ಲೋಕೇಶ್ ಎನ್ ಮಾನ್ವಿ.

Image
  ಓಂ   ಶ್ರೀಗುರುಬಸವಲಿಂಗಾಯ   ನಮಃ ಅಹಂಕಾರ   ಮನವನಿಂಬುಗೊಂಡಲ್ಲಿ   ಲಿಂಗ   ತಾನೆಲ್ಲಿಪ್ಪುದೊ ಅಹಂಕಾರಕ್ಕೆ   ಎಡೆಗೊಡದೆ   ಲಿಂಗತನುವಾಗಿರಬೇಕು . ಅಹಂಕಾರರಹಿತವಾದಲ್ಲಿ   ಸನ್ನಹಿತ   ಕಾಣಾ   ಕೂಡಲಸಂಗಮದೇವ .               ✍🏾 -: ವಿಶ್ವಗುರು   ಬಸವಣ್ಣನವರು .                                    # ಭಾವಾರ್ಥ -; ‘# ಅಹಂಕಾರ   ಮನವನಿಂಬುಗೊಂಡಲ್ಲಿ   ಲಿಂಗ   ತಾನೆಲ್ಲಿಪ್ಪುದೊ ’ ನಾನು   ನನ್ನಿಂದಲೇ ,  ಮಾಡುವವ   ನೀಡುವವ   ನಾನೆ   ಎಂಬ   ಅಹಂಕಾರ ,   ನಿನ್ನ   ಮನದಲ್ಲಿ   ಬಂದ   ತತ್ಕ್ಷಣವೇ ,  ನಿನ್ನ   ಕೇಡುಗಾಲ   ಶುರುವೆಂದು   ಭಾವಿಸು ,  ನಾನೇ ,  ಎಂಬ   ಅಹಂಕಾರ    ನಿನ್ನಲ್ಲಿ   ಬಂದ   ಮರುಕ್ಷಣವೇ   ಆಚಾರವು   ಅಡಗುತ್ತದೆ ,  ಅನಾಚಾರ   ತುಂಬುತ್ತದೆ ,  ಸ್ವಾರ್ಥ   ಹೆಚ್ಚುತ್ತದೆ   ಅಂತವರಲ್ಲಿ   ಲಿಂಗ   ತಾನೆಲ್ಲಿಪ್ಪುದೊ . ‘ ಅಹಂಕಾರಕ್ಕೆ   ಎಡೆಗೊಡದೆ ...