‘ಘನವೈರಾಗಿ ಜಂಗಮ ಜ್ಯೋತಿ ಅಥಣಿಯ ಶಿವಯೋಗಿಗಳ’ ಕುರಿತು ವಿಶೇಷ ಲೇಖನ ರೋಹಿಣಿ ಯಾದವಾಡ ಅಥಣಿಯವರಿಂದ..
‘ಘನವೈರಾಗಿ ಜಂಗಮ ಜ್ಯೋತಿ ಅಥಣಿಯ ಶಿವಯೋಗಿಗಳು’
ಅಥಣಿ ತಾಲೂಕಿನ ಕೃಷ್ಣಾತಟದ ಇಂಗಳಗಾವಿ ಗ್ರಾಮದ ಬಾಗೋಜಿಕೊಪ್ಪ ಮನೆತನದ ಶರಣ ದಂಪತಿಗಳಾದ ರಾಚಯ್ಯ ನೀಲಮ್ಮ ದಂಪತಿಗಳ ಉದರದಲ್ಲಿ ಶಾಲಿವಾಹನ ಶಕೆ ೧೭೫೮ ನೇ ದುರ್ಮುಖಿ ಸಂವತ್ಸರದ ವೈಶಾಖ ಮಾಸದಲ್ಲಿ ಕ್ರಿ.ಶ ೧೮೩೬ ರಲ್ಲಿ ಜನಿಸಿದರು. ಕೇವಲ ಐದು ವರುಷದವರಿರುವಾಗಲೇ ಇವರನ್ನು ೧೮೪೧ ರಲ್ಲಿ ಅಥಣಿ ಗಚ್ಚಿನಮಠದ ಅಂದಿನ ಅಧಿಪತಿಗಳಾದ ಮರುಳಶಂಕರ ಶಿವಯೋಗಿಗಳಿಗೆ ಅರ್ಪಿಸಿದರು. ಶಿವಯೋಗಿಗಳ ಪೂರ್ವದ ಹೆಸರು ‘ಗುರುಲಿಂಗಯ್ಯ’ ಮುಂದೆ ಶ್ರೀ ಗುರುಶಾಂತ ಸ್ವಾಮಿಗಳು, ಇವರಿಗೆ ‘ಮುರುಘ’ ಎಂಬ ಅಭಿದಾನ ನೀಡಿದರು.
ಶಿವಯೋಗಿಗಳು ತೆಲಸಂಗ ಹಾಗೂ ಮಮದಾಪೂರ ಪೂಜ್ಯರಲ್ಲಿ ಯೋಗ, ಲಿಂಗಾಂಗ ಸಾಮರಸ್ಯ, ಸಾಂಖ್ಯ, ನ್ಯಾಯ ಮುಂತಾದ ವಿದ್ಯಾಭ್ಯಾಸ ಪಡೆದರು.
ಮುಂದೆ " ಕೋಶ ಓದು, ದೇಶ ಸುತ್ತು" ಎಂಬಂತೆ ಪೂಜ್ಯರು ಮೂರು ದಶಕಗಳ ಕಾಲ ಹಳ್ಳಿಗೆ ರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ ಎಂಬ ನಿಯಮವನ್ನು ಪಾಲಿಸಿಕೊಂಡು ಕಾಲ್ನಡಿಗೆಯಿಂದ ದೇಶ ಸಂಚಾರಗೈದರು. ಈ ಅವದಿಯಲ್ಲಿ ತ್ರಿಕಾಲ ಸ್ನಾನ , ಪೂಜೆ ಅವಿರತ ಸಾಗಿತ್ತು.
ಪೂಜ್ಯರು ಅಪ್ಪಟ ಬಸವ ಅನುಯಾಯಿಗಳು. ಬಸವಣ್ಣ ಅಂದರೆ ಏಕವಚನವಾದಿತು ಎಂದು ಗೌರವದಿಂದ " ಅಪ್ಪನವರು" ಎನ್ನುತ್ತಿದ್ದರು. ವಚನಗಳ ಕಟ್ಟುಗಳನ್ನು ಎಂದು ನೆಲಕ್ಕಿಡದೆ ತಲೆಯ ಮೇಲಿಟ್ಟಕೊಂಡು ಗೌರವಿಸುತ್ತಿದ್ದರು. ನಿತ್ಯ ವಚನಪಠಣ ತಪ್ಪದೆ ಮಾಡುತ್ತಿದ್ದರು. ಬಸವಣ್ಣ ತತ್ವಗಳ ನಡೆನುಡಿಯಲ್ಲಿ ಪಾಲಿಸುತ್ತಿದ್ದರು.
ಶಿವಯೋಗಿಗಳು ಅನೇಕ ಪವಾಡಗಳನ್ನು ಮಾಡಿದರು ಎನ್ನುತ್ತಾರೆ. ವೈಚಾರಿಕತೆಯಲ್ಲಿ ಪವಾಡಗಳನ್ನು ನಂಬದಿದ್ದರು ಅವರ ಬದುಕಿನಲ್ಲಿ ಅನೇಕ ವಿಸ್ಮಯ ಘಟನೆಗಳು ಜರುಗಿದ್ದನು ಅವರ ಕಾಲಾವಧಿಯಲ್ಲಿ ಇದ್ದವರ ಬಾಯಿಯಿಂದ ಮೂರುವರೆ ದಶಕಗಳ ಹಿಂದೆ ಕೇಳಿ ತಿಳಿದಿದ್ದೆವೆ. ಹೀಗಾಗಿ ವಿಸ್ಮಯಗಳೇ ಪವಾಡ ಎನಿಸಿಕೊಂಡಿವೆ.
ಅವುಗಳಲ್ಲಿ ದಟ್ಟಾರಣ್ಯದಲ್ಲಿ ಹುಲಿಯು ತಲೆಬಾಗಿ ನಮಸ್ಕರಿಸಿದ್ದು, ತಪಸ್ಸಿನಲ್ಲಿದ್ದಾಗ ಘಟಸರ್ಪ ಆಜ್ಞೆ ಪಾಲಿಸಿದ್ದು, ಕಣ್ಣಿಲ್ಲದನಿಗೆ ಕಣ್ಣು ಕರುಣಿಸಿದ್ದು, ಮುಂಬೈ ಶೇಟಜಿಯ ದಾರಿದ್ರ್ಯ ಪರಿಹರಿಸಿದ್ದು, ಪಕ್ಷಿಗಳ ರೂಪದಲ್ಲಿ ಗುರುಗಳ ದರ್ಶನ ಪಡೆಯುತ್ತಿದ್ದದ್ದು, ನೀರನ್ನು ತುಪ್ಪವಾಗಿಸಿದ್ದು, ಮಹಾಪ್ರಸಾದಗೈದಾಗ ಮಳೆಯನ್ನು ತಡೆದು ನಿಲ್ಲಿಸಿದ್ದು ಹೀಗೆ ಅನೇಕ ವಿಸ್ಮಯಗಳನ್ನು ತೋರಿದ್ದಾರೆ.
ಲೋಕಮಾನ್ಯ ತಿಲಕರು ೧೯೧೫ ರಲ್ಲಿ ಅಥಣಿಗೆ ಬಂದಾಗ ಪೂಜ್ಯರ ದರುಶನಕ್ಕೆ ಬಂದು ಭಾರತದ ಸ್ವಾತಂತ್ರ್ಯದ ಕುರಿತು ಶಿವಯೋಗಿಗಳಿಗೆ ‘ಸ್ವಾತಂತ್ರ್ಯ ಸಿಗುವ ನನ್ನ ಗುರಿ ಈಡೇರುವುದೆ’ ಎಂದಾಗ ಶಿವಯೋಗಿಗಳು ‘ಸ್ವಾತಂತ್ರ್ಯ ಸಿಗುತ್ತದೆ ಆದರೆ ಅದನ್ನು ನೋಡಲಾರಿರಿ’ ಎಂದಿದ್ದರಂತೆ ಹಾಗೆಯೇ ಆಯಿತು ಸ್ವಾತಂತ್ರ್ಯ ಪೂರ್ವದಲ್ಲಿ ತಿಲಕರು ನಿಧನರಾಗಿದ್ದರು.
ಅಥಣಿಯ ಗಚ್ಚಿನಮಠದಲ್ಲಿದ್ದರೂ ಮಠಾಧೀಶರಾಗಲಿಲ್ಲ. ಈ ಮಠ ೧೬ ನೇ ಶತಮಾನದಲ್ಲಿ ಸ್ಥಾಪನೆಯಾಗಿದೆ. ಇದು ಸಾಧಕರನ್ನು ವಟುಗಳನ್ನು ರೂಪಿಸುವ ಕೇಂದ್ರವಾಗಿತ್ತು. ಅಧಿಕಾರ ವಹಿಸಿಕೊಳ್ಳಲು ಕೇಳಿಕೊಂಡಾಗ ಅದನ್ನು ನಿರಾಕರಿಸಿ ಮಠದ ಸೇವೆ ಮಾಡಿಕೊಂಡಿರುತ್ತೆನೆ ಎಂದವರು. ಹಣವನ್ನು ಎಂದೂ ಕೈಯಿಂದ ಮುಟ್ಟಲಿಲ್ಲ ಅದನ್ನು ‘ಚೇಳು’ಎಂದಕೊಂಡಿದ್ದರು.
ಬಂಥನಾಳದ ಶ್ರೀ ಸಂಗನ ಬಸವಸ್ವಾಮಿಗಳು, ಬಿಳ್ಳೂರದ ಪೂಜ್ಯರು, ಧಾರವಾಡದ ಮೃತ್ಯುಂಜಯ ಅಪ್ಪಗಳು ತುಂಬ ಒಡನಾಡಿಗಳಾಗಿದ್ದರು.
೧೯೧೬ ರಲ್ಲಿ ೬೩ ಪುರಾತನರ ಮಂಟಪ ಪೂಜೆ ನೆರವೇರಿಸಿದರು. ಇದರ ಕುರುಹಾಗಿ ಇಂದಿಗೂ ಅಲ್ಲಿ ಕಟ್ಟಿದ ಪುರಾತನೇಶ್ವರ ದೇವಸ್ಥಾನ ನೋಡಬಹುದಾಗಿದೆ. ಪೂಜ್ಯರ ದರ್ಶನಭಾಗ್ಯ ಪಡೆದವರಲ್ಲಿ ಪ್ರಮುಖರೆಂದರೆ ಹರ್ಡೇಕರ ಮಂಜಪ್ಪ, ಫ.ಗು.ಹಳಕಟ್ಟಿ, ಶಿರಸಂಗಿ ಲಿಂಗರಾಜರು, ರಾಷ್ಟ್ರಪತಿ ಬಿ.ಡಿ ಜತ್ತಿ, ಹುಬ್ಬಳ್ಳಿ ಸಿದ್ಧಾರೂಢರು, ವಾರದ ಮಲ್ಲಪ್ಪ ಮೊದಲಾದವರು ಪೂಜ್ಯರ ಕೃಪೆಗೆ ಪಾತ್ರರಾಗಿದ್ದಾರೆ.
ಶಿವಯೋಗಿಗಳು ಮಹಾತಪಸ್ವಿಗಳಾಗಿ, ಅಂತರ ಜ್ಞಾನಿಗಳಾಗಿ, ತ್ರಿಕಾಲ ಜ್ಞಾನಿಗಳಾಗಿ ಆದರ್ಶ ಜೀವನಗೈದು ತಮ್ಮ ಶಿವಪೂಜಾನುಷ್ಠಾನದ ಪ್ರಭಾವಮಯ ಪ್ರಕಾಶದ ಜ್ಯೋತಿಯನ್ನು ದಯಪಾಲಿಸುತ್ತ ಜೀವನ್ಮುಕ್ತಗೊಂಡರು.
ಲಿಂಗಾಂಗ ಸಾಮರಸ್ಯದಲ್ಲಿದ್ದ ಶಿವಯೋಗಿಗಳು ತಮ್ಮ ೮೫ ನೇ ವಯಸ್ಸಿನಲ್ಲಿ ಶಾಲಿವಾಹನ ಶಕೆ ೧೮೪೩ ನೆಯ ದುರ್ಮುಖಿ ಸಂವತ್ಸರದ ಚೈತ್ರಮಾಸ ಕೃಷ್ಣಪಕ್ಷ ಪ್ರತಿಪದ ಶನಿವಾರದಂದು ಲಿಂಗಾರ್ಚನೆ ಕಳಿತವರು ಮತ್ತೆ ಕಣ್ಣತೆರೆಯಲಿಲ್ಲ. ಬಯಲಲ್ಲಿ ಬಯಲಾದರು. ಕಾಯವಳಿದರು ಅವರ ಕೀರ್ತಿ ಇನ್ನೂ ಜನಮಾನದಲ್ಲಿ ಅಚ್ಚಳಿಯದೆ ಉಳಿದಿದೆ.👏🏻👏🏻
✍🏾#ಲೇಖಕಿ: ರೋಹಿಣಿ ಯಾದವಾಡ.ಅಥಣಿ.
ಅಥಣಿ ಮುರುಘೇಂದ್ರರು ಸಿದ್ಧಾರೂಢರು ಸಮವಯಸ್ಕರು, ಇಬ್ಬರ ಜನನ 1836 ರಲ್ಲಿ. ಶ್ರೀ ಸಿದ್ಧಾರೂಢ ಬಳಿ ಕೆಲ ದಿನಗಳ ಕಾಲ ಮುರುಘೇಂದ್ರ ಶಿವಯೋಗಿಗಳು ಸಿದ್ಧಾರೂಢರ ಬಳಿ ನಿಜಗುಣ ಶಿವಯೋಗಿಗಳ ವೇದಾಂತ ಗ್ರಂಥಗಳ ಅಧ್ಯಯನ ಮಾಡಿದ್ದಾರೆ.
ReplyDeleteಮಾಹಿತಿಗಾಗಿ ಧನ್ಯವಾದಗಳು ಸರ್.🙏🏻💐
Deleteಲೋಕಮಾನ್ಯ ತಿಲಕರು ಅಥಣಿ ಅಜ್ಜೋರಿಗೆ ಭಗವದ್ಗೀತೆ ಉಡುಗೊರೆಯಾಗಿ ಕೊಡಲು ಪ್ರಯತ್ನಿಸಿದರಂತೆ,
ಆಗ ಅಥಣಿ ಅಜ್ಜೋರು ‘ ಇಲ್ಲ ರಿ ಪಾ ನನ್ನ ಬಳಿ ಶರಣರ ವಚನಗಳಿವೆ ಇವನ್ನೇ ಇನ್ನು ೦೧% ಓದಿ ತಿಳಿದಿದ್ದೇನೆ ಮಿಕ್ಕ ೯೯%ಓದಿ ತಿಳಿದ ನಂತರ ಅವಶ್ಯವೆನಿಸಿದ್ರೆ ನಿಮಗೆ ತಿಳಿಸ್ತಿನಿ’ ಎಂದು ಅವರ ಗೀತೆಯನ್ನು ನಯವಾಗಿಯೇ ತಿರಸ್ಕರಿಸಿದರಂತೆ.
ಆಗ ಮರುಮಾತನಾಡದೇ ತಿಲಕರು ದಿಗ್ಭ್ರಮೆಗೊಂಡರಂತೆ.
ಅಥಣಿ ಅಜ್ಜೋರ ವ್ಯಕ್ತಿತ್ವ ಅತ್ಯಂತ ಸರಳತೆಯಿಂದ ಕೂಡಿತ್ತು.🙏🏻💞🙏🏻
ಪರಮ ಪೂಜ್ಯಶ್ರೀ ಮುರುಘೇಂದ್ರ ಶಿವಯೋಗಿಗಳವರ ಚರಿತ್ರೆ ಹಾಗೂ ಬಸವಣ್ಣನವರ ಬಗ್ಗೆ ಅಪಾರವಾದ ನಿಷ್ಠೆ ಅವರ ಲಿಂಗಾಂಗ ಯೋಗ ತಿಳಿದು ನಮಗೆ ಬಹಳ ಸಂತೋಷವಾಯಿತು. ಬರೆದು ಲೊಕಕ್ಕೆ ತಿಳಿಸಿದ ತಮಗೆ ಅಭಿನಂದನೆಗಳು.🙏🔯🙏
Deleteಓದಿ ಪ್ರತಿಕ್ರಿಯಿಸಿದ ತಮಗೂ ಶರಣು ಶರಣಾರ್ಥಿಗಳು.🙏🏻💞🙏🏻
Deleteಅಥಣಿ ಶಿವಯೋಗಿಗಳ ಘನ ವ್ಯಕ್ತಿತ್ವ ಪರಿಚಯಕ್ಕಾಗಿ ಧನ್ಯವಾದಗಳು ಮೇಡಂ
Deleteಪರಮ ಪೊಜ್ಯರ ಕಿರು ಪರಿಚಯ ಮಾಡಿಸಿದ ತಮಗೆ ನಮ್ಮ ಕುಟುಂಬದಾದಿಯಗಿ ಎಲ್ಲರ ಧನ್ಯವಾದಗಳು 🙏
DeleteShri Siddhaling swamiji, who was with Shivyogi Murughendra swami ji,both were the two faces of the same coin..... His name not mentioned..
ReplyDeleteAnubhav vembudannu Shri Shidharoodhrinda keli tiliyabeku. Athani Murughendra Shivayogigalanuu nodi kaliyabeku. (Manjuri)
ReplyDeleteShastra kelabekadare Hubballi barabeku. Shivanannu
kanabekadare Athanige hogabeku. (Hubballi Shidharoodha shrigalu).