ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ ! ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ ! ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ- ಲೋಕೇಶ್ ಎನ್ ಮಾನ್ವಿ.

 ಓಂ ಶ್ರೀಗುರು ಬಸವಲಿಂಗಾಯ



ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ !

ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ !
ಕೂಡಲಸಂಗಮದೇವನಲ್ಲದೆ ತಲೆದೋರುವ ದೈವಂಗಳನಂದೂ ಕಾಣೆನಿಂದೂ ಕಾಣೆ.


 ✍🏾-:ವಿಶ್ವಗುರು ಬಸವಣ್ಣನವರು.🙏🏻


                  #ಭಾವಾರ್ಥ-:


ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ !


ಯುಗ ಯುಗಗಳೇ ಲಯವಾದ ಕಾಲದಲ್ಲೂರಾಜಾದಿ ರಾಜರೂ ಮಡಿದರುಕೋಟೆಕಟ್ಟಿ ಮೆರೆದವರು ಅಳಿದರುಕಾಲದಿ ಕಾಲದಿಂದಲೂ ಅವರವರ ಸಂಸ್ಕೃತಿಗಳು ಬದಲಾಗುತ್ತಿವೆಒಬ್ಬರು ಮತ್ತೊಬ್ಬರ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಲೇ ಇದ್ದಾರೆಮನುಷ್ಯನು ತನ್ನ ಕಲ್ಪನೆಗೆ ಅನುಗುಣವಾಗಿ ದೇವರನ್ನು ಭಿನ್ನ-ವಿಭಿನ್ನವಾಗಿ ಚಿತ್ರಿಸುತ್ತಿದ್ದಾನೆಮತ್ತೊಬ್ಬ ರಾಜ, ಪ್ರದೇಶವನ್ನು ಆಕ್ರಮಿಸಿಕೊಂಡಾಗತನ್ನ ಚಿಂತನೆಯಂತೆ ಮತ್ತೆ ದೇವರ ರೂಪವನ್ನೇ ಬದಲಾಯಿಸುತ್ತಿದ್ದಾನೆಆದರೆ ಪ್ರಕೃತಿ ವಿಕೋಪವಾಗಿ ದೇಗುಲವೇ ಮುಳುಗಿದರೂ ಮನುಜ ಕಲ್ಪಿತ ರೂಪಗಳಿಗೆ ಜೀವ ಬರಲಿಲ್ಲ.

ರಾಜ್ಯಗಳು ಅಳಿದರೂಸಾವಿರಾರು ಜನರು ಮಡಿದರೂಮನುಜ ಕಲ್ಪಿತ ರೂಪಗಳು ಕಣ್ಣು ಬಿಡಲಿಲ್ಲ.


#ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ !


ಮನುಷ್ಯನು ಏನು ತೋಚದಂತೆಧಿಗಿಲು ಬಡಿದು ಸ್ಥಬ್ದವಾಗಿ ನಿಂತಾಗಲುಭುಗಿಲು ಆತಂಕ ಮುಗಿಲು ಮುಟ್ಟಿದರೂ ನಾವು ಮಾಡಿದ ದೇವರ ರೂಪಗಳು ಕಣ್ಣು ಬಿಡಲಿಲ್ಲ, ಎದ್ದು ಬರಲಿಲ್ಲ,

ಕಾರಣ ಅದನ್ನು ನಿರ್ಮಿಸಿದ್ದು ಮಾನವವಾಸ್ತವ ಎಂದರೆ ಅದೊಂದು ಬರಿಯ ಮನುಜ ಕಲ್ಪಿಸಿದ ಸುಂದರ ವಸ್ತು ಮಾತ್ರಆದರೆ ಸೃಷ್ಟಿಯ ಮೂಲವೇ ಬೇರಿದೆ.



ಕೂಡಲಸಂಗಮದೇವನಲ್ಲದೆ ತಲೆದೋರುವ ದೈವಂಗಳನಂದೂ ಕಾಣೆನಿಂದೂ ಕಾಣೆ !

ಅದರ ಮೂಲ ರೂಪವು ನಿರೂಪಅದರ ಆಕಾರವೇ ನಿರಾಕಾರಅದರ ಗೋಚರತೆ ಅಗಮ್ಯ ಮತ್ತು ಅಗೋಚರ,ಅದರ ವ್ಯಾಪ್ತಿ ಶಕ್ತಿ,ಅಪ್ರತಿಮ ಅಪ್ರಮಾಣ,ಅದನ್ನು ಕೇವಲ ಒಂದು ನಿರ್ದಿಷ್ಟ ಸ್ಥಳದಲ್ಲಿ ಹಿಡಿದಿಡಲಾಗದುಅದನ್ನು ಕಲ್ಪಿಸಿಕೊಳ್ಳಲೂ ಆಗದ,  ಅಗಮ್ಯ ಅಗೋಚರ ಅಪ್ರತಿಮ ಅಪ್ರಮಾಣ ಸ್ವಯಂ ಚೈತನ್ಯವದುಸೃಷ್ಟಿಯ ಕಣಕಣದಲ್ಲೂ ತುಂಬಿದ ನಿಸ್ಸೀಮ ಚೆಲುವದುಅಂಗದೊಳಗೆ ಸ್ವಯಂ ಆತ್ಮಜ್ಯೋತಿಯದುಬಯಲ ಮಹಾ ಬಯಲದು,

ಜಗವೆಲ್ಲದರ ಸಕಲ ವಿಸ್ತಾರದ ರುಹದು, ‘ಕೂಡಲ ಸಂಗಮದೇವನೆಂಬ’ ಸೃಷ್ಠಿ-ಸ್ಥಿತಿ-ಲಯ ಕಾರಣವಾದ ಪ್ರಕೃತಿಯ ಮೂಲವೇ ಬಯಲು ಮಹಾಬಯಲು, ಇಂತಪ್ಪ  ಮಹಾನ್ ಶಕ್ತಿನಿರಾಕಾರ ಚೈತನ್ಯವಲ್ಲದೇ ಇಲ್ಲಿ ಮನುಜ ಕಲ್ಪಿತ ವಸ್ತು ವಿಷಯಂಗಳ್ಯಾವೂ ಕೂಡ ಪ್ರಕೃತಿಯ ಸೃಷ್ಟಿಯಲ್ಲಿ ಸ್ಥಿರವಲ್ಲ

ಜನನಮರಣ ರಹಿತನು, ನಿತ್ಯನೂ, ನಿರಂತರನೂ, ಸತ್ಯನೂ, ಶಾಶ್ವತನೂ, ಆದ ನಿರಾಕಾರ ಬಯಲ ಕೂಡಲಸಂಗಮದೇವನಲ್ಲದೆ, ಇಲ್ಲಿ  ಏನೂ ಶಾಶ್ವತವಲ್ಲ, ಯಾವುದೂ ಶಾಶ್ವತವಲ್ಲ

ಅಂದು, ಇಂದು, ಮುಂದು, ಎಂದೂ ಎಂದೆದೂ ಕೂಡಲಸಂಗನಲ್ಲದೆ ಮತ್ತ್ಯಾವ ದೈವವೂ  ನಿಮ್ಮ ಆಪತ್ಕಾಲಕ್ಕೆ ಬಂದಿಲ್ಲ, ಬರುವುದೂ ಇಲ್ಲ, ಈ ಜಗತ್ತಿಗೆ ಸರ್ವ ಕರ್ತೃವಾದ ದೇವನು ಒಬ್ಬನೇ ಎಂಬುದಾಗಿದೆ, ವಿಶ್ವಗುರು ಬಸವಣ್ಣನವರ ವಚನದ ಭಾವಾರ್ಥ..



         🙏🏻ಶರಣು ಶರಣಾರ್ಥಿಗಳೊಂದಿಗೆ🙏🏻

       ✍🏾ವಿಶ್ಲೇಷಣೆ-;ಲೋಕೇಶ್ ಎನ್ ಮಾನ್ವಿ.

Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.