Posts

Showing posts from December, 2022

ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, -: ಅಲ್ಲಮಪ್ರಭುದೇವರ ವಚನ. ✍🏾-;ವಿಶ್ಲೇಷಣೆ- ಲೋಕೇಶ್_ಎನ್_ಮಾನ್ವಿ.

Image
ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ. ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ. ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.                  ವಚನ-;ಅಲ್ಲಮಪ್ರಭುದೇವರು. ಅಲ್ಲಮರ ಈ ವಚನ ಲಿಂಗಾನುಸಂಧಾನದ ನಂತರ ಅದಕ್ಕೂ ಮೀರಿದ ಪರಿಪೂರ್ಣ ನಿಜ ಸುಖದ  ಬಯಲ ಬಿಡಾಡಿಗಳಿಗೆ ಲಭಿಸುವ ಅನಂತತೆಯ ಆನಂದವಾಗಿದೆ. ಕಣ್ಣಿಂಗೆ ಕಣ್ಣು,  ಕಣ್ಮುಚ್ಚಿ ಮಲಗಿದರೂ ಇಡೀ ಜಗತ್ತನ್ನೇ ತಂದು ತೋರುವ ಮನಸ್ಸು, ನೋಡದ ವಸ್ತುವನ್ನು, ಕಲ್ಪಿಸುವಷ್ಟರಲ್ಲಿ ಅದರ ಚಿತ್ರವನ್ನೇ ತಂದಿಡಬಲ್ಲ ಮನಸ್ಸು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ,  ಅದು ಮನಸ್ಸಿಗೇ ಮನಸ್ಸು ಅರಿವೆಂಬ ಕಣ್ಣು, ಕಂಡಿದ್ದನ್ನು  ಪ್ರಮಾಣಿಸಿ ನೋಡುವ ಅರಿವಿನ ಕಣ್ಣು , ಅದೇ ನೇತ್ರ. ಆ ನೇತ್ರವೇ (ಅರಿವಿನ ದೃಷ್ಠಿಯೇ) ಲಿಂಗವನ್ನು ಅನುಸಂಧಾನಿಸುವ ಸೂತ್ರ, ಆ ಸೂತ್ರವಿಡಿದು ಜ್ಯೋತಿವಿಡಿದು ಜ್ಯೋತಿಯಾದಂತೆ ಸೂತ್ರವೇ ಲಿಂಗ, ಲಿಂಗವೆ ಗುಹ್ಯ, ಹಿಡಿದ ಸೂತ್ರ ಕಾಣಲಾರದ ಪಟ, ಅದುವೇ ಪ್ರಕೃತಿಯ ಅಗೋಚರ ಸತ್ಯ ಗುಹ್ಯ. ಗುಹ್ಯಕ್ಕೆ ಗುಹ್ಯ, ಅಗೋಚರಕ್ಕೂ ಅಗೋಚರ ಪರಮ ವಿಸ್ತ್ರುತ ವಿಸ್ತಾರ ಸತ್ಯವದು,  ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೂ ರಹಸ್ಯ ಸೃಷ್ಠಿಯ ಪ್ರತಿ ಚಲನೆಯೂ   ಕ್ಷಣಕ್ಷಣಕ್ಕೂ ...

ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ, ವಚನ- ವಿಶ್ವಗುರು_ಬಸವಣ್ಣನವರು. ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.

Image
ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ, ಅದೇನು ಕಾರಣ ತಂದೆಯೆಂದರಿದೆನಯ್ಯಾ, ಎನ್ನ ಕಾರಣ ತಂದೆಯೆಂದರಿದೆನಯ್ಯಾ, ಅರಿದರಿದು, ನಿಮ್ಮ ಶರಣನು ಆಚರಿಸುವ ಆಚರಣೆಯ ಕಂಡು ಕಣ್ದೆರೆದೆನಯ್ಯಾ, ಕೂಡಲ ಸಂಗಮದೇವಾ .           ✍🏾-; ವಿ ಶ್ವಗುರು ಬಸವಣ್ಣನವರು. ಸ್ಥಲ - ಪಿಂಡಜ್ಞಾನಸ್ಥಲ ವಿಷಯ - ಪುನರ್ಜನ್ಮ  ಭಾವಾರ್ಥ- ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ. ಅಯ್ಯಾ, ಪರಮದಯಾಮಯಿಯಾದ ನಿರಾಕಾರ ಸೃಷ್ಠಿಕರ್ತನೇ, ನಿಮ್ಮ  ಶರಣನ (ಅರಿವಿನ ಸಕಾರ ರೂಪ)  ಮರ್ತ್ಯಕ್ಕೆ ತಂದೆಯಾಗಿ ನಾನು ಬದುಕಿದೆನಯ್ಯಾ, ನೆನೆನೆನೆದು ಸುಖಿಯಾಗಿ ಮರೆವೆಯ ಕತ್ತಲು ಕಳೆದು ಅರಿವಿನ ಚಿದ್ಬೆಳಕ ಮೂಡಿ ಆ ಬೆಳಕಿನ ಪಥದಲ್ಲಿ ಸುಖಿಯಾಗಿ ಬದುಕಿದೆನಯ್ಯಾ, ಯಾವ ಕಾರಣಕ್ಕಾಗಿ ನಿಮ್ಮ ಶರಣನನ್ನು ಧರೆಗೆ ತಂದೆಯೆಂದರಿದೆನಯ್ಯಾ, ಎನಗಾಗಿಯೇ ತಾನೇ ಎನ್ನ ಅರಿವಿನ ಅನುಸಂಧಾನಕ್ಕಾಗಿಯೇ ತಾನೇ, ಇದನ್ನು ಅರಿತ ನಾನು ನಿಮ್ಮ ಶರಣರ ಅರಿವಿನ ನುಡಿಗಳ ಕೇಳಿ ನಿಜ ಸುಖಿಯಾದೆ ಭವ ಪಾಶ ಹರಿದು, ಭಕ್ತನಾದೆ, ನಿಮ್ಮ ಶರಣರು ಆಚರಿಸುವ ಸದಾಚರಣೆಗಳನ್ನು ಕಂಡು ಕಂಡು ಎನ್ನೊಳಗಿನ ಅರಿವಿನ ಕಣ್ತೆರೆಯಿದು ನಾನು (ಅರಿವಿನ ಸಕಾರ ರೂಪ) ಶರಣನಾದೆ, ಭವಿತ್ವದ ಜಡತ್ವದಿಂದ ವಿಮೋಚನೆಗೊಂಡು, ಸದಾ ಹೊಸತನ ತುಂಬಿದ ಚೈತನ್ಯಾತ್ಮಕ ‘ಜಾತಿರಹಿತ ‘ ಜಂಗಮ ಬದುಕಿ...

ಉಂಬಲ್ಲಿ ಊಡುವಲ್ಲಿ ಕ್ರೀಯಳಿಯಿತ್ತೆಂಬರು, ಕೊಂಬಲ್ಲಿ ಕೊಡುವಲ್ಲಿ ಕುಲವರಸುವರು, -ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ -; ಲೋಕೇಶ್_ಎನ್_ಮಾನ್ವಿ.

Image
ಉಂಬಲ್ಲಿ ಊಡುವಲ್ಲಿ ಕ್ರೀಯಳಿಯಿತ್ತೆಂಬರು,  ಕೊಂಬಲ್ಲಿ ಕೊಡುವಲ್ಲಿ ಕುಲವರಸುವರು,  ಎಂತಯ್ಯಾ ಅವರ ಭಕ್ತರೆಂತೆಂಬೆ?  ಎಂತಯ್ಯಾ ಅವರ ಯುಕ್ತರೆಂತೆಂಬೆ?  ಕೂಡಲಸಂಗದೇವಾ ಕೇಳಯ್ಯಾ,  ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ            ✍🏾-ವಿಶ್ವಗುರು ಬಸವಣ್ಣನವರು. ಭಾವಾರ್ಥ- ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು. ಅನ್ನವನ್ನು ಉಣುವಾಗ ಅದು ಯಾವ ರೈತ ಬೆಳೆದದ್ದು ಎಂಬುದು ಮುಖ್ಯವಾಗುವುದಿಲ್ಲ, ಆಗ ಅದನ್ನು ಸಂಸ್ಕರಿಸಿ  ಉಣ್ಣುತ್ತಾರೆ ಕಾರಣ ಹಸಿವಿಗೆ ‘ಅನ್ನವೇ ಬ್ರಹ್ಮ’ ತದನಂತರ ಮತ್ತೆ ಜಾತಿಯ ಚರ್ಚೆ. ಹಾಗೆಯೇ… ಉಡುವಾಗ ಬಟ್ಟೆ ಯಾವ ರೈತನ ಹೊಲದ ಹತ್ತಿಯದ್ದು ಅದು ಮುಖ್ಯವಾಗಲ್ಲ, ಯಾವ ಜಾತಿಯವ ತಯ್ಯಾರಿಸಿದ ಅದು ಮುಖ್ಯವಾಗಲ್ಲ, ಬಟ್ಟೆ ತೊಳೆದರೆ ಅದು ಮಡಿಯಾಗುತ್ತದೆ, ಹಾಗೆಯೇ ತಾವು ಧರಿಸುವ ಸತ್ತ ದನದ ‘ಚರ್ಮದ ಪಾದರಕ್ಷೆಯನ್ನು’ ನೀರು ಚುಮುಕಿಸಿ ಶುದ್ಧ ಮಾಡಿ ಧರಿಸಬಹುದಾದರೆ, ಪಾದರಕ್ಷೆಯನ್ನು ತಯ್ಯಾರಿಸಿದ ಜೀವಂತ ಮಾನವನನ್ನು ಜಾತಿವಿಡಿದು ಸತ್ತ ದನಕ್ಕಿಂತ ಜೀಳಾಗಿ ನೋಡುತ್ತಾರೆ, ರೈತ ಬೆಳೆದ ಅನ್ನವನ್ನೇ ಉಣ್ಣುತ್ತಾರೆ, ಆದರೆ  ಅನ್ನ ನೀಡುವ ರೈತನನ್ನು ಕೀಳಾಗಿ ಕಾಣುತ್ತಾರೆ. ಶಿಲ್ಪಿ ಮಾಡಿದ ಚರ್ಮದ ವಸ್ತುಗಳನ್ನೇ ಬಳಸುತ್ತಾರೆ, ಆದರೆ, ಆ ಶಿಲ್ಪಿಯನ್ನೇ ಕೀಳಾಗಿ ಕಾಣುತ್ತಾರೆ, ರೈತ ಬೆಳೆದದ್ದು ಉಣುವಾಗ ಇಲ್ಲದ ಜಾತಿ ಉಂಡ ನಂತರವೇಕೆ..? ಕೊಂಬಲ್ಲ...