Posts

Showing posts from February, 2022

ಸಂಸಾರದಲ್ಲೇ ಶಿವನನ್ನು ಕಂಡ ಶರಣ ಜೇಡರ ದಾಸಿಮಯ್ಯ ಮತ್ತು ಶರಣೆ ದುಗ್ಗಳೆಯವರ, ‘ಶರಣ ಸಂಸಾರಿಕ ಸೂತ್ರ’ ✍🏾ವಿಶೇಷ ಲೇಖನ-; ಲೋಕೇಶ್_ಎನ್_ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಸಂಸಾರದಲ್ಲೇ ಶಿವನನ್ನು ಕಂಡ ಶರಣ ಜೇಡರ ದಾಸಿಮಯ್ಯ ಮತ್ತು ಶರಣೆ ದುಗ್ಗಳೆಯವರ , ‘ ಶರಣ ಸಂಸಾರಿಕ ಸೂತ್ರ ’ ಸಂಸಾರವನ್ನು ಕಷ್ಟವೆಂದಾಗಲಿ ; ದುಖಃವೆಂದಾಗಲಿ ;  ನರಕವೆಂದಾಗಲಿ ; ಬಂಧನವೆಂದಾಗಲಿ ಕರೆದವರಲ್ಲ ನಮ್ಮ ಬಸವಾದಿ ಶಿವಶರಣರು ,  ಅದಕ್ಕೆ ಬದಲಾಗಿ ; ಸಂಸಾರವನ್ನು ಶಿವನನ್ನೊಲಿಸುವ ಸಾಧನವಾಗಿ ಕಂಡವರು ಶರಣರು . ಸಂಸಾರಿಕ ಶರಣರ ಬಗ್ಗೆ ನನಲ್ಲಿ  ಹೆಚ್ಚು ಆಸಕ್ತಿ ಮೂಡಿಸಿದವರಲ್ಲಿ ಜೇಡರ _ ದಾಸಿಮಯ್ಯ ದುಗ್ಗಳೆಯವರು   ಪ್ರಮುಖರು . ಇವರ  ‘ ಶರಣ ಸಂಸಾರಿಕ ಸೂತ್ರವು ’  ನನಗೆ ಬಹಳ ಇಷ್ಟವಾದುದ್ದಾಗಿದೆ ,. ಸಂಸಾರಿಕರಾಗಬೇಕೆ ,?  ಸನ್ಯಾಸಿಯಾಗಬೇಕೆ ,?  ಸಂಸಾರಿಗಳಾದರೆ ಹೇಗೆ ಸಂತೃಪ್ತ ಜೀವನ ಸಾಗಿಸಬಹುದು,  ಎಂಬ  ಹಲವಾರು ಯುವಕರ ಗೊಂದಲಕ್ಕೆ ಇಲ್ಲಿ   ದಾಸಿಮಯ್ಯನವರು ಪರಿಹಾರ   ಸೂಚಿಸುತ್ತಾರೆ ,  ಮೊದಲನೆಯದಾಗಿ ‘ ಜೇಡರ ದಾಸಿಮಯ್ಯನವರು ಮಹಾನ್ ಶಿವಭಕ್ತರು , ಲಿಂಗ ನಿಷ್ಠರು , ಕಾಯಕ ಜೀವಿಗಳು ದಾಸೋಹ ಪ್ರೇಮಿಗಳಾದ ಶರಣರು ’ ಮೊದಲು ತಮ್ಮ ಮನಸ್ಸಿನಲ್ಲಿ ಸಂಸಾರಿಕರಾಗಲು ನಿರ್ಧರಿಸಿ ಕನ್ಯಾನ್ವೇಷಣೆಗೆ  ‘ ಕನ್ಯಾ ನೋಡಲು ಸಿದ್ಧರಾಗುತ್ತಾರೆ ’ ಆದರೆ ದಾಸಿಮಯ್ಯನವರದ್ದು ಒಂದು ಷರತ್ತು ಇರುತ್ತದೆ;   ( ನೀರು ಮತ್ತು ಸೌದ...

‘ಶರಣರದ್ದು ಸಂಸಾರದಲ್ಲೇ ಸದ್ಗತಿ ಕಾಣುವ ಸಾರ್ಥಕ ಬದುಕು’ 🙏🏻👍🏻

Image
ಓಂ ಶ್ರೀಗುರುಬಸವಲಿಂಗಾಯ ನಮಃ ‘ಶರಣರದ್ದು ಸಂಸಾರದಲ್ಲೇ ಸದ್ಗತಿ ಕಾಣುವ ಸಾರ್ಥಕ ಬದುಕು’ 🙏🏻🙏🏻👍🏻👍🏻 ಸತಿಪುರುಷರಿಬ್ಬರೂ ಪ್ರತಿದೃಷ್ಟಿಯಾಗಿ ಮಾಡಬಲ್ಲಡೆ  ಅದೆ ಮಾಟ,  ಕೂಡಲಸಂಗಮದೇವರ ಕೂಡುವ ಕೂಟ. ✍🏻 -;#ವಿಶ್ವಗುರು_ಬಸವಣ್ಣನವರು.                   #ಭಾವಾರ್ಥ-: ಶರಣರು ಸಂನ್ಯಾಸತ್ವವನ್ನು ಒಪ್ಪುವುದಿಲ್ಲ, ನೀರಿಗಿಳಿಯದೆ ಈಜು ಕಲಿಯದೆ, ಸಾಗರವನ್ನು ದಾಟಲು ಹೇಗೆ ಸಾಧ್ಯವಿಲ್ಲವೊ. ಹಾಗೇ ಸಂಸಾರಕ್ಕೆ ಹೆದರಿ ಸೋತು ಸಂನ್ಯಾಸಿಯಾದೆನೆಂದರೆ,  ಈ ಭವ ಸಾಗರವನ್ನು ದಾಟಲು ‌ಸಾಧ್ಯವೇ ಇಲ್ಲ. ಹನ್ನೆರೆಡನೇ ಶತಮಾನದ ಬಹುತೇಕ ಶರಣರು ಸಂಸಾರಿಕರೆ ಆಗಿದ್ದಾರೆ,  ಸತಿಪತಿಗಳಾಗಿ ಆದರ್ಶಮಯವಾಗಿ ಬದುಕಿ ಶಾಶ್ವತ ಅಜರಾಮರಾದರು ಶರಣ ದಂಪತಿಗಳು. ‘ಬಸವಣ್ಣ- ನೀಲಾಂಬಿಕೆ’ ‘ದಾಸಿಮಯ್ಯ- ದುಗ್ಗಳೆ’ ‘ಆಯ್ದಕ್ಕಿ ಲಕ್ಕಮ್ಮ- ಮಾರಯ್ಯ’ ‘ಹರಳಯ್ಯ- ಕಲ್ಯಾಣಮ್ಮ’ ‘ಮೋಳಿಗೆಯ ಮಾರಯ್ಯ- ಮಹಾದೇವಿ’ ‘ಹಡಪದ ಅಪ್ಪಣ್ಣ- ಲಿಂಗಮ್ಮ’ ಹೀಗೇ ಶರಣ- ಶರಣೆಯರು ನಮಗೆಲ್ಲ ಮಾದರಿಯಾಗಿದ್ದರೆ. ಸತಿ ಪತಿಗಳಿಬ್ಬರು ಬಿನ್ನವಿಲ್ಲದಿರಬೇಕು, ಎರಡು ಕಣ್ಣುಗಳು ಹೇಗೆ ಏಕ ದೃಷ್ಟಿಯಿಂದ ಅಂಗೈಯ ಲಿಂಗವನು ನೋಡುತ್ತವೆಯೊ ಹಾಗೇ ಸತಿಪತಿಗಳ ದೇಹ ಬಿನ್ನವಾದರೂ ಭಾವ ಒಂದೇ ಇರಬೇಕು, ಜೀವವೇ ಶಿವನೆಂದಿರಬೇಕು, ಸತಿಪುರುಷರಿಬ್ಬರೂ ಸನ್ಮಾರ್ಗದಲ್ಲಿ ನಡೆದು, ಕಾಯಕ ಜೀವಿಗಳಾಗಿ ಅತ್ಯಂತ ಅನ್ಯೂನ್ಯತೆಯಿಂದ ಜೀವಿ...

ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆನ್ನ ಬಾಳುವೆ -; ವಿಶ್ವಗುರು ಬಸವಣ್ಣನವರು, ವಿಶ್ಲೇಷಣೆ -ಲೋಕೇಶ್ ಎನ್ ಮಾನ್ವಿ.

Image
  ಓಂ ಶ್ರೀ ಗುರು ಬಸವಲಿಂಗಾಯ ನಮ : ‘ ಆಸೆ ಮತ್ತು ಬದುಕಿನ ಗುರಿ ’ ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆನ್ನ ಬಾಳುವೆ ಸಂಸಾರಸಂಗವ ಬಿಡದು ನೋಡೆನ್ನ ಮನವು . ಈ ನಾಯಿತನವ ಮಾಣಿಸು ಕೂಡಲಸಂಗಮದೇವಯ್ಯ ನಿಮ್ಮ ಧರ್ಮ .     ✍🏾-; ವಿಶ್ವಗುರು ಬಸವಣ್ಣನವರು • __________________________ ಭಾವಾರ್ಥ - ಹಿಂದಿನ ಕಾಲದಲ್ಲಿ ರಾಜ ಮಹಾರಾಜರು   ತುಕ್ಕು ಹಿಡಿದ ಖಡ್ಗಗಳನ್ನು ಸಾಣೆ ಹಿಡಿಸಿ ತುಕ್ಕು ಬಿಟ್ಟು ಹರಿತವಾಗಲೆಂದು ತುಪ್ಪ ಹಚ್ಚಿ ಬಿಸಿಲಿನಲ್ಲಿ ಇಡುತಿದ್ದರು . ಆ ತುಪ್ಪದ ಸವಿಗೆ ಸೊಣಗ ( ನಾಯಿ ) ಬಂದು ಮೂಸಿ ನೋಡಿ ಲೊಚ ಲೊಚನೆ ನೆಕ್ಕತೊಡಗಿತು  ಖಡ್ಗದ ಹರಿತಕ್ಕೆ ನಾಲಗೆ ತುಂಡಾಗಿ  ಬಾಯಿಂದ ಗಳಗಳನೆ ರಕ್ತ ಸೋರುತಿತ್ತು,  ಇದಾವುದರ ಪರಿವೇ ಇಲ್ಲದಂತೆ  ಸೋರುತ್ತಿರುವ ಆ ರಕ್ತವನ್ನೇ ನೆಕ್ಕುತ್ತ ನೆಕ್ಕುತ್ತಾ ಸವೆಯುತ್ತಾ ಆ ಶ್ವಾನ ಅದರಲ್ಲಿಯೇ ಮೈ ಮರೆತು ಸತ್ತಿತ್ತು . ಅದರಂತೆ;  ನಾನು ನನ್ನದು ನನ್ನಿಂದಲೇ  ಎಂದು ಹೆಣ್ಣು ಹೊನ್ನು ಮಣ್ಣನ್ನು ನೆಚ್ಚಿ ಸಂಸಾರದ ವಿಷಯ ವಾಸನೆಗೆ ಗುರಿಯಾಗುತ್ತಿದೆ  ಈಗಿನ ಯುವ ಸಮೂಹ ,  ಇದರಿಂದ ಜಾಗ್ರತವಾಗಬೇಕಿದೆ. ಓದುವ ವಯಸ್ಸಿನಲ್ಲೇ ಪ್ರೀತಿ ಪ್ರೇಮ ಎಂಬ    ವ್ಯಾಮೋಹದ ಸಂಕೋಲೆಗೆ ಸಿಲು...

ಆರು ಮುನಿದು ನಮ್ಮನೇನ ಮಾಡುವರು, ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ ಲೋಕೇಶ್ ಎನ್ ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಆರು ಮುನಿದು ನಮ್ಮನೇನ ಮಾಡುವರು ಊರು ಮುನಿದು ನಮ್ಮನೆಂತು ಮಾಡುವರು ನಮ್ಮ ಕುನ್ನಿಗೆ ಕೂಸ ಕೊಡಬೇಡ . ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ . ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ , ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ .   ✍🏻 -:# ವಿಶ್ವಗುರು _ ಬಸವಣ್ಣನವರು. # ಭಾವಾರ್ಥ -: ನ್ಯಾಯ ನಿಷ್ಠೂರರಾಗಿ   ತತ್ವ ನಿಷ್ಠರಾಗಿ   ಸತ್ಯ ಸನ್ಮಾರ್ಗದಲ್ಲಿ ನಡೆವ ಶರಣರ ಕಂಡರೆ , ತತ್ವದ ಸತ್ವಹೀನ ಮನುಜರು ಬೊಗಳುವುದು ಸಹಜ . ಸಕಲ ದಾಯಮಯರಾದ ಶರಣರ ಕಂಡರೆ , ಅವರ ಕಾಯಕ ತತ್ವ ದಾಸೋಹತ್ವ   ಸಮತೆ ಪ್ರೀತಿ ನ್ಯಾಯ ನಿಷ್ಠೂರತೆಯ  ಸದ್ವಿಚಾರಗಳ   ಕಂಡು ಲೋಕಲೌಕಿಕದ ಜಡಜೀವಿಗಳೆತ್ತ ಮೆಚ್ಚಿ ನುಡಿವರು . ಆರು   ಮುನಿದು   ನಮ್ಮನೇನ   ಮಾಡುವರು ಊರು   ಮುನಿದು   ನಮ್ಮನೆಂತು   ಮಾಡುವರು ಯಾರು ಮುನಿದರೂ,   ನಮ್ಮನ್ನು ಏನೂ ಮಾಡಲಾಗದು .  ಸತ್ಯ ಶುದ್ಧ ಕಾಯಕವನ್ನು ಮಾಡುತ್ತ, ಅದರಿಂದ ಬಂದ ಹಣದಲ್ಲಿ ದಾಸೋಹ ಮಾಡುತ್ತ ಜೀವಿಸುತ್ತಿರುವ ಸಮತಾವಾದಿಗಳು ಲೋಕೋಪಕಾರಿಗಳಾದ ಶರಣರನ್ನು ಕಂಡಾಗ ಊರಿನಲ್ಲಿ ಕುಳಿತು ತಿನ್ನುವ ಜಡದೇಹಿಗಳು ಕೊಂಕು ಮಾತನಾಡುವುದು ಸಹಜ, ಅಂಥ ಜನರಿರುವ ಊರಿಗೆ ಊರೇ ಮನಿದರೂ ನಮ್ಮನ್ನು ಎಂತೂ ಮಾಡಲಾಗದು ,  ನಮ್ಮನ್ನು...