Posts

Showing posts from January, 2022

ಮನದೊಡೆಯ ಮಹಾದೇವ, ಅಕ್ಕನಾಗಲಾಂಬಿಕೆಯವರ ವಚನದ ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಮನದೊಡೆಯ ಮಹಾದೇವ ಮನವ ನೋಡಿಹೆನೆಂದು ಮನುಜರ ಕೈಯಿಂದ ಒಂದೊಂದ ನುಡಿಸುವನು . ಇದಕ್ಕೆ ಕಳವಳಿಸದಿರು ಮನವೆ , ಕಾತರಿಸದಿರು ತನುವೆ , ನಿಜವ ಮರೆಯದಿರು ಕಂಡಾ , ನಿಶ್ಚಿಂತನಾಗಿರು ಮನವೆ . # ಬಸವಣ್ಣಪ್ರಿಯ _ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನು ಒಂದು ಬೊಟ್ಟಿನಲ್ಲಿ ತೊಡೆವನು . ✍🏻 -: # ವೀರಮಾತೆ ಅಕ್ಕನಾಗಲಾಂಬಿಕೆಯವರು .                              # ಭಾವಾರ್ಥ -: ಮನದ  ಒಡೆಯನಾದ ನಿರಾಕಾರ ಸೃಷ್ಟಿಕರ್ತನಾದ ಮಹಾದೇವನು ,  ನಿನ್ನ ಮನವು ಪರಿಪಕ್ವವಾಗಿದೆಯೊ   ಇಲ್ಲಯೊ ,  ಎಂದು ನೋಡಲು  ಈ  ಲೋಕದ ಜನರಿಂದ ಒಂದೊಂದು ರೀತಿಯಾಗಿ ನುಡಿಸುತ್ತಾನೆ ,  ಒಬ್ಬರು ಬೈದರೆ ಮತ್ತೊಬ್ಬರು ಹೊಗಳುವಂತೆ ,  ಹೀಗೇ ಒಬ್ಬೊಬ್ಬರಿಂದ ಒಂದೊಂದ ನುಡಿಸಿ .  ನಿನ್ನ ಮನಸ್ಸಿನ ದೃಢತೆಯನ್ನು ಪರೀಕ್ಷಿಸುತ್ತಾನೆ , ಇದಕ್ಕೆ ನೀನು ಸೋತು ಕಳವಳಗೊಳ್ಳದಿರು ಮನವೆ ,  ಏನಾಗುವುದೊ ,  ಎಂತಾಗುವುದೊ ಎಂದು ಕಾತರಿಸದಿರು ತನುವೆ ,  ಸ್ತುತಿಸುವರು ನಿಂದಿಸುವರು   ವಂದಿಸುವರು   ಎಲ್ಲರೂ ನನ್ನವರೆ‌ ,  ನನ್ನ ಒಳಿತಿಗಾಗಿ ಬಂದವರು ಎಂದು ತಿಳಿಯಬೇಕು ಮನವೆ, ‘ಅದ...

‘ಕಾಯಕವೇ ಪ್ರಾಣವಾದ ಮೇದಾರ ಕೇತಯ್ಯ ಶರಣರು’ ವಿಶೇಷ ಲೇಖನ-; ಲೋಕೇಶ್_ಎನ್_ಮಾನ್ವಿ.

Image
  ಶ್ರೀಗುರುಬಸವಲಿಂಗಾಯ ನಮಃ ‘ ಕಾಯಕವೇ ಪ್ರಾಣವಾದ ಮೇದಾರ ಕೇತಯ್ಯ ಶರಣರು ’ ಬಸವಯುಗದ ಧೃವತಾರೆ ಕಾಯಕವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಕಾಯಕ ಜೀವಿ   ಬಸವಣ್ಣನವರ ಜೀವಪರ ಸಾಮಾಜಿಕ ಸೈಕ್ಷಣಿಕ ಹೋರಾಟಕ್ಕೆ ಮನಸೋತು ಬಂದ ಮೇರು ವ್ಯಕ್ತಿತ್ವವೇ ಶಿವಶರಣ ಮೇದಾರ ಕೇತಯ್ಯನವರು . ಇವರು ಬಸವಣ್ಣನಿಂದ ಪ್ರಭಾವಿತರಾಗಿ ಅತ್ಯಂತ ಉತ್ಸಾಹಿಗಳಾಗಿ ಶರಣರ ಚಳುವಳಿಯಲ್ಲಿ ಪಾಲ್ಗೊಂಡವರು ಕೇತಯ್ಯ ಶರಣರು . ಇವರು ಬಸವಣ್ಣನವರನ್ನು ಗುರುವಾಗಿ ಸ್ವೀಕರಿಸಿದವರು . ಬಸವಣ್ಣನವರ ಪ್ರಭಾವದಿಂದ ಗುರು - ಲಿಂಗ - ಜಂಗಮದಲ್ಲೇ ತನ್ನ ನಿಜಸುಖವನ್ನು ಕಂಡವರು . ಭಕ್ತರಾಗಿ ಶರಣರಾಗಿ   ಕಾಯಕದಲ್ಲೇ ಕೈಲಾಸವನ್ನು ಕಂಡವನು . ಶರಣರ ತತ್ತ್ವಗಳಾದ ದಯೆ ಕರುಣೆ ಕಾಯಕ ದಾಸೋಹ ತತ್ತ್ವಗಳನ್ನು   ಅನುಷ್ಠಾನದಲ್ಲಿ ತಂದವರು ಶರಣ ಮೇದಾರ ಕೇತಯ್ಯನವರು . ಸತ್ಯಶುದ್ಧ ಕಾಯಕ ಜೀವಿಯಾಗಿ ಜಂಗಮ ಪ್ರೇಮಿಗಳಾಗಿ ವಚನಕಾರರಾಗಿ ಅನುಭವ ಮಂಟಪದ ೭೭೦ ಅಮರಗಣಂಗಳಲ್ಲಿ ಇವರೂ ಒಬ್ಬರಾಗಿದ್ದರು . ಇವರ ಜೀವನವೇ ಒಂದು ಸತ್ಯಶುದ್ಧ ಕಾಯಕ ಸಂದೇಶವಾಗಿದೆ . ಇವರ ಜೀವನದ ಕುರಿತ ಜನ ಮಾನಸದಲ್ಲಿರುವ ಚರಿತ್ರೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುವೆ . ಮೇದರ ಕೇತಯ್ಯ ಶರಣರು ಬೇಲೂರಿನಲ್ಲಿ  ಬಿದಿರು  ಕಾಯಕ ಮಾಡುತ್ತಾ , ಬಂದ ಹಣದಿಂದ ದಾಸ...

‘ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ ತೊರೆಯಿಂ ಭೋ, ತೊರೆಯಿಂ ಭೋ ಪರನಾರಿಯರ ಸಂಗವ’ ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ, ಇವರಿಂದ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ತೊರೆಯ ಮೀವ ಅಣ್ಣಗಳಿರಾ , ತೊರೆಯ ಮೀವ ಸ್ವಾಮಿಗಳಿರಾ ತೊರೆಯಿಂ ಭೋ , ತೊರೆಯಿಂ ಭೋ ಪರನಾರಿಯರ ಸಂಗವ ತೊರೆಯಿಂ ಭೋ ! ಪರಧನದಾಮಿಷವ ತೊರೆಯಿಂ ಭೋ ! ಇವ ತೊರೆಯದೆ ಹೋಗಿ ತೊರೆಯ ಮಿಂದಡೆ ಬರುದೊರೆ ಹೋಹುದು , ಕೂಡಲಸಂಗಮದೇವಾ . ✍🏻 -:# ವಿಶ್ವಗುರು _ ಬಸವಣ್ಣನವರು ,                  # ಭಾವಾರ್ಥ -; # ತೊರೆಯ _ ಮೀವ _ ಅಣ್ಣಗಳಿರಾ , # ತೊರೆಯ _ ಮೀವ _ ಸ್ವಾಮಿಗಳಿರಾ , ಜೀವನದಲ್ಲಿ ಅಜ್ಞಾನದಿಂದ ಮಾಡಿದ ಪಾಪ ಪ್ರಾಯಶ್ಚಿತ್ತವಾಗಿ ಪುಣ್ಯ ಲಭಿಸುತ್ತದೆ ಎಂದು , ಕೆರೆ ತೊರೆ ಹಳ್ಳ ಬಾವಿಗಳಲ್ಲಿ ಮಿಂದು ಬರುವ ಅಣ್ಣಂದಿರಾ . ತೀರ್ಥಕ್ಷೇತ್ರ ಪುಣ್ಯನದಿ ಎಂದು ಪುಣ್ಯಸ್ನಾನವೆಂದು ಮಿಂದು ಬರುವ ಸ್ವಾಮಿಗಳಿರಾ . # ತೊರೆಯಿಂ _ ಭೋ , # ತೊರೆಯಿಂ _ ಭೋ # ಪರನಾರಿಯರ _ ಸಂಗವ _ ತೊರೆಯಿಂ _ ಭೋ ! ಕೆರೆ ತೊರೆಯ ನೀರಲ್ಲಿ ಮುಳುಗೇಳುವ ಮುನ್ನ ಕೇಳಿರಿಲ್ಲಿ ,  ಕರೆಯಲ್ಲಿ ನೀರಲ್ಲಿ ಮಿಂದರೆ ತಲೆಯ ತುರಿಕೆ ಹೋಗುವುದಲ್ಲದೆ ,  ನಿನ್ನ ಅವಗುಣ ಕಳೆಯುವುದಿಲ್ಲ ,  ನಿನ್ನ ದುರ್ನಡತೆ ಹೋಗುವುದಿಲ್ಲ ,  ನಿನ್ನೊಳಗಿನ ಆಸೆ   ಆಮಿಷ   ರೋಷ ವಿಷಯಾದಿಗಳು ತ್ಯಜಿಸಬೇಕು ,  ಪರನಾರಿಯ ಸಂಗವನ್ನು ತೊರೆಯಬೇಕು ,  ಪರನಾರಿ ಯನ್ನು...