ಮನದೊಡೆಯ ಮಹಾದೇವ, ಅಕ್ಕನಾಗಲಾಂಬಿಕೆಯವರ ವಚನದ ವಿಶ್ಲೇಷಣೆ-; ಲೋಕೇಶ್_ಎನ್_ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ
ಮನದೊಡೆಯ ಮಹಾದೇವ ಮನವ ನೋಡಿಹೆನೆಂದು
ಮನುಜರ ಕೈಯಿಂದ ಒಂದೊಂದ ನುಡಿಸುವನು.
ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ತನುವೆ,
ನಿಜವ ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ.
#ಬಸವಣ್ಣಪ್ರಿಯ_ಚೆನ್ನಸಂಗಯ್ಯನು
ಬೆಟ್ಟದನಿತಪರಾಧವನು ಒಂದು ಬೊಟ್ಟಿನಲ್ಲಿ ತೊಡೆವನು.
✍🏻 -: #ವೀರಮಾತೆ ಅಕ್ಕನಾಗಲಾಂಬಿಕೆಯವರು.
#ಭಾವಾರ್ಥ-:
ಮನದ ಒಡೆಯನಾದ ನಿರಾಕಾರ ಸೃಷ್ಟಿಕರ್ತನಾದ ಮಹಾದೇವನು, ನಿನ್ನ ಮನವು ಪರಿಪಕ್ವವಾಗಿದೆಯೊ ಇಲ್ಲಯೊ, ಎಂದು ನೋಡಲು ಈ ಲೋಕದ ಜನರಿಂದ ಒಂದೊಂದು ರೀತಿಯಾಗಿ ನುಡಿಸುತ್ತಾನೆ, ಒಬ್ಬರು ಬೈದರೆ ಮತ್ತೊಬ್ಬರು ಹೊಗಳುವಂತೆ, ಹೀಗೇ ಒಬ್ಬೊಬ್ಬರಿಂದ ಒಂದೊಂದ ನುಡಿಸಿ.
ನಿನ್ನ ಮನಸ್ಸಿನ ದೃಢತೆಯನ್ನು ಪರೀಕ್ಷಿಸುತ್ತಾನೆ, ಇದಕ್ಕೆ ನೀನು ಸೋತು ಕಳವಳಗೊಳ್ಳದಿರು ಮನವೆ, ಏನಾಗುವುದೊ, ಎಂತಾಗುವುದೊ ಎಂದು ಕಾತರಿಸದಿರು ತನುವೆ, ಸ್ತುತಿಸುವರು ನಿಂದಿಸುವರು ವಂದಿಸುವರು ಎಲ್ಲರೂ ನನ್ನವರೆ, ನನ್ನ ಒಳಿತಿಗಾಗಿ ಬಂದವರು ಎಂದು ತಿಳಿಯಬೇಕು ಮನವೆ,
‘ಅದು ಹೇಗೆಂದರೆ’
ಅನ್ನವು ಪರಿಪಕ್ವವಾಗಿ ಬೆಂದಿದೆಯೊ ಇಲ್ಲವೊ ಎಂದು ನೋಡಲು, ಒಂದಗುಳು ಅನ್ನವನ್ನು ಒತ್ತಿನೋಡಿ ಪರೀಕ್ಷಿಸುವಂತೆ.
ಚಿನ್ನವೂ ಕೂಡ ಕುಲುಮೆಯಲ್ಲಿ ಸುಟ್ಟು ಬೆಂದು ಪೆಟ್ಟು ತಿಂದ ನಂತರವೇ
ತನ್ನ ಮಹತ್ವವನ್ನು ಹೆಚ್ಚಿಸಿಕೊಳ್ಳುವಂತೆ, ನಿನಗೂ ಕೂಡ ಸ್ತುತಿ-ನಿಂದೆಗಳು
ಮಾನ ಅಪಮಾನಗಳೆಂಬ ಪೆಟ್ಟು ಬಿದ್ದಿದ್ದೂ ತಲೆಕೆಡಿಸಿಕೊಳ್ಳದಿರು
#ನಿಜವ_ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ.
ನೋವು ನಲಿವುಗಳನ್ನು ಏಕರೀತಿಯನಲ್ಲಿ ಸ್ವೀಕರಿಸಿ ನಿಶ್ಚಿಂತನಾಗಿರು ಮನವೆ, ನಿನ್ನ ವ್ಯಕ್ತಿತ್ವದ ಪರೀಕ್ಷೆಯಲ್ಲಿ ತಾಳ್ಮೆಯಿಂದ ಉತ್ತೀರ್ಣನಾಗು,
#ಬಸವಣ್ಣಪ್ರಿಯ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನು ಒಂದು ಬೊಟ್ಟಿನಲ್ಲಿ ತೊಡೆವನು. ಸೃಷ್ಟಿಕರ್ತನ ಪರೀಕ್ಷೆಯಲಿ ನೀನು ಉತ್ತೀರ್ಣನಾದಾಗ, ನಿನ್ನ ಮೇಲೆ ಬಂದ ಬೆಟ್ಟದಷ್ಟು ಅಪರಾಧಿಗಳು
ಸ್ತುತಿ-ನಿಂದೆಗಳು ಎಲ್ಲವನೂ
ಒಂದೇ ಒಂದು ಕ್ಷಣದಲ್ಲಿ ಬೊಟ್ಟಿನಿಂದ ಸರಿಸಿದಂತೆ ದೂರಮಾಡುತ್ತಾನೆ,
ಜಗವೇ ನಿನ್ನ ಕೊಂಡಾಡುವಂತೆ ನಿನ್ನ ಕೀರ್ತಿಯು ಮಹತ್ವ ಪಡೆಯುತ್ತದೆ,
ಆದ ಕಾರಣ ಎಂದೂ ಕೂಡ ನೀನು ಹತಾಶನಾಗದೆ ಸದಾ ಉತ್ಸುಕನಾಗಿರು ಎಂಬುದಾಗಿ #ವೀರಮಾತೆ_ಅಕ್ಕನಾಗಲಾಂಬಿಕೆಯವರು ತಿಳಿಸುತ್ತಾರೆ.👏🏻👏🏻
✍🏻 ವಿಶ್ಲೇಷಣೆ -: #ಲೋಕೇಶ್ ಎನ್ ಮಾನ್ವಿ.
Comments
Post a Comment