Posts

Showing posts from December, 2021

ನೀರಿಂಗೆ ನೈದಿಲೆಯೆ ಶೃಂಗಾರ, ಸಮುದ್ರಕ್ಕೆ ತೆರೆಯೆ ಶೃಂಗಾರ, ವಿಶ್ವಗುರು ಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ನೀರಿಂಗೆ ನೈದಿಲೆಯೆ ಶೃಂಗಾರ , ಸಮುದ್ರಕ್ಕೆ ತೆರೆಯೆ ಶೃಂಗಾರ , ನಾರಿಗೆ ಗುಣವೆ ಶೃಂಗಾರ , ಗಗನಕ್ಕೆ ಚಂದ್ರಮನೆ ಶೃಂಗಾರ , ನಮ್ಮ # ಕೂಡಲಸಂಗನ ಶರಣರ ನೊಸಲ ವಿಭೂತಿಯೆ ಶೃಂಗಾರ . ✍🏾-;ವಿಶ್ವಗುರು ಬಸವಣ್ಣನವರು.                 ಭಾವಾರ್ಥ -; ‘ ನೀರಿಂಗೆ ನೈದಿಲೆಯೆ ಶೃಂಗಾರ ’ ಬಾಹ್ಯ -; ನೀರಿನ ಅಂದ ಚೆಂದಕ್ಕೆ ಅದರಲ್ಲಿ ಅರಳಿದ ತಾವರೆಯ ಹೂ ಮತ್ತಷ್ಟು ಮೆರುಗು ನೀಡುವಂತೆ , ಆಂತರಿಕ -: ನಿಂತ ನೀರಂತೆ ಲೌಕಿಕದ ಚಿಂತೆಯಲ್ಲಿರುವ ಮನದಲ್ಲಿ  ಅರಿವೆಂಬ ತಾವರೆ ಅರಳಿ ನಿಂತರೆ ಬದುಕಿಗೆ ಅದುವೇ   ಶೃಂಗಾರ ಸೊಗಸು .👌 ‘ ಸಮುದ್ರಕ್ಕೆ ತೆರೆಯೆ ಶೃಂಗಾರ ’ ಬಾಹ್ಯ -; ಹಲವು ನದಿಗಳ ಸಂಗಮವಾದ   ಸಮುದ್ರವು ಕೆರೆಯ ನೀರಂತೆ ಸುಮ್ಮನಿದ್ದರೆ ಏನು ಚೆಂದ ? ಅದು ಚಂದಲ್ಲ , ಸಮುದ್ರಕ್ಕೆ ತುಂಬಿ ತುಳುಕುವ ಅಲೆಗಳ ನರ್ತನವೇ   ಬಲು ಸುಂದರ .. 👌🏻 ಆಂತರಿಕ -; ಜೀವನವು ಒಂದು ಮಹಾನ್ ಸಾಗರವಿದ್ದಂತೆ , ಇಲ್ಲಿ ಕಷ್ಟಸುಖ   ಲಾಭನಷ್ಟ   ಸ್ತುತಿನಿಂದೆಗಳೆಂಬ ನೆರೆತೊರೆಗಳು ಬಂದಾಗ ಗಟ್ಟಿತನದಿಂದ ಎದುರಿಸಿ ನಿಂತಾಗಲೇ ಆ ಬಾಳಿಗೊಂದು ಶೃಂಗಾರ .👌 ‘ ನಾರಿಗೆ ಗುಣವೇ ಶೃಂಗಾರ ' ಸೌಂದರ್ಯ ಪ್ರಿಯೆಯಾದ ನಾರಿಯರಿಗೆ ಅವ್ಯಾವುದೇ ...

ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ, ಗ್ರಹಣ-ಸಂಕ್ರಾಂತಿಯಿಂದ ವೆಗ್ಗಳ, ವಿಶ್ವಗುರು ಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ-;#ಲೋಕೇಶ್ ಎನ್ ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ, ಗ್ರಹಣ-ಸಂಕ್ರಾಂತಿಯಿಂದ ವೆಗ್ಗಳ, ಏಕಾದಶಿ-ವ್ಯತೀಪಾತದಿಂದ ವೆಗ್ಗಳ, ಸೂಕ್ಷ್ಮಶಿವಪಥವನರಿದವಂಗೆ ಹೋಮ-ನೇಮ-ಜಪ-ತಪದಿಂದ ವೆಗ್ಗಳ, ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ. ✍🏾-; ವಿಶ್ವಗುರು_ಬಸವಣ್ಣನವರು. 👆ಮೇಲಿನ ವಚನದಲ್ಲಿ ವಿಶ್ವಗುರು ಬಸವಣ್ಣನವರು ಹೇಳಿದಂತೆ.. ಇಪ್ಪತ್ತು ನಾಲ್ಕು ತಿಥಿಗಳು, ಗ್ರಹಣ ಸಂಕ್ರಾಂತಿಗಳು, ಏಕಾದಶಿ, ಅಷ್ಟಮಿ-ನವಮಿಗಳು, ಹೋಮ-ನೇಮ-ಜಪ-ತಪಗಳು ಇವುಗಳ್ಯಾವು  ಇಷ್ಟಲಿಂಗ ಧರಿಸಿದ ಶಿವಭಕ್ತನಿಗೆ ಕೇಡು ಮಾಡುವುದಿಲ್ಲ ಇದರ ದೋಷ ಶಿವಭಕ್ತರ ಕೂದಲು ಸಹ ಸೋಕುವುದಿಲ್ಲ, ತನ್ನ ಎದೆಯ ಮೇಲೆಯೇ ಸೃಷ್ಟಿಕರ್ತನ ಕುರುಹನ್ನು ಧರಿಸಿದ ಧೀರನು,ತನ್ನ ಹಣೆಯ ಮೇಲೆ ಶ್ರೀವಿಭೂತಿಯ ಪೂಸಿದ ವೀರನು, ಅದಕ್ಕೆ ಮಿಗಿಲಾಗಿ ಶಿವನ ಮರೆಯದೇ  ನೆನಯುವ ಭಕ್ತನ ಮನಸ್ಸಿದೆ, ಆ ಮನಸ್ಸಿನಲ್ಲೇ ಭಗವಂತನೂ ಇದ್ದಾನೆಂದರೆ,  ಈ ಯಾವ ಗ್ರಹಣ,ಸಂಕ್ರಾಂತಿ, ಏಕಾದಶಿ-ದ್ವಾದಶಿ, ಅಷ್ಟಮಿ-ನವಮಿ, ಹೋಮ-ನೇಮ-ಜಪ-ತಪಗಳಿಂದಲೂ ಶಿವಭಕ್ತರಾದವರನ್ನು ಏನೂ ಮಾಡಲು ಸಾಧ್ಯವಿಲ್ಲ, ಶರಣನ ಮೃದು ವಚನವೇ ಸಕಲ ಜಪತಪಂಗಳಿಗಿಂದ ಅಧಿಕ, ಶರಣನು ಸದುವಿನಯದಿಂದ ಸದಾಕಾಲ ಶಿವನ ಒಲುಮೆಯಲ್ಲಿರುತ್ತಾನೆ ಆದ ಕಾರಣ ಆತನ ಕಾಯವೇ ಕೈಲಾಸದಂತೆ ಎನ್ನುತ್ತಾರೆ ಅಪ್ಪಬಸವಣ್ಣನವರು..🙏🙏           ✍🏾 ವಿಶ್ಲೇಷಣೆ-;   #ಲೋಕೇಶ್_ಎನ್_ಮಾನ್ವಿ.🙏

‘ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ’ ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ ಶಿವ ಶಿವಾ ಎಂದೋದಿಸಯ್ಯಾ . ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು ಕೂಡಲಸಂಗಮದೇವಾ . ✍🏾-; ವಿಶ್ವಗುರು ಬಸವಣ್ಣನವರು .                       ಭಾವಾರ್ಥ - ನರಜನ್ಮದಲ್ಲಿ ನನ್ನನ್ನು   ಅತೀ ಚಿಕ್ಕದಾದ ಗಿಳಿ ಮರಿಯನ್ನಾಗಿ ಮಾಡಿ ಸಲಹುತ್ತ ಶಿವ ಶಿವ ಎಂದೋದಿಸಯ್ಯ ,  ಭಕ್ತಿಯೆಂಬ ಪಂಜರದಲ್ಲಿಕ್ಕಿ ಸಲಹು ಎನ್ನುತ್ತಾರೆ  ಬಸವಣ್ಣನವರು. ಇಲ್ಲಿ  ಅವರು ಹೇಳಿದ  ಪಂಜರವಾವುದು ,? ಗಿಳಿಯಾವುದು ,? ಎಂದು ತಿಳಿಯೋಣ ಬನ್ನಿ . ನಾವು ಸಾಕುವ ಗಿಳಿಗೆ ತಂತಿಯ ಪಂಚರವಿರುವಂತೆ , ಇಲ್ಲಿ ಬಸವಣ್ಣನವರು ಹೇಳಿದ  ಗಿಳಿಗೆ ಭಕ್ತಿಯೆಂಬ   ಪಂಜರ ,  ಇದು ದೇಹವನ್ನೇ ದೇಗುಲವಾಗಿಸುವ ಇನ್ನೊಂದು ಪರಿ , ಈ ದೇಹವು   ನರ_ಮಾಂಸ ಪಿಂಡದಿಂದ ರಚನೆಯಾಗಿದೆ ,ಈ  ಮಾಂಸ ಪಿಂಡವನ್ನು  ಮಂತ್ರಪಿಂಡವಾಗಿಸುವ ಪರಿ ಇದು.    ತನುಮನದಲ್ಲಿ ನಾನು ನನ್ನದೆಂಬ ಮೋಹದ ಜಾಲವನ್ನು ಬಿಡಿಸಿ, ಭಕ್ತಿಯ ಜಾಲದಲ್ಲಿರಿಸಿ, ದೇಹ ಅಹಂಕಾರ ಕಳೆದು   ಈ ದೇಹವನ್ನೇ ಭಕ್ತಿಯ ಪಂಜರವಾಗಿಸಿ , ಆತ್ಮವೆಂಬುದನ್ನು ಗಿಳಿಯಾಗಿಸಿ  ‘ ಶಿವ ಶಿವ ’ ಎಂದೋದುವಂತೆ  ಮಾಡಿ ,  ಸದಾ ...