‘ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ’ ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.

 ಓಂ ಶ್ರೀಗುರುಬಸವಲಿಂಗಾಯ ನಮಃ


ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ
ಶಿವ ಶಿವಾ ಎಂದೋದಿಸಯ್ಯಾ. ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು
ಕೂಡಲಸಂಗಮದೇವಾ.



✍🏾-; ವಿಶ್ವಗುರು ಬಸವಣ್ಣನವರು.

                     ಭಾವಾರ್ಥ-



ನರಜನ್ಮದಲ್ಲಿ ನನ್ನನ್ನು   ಅತೀ ಚಿಕ್ಕದಾದ ಗಿಳಿ ಮರಿಯನ್ನಾಗಿ ಮಾಡಿ ಸಲಹುತ್ತ ಶಿವ ಶಿವ ಎಂದೋದಿಸಯ್ಯಭಕ್ತಿಯೆಂಬ ಪಂಜರದಲ್ಲಿಕ್ಕಿ ಸಲಹು ಎನ್ನುತ್ತಾರೆ ಬಸವಣ್ಣನವರು.

ಇಲ್ಲಿ ಅವರು ಹೇಳಿದ ಪಂಜರವಾವುದು,? ಗಿಳಿಯಾವುದು,? ಎಂದು ತಿಳಿಯೋಣ ಬನ್ನಿ.


ನಾವು ಸಾಕುವ ಗಿಳಿಗೆ ತಂತಿಯ ಪಂಚರವಿರುವಂತೆ,ಇಲ್ಲಿ ಬಸವಣ್ಣನವರು ಹೇಳಿದ ಗಿಳಿಗೆ ಭಕ್ತಿಯೆಂಬ  ಪಂಜರಇದು ದೇಹವನ್ನೇ ದೇಗುಲವಾಗಿಸುವ ಇನ್ನೊಂದು ಪರಿ, ಈ ದೇಹವು ನರ_ಮಾಂಸ ಪಿಂಡದಿಂದ ರಚನೆಯಾಗಿದೆ,ಈ ಮಾಂಸ ಪಿಂಡವನ್ನು ಮಂತ್ರಪಿಂಡವಾಗಿಸುವ ಪರಿ ಇದು.  


ತನುಮನದಲ್ಲಿ ನಾನು ನನ್ನದೆಂಬ ಮೋಹದ ಜಾಲವನ್ನು ಬಿಡಿಸಿ, ಭಕ್ತಿಯ ಜಾಲದಲ್ಲಿರಿಸಿ, ದೇಹ ಅಹಂಕಾರ ಕಳೆದು   ದೇಹವನ್ನೇ ಭಕ್ತಿಯ ಪಂಜರವಾಗಿಸಿ, ಆತ್ಮವೆಂಬುದನ್ನು ಗಿಳಿಯಾಗಿಸಿ ‘ಶಿವ ಶಿವಎಂದೋದುವಂತೆ ಮಾಡಿಸದಾ ಕಾಲ ಆತ್ಮದರಿವನ್ನು ಜಾಗ್ರತವಾಗಿರಿಸಿ ಶಿವ ನಾಮಸ್ಮರಣೆಯೆಂಬ ಅಮೃತವನ್ನುಣಿಸಿ ಸಲಹು ಕೂಡಲಸಂಗಮದೇವಾ, ಎನ್ನುತ್ತಾರೆ ವಿಶ್ವಗುರು ಬಸವಣ್ಣನವರು.👏🏻👏🏻👏🏻


🙏🏻ಶರಣು ಶರಣಾರ್ಥಿಗಳೊಂದಿಗೆ🙏🏻

✍🏾-;#ಲೋಕೇಶ್_ಎನ್_ಮಾನ್ವಿ.

Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.