ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ, ಗ್ರಹಣ-ಸಂಕ್ರಾಂತಿಯಿಂದ ವೆಗ್ಗಳ, ವಿಶ್ವಗುರು ಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ-;#ಲೋಕೇಶ್ ಎನ್ ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ
ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ, ಗ್ರಹಣ-ಸಂಕ್ರಾಂತಿಯಿಂದ ವೆಗ್ಗಳ, ಏಕಾದಶಿ-ವ್ಯತೀಪಾತದಿಂದ ವೆಗ್ಗಳ, ಸೂಕ್ಷ್ಮಶಿವಪಥವನರಿದವಂಗೆ ಹೋಮ-ನೇಮ-ಜಪ-ತಪದಿಂದ ವೆಗ್ಗಳ, ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ.
✍🏾-;ವಿಶ್ವಗುರು_ಬಸವಣ್ಣನವರು.
👆ಮೇಲಿನ ವಚನದಲ್ಲಿ ವಿಶ್ವಗುರು ಬಸವಣ್ಣನವರು ಹೇಳಿದಂತೆ..
ಇಪ್ಪತ್ತು ನಾಲ್ಕು ತಿಥಿಗಳು, ಗ್ರಹಣ ಸಂಕ್ರಾಂತಿಗಳು,
ಏಕಾದಶಿ, ಅಷ್ಟಮಿ-ನವಮಿಗಳು,
ಹೋಮ-ನೇಮ-ಜಪ-ತಪಗಳು ಇವುಗಳ್ಯಾವು
ಇಷ್ಟಲಿಂಗ ಧರಿಸಿದ ಶಿವಭಕ್ತನಿಗೆ ಕೇಡು ಮಾಡುವುದಿಲ್ಲ ಇದರ ದೋಷ ಶಿವಭಕ್ತರ ಕೂದಲು ಸಹ ಸೋಕುವುದಿಲ್ಲ,
ತನ್ನ ಎದೆಯ ಮೇಲೆಯೇ ಸೃಷ್ಟಿಕರ್ತನ ಕುರುಹನ್ನು ಧರಿಸಿದ ಧೀರನು,ತನ್ನ ಹಣೆಯ ಮೇಲೆ ಶ್ರೀವಿಭೂತಿಯ ಪೂಸಿದ ವೀರನು, ಅದಕ್ಕೆ ಮಿಗಿಲಾಗಿ ಶಿವನ ಮರೆಯದೇ ನೆನಯುವ ಭಕ್ತನ ಮನಸ್ಸಿದೆ, ಆ ಮನಸ್ಸಿನಲ್ಲೇ ಭಗವಂತನೂ ಇದ್ದಾನೆಂದರೆ, ಈ ಯಾವ ಗ್ರಹಣ,ಸಂಕ್ರಾಂತಿ, ಏಕಾದಶಿ-ದ್ವಾದಶಿ, ಅಷ್ಟಮಿ-ನವಮಿ, ಹೋಮ-ನೇಮ-ಜಪ-ತಪಗಳಿಂದಲೂ ಶಿವಭಕ್ತರಾದವರನ್ನು ಏನೂ ಮಾಡಲು ಸಾಧ್ಯವಿಲ್ಲ, ಶರಣನ ಮೃದು ವಚನವೇ ಸಕಲ ಜಪತಪಂಗಳಿಗಿಂದ ಅಧಿಕ, ಶರಣನು ಸದುವಿನಯದಿಂದ ಸದಾಕಾಲ ಶಿವನ ಒಲುಮೆಯಲ್ಲಿರುತ್ತಾನೆ ಆದ ಕಾರಣ ಆತನ ಕಾಯವೇ ಕೈಲಾಸದಂತೆ ಎನ್ನುತ್ತಾರೆ ಅಪ್ಪಬಸವಣ್ಣನವರು..🙏🙏
✍🏾ವಿಶ್ಲೇಷಣೆ-; #ಲೋಕೇಶ್_ಎನ್_ಮಾನ್ವಿ.🙏
Comments
Post a Comment