ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ, ಗ್ರಹಣ-ಸಂಕ್ರಾಂತಿಯಿಂದ ವೆಗ್ಗಳ, ವಿಶ್ವಗುರು ಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ-;#ಲೋಕೇಶ್ ಎನ್ ಮಾನ್ವಿ.

 ಓಂ ಶ್ರೀಗುರುಬಸವಲಿಂಗಾಯ ನಮಃ


ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ, ಗ್ರಹಣ-ಸಂಕ್ರಾಂತಿಯಿಂದ ವೆಗ್ಗಳ, ಏಕಾದಶಿ-ವ್ಯತೀಪಾತದಿಂದ ವೆಗ್ಗಳ, ಸೂಕ್ಷ್ಮಶಿವಪಥವನರಿದವಂಗೆ ಹೋಮ-ನೇಮ-ಜಪ-ತಪದಿಂದ ವೆಗ್ಗಳ, ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ.



✍🏾-;ವಿಶ್ವಗುರು_ಬಸವಣ್ಣನವರು.

👆ಮೇಲಿನ ವಚನದಲ್ಲಿ ವಿಶ್ವಗುರು ಬಸವಣ್ಣನವರು ಹೇಳಿದಂತೆ..


ಇಪ್ಪತ್ತು ನಾಲ್ಕು ತಿಥಿಗಳು, ಗ್ರಹಣ ಸಂಕ್ರಾಂತಿಗಳು,

ಏಕಾದಶಿ, ಅಷ್ಟಮಿ-ನವಮಿಗಳು,

ಹೋಮ-ನೇಮ-ಜಪ-ತಪಗಳು ಇವುಗಳ್ಯಾವು 

ಇಷ್ಟಲಿಂಗ ಧರಿಸಿದ ಶಿವಭಕ್ತನಿಗೆ ಕೇಡು ಮಾಡುವುದಿಲ್ಲ ಇದರ ದೋಷ ಶಿವಭಕ್ತರ ಕೂದಲು ಸಹ ಸೋಕುವುದಿಲ್ಲ,

ತನ್ನ ಎದೆಯ ಮೇಲೆಯೇ ಸೃಷ್ಟಿಕರ್ತನ ಕುರುಹನ್ನು ಧರಿಸಿದ ಧೀರನು,ತನ್ನ ಹಣೆಯ ಮೇಲೆ ಶ್ರೀವಿಭೂತಿಯ ಪೂಸಿದ ವೀರನು, ಅದಕ್ಕೆ ಮಿಗಿಲಾಗಿ ಶಿವನ ಮರೆಯದೇ  ನೆನಯುವ ಭಕ್ತನ ಮನಸ್ಸಿದೆ, ಆ ಮನಸ್ಸಿನಲ್ಲೇ ಭಗವಂತನೂ ಇದ್ದಾನೆಂದರೆ,  ಈ ಯಾವ ಗ್ರಹಣ,ಸಂಕ್ರಾಂತಿ, ಏಕಾದಶಿ-ದ್ವಾದಶಿ, ಅಷ್ಟಮಿ-ನವಮಿ, ಹೋಮ-ನೇಮ-ಜಪ-ತಪಗಳಿಂದಲೂ ಶಿವಭಕ್ತರಾದವರನ್ನು ಏನೂ ಮಾಡಲು ಸಾಧ್ಯವಿಲ್ಲ, ಶರಣನ ಮೃದು ವಚನವೇ ಸಕಲ ಜಪತಪಂಗಳಿಗಿಂದ ಅಧಿಕ, ಶರಣನು ಸದುವಿನಯದಿಂದ ಸದಾಕಾಲ ಶಿವನ ಒಲುಮೆಯಲ್ಲಿರುತ್ತಾನೆ ಆದ ಕಾರಣ ಆತನ ಕಾಯವೇ ಕೈಲಾಸದಂತೆ ಎನ್ನುತ್ತಾರೆ ಅಪ್ಪಬಸವಣ್ಣನವರು..🙏🙏


          ✍🏾ವಿಶ್ಲೇಷಣೆ-; #ಲೋಕೇಶ್_ಎನ್_ಮಾನ್ವಿ.🙏






Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.