ನೀರಿಂಗೆ ನೈದಿಲೆಯೆ ಶೃಂಗಾರ, ಸಮುದ್ರಕ್ಕೆ ತೆರೆಯೆ ಶೃಂಗಾರ, ವಿಶ್ವಗುರು ಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.
ಓಂ ಶ್ರೀಗುರುಬಸವಲಿಂಗಾಯ ನಮಃ
ನೀರಿಂಗೆ ನೈದಿಲೆಯೆ ಶೃಂಗಾರ,
ಸಮುದ್ರಕ್ಕೆ ತೆರೆಯೆ ಶೃಂಗಾರ,
ನಾರಿಗೆ ಗುಣವೆ ಶೃಂಗಾರ,
ಗಗನಕ್ಕೆ ಚಂದ್ರಮನೆ ಶೃಂಗಾರ,
ನಮ್ಮ #ಕೂಡಲಸಂಗನ ಶರಣರ
ನೊಸಲ ವಿಭೂತಿಯೆ ಶೃಂಗಾರ.
✍🏾-;ವಿಶ್ವಗುರು ಬಸವಣ್ಣನವರು.
ಭಾವಾರ್ಥ-;
‘ನೀರಿಂಗೆ ನೈದಿಲೆಯೆ ಶೃಂಗಾರ’
ಬಾಹ್ಯ-; ನೀರಿನ ಅಂದ ಚೆಂದಕ್ಕೆ ಅದರಲ್ಲಿ ಅರಳಿದ ತಾವರೆಯ ಹೂ ಮತ್ತಷ್ಟು ಮೆರುಗು ನೀಡುವಂತೆ,
ಆಂತರಿಕ-: ನಿಂತ ನೀರಂತೆ ಲೌಕಿಕದ ಚಿಂತೆಯಲ್ಲಿರುವ ಮನದಲ್ಲಿ ಅರಿವೆಂಬ ತಾವರೆ ಅರಳಿ ನಿಂತರೆ ಬದುಕಿಗೆ ಅದುವೇ ಶೃಂಗಾರ ಸೊಗಸು.👌
‘ಸಮುದ್ರಕ್ಕೆ ತೆರೆಯೆ ಶೃಂಗಾರ’
ಬಾಹ್ಯ-; ಹಲವು ನದಿಗಳ ಸಂಗಮವಾದ ಸಮುದ್ರವು ಕೆರೆಯ ನೀರಂತೆ ಸುಮ್ಮನಿದ್ದರೆ ಏನು ಚೆಂದ ? ಅದು ಚಂದಲ್ಲ,
ಸಮುದ್ರಕ್ಕೆ ತುಂಬಿ ತುಳುಕುವ ಅಲೆಗಳ ನರ್ತನವೇ ಬಲು ಸುಂದರ..👌🏻
ಆಂತರಿಕ-; ಜೀವನವು ಒಂದು ಮಹಾನ್ ಸಾಗರವಿದ್ದಂತೆ,
ಇಲ್ಲಿ ಕಷ್ಟಸುಖ ಲಾಭನಷ್ಟ ಸ್ತುತಿನಿಂದೆಗಳೆಂಬ ನೆರೆತೊರೆಗಳು ಬಂದಾಗ ಗಟ್ಟಿತನದಿಂದ ಎದುರಿಸಿ ನಿಂತಾಗಲೇ ಆ ಬಾಳಿಗೊಂದು ಶೃಂಗಾರ.👌
‘ನಾರಿಗೆ ಗುಣವೇ ಶೃಂಗಾರ'
ಸೌಂದರ್ಯ ಪ್ರಿಯೆಯಾದ ನಾರಿಯರಿಗೆ
ಅವ್ಯಾವುದೇ ಬಾಹ್ಯ ಆಡಂಬರದ ಒಡವೆಗಳಿಗಿಂತಲೂ ಅವಳ ಆಂತರಿಕ ಮಾತೃಹೃದಯದ ವಾತ್ಸಲ್ಯವೇ ಹೆಣ್ಣಿಗೆ ಬಲು ಚೆಂದದ ಶೃಂಗಾರವಾಗಿದೆ,💗
‘ಗಗನಕ್ಕೆ ಚಂದ್ರಮನೆ ಶೃಂಗಾರ’
ಬಾಹ್ಯ-; ಕೊನೆಯಿಲ್ಲದ ವಿಶಾಲ ನೀಲಿ ಆಕಾಶಕ್ಕೆ ಬೆಳ್ಳಿಚುಕ್ಕಿಗಳ ಮಧ್ಯದ ಚಂದ್ರಮನೆ ಬಲು ಚೆಂದದ ಶೃಂಗಾರ,
ಆಂತರಿಕ-; ಮನುಷ್ಯನ ಚಿತ್ತ ಮತ್ತು ಮನಸ್ಸು ಇವೆರಡೂ ಕೂಡ
ಗಗನದಂತೆ ವಿಶಾಲ,
ಒಂದರೆ ಕ್ಷಣದಲ್ಲಿ ಇಡೀ ಜಗತ್ತಿನ್ನೇ ತನ್ನೊಳಗೆ ಕಲ್ಪಿಸಿಕೊಳ್ಳಬಹುದು, ಆದರೆ ಈ ಮನಕ್ಕೆ ಚಂದ್ರಮನಂತಿರುವ ಶಾಂತ ಚಿತ್ತವಿದ್ದರೆ ಇಡೀ ಬದುಕೇ ಬೆಳದಿಂಗಳ ಶೃಂಗಾರದಂತೆ ಬಲು ಚೆಂದ.👌👌
‘#ಕೂಡಲಸಂಗನ ಶರಣರ ನೊಸಲ ವಿಭೂತಿಯೆ ಶೃಂಗಾರ’
ನಮ್ಮ ಶರಣರ ನೊಸಲಿನ ವಿಭೂತಿಯ ಮೂರು ಎಳೆಗಳು. ‘ತನು_ಮನ_ಧನ’
‘ತನು’ (ದೇಹ) ನಿರ್ಮೋಹವೆಂಬ ಅಗ್ನಿಯಲ್ಲಿ ಸುಟ್ಟು ಗಟ್ಟಿಗೊಂಡ ಒಂದು ಎಳೆ,
‘ಮನ'ನಿರಹಂಕಾರವೆಂಬ ಅಗ್ನಿಯಲ್ಲಿ ಸುಟ್ಟುಗಟ್ಟಿಗೊಂಡ ಎರಡನೆ ಎಳೆ,
‘ಧನ' ನಿರಾಪೇಕ್ಷೆಯೆಂಬ ಅಗ್ನಿಯಲ್ಲಿ ಸುಟ್ಟುಗಟ್ಟಿಗೊಂಡ ಮೂರನೇ ಎಳೆ,,
ಈ ‘ಸತ್_ಚಿತ್_ಆನಂದ’ ಅಕಾರ ಉಕಾರ ಮಕಾರ ಓಂಕಾರ ಸ್ವರೂಪವಾದ
ಸೃಷ್ಟಿ ಸ್ಥಿತಿ ಲಯದ ಪ್ರತೀಕ ಶ್ರೀವಿಭೂತಿಯನ್ನು ಧರಿಸಿದ ಶರಣರ ಮುಖದಲ್ಲಿ ಪ್ರಸನ್ನತೆಯ ಕಳೆ ತುಂಬಿರುತ್ತದೆ, ನಮ್ಮ ಕೂಡಲಸಂಗನ ಶರಣರ ನೊಸಲ ವಿಭೂತಿಯೆ ಶೃಂಗಾರ, 👌👌👌ಶ್ರೀವಿಭೂತಿಯೇ ಶರಣರ ಮುಖಸಜ್ಜೆಯ ಕಳೆ
ಎನ್ನುತ್ತಾರೆ ವಿಶ್ವಗುರು ಬಸವಣ್ಣನವರು.👏🏻👏🏻👏🏻
🙏🏻ಶರಣು ಶರಣಾರ್ಥಿಗಳೊಂದಿಗೆ🙏🏻
✍🏾ವಿಶ್ಲೇಷಣೆ-;#ಲೋಕೇಶ್_ಎನ್_ಮಾನ್ವಿ.
ನಿಮ್ಮ ಮೊಬೈಲ್ ನಂಬರ್ ಕಳಿಸಿ ಕೊಡಿ ಅಥವಾ ನಮ್ಮ ಮೊಬೈಲ್ 8123856595
ReplyDeleteತುಂಬಾ ಚನ್ನಾಗಿ ಭಾವರ್ಥ ಮೂಡಿ ಬಂದಿದೆ
ReplyDelete