ನೀರಿಂಗೆ ನೈದಿಲೆಯೆ ಶೃಂಗಾರ, ಸಮುದ್ರಕ್ಕೆ ತೆರೆಯೆ ಶೃಂಗಾರ, ವಿಶ್ವಗುರು ಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿ.

 ಓಂ ಶ್ರೀಗುರುಬಸವಲಿಂಗಾಯ ನಮಃ

ನೀರಿಂಗೆ ನೈದಿಲೆಯೆ ಶೃಂಗಾರ,

ಸಮುದ್ರಕ್ಕೆ ತೆರೆಯೆ ಶೃಂಗಾರ,

ನಾರಿಗೆ ಗುಣವೆ ಶೃಂಗಾರ,

ಗಗನಕ್ಕೆ ಚಂದ್ರಮನೆ ಶೃಂಗಾರ,


ನಮ್ಮ #ಕೂಡಲಸಂಗನ ಶರಣರ
ನೊಸಲ ವಿಭೂತಿಯೆ ಶೃಂಗಾರ.



✍🏾-;ವಿಶ್ವಗುರು ಬಸವಣ್ಣನವರು.

               ಭಾವಾರ್ಥ-;


ನೀರಿಂಗೆ ನೈದಿಲೆಯೆ ಶೃಂಗಾರ

ಬಾಹ್ಯ-; ನೀರಿನ ಅಂದ ಚೆಂದಕ್ಕೆ ಅದರಲ್ಲಿ ಅರಳಿದ ತಾವರೆಯ ಹೂ ಮತ್ತಷ್ಟು ಮೆರುಗು ನೀಡುವಂತೆ,

ಆಂತರಿಕ-: ನಿಂತ ನೀರಂತೆ ಲೌಕಿಕದ ಚಿಂತೆಯಲ್ಲಿರುವ ಮನದಲ್ಲಿ ಅರಿವೆಂಬ ತಾವರೆ ಅರಳಿ ನಿಂತರೆ ಬದುಕಿಗೆ ಅದುವೇ  ಶೃಂಗಾರ ಸೊಗಸು.👌


ಸಮುದ್ರಕ್ಕೆ ತೆರೆಯೆ ಶೃಂಗಾರ

ಬಾಹ್ಯ-; ಹಲವು ನದಿಗಳ ಸಂಗಮವಾದ  ಸಮುದ್ರವು ಕೆರೆಯ ನೀರಂತೆ ಸುಮ್ಮನಿದ್ದರೆ ಏನು ಚೆಂದ ? ಅದು ಚಂದಲ್ಲ,

ಸಮುದ್ರಕ್ಕೆ ತುಂಬಿ ತುಳುಕುವ ಅಲೆಗಳ ನರ್ತನವೇ  ಬಲು ಸುಂದರ..👌🏻

ಆಂತರಿಕ-; ಜೀವನವು ಒಂದು ಮಹಾನ್ ಸಾಗರವಿದ್ದಂತೆ,

ಇಲ್ಲಿ ಕಷ್ಟಸುಖ  ಲಾಭನಷ್ಟ  ಸ್ತುತಿನಿಂದೆಗಳೆಂಬ ನೆರೆತೊರೆಗಳು ಬಂದಾಗ ಗಟ್ಟಿತನದಿಂದ ಎದುರಿಸಿ ನಿಂತಾಗಲೇ ಬಾಳಿಗೊಂದು ಶೃಂಗಾರ.👌


ನಾರಿಗೆ ಗುಣವೇ ಶೃಂಗಾರ'

ಸೌಂದರ್ಯ ಪ್ರಿಯೆಯಾದ ನಾರಿಯರಿಗೆ

ಅವ್ಯಾವುದೇ ಬಾಹ್ಯ ಆಡಂಬರದ ಒಡವೆಗಳಿಗಿಂತಲೂ ಅವಳ ಆಂತರಿಕ ಮಾತೃಹೃದಯದ ವಾತ್ಸಲ್ಯವೇ ಹೆಣ್ಣಿಗೆ ಬಲು ಚೆಂದದ ಶೃಂಗಾರವಾಗಿದೆ,💗


ಗಗನಕ್ಕೆ ಚಂದ್ರಮನೆ ಶೃಂಗಾರ

ಬಾಹ್ಯ-; ಕೊನೆಯಿಲ್ಲದ ವಿಶಾಲ ನೀಲಿ ಆಕಾಶಕ್ಕೆ ಬೆಳ್ಳಿಚುಕ್ಕಿಗಳ ಮಧ್ಯದ ಚಂದ್ರಮನೆ ಬಲು ಚೆಂದದ ಶೃಂಗಾರ,

ಆಂತರಿಕ-; ಮನುಷ್ಯನ ಚಿತ್ತ ಮತ್ತು ಮನಸ್ಸು ಇವೆರಡೂ ಕೂಡ

ಗಗನದಂತೆ ವಿಶಾಲ,

ಒಂದರೆ ಕ್ಷಣದಲ್ಲಿ ಇಡೀ ಜಗತ್ತಿನ್ನೇ ತನ್ನೊಳಗೆ ಕಲ್ಪಿಸಿಕೊಳ್ಳಬಹುದುಆದರೆ ಮನಕ್ಕೆ ಚಂದ್ರಮನಂತಿರುವ ಶಾಂತ ಚಿತ್ತವಿದ್ದರೆ ಇಡೀ ಬದುಕೇ ಬೆಳದಿಂಗಳ ಶೃಂಗಾರದಂತೆ ಬಲು ಚೆಂದ.👌👌



‘#ಕೂಡಲಸಂಗನ ಶರಣರ ನೊಸಲ ವಿಭೂತಿಯೆ ಶೃಂಗಾರ

ನಮ್ಮ ಶರಣರ ನೊಸಲಿನ ವಿಭೂತಿಯ ಮೂರು ಎಳೆಗಳು. ‘ತನು_ಮನ_ಧನ

ತನು’ (ದೇಹ) ನಿರ್ಮೋಹವೆಂಬ ಅಗ್ನಿಯಲ್ಲಿ ಸುಟ್ಟು ಗಟ್ಟಿಗೊಂಡ ಒಂದು ಎಳೆ,

ಮನ'ನಿರಹಂಕಾರವೆಂಬ ಅಗ್ನಿಯಲ್ಲಿ ಸುಟ್ಟುಗಟ್ಟಿಗೊಂಡ ಎರಡನೆ ಎಳೆ,

ಧನ' ನಿರಾಪೇಕ್ಷೆಯೆಂಬ ಅಗ್ನಿಯಲ್ಲಿ ಸುಟ್ಟುಗಟ್ಟಿಗೊಂಡ ಮೂರನೇ ಎಳೆ,,

ಸತ್_ಚಿತ್_ಆನಂದ  ಅಕಾರ ಉಕಾರ ಮಕಾರ ಓಂಕಾರ ಸ್ವರೂಪವಾದ

ಸೃಷ್ಟಿ ಸ್ಥಿತಿ ಲಯದ ಪ್ರತೀಕ ಶ್ರೀವಿಭೂತಿಯನ್ನು ಧರಿಸಿದ ಶರಣರ ಮುಖದಲ್ಲಿ ಪ್ರಸನ್ನತೆಯ ಕಳೆ ತುಂಬಿರುತ್ತದೆನಮ್ಮ ಕೂಡಲಸಂಗನ ಶರಣರ ನೊಸಲ ವಿಭೂತಿಯೆ ಶೃಂಗಾರ, 👌👌👌ಶ್ರೀವಿಭೂತಿಯೇ ಶರಣರ ಮುಖಸಜ್ಜೆಯ ಕಳೆ

ಎನ್ನುತ್ತಾರೆ ವಿಶ್ವಗುರು ಬಸವಣ್ಣನವರು.👏🏻👏🏻👏🏻



🙏🏻ಶರಣು ಶರಣಾರ್ಥಿಗಳೊಂದಿಗೆ🙏🏻



✍🏾ವಿಶ್ಲೇಷಣೆ-;#ಲೋಕೇಶ್_ಎನ್_ಮಾನ್ವಿ.

Comments

  1. ನಿಮ್ಮ ಮೊಬೈಲ್ ನಂಬರ್ ಕಳಿಸಿ ಕೊಡಿ ಅಥವಾ ನಮ್ಮ ಮೊಬೈಲ್ 8123856595

    ReplyDelete
  2. ತುಂಬಾ ಚನ್ನಾಗಿ ಭಾವರ್ಥ ಮೂಡಿ ಬಂದಿದೆ

    ReplyDelete

Post a Comment

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.