Posts

Showing posts from February, 2026

ರಾಯಚೂರಿನ ಶರಣರು. 01. ಉಳಿಯುಮೇಶ್ವರದ ಚಿಕ್ಕಯ್ಯ ಶರಣರು, ವಿಶೇಷ ಲೇಖನ -: ಲೋಕೇಶ್ ಎನ್ ಮಾನ್ವಿ.

Image
  # ರಾಯಚೂರಿನ_ಶರಣರು. ೦1 ಉಳಿಯುಮೇಶ್ವರ ಚಿಕ್ಕಯ್ಯ ಶರಣರು. ಹನ್ನೆರಡನೇ ಶತಮಾನದ ಬಸವಯುಗದ   ಧೃವತಾರೆ,  ಕಾಯಕಯೋಗಿ ಶರಣ ಉಳಿಯುಮೇಶ್ವರ ಚಿಕ್ಕಯ್ಯನವರು. ಇವರು ಪೂರ್ವಾಶ್ರಮದಲ್ಲಿ ಕಾಳಾಮುಖ ಆಚಾರ್ಯರಾಗಿದ್ದು , ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಶಿವಯೋಗಿಯಾಗಿ ,  ಕಲ್ಯಾಣದಲ್ಲಿ ಕಾಯಕದ ಜೊತೆಜೊತೆಗೆ,  ಶಿವಯೋಗದ ಕುರಿತು ಭೋದಿಸುತ್ತಿದ್ದರು , ಅಂಕಿತನಾಮ: ಉಳಿಯುಮೇಶ್ವರ ಕಾಯಕ:   ಕಮ್ಮಾರಿಕೆ, ಮಂಚ, ಬಾಗಿಲು,  ಇತರೆ ಕಟ್ಟಿಗೆಯ ಶಿಲ್ಪಿಕಲೆಗಳನ್ನು ಮಾಡುವುದು , ತಮ್ಮ ಒಂದು ವಚನದಲ್ಲಿ ಈ ರೀತಿಯಾಗಿ ಉಲ್ಲೇಖಿಸಿದ್ದಾರೆ,  ಎನ್ನ ಮನವ ಮಂಚವ ಮಾಡಿ, ತನುವ ಪಚ್ಚಡಿಸುವೆ ಬಾರಯ್ಯಾ! ಎನ್ನ ಅಂತರಂಗದಲ್ಲಿಪ್ಪೆ ಬಾರಯ್ಯ! ಎನ್ನ ಬಹಿರಂಗದಲ್ಲಿಪ್ಪೆ ಬಾರಯ್ಯ! ಎನ್ನ ಶಿವಲಿಂಗದೇವನೆ ಬಾರಯ್ಯ! ಎನ್ನ ಭಕ್ತವತ್ಸಲನೆ ಬಾರಯ್ಯ! `ಓಂ ನಮಃ ಶಿವಾಯ' ಎಂದು ಕರೆವೆನು ಉಳಿಯುಮೇಶ್ವರಲಿಂಗವೆ ಬಾರಯ್ಯ! ಎಂದು ಕಾಯಕದಲ್ಲೇ ಕೈಲಾಸ ಕಂಡವರು ಚಿಕ್ಕಯ್ಯ ಶರಣರು, ಬಸವಣ್ಣನೆ ಎನಗೆ ಗುರುಸ್ವರೂಪನಯ್ಯಾ, ಚೆನ್ನಬಸವಣ್ಣನೆ ಎನಗೆ ಲಿಂಗಸ್ವರೂಪನಯ್ಯಾ, ಸಿದ್ಧರಾಮಯ್ಯನೆ ಎನಗೆ ಜಂಗಮಸ್ವರೂಪನಯ್ಯಾ, ಮರುಳಶಂಕರದೇವರೆ ಎನಗೆ ಪ್ರಸಾದಸ್ವರೂಪನಯ್ಯಾ, ಪ್ರಭುದೇವರೆ ಎನಗೆ ಜ್ಞಾನಸ್ವರೂಪನಯ್ಯಾ. ಇಂತಿವರ ಶ್ರೀಪಾದದಲ್ಲಿ ಉರಿಯುಂಡ ಕರ್ಪುರದಂತಡಗಿದೆನಯ್ಯಾ ಉಳಿಯುಮೇಶ್ವರಾ. ಮೇಲಿನ ವಚನದಲ್ಲಿ ತಮ್ಮ ಸಮಕಾಲೀನ ಶರಣರಾದ, ಬಸವಣ್ಣ,...