Posts

Showing posts from February, 2026

ರಾಷ್ಟ್ರವಾದಿ ಶರಣ ಹರ್ಡೇಕರ್ ಮಂಜಪ್ಪನವರು.

Image
  #ಹರ್ಡೇಕರ್_ಮಂಜಪ್ಪನವರ #ಜಯಂತಿಯ_ಹಾರ್ದಿಕ_ಶುಭಾಶಯಗಳು .💐💐 ರಾಷ್ಟ್ರವಾದಿ ಶರಣ ಹರ್ಡೇಕರ್ ಮಂಜಪ್ಪನವರು. ಸಮಸಮಾಜದ ಕನಸು ಕಂಡ ಧೀಮಂತರು, ಮಾನವತಾವಾದಿ ಮಂಜಪ್ಪನವರು. ಕಷ್ಟದಲ್ಲೂ, ಹಸಿವಿನಲ್ಲೂ,  ಊಟವಿಲ್ಲದೆಯೂ, ರಾಷ್ಟ್ರೀಯತೆಯನ್ನೇ, ಉಸಿರಾಗಿಸಿಕೊಂಡು ಬದುಕಿದವರು. ಶಿಕ್ಷಕರಾಗಿ ಮಕ್ಕಳ ಮನಗೆದ್ದು, ಅಕ್ಷರ ಕಲಿಸಿದವರು, ಹರ್ಡೇಕರ್ ಮಂಜಪ್ಪನವರು. ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಲು, ಧನುರ್ದಾರಿ ಪತ್ರಿಕೆ ಹೊರತಂದು, ಪ್ರಖ್ಯಾತರಾದವರು ಶರಣ ಮಂಜಪ್ಪನವರು. ರಾಷ್ಟ್ರವಾದಿ ಶರಣ, ಹರ್ಡೇಕರ್ ಮಂಜಪ್ಪನವರು. ಜಗತ್ತಿನಲ್ಲೇ ಮೊಟ್ಟಮೊದಲು ಬಸವ ಜಯಂತಿಯನ್ನು ಆಚರಿಸಲು ಕರೆ ಕೊಟ್ಟವರು,  ಬಸವಪ್ರಿಯ ಮಂಜಪ್ಪನವರು. ಬಸವಣ್ಣನನ್ನು ಗಾಂಧೀಜಿಗೆ, ಗಾಂಧೀಜಿಯನ್ನು ಕರುನಾಡಿಗೆ ಪರಿಚಯಿಸಿದವರು. ಹರ್ಡೇಕರ್ ಮಂಜಪ್ಪನವರು. ಗಾಂಧಿವಾದದ ಖಾದಿ, ಬಸವ ತತ್ವದ ವಿಭೂತಿಯನ್ನು ಧರಿಸಿ, ಶಿಸ್ತಿನ ಜೀವನ ನಡೆಸಿದವರು ಶರಣ ಮಂಜಪ್ಪನವರು. ಅಥಣಿ ಶಿವಯೋಗಿಗಳಿಂದ ಲಿಂಗ ದೀಕ್ಷೆ ಪಡೆದು, ನಿಜಾಚರಣೆಯ ಪ್ರತಿಪಾದಿಸಿದವರು ಹರ್ಡೇಕರ್ ಮಂಜಪ್ಪನವರು. ದಾವಣಗೆರೆಯಲ್ಲಿ ಸತ್ಯಾಗ್ರಹ ಆಶ್ರಮ ಸ್ಥಾಪಿಸಿ, ಜನಾಂದೋಲನ ರೂಪಿಸಿದ ಹೆಮ್ಮೆಯ ಕನ್ನಡಿಗ ಮಂಜಪ್ಪನವರು. ಸ್ತ್ರೀ ಸಮಾಜದ ಜಾಗೃತಿಗಾಗಿ  ಅಕ್ಕಮಹಾದೇವಿ ಜಯಂತಿಯನ್ನು ಆರಂಭಿಸಿದ ಮಹಾತ್ಮರು ಮಂಜಪ್ಪನವರು. ಪ್ರಥಮವಾಗಿ ಗಾಂಧೀಜಿಯ ಚರಿತ್ರೆ ರಚಿಸಿದವರು ಮಂಜಪ್ಪನವರು. ಬಂಥನಾಳ ಶಿವಯೋಗಿಗಳ ಜೊತೆಗೂಡಿ...

ರಾಯಚೂರು ಜಿಲ್ಲೆಯ ಶರಣರು ಸರಣಿ -೦2, ಶರಣ ದಂಪತಿಗಳಾದ ಆಯ್ದಕ್ಕಿ ಲಕ್ಕಮ್ಮ ಮಾರಯ್ಯನವರು. ವಿಶೇಷ ಲೇಖನ -: ಲೋಕೇಶ್ ಎನ್ ಮಾನ್ವಿ

Image
 🌼#ರಾಯಚೂರು ಜಿಲ್ಲೆಯ ಶರಣರು ಸರಣಿ- 02🌼 ━━━━━━━━━━━━━━━━━━━━━━━━ ಶರಣ ದಂಪತಿಗಳಾದ ಆಯ್ದಕ್ಕಿ ಲಕ್ಕಮ್ಮ ಮಾರಯ್ಯನವರು 🔹ಶರಣ ದಂಪತಿಗಳಾದ, 🔶ಆಯ್ದಕ್ಕಿ ಲಕ್ಕಮ್ಮ ಮಾರಯ್ಯನವರು. ಹನ್ನೆರಡನೇ ಶತಮಾನದ ಬಸವಾದಿ ಶರಣರ, ಸಾಲಿನಲ್ಲಿ ಕಾಯಕ ನಿಷ್ಠೆ , ದಾಸೋಹ ಭಾವ, ಲಿಂಗ ಸಮಾನತೆಗೆ,   ಹೆಸರಾದ  ಮಹತ್ವದ  ಶರಣರೇ, ಆಯ್ದಕ್ಕಿ ಲಕ್ಕಮ್ಮ ಹಾಗೂ ಮಾರಯ್ಯ ದಂಪತಿಗಳು, ಇವರು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ, ಅಮರೇಶ್ವರ ಗ್ರಾಮದವರು . 🔹ಆಯ್ದಕ್ಕಿ ಮಾರಯ್ಯನವರ ಅಂಕಿತನಾಮ-: " ಅಮರೇಶ್ವರಲಿಂಗ " ಲಭ್ಯವಿರುವ ವಚನಗಳು- 31 🔸ಆಯ್ದಕ್ಕಿ ಲಕ್ಕಮ್ಮನವರ ಅಂಕಿತನಾಮ -: ' ಮಾರಯ್ಯಪ್ರಿಯ ಅಮರೇಶ್ವರಲಿಂಗ " ಲಭ್ಯವಿರುವ ವಚನಗಳು- 25 ಲಿಂಗಸೂಗೂರಿನ ಅಮರೇಶ್ವರ ಗ್ರಾಮದವರಾದ ಶರಣ ದಂಪತಿಗಳು, ಶುದ್ಧ ಭಕ್ತಿ, ಹಾಗೂ ಕಾಯಕ ನಿಷ್ಠರಾಗಿದ್ದು, ಅಣ್ಣ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ಬಂದರು. ಕಲ್ಯಾಣ ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು‌. ೭೭೦ ಅಮರ ಗಣಂಗಳಲ್ಲಿ, ಇವರೂ ಪ್ರಮುಖರು. "ಮಹಾಮನೆ" ಎಂದರೆ ಇದು ಬರಿ ಕಲ್ಲುಗಳಿಂದ ಕಟ್ಟಿದ ಕಟ್ಟಡವಲ್ಲ, ಸಾವಿರಾರು ಜನರು, ಇಷ್ಟಲಿಂಗ ಪೂಜೆ, ಚಿಂತನ ಮಂಥನ, ಹಾಗೂ ಪ್ರಸಾದಕ್ಕೆ, ಒಟ್ಟುಗೂಡುವ ಸ್ಥಳವೇ ಅಣ್ಣ ಬಸವಣ್ಣನವರ ಪರಿಕಲ್ಪನೆಯ "ಮಹಾಮನೆ" ಬೇರೆ ಬೇರೆ ಊರುಗಳಿಂದ, ಬೇರೆ ಬೇರೆ ರಾಜ್ಯಗಳಿಂದ, ಬೇರೆ ಬೇರೆ ದೇಶಗ...

ರಾಯಚೂರಿನ ಶರಣರು. 01. ಉಳಿಯುಮೇಶ್ವರದ ಚಿಕ್ಕಯ್ಯ ಶರಣರು, ವಿಶೇಷ ಲೇಖನ -: ಲೋಕೇಶ್ ಎನ್ ಮಾನ್ವಿ.

Image
  # ರಾಯಚೂರಿನ_ಶರಣರು. ೦1 ಉಳಿಯುಮೇಶ್ವರ ಚಿಕ್ಕಯ್ಯ ಶರಣರು. ಹನ್ನೆರಡನೇ ಶತಮಾನದ ಬಸವಯುಗದ   ಧೃವತಾರೆ,  ಕಾಯಕಯೋಗಿ ಶರಣ ಉಳಿಯುಮೇಶ್ವರ ಚಿಕ್ಕಯ್ಯನವರು. ಇವರು ಪೂರ್ವಾಶ್ರಮದಲ್ಲಿ ಕಾಳಾಮುಖ ಆಚಾರ್ಯರಾಗಿದ್ದು , ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಶಿವಯೋಗಿಯಾಗಿ ,  ಕಲ್ಯಾಣದಲ್ಲಿ ಕಾಯಕದ ಜೊತೆಜೊತೆಗೆ,  ಶಿವಯೋಗದ ಕುರಿತು ಭೋದಿಸುತ್ತಿದ್ದರು , ಅಂಕಿತನಾಮ: ಉಳಿಯುಮೇಶ್ವರ ಕಾಯಕ:   ಕಮ್ಮಾರಿಕೆ, ಮಂಚ, ಬಾಗಿಲು,  ಇತರೆ ಕಟ್ಟಿಗೆಯ ಶಿಲ್ಪಿಕಲೆಗಳನ್ನು ಮಾಡುವುದು , ತಮ್ಮ ಒಂದು ವಚನದಲ್ಲಿ ಈ ರೀತಿಯಾಗಿ ಉಲ್ಲೇಖಿಸಿದ್ದಾರೆ,  ಎನ್ನ ಮನವ ಮಂಚವ ಮಾಡಿ, ತನುವ ಪಚ್ಚಡಿಸುವೆ ಬಾರಯ್ಯಾ! ಎನ್ನ ಅಂತರಂಗದಲ್ಲಿಪ್ಪೆ ಬಾರಯ್ಯ! ಎನ್ನ ಬಹಿರಂಗದಲ್ಲಿಪ್ಪೆ ಬಾರಯ್ಯ! ಎನ್ನ ಶಿವಲಿಂಗದೇವನೆ ಬಾರಯ್ಯ! ಎನ್ನ ಭಕ್ತವತ್ಸಲನೆ ಬಾರಯ್ಯ! `ಓಂ ನಮಃ ಶಿವಾಯ' ಎಂದು ಕರೆವೆನು ಉಳಿಯುಮೇಶ್ವರಲಿಂಗವೆ ಬಾರಯ್ಯ! ಎಂದು ಕಾಯಕದಲ್ಲೇ ಕೈಲಾಸ ಕಂಡವರು ಚಿಕ್ಕಯ್ಯ ಶರಣರು, ಬಸವಣ್ಣನೆ ಎನಗೆ ಗುರುಸ್ವರೂಪನಯ್ಯಾ, ಚೆನ್ನಬಸವಣ್ಣನೆ ಎನಗೆ ಲಿಂಗಸ್ವರೂಪನಯ್ಯಾ, ಸಿದ್ಧರಾಮಯ್ಯನೆ ಎನಗೆ ಜಂಗಮಸ್ವರೂಪನಯ್ಯಾ, ಮರುಳಶಂಕರದೇವರೆ ಎನಗೆ ಪ್ರಸಾದಸ್ವರೂಪನಯ್ಯಾ, ಪ್ರಭುದೇವರೆ ಎನಗೆ ಜ್ಞಾನಸ್ವರೂಪನಯ್ಯಾ. ಇಂತಿವರ ಶ್ರೀಪಾದದಲ್ಲಿ ಉರಿಯುಂಡ ಕರ್ಪುರದಂತಡಗಿದೆನಯ್ಯಾ ಉಳಿಯುಮೇಶ್ವರಾ. ಮೇಲಿನ ವಚನದಲ್ಲಿ ತಮ್ಮ ಸಮಕಾಲೀನ ಶರಣರಾದ, ಬಸವಣ್ಣ,...