‘ರಾಜ_ಬಿಜ್ಜಳನ_ಸೊಕ್ಕು_ಮುರಿದ_ಶರಣ_ಮಾಚಯ್ಯ’👍🏻👌 ✍🏾ವಿಶೇಷ ಲೇಖನ-;#ಲೋಕೇಶ್_ಎನ್_ಮಾನ್ವಿ.

‘#ರಾಜ_ಬಿಜ್ಜಳನ_ಸೊಕ್ಕು_ಮುರಿದ_ಶರಣ_ಮಾಚಯ್ಯ’👍🏻👌 ಈ ಭಾವಚಿತ್ರವನ್ನು ಬಹುತೇಕರು ನೋಡಿರುತ್ತೀರಿ ಇದರ ಹಿಂದಿನ ರೋಚಕವಾದ ನೈಜ ಕಥೆನ್ನು ತಿಳಿಯೋಣ ಬನ್ನಿ, ೧೨ನೇ ಶತಮಾನದಲ್ಲಿ ಮಹಾಮಾನತಾವಾದಿ, ವಿಶ್ವಗುರು ಬಸವಣ್ಣನವರು ಕಲ್ಯಾಣ ರಾಜ್ಯದ ಪ್ರಧಾನಮಂತ್ರಿಯಾಗಿರುತ್ತಾರೆ, ಪ್ರತಿದಿನ ಬಸವಣ್ಣನವರು ರಾಜ ಬಿಜ್ಜಳನ ಸಭೆಗೆ ಹೋಗುತ್ತಿರುತ್ತಾರೆ ಪ್ರತಿಬಾರಿ ಹೋದಾಗಲೂ ಅವರ ವಸ್ತ್ರಗಳು ಪಳಪಳನೆ ಹೊಳೆಯುತ್ತಿರುತ್ತವೆ, ಇದನ್ನು ಕಂಡ ಕೊಂಡೆ ಮಂಚಣ್ಣ ರಾಜ ಬಿಜ್ಜಳನಿಗೆ ಕಿವಿ ಊದುತ್ತಾನೆ, ಪ್ರಧಾನಿ ಬಸವರಸರ ವಸ್ತ್ರಗಳು ಎಷ್ಟು ಶುಭ್ರವಾಗಿವೆ ಪಳಪಳನೇ ಮಿಂಚುತ್ತಿವೆ, ಇದನ್ನು ಒಗೆಯುವಾತ ಮಾಡಿವಾಳ ಮಾಚಿದೇವ ಅವನಿಗೆ ನಿಮ್ಮ ವಸ್ತ್ರವನ್ನು ಒಗೆಯಲು ಕಳಿಸಿದರೆ ನಿಮ್ಮ ವಸ್ತ್ರವೂ ಸುಂದರವಾಗಿ ಕಾಣುತ್ತವೆ ಎಂದಾಗ, ಬಿಜ್ಜಳ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಲು ಬಸವಣ್ಣನಿಗೆ ದುಂಬಾಲು ಬಿದ್ದ, ಮಡಿವಾಳಯ್ಯ ಪರಮ ಭಕ್ತ , ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿ ಹೇಳಿದ , ಅದನ್ನು ರಾಜ ಲೆಕ್ಕಿಸದೆ ಮಾಸಿದ ತನ್ನ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ , ಮಾಚಯ್ಯ ಶರಣರ ಬಟ್ಟೆ ಮಡಿಮಾಡುವಾಗ ಒಂದು ಕೈಯಲ್ಲು ಘಂಟೆ ಇನ್ನೊಂದು ಕೈಯಲ್ಲು ಖಡ್ಗ ವಿರುತ್ತಿತ್ತು, ಭವಿಗಳು ಶರಣರ ಬಟ್ಟೆ ಮುಟ್ಟಲು ಬರಬಾರದು ಎಂದು ಬರುವಾಗಲೇ ಘಂಟೆಯ ನಾದ ಮಾಡುತ್ತಿದ್ದರು ಮಾಚಯ್ಯ. ಬಸವಣ್ಣನ ಬಟ್ಟೆ ಮಡಿಮಾಡುತ್ತಿರುವಾಗ ಭವಿ ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ...