Posts

Showing posts from March, 2026

ರಾಯಚೂರು ಜಿಲ್ಲೆಯ ಶರಣರು -3 ವಿಶೇಷ ಲೇಖನ ಲೋಕೇಶ್ ಎನ್ ಮಾನ್ವಿ.

Image
  ರಾಯಚೂರು ಜಿಲ್ಲೆಯ ಶರಣರು- ೦3 ಮಹಾಪ್ರಸಾದಿ ಶರಣ ಬಿಬ್ಬಿಬಾಚಯ್ಯನವರು. ರಾಯಚೂರು ಜಿಲ್ಲೆ ಬಿಸಿಲನಾಡು ಎಂದೇ ಹೆಸರುವಾಸಿ‌, ಅದರಷ್ಟೇ ಸಾಹಿತ್ಯದಿಂದ ನೆತ್ತಿಯನ್ನು ತಂಪಾಗಿಸಬಲ್ಲ, ಶರಣರು,  ದಾಸರು, ಸಂತರು, ಮಹಾಂತರ, ಸಾಹಿತಿಗಳ, ನಾಡು ರಾಯಚೂರು. ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ, ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಜಿಲ್ಲೆ ಇದಾಗಿದೆ. ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಾಲಿನಲ್ಲಿ ಕಾಣಸಿಗುವ ಪ್ರಮುಖ ಶರಣರಾದ, ಬಿಬ್ಬಿಬಾಚಯ್ಯನವರು ಕೂಡ  ರಾಯಚೂರು ಜಿಲ್ಲೆಯ ಶರಣರೇ ಆಗಿದ್ದಾರೆ. ಇವರು ಮೂಲತಃ ರಾಯಚೂರು ಜಿಲ್ಲೆಯ ಗಬ್ಬೂರಿನವರಾಗಿದ್ದು, ಪೂರ್ವಾಶ್ರಮದಲ್ಲಿ ಬ್ರಾಹ್ಮಣರಾದರೂ, ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ತೆರಳಿ ಇಷ್ಟಲಿಂಗ ದೀಕ್ಷೆ ಪಡೆದು ಶರಣರಾದವರು, ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು, 77೦ ಅಮರ ಗಣಂಗಳಲ್ಲಿ ಇವರೂ ಒಬ್ಬರು.  ಅಂಕಿತನಾಮ : ಏಣಾಂಕಧರ ಸೋಮೇಶ್ವರಾ.  ಲಭ್ಯವಿರುವ ವಚನಗಳು : ಪ್ರಸ್ತುತ ಇವರ 102 ವಚನಗಳು ಲಭ್ಯವಿದ್ದು,  ಅವುಗಳು ಪ್ರಸಾದ ಮಹತ್ವವನ್ನು ಸಾರುವ ವಚನಗಳಾಗಿವೆ, ಇನ್ನೂ ಕೆಲವು ಬೆಡಗಿನ ವಚನಗಳಾಗಿವೆ.  ಕಾಯಕ : ಶರಣರು ಕಾಯಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ, ಅದು ಯಾವುದಾದರೂ ಸರಿ, ಮೇಲು ಕೀಳು ಎಂಬುದಿಲ್ಲ, ಬಿಬ್ಬಿಬಾಚಯ್ಯ ಶರಣರ ಕಾಯಕ ಮಹಾಮನೆಯಲ್ಲಿ ಅಡುಗೆ  ವ್ಯರ್ಥ...