Posts

Showing posts from July, 2023

ಸಿದ್ಧಿಪುರುಷ ಸದ್ಗುರು ಯಲ್ಲಾಲಿಂಗಪ್ರಭು ಮಹಾರಾಜರು,

Image
ಪರಮತ್ಯಾಗಿ ಘನವೈರಾಗಿ,  ಅಲ್ಲಮನಂತೆ ಬದುಕಿದ ಯೋಗಿ , ಸಿದ್ಧಿಪುರುಷ ಸದ್ಗುರು ಯಲ್ಲಾಲಿಂಗಪ್ರಭು ಮಹಾರಾಜರು , ಮುಗಳಖೋಡ   ಗ್ರಾಮದ ಸ್ಮಶಾನ ಭೂಮಿಯನ್ನೇ ಮುಕ್ತಿ ಮಂದಿರವಾಗಿದ ಯೋಗಿ , ಇಂದಿಗೆ 138 ವರ್ಷಗಳ ಹಿಂದೆ ಶರಣರ ನಾಡು ವಿಜಯಪುರದ ಇಂಡಿ ತಾಲೂಕಿನ ಮಿರಗಿ ಎಂಬ ಪುಟ್ಟ ಗ್ರಾಮದಲ್ಲಿ ಶಿವಪ್ಪ ಕಾಶಿಬಾಯಿ ಎಂಬ ಪುಣ್ಯ ದಂಪತಿಗಳ ಮಗನಾಗಿ ಜನಿಸಿ ಬಂದ ಮಗುವೇ ಯಲ್ಲಪ್ಪ   ಎಂಟು ವರ್ಷ ಪ್ರಾಯದಲ್ಲೇ ಶಿವ ಧ್ಯಾನ ನಿರತನಾಗಿ   ಕುರಿ ಕಾಯುವ ಕಾಯಕ ಮಾಡುತ್ತಿದ್ದರು , ಇಪ್ಪತ್ತು ವರ್ಷ ತುಂಬುವಷ್ಟರಲ್ಲಿ ಗರಡಿ ಮನೆಯಲ್ಲಿ ಪಳಗಿ ಕುಸ್ತಿ ಪಟುವಾಗಿದ್ದ ಯಲ್ಲಪ್ಪ , ಮನೆಯವರ ಬಲವಂತಕ್ಕೆ ಒಲ್ಲದ ಮನಸ್ಸಿನಿಂದಲೇ ಹೊನ್ನಮ್ಮ ಎಂಬವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು , ಸಂಸಾರವೂ ಅನ್ಯೂನ್ಯವಾಗಿ ಸಾಗಿತ್ತು ಮಡದಿ ಗರ್ಭವತಿಯಾದಳು , ನವಮಾಸಗಳು ತುಂಬುವಷ್ಟರಲ್ಲೇ ತಾಯಗರ್ಭದಲ್ಲೇ ಶಿಶು ಸತ್ತಿತು ಅದರೊಂದಿಗೆ ಯಲ್ಲಪ್ಪನ ಮಡದಿ ಹೊನ್ನಮ್ಮಳು ಕೂಡ ಕೊನೆಉಸಿರೆಳೆದು ಬಾರದ ಲೋಕಕ್ಕೆ ಹೊರಟಳು , ಸುತ್ತಮುತ್ತಲ ಗ್ರಾಮಗಳಲ್ಲಿ   ಕುಸ್ತಿ ಪಂದ್ಯಾವಳಿಗಳನ್ನು ಗೆದ್ದು ಜಗಜಟ್ಟಿಯಾಗಿ ಖುಷಿಯಿಂದ ಬಂದ ಯಲ್ಲಪ್ಪ , ಗರ್ಭಿಣಿಯಾದ ತನ್ನ ಮಡದಿ ಹಾಗೂ ಮಗುವನ್ನು ಕಳೆದು ಕೊಂಡ ಯಲ್ಲಪ್ಪ , ಅದೇ ಚಿತೆಯಲ್ಲಿ ಸಂಸಾರ ...