Posts

Showing posts from August, 2022

ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ ? ಚಿನ್ಮಯಜ್ಞಾನಿ_ಚೆನ್ನಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ- ಲೋಕೇಶ್_ಎನ್_ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ  ?  ಶಬ್ದ ಮೌನಿಯಾದಡೇನಯ್ಯಾ ನೆನಹು ಮೌನಿಯಾಗದನ್ನಕ್ಕರ  ?  ತನು ಬೋಳಾದಡೇನಯ್ಯಾ ಮನ ಬೋಳಾಗದನ್ನಕ್ಕರ  ?  ಇದು ಕಾರಣ _ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಸ್ಥಲವಾರಿಗೆಯೂ ಅಳವಡದು ,. ವಚನ-; #ಚಿನ್ಮಯಜ್ಞಾನಿ _ ಚೆನ್ನಬಸವಣ್ಣನವರು , ಭಾವಾರ್ಥ-; # ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ  ? ಬ್ರಹ್ಮ + ಚಾರಿ = ಬ್ರಹ್ಮಚಾರಿ , ನಾನು ನನ್ನದೆಂಬ ಆಸೆ _ ಆಮಿಷ _ ರೋಷ _ ವಿಷಯಾದಿಗಳನ್ನು ಬಿಟ್ಟು ,  ಶ್ರೇಷ್ಠ ಸತ್ ಚಿಂತನೆಗಳನ್ನು ಆಚರಣೆಯಲ್ಲಿ ಮೈಗೂಡಿಸಿಕೊಂಡವನು ಎಂದರ್ಥ ,. ಹೀಗಿರುವಾಗ ನಾನು ಬ್ರಹ್ಮಚಾರಿ ಶ್ರೇಷ್ಠ ಚಿಂತನೆಗಳನ್ನು ಮೈಗೂಡಿಸಿಕೊಂವನೆಂದು   ಲೋಕದ ಜನರೆದುರು ಬಿಂಬಿಸಿಕೊಂಡು , ಅಂತರಂಗದಲ್ಲಿ ಆಸೆ _ ಆಮಿಷ _ ರೋಷ _ ವಿಷಯಾದಿಗಳನ್ನು ಬಿಡದೆ , ಉದಾ - ಮಾವಿನ ಹಣ್ಣನ್ನು ಬಿಟ್ಟೆನೆಂದರೂ ಅದರ ಸವಿರುಚಿ ಮತ್ತು ರೂಪಕವನ್ನು ಮನದಲ್ಲಿ   ತುಂಬಿಕೊಂಡ ಆಸೆಯಳಿಯದ ಕಪಟಿ ಎಂದೂ ಬ್ರಹ್ಮಚಾರಿಯಾಗಲಾರ ..   ಶಬ್ದ ಮೌನಿಯಾದಡೇನಯ್ಯಾ ನೆನಹು ಮೌನಿಯಾಗದನ್ನಕ್ಕರ  ? ಇನ್ನು ಲೋಕದ ಗೊಡವೆಯೇ ನನಗೆ ಬೇಡೆಂದು , ಮಾತು ಬಿಟ್ಟು ಮೌನಾಚರಣೆ ಮಾಡುವೆನೆಂದರೆ , ಮಾತಿನ...

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

Image
  ಶ್ರೀಗುರುಬಸವಲಿಂಗಾಯ ನಮಃ ಏನಿ ಬಂದಿರಿ ಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ ,  ಕುಳ್ಳಿರೆಂದಡೆ ನೆಲ ಕುಳಿಹೋಹುದೆ , ಒಡನೆ ನುಡಿದಡೆ ಸಿರ  ಹೊಟ್ಟೆಯೊಡೆವುದೆ , ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ . ✍🏾-; ವಿಶ್ವಗುರು _ ಬಸವಣ್ಣನವರು. ಭಾವಾರ್ಥ - ಏನಿ ಬಂದಿರಿ ಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ ,   ಏನ್ರಿ  ಈಗ ಬಂದಿರೆ , ಹೇಗಿದ್ದೀರಾ, ಸೌಖ್ಯವೇ, ಹೇಗಿತ್ತು ಪ್ರಯಾಣ,    ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ,  ಮತ್ತೇನು ಸಮಾಚಾರ   ಎಂದು  ಪ್ರೀತಿಯಿಂದ  ಕೇಳಿ   ವಿಚಾರಿಸಿದರೇನು ನಿಮ್ಮ ಮನೆಯ ಐಶ್ವರ್ಯ ಸಂಪತ್ತು ಹಾರಿ ಹೋಗುವುದೇ ?  ಕುಳ್ಳಿರೆಂದಡೆ ನೆಲ ಕುಳಿಹೋಹುದೆ , ಮನೆಗೆ ಬಂದ ಅತಿಥಿಗಳಿಗೆ,  ಮೊದಲು ಮನೆಯ  ಒಳಗಡೆ ಕರೆದು, ಕುಳಿತುಕೊಳ್ಳಿ  ದಣಿವಾಗಿದೆಯೇ ನೀರು ಕುಡಿಯಿರಿ  ಎಂದು ಉಪಚರಿಸುವುದು ಸಂಸ್ಕೃತಿ, ಅದನ್ನು ಬಿಟ್ಟು ಬಂದ ಅತಿಥಿಗಳಿಗೆ ಗೌರವಿಸದೇ  ಅವರ ಭಾವನೆಗಳಿಗೆ ಬೆಲೆ ಕೊಡದೇ,  ಮನೆಯ ಅಂತೆಯೇ ನಿಲ್ಲಿಸಿ, ಮಾತಾಡಿ ಕಳಿಸಿದರೇನು.? ಬಂದು, ಏಕೆ ಅವರು ಬಂದು ಕುಳಿತರು ನಿಮ್ಮ ಮನೆಯ,  "ನೆಲ ತೆಗ್ಗು ಗುಂಡಿ ಬೀಳುವುದೆ" ,. ? ಎಂದು ಪ್ರಶ್ನಿಸುತ್ತಾರೆ ಬ...