Posts

Showing posts from August, 2022

ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ ? ಚಿನ್ಮಯಜ್ಞಾನಿ_ಚೆನ್ನಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ- ಲೋಕೇಶ್_ಎನ್_ಮಾನ್ವಿ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ  ?  ಶಬ್ದ ಮೌನಿಯಾದಡೇನಯ್ಯಾ ನೆನಹು ಮೌನಿಯಾಗದನ್ನಕ್ಕರ  ?  ತನು ಬೋಳಾದಡೇನಯ್ಯಾ ಮನ ಬೋಳಾಗದನ್ನಕ್ಕರ  ?  ಇದು ಕಾರಣ _ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಸ್ಥಲವಾರಿಗೆಯೂ ಅಳವಡದು ,. ವಚನ-; #ಚಿನ್ಮಯಜ್ಞಾನಿ _ ಚೆನ್ನಬಸವಣ್ಣನವರು , ಭಾವಾರ್ಥ-; # ಕಾಯ ಬ್ರಹ್ಮಚಾರಿಯಾದಡೇನಯ್ಯಾ ಆಸೆ ಬ್ರಹ್ಮಚಾರಿಯಾಗದನ್ನಕ್ಕರ  ? ಬ್ರಹ್ಮ + ಚಾರಿ = ಬ್ರಹ್ಮಚಾರಿ , ನಾನು ನನ್ನದೆಂಬ ಆಸೆ _ ಆಮಿಷ _ ರೋಷ _ ವಿಷಯಾದಿಗಳನ್ನು ಬಿಟ್ಟು ,  ಶ್ರೇಷ್ಠ ಸತ್ ಚಿಂತನೆಗಳನ್ನು ಆಚರಣೆಯಲ್ಲಿ ಮೈಗೂಡಿಸಿಕೊಂಡವನು ಎಂದರ್ಥ ,. ಹೀಗಿರುವಾಗ ನಾನು ಬ್ರಹ್ಮಚಾರಿ ಶ್ರೇಷ್ಠ ಚಿಂತನೆಗಳನ್ನು ಮೈಗೂಡಿಸಿಕೊಂವನೆಂದು   ಲೋಕದ ಜನರೆದುರು ಬಿಂಬಿಸಿಕೊಂಡು , ಅಂತರಂಗದಲ್ಲಿ ಆಸೆ _ ಆಮಿಷ _ ರೋಷ _ ವಿಷಯಾದಿಗಳನ್ನು ಬಿಡದೆ , ಉದಾ - ಮಾವಿನ ಹಣ್ಣನ್ನು ಬಿಟ್ಟೆನೆಂದರೂ ಅದರ ಸವಿರುಚಿ ಮತ್ತು ರೂಪಕವನ್ನು ಮನದಲ್ಲಿ   ತುಂಬಿಕೊಂಡ ಆಸೆಯಳಿಯದ ಕಪಟಿ ಎಂದೂ ಬ್ರಹ್ಮಚಾರಿಯಾಗಲಾರ ..   ಶಬ್ದ ಮೌನಿಯಾದಡೇನಯ್ಯಾ ನೆನಹು ಮೌನಿಯಾಗದನ್ನಕ್ಕರ  ? ಇನ್ನು ಲೋಕದ ಗೊಡವೆಯೇ ನನಗೆ ಬೇಡೆಂದು , ಮಾತು ಬಿಟ್ಟು ಮೌನಾಚರಣೆ ಮಾಡುವೆನೆಂದರೆ , ಮಾತಿನ...

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

Image
  ಶ್ರೀಗುರುಬಸವಲಿಂಗಾಯ ನಮಃ ಏನಿ ಬಂದಿರಿ ಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ ,  ಕುಳ್ಳಿರೆಂದಡೆ ನೆಲ ಕುಳಿಹೋಹುದೆ , ಒಡನೆ ನುಡಿದಡೆ ಸಿರ  ಹೊಟ್ಟೆಯೊಡೆವುದೆ , ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ . ✍🏾-; ವಿಶ್ವಗುರು _ ಬಸವಣ್ಣನವರು. ಭಾವಾರ್ಥ - ಏನಿ ಬಂದಿರಿ ಹದುಳಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ ,   ಏನ್ರಿ ಬಂದಿರಿ , ಆರಾಮ ಇದ್ದೀರಾ ಮತ್ತೇನು ಸಮಾಚಾರ ಮನೆ ಕಡೆ ಎಲ್ಲರೂ ಹೇಗಿದ್ದಾರೆ ,  ಎಂದು ಕೇಳಿ ವಿಚಾರಿಸಿದರೇನು ನಿಮ್ಮ ಮನೆಯ ಐಶ್ವರ್ಯ ಸಂಪತ್ತು ಹಾರಿ ಹೋಗುವುದೇ ?  ಕುಳ್ಳಿರೆಂದಡೆ ನೆಲ ಕುಳಿಹೋಹುದೆ , ಬಂದವರಿಗೆ ಕಳಿತುಕೊಳ್ಳಿ ಎಂದು ಉಪಚರಿಸಿದರೇನು ನೆಲ ತೆಗ್ಗು ಗುಂಡಿ ಬೀಳುವುದೆ ,. ? ಒಡನೆ ನುಡಿದಡೆ ಸಿರ ಹೊಟ್ಟೆಯೊಡೆವುದೆ , ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ . ಶರಣು ಬನ್ನಿ , ಕುಳಿತುಕೊಳ್ಳಿ , ಹೇಗಿತ್ತು ಪ್ರಯಾಣ ಮನೆಯಲ್ಲಿ ಎಲ್ಲರೂ ಸೌಕ್ಯವೇ ಎಂದು ವಿಚಾರಿಸಿದರೇನು ನಿಮ್ಮ ತಲೆ ಒಡೆದು ಹೋಗುತ್ತದೆಯೇ .? ಅಥವಾ ನಿಮ್ಮ ಹೊಟ್ಟೆ ಸೀಳಿ ಕರುಳು ಕಿತ್ತು ಬರುತ್ತದೆಯೇ .?  ಬಂದ ಅತಿಥಿಗಳನ್ನು ಕೂಡಿಸದೇ , ಸರಿಯಾಗಿ ಮಾತಾಡಿಸದೇ , ನಿಮ್...