‘ಮಾತು ಜ್ಯೋತಿರ್ಲಿಂಗ’ ವಿಶೇಷ ಲೇಖನ-; ಲೋಕೇಶ್ ಎನ್ ಮಾನ್ವಿ.



 



ಮಾತು ಜ್ಯೋತಿರ್ಲಿಂಗ’ (01)



ಮಾತೇ ಮುತ್ತು, ಮಾತೇ ಮೃತ್ಯು

ಮಾತಿನಿಂದಲೇ ಸನ್ಮಾನ, ಮಾತಿನಿಂದಲೇ ಅವಮಾನ,

ನುಡಿವ ಪ್ರತಿ ಶಬ್ಧಗಳ ಕುರಿತು  ಅಣ್ಣ ಬಸವಣ್ಣನವರ ವಚನವೂ ಇದೆ.


ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು,
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು,
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲ ಸಂಗಮದೇವನೆಂತೊಲಿವನಯ್ಯ,,?



ಹೌದು ಬಂಧುಗಳೆ, ನುಡಿ ಮುತ್ತಿನ ಹಾರದಂತೆಯೇ ಇರಬೇಕೆಂದು ಏಕೆ ಹೇಳ್ತಾರೆ, ಬಸವಣ್ಣನವರು, ಮುತ್ತಿನ ಹಾರವನ್ನೇ ಏಕೆ ? ಉದಾಹರಣೆಯಾಗಿ ತೆಗೆದುಕೊಂಡರು,? ಇಲ್ಲಿದೆ ಉತ್ತರ👇🏻👇🏻



ನುಡಿದರೆ ಮುತ್ತಿನ ಹಾರದಂತಿರಬೇಕು

ಮುತ್ತಿನ ಹಾರ ಹೇಗಿರುತ್ತದೆ ಒಂದಕ್ಕೊಂದು ಹತ್ತಿರವಾಗಿ ಕೂಡಿರುತ್ತವೆ ಮುತ್ತುಗಳು, ಅದರಂತೆಯೇ ನಡೆ ನುಡಿಗಳು ಒಂದಾಗಿರಬೇಕು ನುಡಿಯೆಂಬ ಮುತ್ತಿಗೆ ನಡೆಯೆಂಬ ದಾರ ಕೂಡಿದರೆ ಸಂಗನ ಕೊರಳಿಗೆ ಮುತ್ತಿನ ಹಾರವಾಗುತ್ತದೆ.



ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ಮಾಣಿಕ್ಯದ ದೀಪ್ತಿಗೆ ಮಾಣಿಕ್ಯದ ಬೆಳಕಿಗೆ ಯಾವುದೇ ತೈಲ ಬೇಕಾಗಿಲ್ಲ ಯಾರೂ ಹಚ್ಚಬೇಕಿಲ್ಲ ಅದೊಂದು ಸ್ವಯಂ ಪ್ರಕಾಶಿತವಾದ ವಸ್ತು, ಅದರಂತೆಯೇ  ನಮ್ಮ ಮಾತು ಕೂಡ ಸ್ವಯಂ ಪ್ರಕಾಶಿತವಾಗಿರಬೇಕುಅಂತರಂಗದಿಂದ ಬರುವ ಅರಿವು ಸ್ವಯಂ ಪ್ರಕಾಶಿತ ಜ್ಞಾನದಿಂದ ಕೂಡಿರಬೇಕು

ಮೊದಲನೆಯದಾಗಿ ಮನಸ್ಸಿನಿಂದ ಬಂದಿರಬೇಕು,

ಮತ್ತೊಬ್ಬರ ಮಾತು ಕಿವಿಯಲ್ಲಿ ಹಾಕಿಕೊಂಡು ಅದನ್ನೇ ನುಡಿಯಬಾರದು.

ತನ್ನ ನುಡಿ ಅಂತಃಕರಣದಿಂದ ಬರಬೇಕು, ಮಾತು ಮಾಣಿಕ್ಯದ ದೀಪ್ತಿಯಂತೆ ಸ್ವಯಂ ಪ್ರಕಾಶವಾಗಿರಬೇಕು.



 ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು

ಸ್ಫಟಿಕ ಎಷ್ಟು ಪಾರದರ್ಶಕವಾದದ್ದು (Transparent)

ಉದಾಹರಣೆಗೆ ಗಾಜಿನ Glassನಂತೆ

ಕಡೆಯಿಂದ ನೋಡಿದರೆ ಕಡೆಯವರೂ ಕಾಣುತ್ತಾರೆ

ಕಡೆಯಿಂದ ನೋಡಿದರೆ ಕಡೆಯಾವರೂ ಕಾಣುತ್ತಾರೆ

ಹಾಗೆಯೇ ನಡೆ ನುಡಿಯಲ್ಲಿ ಪಾರದರ್ಶಕತೆ ಇರಬೇಕು

ನಡೆಗೆ ತಕ್ಕ ನುಡಿ"ನುಡಿಗೆ ತಕ್ಕ ನಡೆ" ನಡೆ ನುಡಿಯಲ್ಲಿ Transparency ಇರಬೇಕು, ಆಗ ನುಡಿ ಸ್ಫಟಿಕದ ಶಲಾಕೆಯಂತಾಗುತ್ತಾದೆ.


ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು'

‘ಲಿಂಗ’ ಎಂದರೆ ಅಂತಃಕರಣ,ಲಿಂಗ’ ಎಂದರೆ ಆತ್ಮಸಾಕ್ಷಿ,

‘ಲಿಂಗ’ ಎಂದರೆ ಸಮಾಜ ಜಗತ್ತು, ಇಲ್ಲಿ ನುಡಿಯುವ ಮಾತಿನಿಂದ 

ಉರಿವ ಬೆಂಕಿಗೆ ತುಪ್ಪ ಸುರಿದಂತಾಗಬಾರದು.

ನೋದ ಜೀವದ ಅಂತಃಕರಣ ಮನಸ್ಸು ಕರಗುವಂತಿರಬೇಕೇ ಹೊರತು ಕೊರಗುವಂತಿರಬಾರದುನಮ್ಮ ಮಾತಿನಿಂದ ಮತ್ತೊಬ್ಬರ ಮನಸ್ಸು ಅರಳಬೇಕೇ ವಿನಃ ಕೆರಳಬಾರದು.

ನಿನ್ನ ಮಾತಿನಿಂದ ನಿನಗೂ ಒಳಿತಾಗಬೇಕುಸಮಾಜಕ್ಕೂ ಒಳಿತಾಗಬೇಕು.

‘ಮಾತಿನಿಂದಲೇ ಸನ್ಮಾನ

‘ಅದೇ ಮಾತಿನಿಂದಲೇ ಅವಮಾನ’

ಒಳ್ಳೆ ಮಾತೇ ಮುತ್ತುಕೆಟ್ಟ ಮಾತಿನಿಂದಲೇ ಮೃತ್ಯು,

ಅದಕ್ಕಾಗಿ ಲಿಂಗಎಂದರೆ ಆತ್ಮಪ್ರಜ್ಞೆ ಜಗತ್ತು ಮೆಚ್ಚಿ ಅಹುದಹುದೆನಬೇಕು.


ನುಡಿಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಮದೇವನೆಂತೊಲಿವನಯ್ಯ.?’

ನುಡಿದಂತೆ ನಡೆಯಿಲ್ಲದಿದ್ದರೆ  ಅದಕ್ಕೆ ಬೆಲೆಯಿಲ್ಲ.

ನುಡಿದಂತೆ ನಡೆಯದಿದ್ದರೆ ನಿನ್ನ ಆತ್ಮಸಾಕ್ಷಿಯಾದ ಲಿಂಗವು ಮೆಚ್ಚುವುದಿಲ್ಲ,

ಸಮಾಜವು ಮೆಚ್ಚುವುದಿಲ್ಲಇನ್ನು ಕಡೆಯದಾಗಿ ಭಗವಂತನೂ ಒಲಿಯುವುದಿಲ್ಲ ಕೈಯಿಡಿವುದಿಲ್ಲ.👏🏻👏🏻


ಅದಕ್ಕೆ ಶರಣರು "ಮಾತು ಜ್ಯೋತಿರ್ಲಿಂಗ" ಎಂದಿದ್ದಾರೆ.





✍🏻ಲೇಖನ-; ಲೋಕೇಶ್_ಎನ್_ಮಾನ್ವಿ‌.

                  -9972536176




ಮಾತು ಜ್ಯೋತಿರ್ಲಿಂಗ

ಮುಂದುವರೆಯುವುದು.....


ಸರ್ವರಿಗೂ 2022ರ ಹೊಸ ವರ್ಷದ  ಹಾರ್ದಿಕ ಶುಭಾಶಯಗಳು …


Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

ಆರು ಮುನಿದು ನಮ್ಮನೇನ ಮಾಡುವರು, ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ ಲೋಕೇಶ್ ಎನ್ ಮಾನ್ವಿ.

ಸಿದ್ಧಿಪುರುಷ ಸದ್ಗುರು ಯಲ್ಲಾಲಿಂಗಪ್ರಭು ಮಹಾರಾಜರು,