Posts

Showing posts from November, 2021

‘ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ’ ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ -; ಲೋಕೇಶ್ ಎನ್ ಮಾನ್ವಿ.🙏🏻

Image
  ಶ್ರೀಗುರುಬಸವಲಿಂಗಾಯನಮಃ ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ ಧರೆ ಧನ ವನಿತೆಯರು   ಎನ್ನವರು ತನ್ನವರೆಂದು ಹೋರಿ ಹೋರಿ ಸಾಯುತ್ತಿದೆ ಜೀವ ,  ಸರ್ವಕರ್ತೃ ಕೂಡಲಚೆನ್ನಸಂಗಯ್ಯನೆಂದರಿಯದೆ .. 👏👏 ✍🏾• ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು • 🙏                             ಭಾವಾರ್ಥ -; ‘ ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ ’ ಚಿಲಿಪಿಲಿ ಎಂದು ಹಾಡುತ್ತಾ ಬಂದ ಗುಬ್ಬಚ್ಚಿಗಳು . ತನಗೆ ತನ್ನ ಮರಿಗಳಿಗೆಂದು , ಒಂದು ಗೂಡು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದವು , ಒಂದು ದಿನ ಗಡಿಬಿಡಿಯಲ್ಲಿ ಯಾವುದೊ ಪಾಳು ಬಿದ್ದ ಮನೆಯಲ್ಲೊ ಅಥವಾ ಇನ್ಯಾರೊ ಕಟ್ಟಿದ ಮನೆಯ ಗೋಡೆಯ ಸಂದಿಯಲ್ಲೊ ಗೂಡುಕಟ್ಟಿ , ಆಹಾರ ಸಂಗ್ರಹದಲ್ಲಿ ತೊಡುಗುತ್ತವೆ ,  ಇತರೆ ಗುಬ್ಬಿಗಳನ್ನು ಕರೆತಂದು  ಆ ಮನೆ ತಮ್ಮದೆಂದು ಅತ್ಯಂತ ಗರ್ವದಿಂದ ತೋರ್ಪಡಿಸುತ್ತವೆ ,  ಒಂದುದಿನ ಎಲ್ಲವೂ ತನ್ನದೆನ್ನುವ ಸಂತಸದಲ್ಲಿ  ಕುಳಿತು ಮೈಮರೆತವು ಗುಬ್ಬಿಗಳು . ಇದನ್ನು ಕಂಡ ಮನೆಯ ಮಾಲಿಕ ಗೋಡೆಯ ಸಂದಿಯನ್ನು   ಮುಚ್ಚಿಬಿಡುತ್ತಾನೆ . ಅದನ್ನೇ ಆಶ್ರಯಿಸಿ    ಕ್ಷಣಿಕವಾದುದ್ದನ್ನು ನಂಬಿ ಎಲ್ಲವೂ ತನ್ನದೆಂದು ಮೈಮರೆತ ಗುಬ್ಬಿಗಳು ...

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

Image
  ಓಂ ಶ್ರೀಗುರುಬಸವಲಿಂಗಾಯ ನಮಃ ಘನತರವಾದ ಚಿತ್ರದ ರೂಹ   ಬರೆಯಬಹುದಲ್ಲದೆ , ಪ್ರಾಣವ ಬರೆಯಬಹುದೆ ಅಯ್ಯಾ ? ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ , ಭಕ್ತಿಯ ಮಾಡಬಹುದೆ ಅಯ್ಯಾ ? ಪ್ರಾಣವಹ ಭಕ್ತಿಯ ತನ್ಮಯ ನೀನು . ಈ ಗುಣವುಳ್ಳಲ್ಲಿ ನೀನಿಹೆ , ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ .                ✍🏾-; ಅಲ್ಲಮಪ್ರಭುದೇವರು.                           # ಭಾವಾರ್ಥ -: ‘ ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ ’ ಅದ್ಭುತ ಅತ್ಯಾಕರ್ಷಕ  ಅತೀ ಸುಂದರವಾಗಿ ಕೈಕಾಲು   ಕಣ್ಣು ಮೂಗ ತಿದ್ದಿ ತೀಡಿ, ಬಾಹ್ಯ ಸೌದರ್ಯದ   ಚಿತ್ರವ ಬರೆಯಬಹುದಲ್ಲದೇ.  ‘ ಪ್ರಾಣವ ಬರೆಯಬಹುದೆ ಅಯ್ಯಾ ?’ ನೀವು ಎಷ್ಟೇ ಚೆಂದದ ಚಿತ್ರವನ್ನು ಬಿಡಿಸಿದರೂ , ಎದ್ದು ಬರುವಂತೆ ಬಣ್ಣಗಳ   ತುಂಬಿದರೂ ಕೂಡ ಅದಕ್ಕೆ    ಜೀವ ತುಂಬಲಾದೀತೆ .? ಆಗದು ಚಿತ್ರಕ್ಕೆ ಬಣ್ಣವ ತುಂಬಬಹುದಲ್ಲದೆ ,  ಪ್ರಾಣವ ತುಂಬಲಾಗದು , ಅದರಂತೆಯೇ… ‘ ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ,  ಭಕ್ತಿಯ ಮಾಡಬಹುದೆ ಅಯ್ಯಾ ?’ ಶಿಷ್ಯನ ತಲೆಯ ಮೇಲೆ ಕೈಯಿಟ...

‘ಬದುಕಿನ ಬಂಡಿಗೆ ಶರಣರ ಸೂತ್ರ’

Image
  ಓಂ ಶ್ರೀಗುರು ಬಸವಲಿಂಗಾಯ ನಮಃ ‘ ಬದುಕಿನ ಬಂಡಿಗೆ ಶರಣರ ಸೂತ್ರ ’ ಕಾಲುಗಳೆರಡು ಗಾಲಿ ಕಂಡಯ್ಯಾ ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ ಬಂಡಿಯ ಹೊಡೆವರು ಐವರು ಮಾನಿಸರು ಒಬ್ಬರಿಗೊಬ್ಬರು ಸಮನಿಲ್ಲವಯ್ಯಾ   ಅದರಿಚ್ಚೆಯನರಿದು ಹೊಡೆಯದಿರ್ದಡೆ ಅದರಚ್ಚು ಮುರಿದಿತ್ತು  # ಗುಹೇಶ್ವರಾ . ✍🏾-;# ಶೂನ್ಯ _ ಸಿಂಹಾಸನಾಧೀಶ್ವರ  ಅಲ್ಲಮಪ್ರಭುಗಳು . ‘ಕಾಲುಗಳೆರಡು   ಗಾಲಿ   ಕಂಡಯ್ಯಾ’ ಬಂಡಿಗೆ ಗಾಲಿಗಳಿರುವಂತೆ ಇದಕ್ಕೂ ಎರಡು ಗಾಲಿಗಳು ಅವು ಕಾಲುಗಳು . ‘ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ’ ಆಸೆ ಆಮಿಷ ಹಲವಾರು ಸಂಸಾರಿಕ   ಚಿಂತೆಗಳ  ತುಂಬಿರುವ ಈ ದೇಹವೆಂಬ ಬಂಡಿಯನ್ನು,   ಹೊಡೆವವರು ಐವರು ಮಾನಿಸರು ಈ ದೇಹವೆಂಬ ಬಂಡಿಗೆ ಆತ್ಮ ಒಡಯ, ಅದನ್ನು ಹೊಡೆಯುವವರು ಐದು ಜನ ಮಾನಿಸರು , ಅಂದರೆ ಪಂಚೇಂದ್ರಿಯಗಳು ಈ ಐದು ಇಂದ್ರಿಯಗಳಲ್ಲಿ ಒಂದಕ್ಕೆ ಒಂದು ಹೊಂದಾಣಿಕೆ ಇಲ್ಲ ,  ಎಲ್ಲವು ತಮ್ಮ ತಮ್ಮ ಪಥದಲ್ಲಿ ಮುನ್ನಡೆಯಲು ಪ್ರಯತ್ನಿಸುತ್ತವೆ , ತಮ್ಮ ಇಷ್ಟದ ಸುಖಗಳನ್ನು ಅನುಭವಿಸಲು   ಪ್ರಯತ್ನಿಸುತ್ತವೆ . ' ಇವುಗಳನ್ನು   ದುರ್ಗುಣಗಳಿಂದ ಸದ್ಗುಣಗಳ ಕಡೆಗೆ ಕರೆತರಬೇಕು ಯಾವುದು   ಆ   ಸತ್ಯ ಸದ್ಗುಣ ಮಾರ್ಗ  ಯಾವ ರೀತಿಯಲ್ಲಿ ಪಂಚೇಂದ್ರಿಯಗಳ   ನಿ...

ಹದ ಮಣ್ಣಲ್ಲದೆ ಮಡಕೆಯಾಗಲಾರದು. ಶರಣೆ_ಕೇತಲದೇವಿಯವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

Image
ಶ್ರೀಗುರುಬಸವಲಿಂಗಾಯ ನಮಃ ಹದ ಮಣ್ಣಲ್ಲದೆ ಮಡಕೆಯಾಗಲಾರದು . ವ್ರತಹೀನನ ಬೆರೆಯಲಾಗದು . ಬೆರೆದಡೆ ನರಕ ತಪ್ಪದುನಾನೊಲ್ಲೆ ಬಲ್ಲೆನಾಗಿ , ಕುಂಭೇಶ್ವರಾ . 👏 ✍🏾 -:   ಕುಂಬಾರ   ಗುಂಡಯ್ಯನವರ   ಪುಣ್ಯಸ್ತ್ರೀ   ಶರಣೆ _ ಕೇತಲದೇವಿವರು.                                   # ಭಾವಾರ್ಥ -; ಬಸವಣ್ಣನವರ ಸಮಕಾಲೀನ ಶರಣರಾದ ಕುಂಬಾರ ಗುಂಡಯ್ಯ ಮತ್ತು ಅವರ ಪತ್ನಿ ಕೇತಲದೇವಿ . ತಮ್ಮ ಮೂಲ ಕಸುಬಾದ ಕುಂಬಾರಿಕೆಯ ಕಾಯಕವನ್ನೇ ಪೂಜೆಯಾಗಿ‌ಸಿಕೊಂಡವರು   ಕುಲ ಕಸುಬಿನಲ್ಲೇ  ಆಧ್ಯಾತ್ಮಿಕ   ಚಿಂತನೆಯನ್ನು ಅಳವಡಿಸಿಕೊಂಡ ಕಾಯಕ ಜೀವಿಗಳಿವರು,  ಇಂದು ಇವರದೊಂದು ವಚನದ ಅನುಭಾವವನ್ನು ಸವಿಯೋಣ ಬನ್ನಿ. ‘ಹದ _ ಮಣ್ಣಲ್ಲದೆ _ ಮಡಕೆಯಾಗಲಾರದು ’ ಒಂದು ಮಡಕೆ ಮಾಡಬೇಕಾದರೆ   ಹದವಾದ ಮಣ್ಣು ಬೇಕು , ಒಂದು ಬದುಕು ಕಟ್ಟಿಕೊಳ್ಳಬೇಕಾದರೆ ಮೃದುವಾದ ಮನಸ್ಸಿರಬೇಕು , ಅದು ಎಲ್ಲಾ ಕ್ರಿಯೆಗೂ ಒಗ್ಗಬೇಕು , ಹದವಾದ ಮಣ್ಣಿಂದ ನೀರು ತುಂಬುವ ಮಡಕೆ,   ಮನೆ ಬೆಳಗುವ ಪ್ರಣತೆ , ಸೇರಿದಂತೆ ಹಲವಾರು ವಸ್ತುಗಳನ್ನು ತಯ್ಯಾರಿಸಬಹುದು . ಆದರೆ ಕ್ರಿಯೆ ತಪ್ಪಿ ಸುಟ್ಟ ಮಡಕೆ ಮರಳಿ ಮತ್ತೆ ಮೃದುವಾಗಿ ಹದವಾಗಲಾರದು . ಅದರಂತೆ ಶರಣರ ಮುಂದೆ ಮೃ...