Posts

Showing posts from October, 2021

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

Image
  ಶ್ರೀಗುರು ಬಸವಲಿಂಗಾಯ ನಮಃ ‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.  ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ. ಮೇಲಿನ ವಚನಕ್ಕೆ ಸಂಬಂಧಿಸಿದಂತೆ ಕಾನೂನಿನ ಅಡಿಯಲ್ಲಿ ಬರುವ ಸೆಕ್ಷನ್ಸ್….👇🏻 ೧)ಕಳಬೇಡ, ಕಳ್ಳತನ ಮಾಡಬೇಡ ಇದು ಐಪಿಸಿ ಸೆಕ್ಷನ್- 378ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ೨) ಕೊಲಬೇಡ, ಜೀವಹತ್ಯೆ ಮಾಡಬೇಡ ಇದು ಐಪಿಸಿ ಸೆಕ್ಷನ್- 300ರ ಪ್ರಕಾರ ಶಿಕ್ಷಾರ್ಹ  ಅಪರಾಧವಾಗಿದೆ. ೩)ಹುಸಿಯ ನುಡಿಯಲು ಬೇಡ, ಸುಳ್ಳು ಹೇಳಬೇಡ ಇದು ಐಪಿಸಿ ಸೆಕ್ಷನ್ - 415 ಮತ್ತು 420ರ ಪ್ರಕಾರ ಅಪರಾಧವಾಗಿದೆ. ೪)ಮುನಿಯಬೇಡ, ಇದು ಐಪಿಸಿ ಸೆಕ್ಷನ್ - 319ರ ಪ್ರಕಾರ ಇದು ಇನ್ನೊಬ್ಬರ ಮನಸ್ಸಿದೆ ನೋವುಂಟು (hurt)ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ೫)ಅನ್ಯರಿಗೆ ಅಸಹ್ಯಪಡಬೇಡ, ಇದು ಐಪಿಸಿ ಸೆಕ್ಷನ್- 295, 295A, 296, 297, 298,ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ೬) ತನ್ನ ಬಣ್ಣಿಸಬೇಡ, ಇದು ಐಪಿಸಿ ಸೆಕ್ಷನ್- 192,  ಪ್ರಕಾರ ತನ್ನ ಬಣ್ಣಿಸಿಕೊಂಡು ಸುಳ್ಳು ಸಾಕ್ಷಿ ಹೇಳಿಕೊಳ್ಳುವುದು ಇದು ಅಪರಾಧವಾಗಿದೆ. ೭)ಇದಿರ ಹಳಿಯಲು ಬೇಡ. ಇದು ಐಪಿಸಿ ಸೆಕ್ಷನ್ - 499ರ ಪ್ರಕಾರ ಇದು ಮಾನನಷ್ಟ, ಮೊಕದ್ದಮೆ ಅಪರಾಧವ...

ಕೋಳಿಗೆ ವೇಳೆಯ ಅರಿವಿದೆ, ಕತ್ತೆಗೆ ಹಸಿವಿನ ಅರಿವಿದೆ, ಮನುಷ್ಯನಿಗೆ ಕನಿಷ್ಠ ತನ್ನ ಅರಿವಾದರೂ ಇರಬೇಕಲ್ಲವೇ. ಷನ್ಮುಖ ಶಿವಯೋಗಿಗಳ ವಚನದ ವಿಶ್ಲೇಷಣೆ.

Image
           ಓಂ ಶ್ರೀಗುರುಬಸವಲಿಂಗಾಯ ನಮಃ ಕೋಳಿ ಕೂಗುವುದು ಬೆಳಗಿನ   ವೇಳೆಯನರಿದು .   ಕತ್ತೆ ಕೂಗುವುದು ತನ್ನ ಹೊತ್ತಿನ ಗೊತ್ತನರಿದು . ಶಿವಭಕ್ತನಾದ ಬಳಿಕ ತನ್ನ ಅರುಹು ಕುರುಹಿನ ಭಕ್ತಿ ಮುಕ್ತಿಯ ಗೊತ್ತನರಿಯದ ಬಳಿಕ  ಆ ಕೋಳಿ ಕತ್ತೆಗಳಿಂದ ಕರಕಷ್ಟ ನೋಡಾ  # ಅಖಂಡೇಶ್ವರಾ .                    -; ಷನ್ಮುಖ ಶಿವಯೋಗಿಗಳು.                             ಭಾವಾರ್ಥ -:  ‘ಕೋಳಿ ಕೂಗುವುದು ಬೆಳಗಿನ ವೇಳೆಯನರಿದು ’ ಗಡಿಯಾರಗಳಿಲ್ಲದ ಅಂದಿನ ಕಾಲಮಾನದಲ್ಲಿ , ಕೋಳಿಯ ಕೂಗು (Alarm) ಅಲಾರಾಮಿನಂತಿತ್ತು . ಸೂರ್ಯನುದಯಕ್ಕೆ ನಾಚಿ ಭಾನು ಕೆಂಪಾದಾಗ ಕೋಳಿ ಕೂಗುತಿತ್ತು . ಆಗ ಬೆಳಗಾಯಿತೆಂದು ಅರಿತು ಜನರು ಎದ್ದೇಳುತಿದ್ದರು . ‘ ಕತ್ತೆ ಕೂಗುವುದು ತನ್ನ ಹೊತ್ತಿನ ಗೊತ್ತನರಿದು ’ ಕತ್ತೆಯು ತನ್ನ ನಿತ್ಯದ ಕೆಲಸದಲ್ಲಿ , ಸತ್ತಂತೆ ಮೈಮರೆತು ದುಡಿಯುತಿದ್ದರೂ ಹಸಿವಾಗುವ ಹೊತ್ತನರಿತು ಕೂಗುತ್ತದೆ . ‘ಶಿವಭಕ್ತನಾದ ಬಳಿಕ ತನ್ನ ಅರುಹು ಕುರುಹಿನ ಭಕ್ತಿ ಮುಕ್ತಿಯ ಗೊತ್ತನರಿಯದ ಬಳಿಕ  ಆ ಕೋಳಿ ಕತ್ತೆಗಳಿಂದ ಕರಕಷ್ಟ ನೋಡಾ...

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

Image
             // ಶ್ರೀಗುರುಬಸವಲಿಂಗಾಯ ನಮಃ// ‘ ಮಾತೋಶ್ರೀ ಸಜ್ಜಲಗುಡ್ಡದ  ಶಿವಯೋಗಿಣಿ  ಶ್ರೀಶರಣಮ್ಮನವರು ’ ಈ ಕಲ್ಯಾಣದ ನಾಡು , ಅನೇಕ ಜನ ಶರಣರು , ಸಂತರು , ಮಹಾಂತರು , ಶಿವಯೋಗಿಗಳು , ಸೂಫಿ ಸಾಧಕರಿಗೆ , ನೆಲೆಯಾಗಿ ನಿಂತಿದೆ . ಅಂಥಹಾ ಮೇರು ವ್ಯಕ್ತಿತ್ವದ ಶರಣರಾದ ಅಣ್ಣಾ ಬಸವಣ್ಣನ ಭಕ್ತಿ , ಚೆನ್ನಬಸವಣ್ಣನ ಕ್ರೀಯೆ , ಅಲ್ಲಮನ ವೈರಾಗ್ಯ , ಸಿದ್ಧರಾಮನ  ಶಿವ ಯೋಗದೃಷ್ಠಿ , ಮತ್ತು ಅಕ್ಕಮಹಾದೇವಿಯ ಪ್ರತಿರೂಪದಂತೆ , ತೋರುವ ಸಜ್ಜಲಗುಡ್ಡದ ಶಿವಶರಣೆ ಶ್ರೀಶರಣಮ್ಮನವರು , ೧೮ - ೧೯ನೇ ಶತಮಾನದಲ್ಲಿ ಬೆಳಗಿದ ಬಸವಜ್ಯೋತಿಯೆಂದೇ ಹೇಳಬಹುದು . ೧೮೭೮ರ ಆಸುಪಾಸಿನಲ್ಲಿ ಇಂದಿನ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ‘ ಮುದೇನೂರ ’ ಎಂಬ ಪುಟ್ಟ ಗ್ರಾಮದಲ್ಲಿ , ಶರಣದಂಪತಿಗಳಾದ ಲಿಂಗಣ್ಣ ಮತ್ತು ತತ್ವಪದಗಳ ಸತ್ವ ಅರಿತ ಶರಣೆ ಲಿಂಗಮ್ಮನವರ ಮಗಳಾಗಿ ಅತ್ಯಂತ ತೇಜಸ್ಸಿನೊಂದಿಗೆ ಹುಟ್ಟಿದ ಮಗುವೇ ಮುಂದೆ ‘ ಸಜ್ಜಲಗುಡ್ಡದಮ್ಮ ’ ಎಂದು ಪ್ರಖ್ಯಾತಳಾದಳು , ಇವರ ಬಾಲ್ಯದ ಹೆಸರು ‘ ಯಮುನಮ್ಮ ’ ಎಂಬುದಾಗಿತ್ತು . ಇವರು ಚಿಕ್ಕವರಿದ್ದಾಗಲೇ ತಂದೆಯನ್ನು ಕಳೆದುಕೊಂಡರು , ಇವರ ಜೀವನ ತುಂಬಾ ಕಷ್ಟಕರವಾಗಿತ್ತು , ಇವರಿಗೆ ಒಬ್ಬ ಸಹೋದರನೂ ಇದ್ದ ಮೂರು ಜನ ಕೂಲಿ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿರುವಾಗಲೇ...