‘ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ‘ ವಿಶ್ವಗುರು ಬಸವಣ್ಣನವರ ವಚನದ ಭಾವಾರ್ಥ ವಿಶ್ಲೇಷಣೆ -; ಲೋಕೇಶ್ ಎನ್ ಮಾನ್ವಿ.

 ಓಂ ಶ್ರೀಗುರುಬಸವಲಿಂಗಾಯ ನಮಃ



ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ
ಅಹಂಕಾರಕ್ಕೆ ಎಡೆಗೊಡದೆ ಲಿಂಗತನುವಾಗಿರಬೇಕು.
ಅಹಂಕಾರರಹಿತವಾದಲ್ಲಿ ಸನ್ನಹಿತ ಕಾಣಾ ಕೂಡಲಸಂಗಮದೇವ.


              ✍🏾-:ವಿಶ್ವಗುರು ಬಸವಣ್ಣನವರು.


                                  #ಭಾವಾರ್ಥ-;



‘#ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ


ನಾನು ನನ್ನಿಂದಲೇಮಾಡುವವ ನೀಡುವವ ನಾನೆ ಎಂಬ ಅಹಂಕಾರ,  ನಿನ್ನ ಮನದಲ್ಲಿ ಬಂದ ತತ್ಕ್ಷಣವೇನಿನ್ನ ಕೇಡುಗಾಲ ಶುರುವೆಂದು ಭಾವಿಸುನಾನೇಎಂಬ ಅಹಂಕಾರ  ನಿನ್ನಲ್ಲಿ ಬಂದ ಮರುಕ್ಷಣವೇ ಆಚಾರವು ಅಡಗುತ್ತದೆಅನಾಚಾರ ತುಂಬುತ್ತದೆಸ್ವಾರ್ಥ ಹೆಚ್ಚುತ್ತದೆ ಅಂತವರಲ್ಲಿ ಲಿಂಗ ತಾನೆಲ್ಲಿಪ್ಪುದೊ.


ಅಹಂಕಾರಕ್ಕೆ ಎಡೆಗೊಡದೆ ಲಿಂಗತನುವಾಗಿರಬೇಕು’.


ಮನದಲ್ಲಿ ಅಹಂಕಾರಕ್ಕೆ ಎಡೆಗೊಡದೆನಾನು ನನ್ನದೆಂಬ ಅಹಂ ಭಾವ ತೊಲಗಿಸಕಲವೂಸಕಲರೂ,  ಶಿವಸ್ವರೂಪಿಗಳೆಂದು ಅರಿತು ಜಗತ್ ಚೈತನ್ಯವೆಂಬ ಜಂಗಮನಿಗೆ ಶರಣಾಗಿ ವಿನಯ ಭಾವ ಮೂಡಬೇಕುದಯೆ,ಕರುಣೆ,ಪ್ರೀತಿ,ಸಮತೆಎಂಬ ಸದಾಚಾರ ತುಂಬಿದ ಮನಸ್ಸು ಸತ್ಕ್ರಿಯೆವುಳ್ಳ ವ್ಯಕ್ತಿಯ ತನುವೇ ಲಿಂಗ ತನು'  ಕಾಯ(ದೇಹ)ವೇ ಕೈಲಾಸ, ‘ದೇಹ ದೇಗುಲಭಾವ ಮೂಡಬೇಕುಮನವೇ ಮಹಾಮನೆಎಂತಾಗಬೇಕುಅಂಗಭಾವ ಅಳಿದು ಲಿಂಗಭಾವ ಮೂಡಬೇಕುಸೃಷ್ಟಿಯಿಂದ ಸಮಷ್ಟಿಯ ಭಾವ ತುಂಬಿರಬೇಕು,.. 


ಅಹಂಕಾರರಹಿತವಾದಲ್ಲಿ ಸನ್ನಹಿತ ಕಾಣಾ ಕೂಡಲಸಂಗಮದೇವ’.

ಯಾರಲ್ಲಿ ಅಹಂಕಾರವಿಲ್ಲವೊಅವರಲ್ಲಿ 'ಸೋಹಂಭಾವ ಬರುವುದಿಲ್ಲ'ದಾಸೋಹಂ’ ಭಾವ ಬರುತ್ತದೆ, ‘ಜಂಗಮಕ್ಕೆರೆದಡೆಸ್ಥಾವರ ನೆನೆದಿತ್ತುಜಂಗಮದ ಮುಖ ಲಿಂಗವಾಗಿ (ಇಡೀ ಸಮಾಜದ)ಮುಖವೇ ಲಿಂಗವಾಗಿ ‘ಸೋಹಂ ಎನ್ನದೇ ದಾಸೋಹಂ’ ಎಂದು ಅಹಂಕಾರ ರಹಿತವಾದವರಲ್ಲಿ ಸದಾ ಸನ್ನಿಹಿತವಾಗಿ ನೆಲಸಿರುವ  ನಮ್ಮ ‘ಕೂಡಲ ಸಂಗಮದೇವಎನ್ನುತ್ತಾರೆ  ವಿಶ್ವಗುರು ಬಸವಣ್ಣನವರು...👏👏



                    


                         ವಿಶ್ಲೇಷಣೆ

           ಶರಣು ಶರಣಾರ್ಥಿಗಳೊಂದಿಗೆ

              ಲೋಕೇಶ್ ಎನ್ ಮಾನ್ವಿ.

Comments

  1. Super explanation... Keep it up ಲೋಕೇಶ್ ಅವರೆ.

    ReplyDelete
  2. ವಚನ ವಿಶ್ಲೇಷಣೆ ಅಥ೯ವತ್ತಾಗಿದೆ
    ಶರಣಾಥಿ೯ಗಳು

    ReplyDelete

Post a Comment

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.