‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

ಓಂ ಶ್ರೀಗುರುಬಸವಲಿಂಗಾಯ ನಮಃ ‘ ನಿ ಜಸುಖಿ ಹ ಡಪದ ಅ ಪ್ಪಣ್ಣನವರು ’ ‘ ನಿ ಜಸುಖಿ ಹ ಡಪದ ಅ ಪ್ಪಣ್ಣನವರು ’ ಹ ನ್ನೆರಡನೇ ಶತಮಾನ ಮೌಢ್ಯತೆಯ ಕಾರ್ಮೋಡದಿಂದ ಸರಿದ ಸುಜ್ಞಾನ ಯುಗ , ಭಕ್ತಿ ಯುಗ , ವೈಚಾರಿಕತೆಯ ಯುಗ , ಸಮಾನತೆ ಸೌಹಾರ್ದತೆಯ ಕಂಡ ಯುಗ , ಅದುವೇ ಬಸವ ಮಹಾ ಯುಗ , ಈ ಬಸವ ಯುಗದ ಉತ್ಸಾಹಿ ಶರಣರೇ ಹಡಪದ ಅಪ್ಪಣ್ಣನವರು , ಅಪ್ಪಣ್ಣನವರ ಜನ್ಮಸ್ಥಳವು ಕೂಡ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದ್ದಾರೆ ಎಂಬ ಪ್ರತೀತಿ ಇದೆ , ಇದು ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರದಿಂದ 6 ಕಿ , ಮಿ ದೂರ ಇದೆ . ಹೀಗಿರುವಾಗ ಹಡಪದ ಅಪ್ಪಣ್ಣ ಎಂದೇ ಪ್ರಖ್ಯಾತರಾದ ಶರಣರ , ಕಾಯಕವಾದ ಹಡಪ ಪದಕ್ಕೆ ಎರಡು ಅರ್ಥವಿದೆ , ಹಡಪ ಎಂದರೆ ಡಬ್ಬೆ ಅದು ವೀಳ್ಯೆದ ಡಬ್ಬೆ , ಹಾಗೂ ಕ್ಷೌರ ಸಾಮಗ್ರಿಯ ಡಬ್ಬೆ , ಎರಡಕ್ಕೂ ಹಡಪ ಎಂಬ ಹೆಸರಿದೆ , ಹೀಗಿರುವಾಗ ಅಪ್ಪಣ್ಣನವರು ಅಪಾರ ಭಕ್ತಿ ಜ್ಞಾನವುಳ್ಳವರಾಗಿದ್ದರು ಕಾಯಕ ಜೀವಿಗಳಾಗಿ ಕ್ಷೌರ ವೃತ್ತಿಯನ್ನು ನಡೆಸಿಕೊಂಡು ಹೋಗುತ್ತಿದ್ದ ಶರಣರು , ಮಾಡುವ ಕಾಯಕ ಯಾವುದಾದರೂ ಅದು ಮೇಲೂ ಅಲ್ಲ, ಕೀಳೂ ಅಲ್ಲ, ತನು_ಮನ_ಧನವೆಂಬ ತ್ರಿಕರಣ ಶುದ್ಧವಾಗಿ ಮಾಡುವುದೇ ಕಾಯಕವಾಗಿದೆ, ಕಾಯಕ ನಿಷ್ಠರಾದ ಶರಣ ಹಡಪದ ಅಪ್ಪಣ್ಣನವರು, ಲಿ...