ಅನುಭಾವವೆಂದರೇನು ? ಓದಿರಿ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ವಚನದ ವಿಶ್ಲೇಶಣೆಯಲ್ಲಿ.

         ಓಂ ಶ್ರೀಗುರುಬಸವಲಿಂಗಾಯ ನಮಃ


ಅನುಭಾವ ಅನುಭಾವವೆಂದೆಂಬರು
ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿರೋ.
ಅನುಭಾವವೆಂಬುದು ಅಂತರಂಗ ಶುದ್ಧಿ ಕಾಣಿರೋ,
ಅನುಭಾವವೆಂಬುದು ರಚ್ಚೆಯ ಮಾತೆ ?
ಅನುಭಾವವೆಂಬುದು ಸಂತೆಯ ಸುದ್ದಿಯೆ ?
ಅನುಭಾವವೆಂಬುದೇನು ಬೀದಿಯ ಪಸರವೆ ?
ಏನೆಂಬೆ ಹೇಳಾ ಮಹಾಘನವ !
ಆನೆಯ ಮಾನದೊಳಗಿಕ್ಕಿದರಡಗೂದೆ ದರ್ಪಣದೊಳಗಡಗೂದಲ್ಲದೆ ?
ಕಂಡ ಕಂಡಲ್ಲಿ ಗೋಷ್ಠಿ, ನಿಂದ ನಿಂದಲ್ಲಿ ಅನುಭಾವ,
ಬಂದ ಬಂದಲ್ಲಿ ಪ್ರಸಂಗವ ಮಾಡುವ
ನಿರ್ಬುದ್ಧಿ ನೀಚರ ಮೆಚ್ಚ *#ಕೂಡಲಚೆನ್ನಸಂಗಮದೇವ.*



ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು



                            #ಭಾವಾರ್ಥ-:


#ಅನುಭಾವ ಅನುಭಾವವೆಂದೆಂಬರು

ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿರೋ,


ಅನುಭಾವ ಎಂಬುದು ತೋರಿಕೆಯ ಹಿರಿತನವರಲ್ಲ,

ಅನುಭಾವವೆಂಬುದು, ಭೂಗರ್ಭದಲ್ಲಡಗಿದ ಖನಿಜ ಸಂಪತ್ತಿದ್ದಂತೆ,

ಚಿನ್ನ-ಮುತ್ತು-ರತ್ನ-ವಜ್ರಗಳ ನಿಕ್ಷೇಪವೇ ಭೂಮಿಯ ಅಂತರಾಳದಲ್ಲಡಗಿರುವಂತೆ,

ತನ್ನೊಳಗೆ ಅನುಭಾವವೆಂಬ ರತ್ನವು ಅಡಗಿದೆ,.


#ಅನುಭಾವವೆಂಬುದು ಅಂತರಂಗ ಶುದ್ಧಿ ಕಾಣಿರೋ,

ಬಹಿರಂಗದಲ್ಲಿ ಆಕರ್ಷಕವಾಗಿ, ವಿಭೂತಿ ಗಂಧ ರುದ್ರಾಕ್ಷಿ, ಹಲವು ಮಣಿಗಳ ಧರಿಸಿತೋರಿಕೆಗೆ ಮಾಗಿದ ಹಣ್ಣಿನಂತೆ ಕಂಡರೂ, ಕೂಡ ಅಂತರಂಗದಲ್ಲಿ ಕೊಳೆತುನಾರುವ ವಿಕಾರತೆ,  ಹಿರಿತನದ ಅಹಂ ತುಂಬಿದ್ದರೆಆತ ಅನುಭಾವಿಯಲ್ಲ, ಬರಿಯ ಭವಿ ಮಾತ್ರಅನುಭಾವಿ ಎಂದರೆ' ಯಾರು,?

ಹಿರಿತನ-ಸಿರಿತನದಲ್ಲಿ ಅಹಂಕಾರ ರಹಿತನುವಿಷಯವಾಸನೆಯಿಲ್ಲದ, ನಿಷ್ಕಲ್ಮಶ ಮನಸ್ಸುಳ್ಳವ, ಅರಿವೇ ಗುರುವೆಂದು ನಂಬಿಸತ್ಯದ ನುಡಿಗಳನ್ನಾಡುವವಕ್ರಿಯೆಯಲ್ಲಿ ಅದರಂತೆ  ನಡೆದುಕೊಂಡುಸದಾಚಾರದಲ್ಲಿ ತಲ್ಲೀನವಾದವ ಅನುಭಾವಿ,


#ಅನುಭಾವವೆಂಬುದು ರಚ್ಚೆಯ ಮಾತೆ ?

#ಅನುಭಾವವೆಂಬುದು ಸಂತೆಯ ಸುದ್ದಿಯೆ ?

#ಅನುಭಾವವೆಂಬುದೇನು ಬೀದಿಯ ಪಸರವೆ ?

ಅನುಭಾವವೆಂಬುದುಕೋಪದಿಂದಾಡುವ ಹಠವಾದಿಗಳ ಮಾತಲ್ಲಅನುಭಾವೆಂಬುದುಸಂತೆಯಲ್ಲಿ ಜನರು ಸೇರಿದಾಗ ಹೇಳುವ ಗಜಿಬಿಜಿಯ ಊರ ಸುದ್ದಿಯೂ ಅಲ್ಲಅನುಭಾವೆಂಬುದುಬೀದಿಯಲ್ಲಿ ಸಿಗುವ ಸರಕು, ಸಾಮಗ್ರಿಯೂ ಅಲ್ಲ,


#ಏನೆಂಬೆ ಹೇಳಾ ಮಹಾಘನವ !

ಆನೆಯ ಮಾನದೊಳಗಿಕ್ಕಿದರಡಗೂದೆ ದರ್ಪಣದೊಳಗಡಗೂದಲ್ಲದೆ ?

ಕಂಡ ಕಂಡಲ್ಲಿ ಗೋಷ್ಠಿ, ನಿಂದ ನಿಂದಲ್ಲಿ ಅನುಭಾವ,

ಬಂದ ಬಂದಲ್ಲಿ ಪ್ರಸಂಗವ ಮಾಡುವ ನಿರ್ಬುದ್ಧಿ ನೀಚರ ಮೆಚ್ಚ #ಕೂಡಲಚೆನ್ನಸಂಗಮದೇವ.


ಅನುಭಾವೆಂಬುದು ಅಂತರಂಗದ ಮಹಾ ಬೆಳಗು,

ಅನುಭಾವೆಂಬುದು ಬಹಿರಂಗದ ಕ್ರಿಯೆ,

ಅನುಭಾವವೆಂಬುದು ಆತ್ಮದ ಅರಿವು,

ಅನುಭಾವವೆಂಬುದು ಸತ್ಯದ ಅಗಮ್ಯ ಅನುಭೂತಿಅನುಭಾವವೆಂಬ ಆನೆಯದು ಅಜ್ಞಾನಿಗಳ ಅಳತೆಗೆ ಸಿಗದುತನ್ನ ತಾನರಿದ ಸಂಯಮ ಜ್ಞಾನಿಗೆ  ದರ್ಪಣದಲ್ಲಿ ಪ್ರತಿಬಿಂಬದಲ್ಲಿ ಗೋಚರಿಸುವುದು,


ಅಂತಲ್ಲದೆ, ಕಂಡ ಕಂಡಲ್ಲಿ ಗುಂಪುಗೂಡಿ ಗೋಷ್ಠಿಗಳನ್ನು ಮಾಡಿಹಣದಾಸೆಗೆ ನಿಂದ ನಿಂದಲ್ಲಿ ಅನುಭಾವವ ನೀಡಿಹೋದಲ್ಲಿ ಬಂದಲ್ಲಿಕೊಟ್ಟವರನ್ನು ಹೊಗಳಿ ಅಟ್ಟಕೇರಿಸಿದುರ್ಬುದ್ಧಿಯಿಂದ ಪೊಳ್ಳು ಮಾತುಗಳನ್ನಾಡುವವರು ಅನುಭಾವಿಗಳಲ್ಲ, ಅದರದ್ದು ಅನುಭಾವವೂ ಅಲ್ಲ,

ಅದು ಬರಿಯ ವ್ಯಾಪಾರ ಮಾತ್ರತನ್ನ ಸ್ವಹಿತಾಸಕ್ತಿಗೆ ಮತ್ತೊಬ್ಬರ ಓಲೈಸುವಂಥಹಾನೀಚ ಮನುಜರನ್ನು 

ನನ್ನ ಆತ್ಮಸಾಕ್ಷಿಯು ಮೆಚ್ಚದುಭಂಗವಂತನೂ ಮೆಚ್ಚಲಾರಎನ್ನುತ್ತಾರೆ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು,..👏🏻👏🏻


                        ವಿಶ್ಲೇಷಣೆ

             ಶರಣು ಶರಣಾರ್ಥಿಗಳೊಂದಿಗೆ

              #ಲೋಕೇಶ್_ಎನ್_ಮಾನ್ವಿ.

Comments

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

ಆರು ಮುನಿದು ನಮ್ಮನೇನ ಮಾಡುವರು, ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ ಲೋಕೇಶ್ ಎನ್ ಮಾನ್ವಿ.

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’