ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.
//ಶ್ರೀಗುರುಬಸವಲಿಂಗಾಯ ನಮಃ//
‘ಮಾತೋಶ್ರೀ ಸಜ್ಜಲಗುಡ್ಡದ ಶಿವಯೋಗಿಣಿ ಶ್ರೀಶರಣಮ್ಮನವರು’
ಈ ಕಲ್ಯಾಣದ ನಾಡು, ಅನೇಕ ಜನ ಶರಣರು, ಸಂತರು, ಮಹಾಂತರು, ಶಿವಯೋಗಿಗಳು, ಸೂಫಿ ಸಾಧಕರಿಗೆ, ನೆಲೆಯಾಗಿ ನಿಂತಿದೆ.
ಅಂಥಹಾ ಮೇರು ವ್ಯಕ್ತಿತ್ವದ ಶರಣರಾದ ಅಣ್ಣಾ ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಕ್ರೀಯೆ, ಅಲ್ಲಮನ ವೈರಾಗ್ಯ, ಸಿದ್ಧರಾಮನ ಶಿವಯೋಗದೃಷ್ಠಿ , ಮತ್ತು ಅಕ್ಕಮಹಾದೇವಿಯ ಪ್ರತಿರೂಪದಂತೆ, ತೋರುವ ಸಜ್ಜಲಗುಡ್ಡದ ಶಿವಶರಣೆ ಶ್ರೀಶರಣಮ್ಮನವರು, ೧೮-೧೯ನೇ ಶತಮಾನದಲ್ಲಿ ಬೆಳಗಿದ ಬಸವಜ್ಯೋತಿಯೆಂದೇ ಹೇಳಬಹುದು.
೧೮೭೮ರ ಆಸುಪಾಸಿನಲ್ಲಿ ಇಂದಿನ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ‘ಮುದೇನೂರ’ ಎಂಬ ಪುಟ್ಟ ಗ್ರಾಮದಲ್ಲಿ, ಶರಣದಂಪತಿಗಳಾದ ಲಿಂಗಣ್ಣ ಮತ್ತು ತತ್ವಪದಗಳ ಸತ್ವ ಅರಿತ ಶರಣೆ ಲಿಂಗಮ್ಮನವರ ಮಗಳಾಗಿ ಅತ್ಯಂತ ತೇಜಸ್ಸಿನೊಂದಿಗೆ ಹುಟ್ಟಿದ ಮಗುವೇ ಮುಂದೆ ‘ಸಜ್ಜಲಗುಡ್ಡದಮ್ಮ’ ಎಂದು ಪ್ರಖ್ಯಾತಳಾದಳು,
ಇವರ ಬಾಲ್ಯದ ಹೆಸರು ‘ಯಮುನಮ್ಮ’ ಎಂಬುದಾಗಿತ್ತು. ಇವರು ಚಿಕ್ಕವರಿದ್ದಾಗಲೇ ತಂದೆಯನ್ನು ಕಳೆದುಕೊಂಡರು, ಇವರ ಜೀವನ ತುಂಬಾ ಕಷ್ಟಕರವಾಗಿತ್ತು, ಇವರಿಗೆ ಒಬ್ಬ ಸಹೋದರನೂ ಇದ್ದ ಮೂರು ಜನ ಕೂಲಿ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿರುವಾಗಲೇ ಇವರ ಊರಿನಲ್ಲಿ ಭೀಕರ ಬರಗಾಲ ಎದುರಾಯ್ತು, ಆಗ ಊರು ತೊರೆದು ಈಗಿನ ಬಳ್ಳಾರಿ ಜಿಲ್ಲೆಯ ಕಂಪ್ಲಿ ಎಂಬಲ್ಲಿಗೆ ಗುಳೆ ಹೋಗುತ್ತಾರೆ ಕೆಲವರ್ಷಗಳ ಕಾಲ ಅಲ್ಲಿನ ಹೊಲಗಳಲ್ಲಿ ಕೆಲಸ ಮಾಡಿತ್ತಾ ಕಷ್ಟದ ಮಧ್ಯೆ ನಿಸ್ವಾರ್ಥ ಜೀವನ ಸಾಗಿಸುತ್ತಿರುವಾಗಲೇ ಇವರ ಸಹೋದರ ತೀವ್ರ ಜ್ವರದಿಂದ ತೀರಿಕೊಳ್ಳುತ್ತಾನೆ ನಂತರ ಕಂಪ್ಲಿ ತೊರೆದು, ಮುಂದೆ ಅಲ್ಲಿಂದ ಬಂದು ರಾಯಚೂರ ಜಿಲ್ಲೆಯ ಕಸಬಾ ಲಿಂಗಸೂಗೂರ ಎಂಬಲ್ಲಿಗೆ ಬರುತ್ತಾರೆ. ಇಲ್ಲಿಯೂ ಕಾಯಕ ನಿಷ್ಠರಾಗಿ ಊರಿನ ಹೊಲಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ ಮೊದಲೇ ಯಮುನಮ್ಮನವರು ಅತ್ಯಂತ ಸಾತ್ವಿತರು ಯಾರೊಂದಿಗೂ ಹೆಚ್ಚು ಮಾತನಾಡದ ಮೌನ ಯೋಗಿನಿಯಾಗಿ ಬೆಳೆದು, ತಾಯಿ ಹೇಳುವ ನಿಜಗುಣ ಶಿವಯೋಗಿಗಳ ತತ್ವಪದಗಳನ್ನು ಅತ್ಯಂತ ಭಕ್ತಿಯಿಂದ ಕೇಳುತ್ತಿಕುವಾಗಲೇ ಮನಸ್ಸಿಗೆ ಆಧ್ಯಾತ್ಮದ ಹಸಿವು ಶುರುವಾಗಿರುತ್ತದೆ, ನಂತರ ಕಸಬಾ ಲಿಂಗಸೂಗೂರು ಬಿಟ್ಟು ತಾಯಿ ಮಗಳಿಬ್ಬರೂ, ತಮ್ಮ ಮುದೇನೂರಿನ ಪರಿಚಿತರಿರುವ ಕಾರಣಕ್ಕೆ ಮಾವಿನಬಾವಿ ಎಂಬ ಗ್ರಾಮಕ್ಕೆ ತೆರಳಿ ಅಲ್ಲಿ ಕೆಲವರ್ಷ ಹೊಲಗಳಲ್ಲಿ ದುಡಿದು ಬದುಕು ಸಾಗಿಸುತ್ತಾರೆ, ಅಲ್ಲಿ ಯಮುನಮ್ಮಳಿಗೆ ಅಕ್ಷರ ಕಲಿಸಲು ಗುಲಾಮ್ ಸಾಬ್ ಎಂಬ ಶಿಕ್ಷಕರು ಉತ್ಸಾಹ ತೋರುತ್ತಾರೆ, ಆಗ ಯಮುನಮ್ಮನವರು ನನಗೆ ಪಾಠದ ಹಂಗಿಲ್ಲ ಆಧ್ಯಾತ್ಮದ ಹಸಿವಿದೆ ಎಂದು ನಿಜಗುಣ ಶಿವಯೋಗಿಗಳ ತತ್ವಪದಗಳನ್ನು ತನ್ನ ತಾಯಿಯ ಬಾಯಿಂದ ಕೇಳುತ್ತಾ ಅದರ ಅರ್ಥವನ್ನೂ ಕೇಳಿ ತಿಳಿದುಕೊಂಡು ತನ್ನಲ್ಲಿನ ಅರಿವಿನ ದಾಹವನ್ನು ನೀಗಿಸಿಕೊಳ್ಳುತ್ತಾಳೆ.
ಆಗ ಯಮುನಮ್ಮನವರಿಗೆ ೧೬-೧೮ ವರ್ಷ ಇರಬಹುದು ತುಂಬು ಯವ್ವನದಲ್ಲಿ ತಾಯಿ, ವೈರಾಗ್ಯ ತುಂಬಿ ಅಕ್ಕಮಹಾದೇವಿಯಂತೆ ಕಂಗೊಳಿಸುತ್ತಿದ್ದಳು. ಇವರ ರೂಪ ಯವ್ವನವನ್ನು ಕಂಡ ಜನ ಮಗಳು ವಯಸ್ಸಿಗೆ ಬಂದಿದ್ದಾಳೆ ಮದುವೆ ಮಾಡು ಎಂದು ಅವರ ತಾಯಿಗೆ ಒತ್ತಾಯಿಸತೊಡಗಿದರು, ಮದುವೆ ಎಂದರೆ ಸಿಡಿಮಿಡಿಗೊಳ್ಳುವ ವೈರಾಗ್ಯನಿಧಿ ಯಮುನಮ್ಮ ಆಧ್ಯಾತ್ಮದ ಹಸಿವಿನಿಂದ ಹಂಬಲಿಸುತ್ತಿದ್ದಳು, ನಂತರ ಐದಾರು ವರ್ಷವಿದ್ದ ಮಾವಿನಬಾವಿಯನ್ನೂ ಬಿಟ್ಟು ತಮ್ಮ ಸ್ವಗ್ರಾಮವಾದ ಮುದೇನೂರಿಗೆ ಬರುತ್ತಾರೆ, ಕೆಲದಿನ ಇಲ್ಲಿಯೂ ಪರಿಶ್ರಮದ ಜೀವನ ನಡೆಸುತ್ತಿರುವಾಗ ಮುಂದೆ ತನ್ನ ಊರಿನಲ್ಲಿಯೂ ಮದುವೆಯ ಪ್ರಸ್ತಾಪ ಬಂದಾಗ ಆ ಊರನ್ನೂ ತೊರೆದು ‘ಸಜ್ಜಲಗುಡ್ಡಕ್ಕೆ’ ಪಾದಾರ್ಪಣೆ ಮಾಡುತ್ತಾಳೆ, ತಾಯಿ ಮಗಳಿಬ್ಬರೂ ಪರಿಚಯಸ್ಥರ ಸಹಾಯದಿಂದ ಹೊಲಗಳಲ್ಲಿ ಕೂಲಿ ಮಾಡಿ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿ ಬದುಕುತ್ತಿರುವಾಗಲೇ ಪಕ್ಕದ ‘ಕಂಬಳಿಹಾಳ’ ಎಂಬ ಗ್ರಾಮದಲ್ಲಿ ಭಕ್ತರ ಮನೆಗೆ ಮಹಾತಪಸ್ವಿಗಳಾದ
ಶರಣ ಗುಡದೂರಿನ ದೊಡ್ಡಬಸವಾರ್ಯರು ಮತ್ತು ಅವರ ಧರ್ಮಪತ್ನಿಯವರು ಆಗಮಿಸುವ ವಿಷಯ ತಿಳಿದು ತಾಯಿಯೊಂದಿಗೆ ಯಮುನಮ್ಮಳು ಕಂಬಳಿಹಾಳಕ್ಕೆ ಅವರ ದರುಶನಕ್ಕೆಂದು ಬರುತ್ತಾಳೆ, ಸಂಸಾರಸ್ಥ ಶಿವಯೋಗಿಗಳಾದ ಗುಡದೂರಿನ ದೊಡ್ಡಬಸವಾರ್ಯರವರ ತತ್ವ ವಿಚಾರಗಳು, ಆಧ್ಯಾತ್ಮಿಕ ನಿಲುವುಗಳು ಯಮುನಮ್ಮನ ಮೇಲೆ ಅತ್ಯಂತ ಪ್ರಭಾವ ಬೀರುತ್ತವೆ. ಅವರ ಅನುಭಾವದ ನುಡಿಗಳನ್ನು ಆಲಿಸುತ್ತಾ ಅವರ ಸನ್ನಿಧಿಯಲ್ಲಿ ಇರುವ ಇಂಗಿತ ವ್ಯಕ್ತಪಡಿಸುತ್ತಾಳೆ ಯಮುನಮ್ಮ, ಮತ್ತು ಮಗಳ ಮಾತಿಗೆ ಒಪ್ಪದ ಲಿಂಗಮ್ಮ, ಕುಲದಲ್ಲಿ ಕಡಿಮೆ ಇರುವ ನಮ್ಮನ್ನು ಅವರು ಇರಿಸಿಕೊಳ್ಳಲಾರರು, ಕೇಳಬೇಡ ಬಾ ಹೋಗೋಣವೆಂದು ಮಗಳಾದ ಯಮುನಮ್ಮಳಿಗೆ ಹೇಳುತ್ತಾಳೆ. ಈ ಮಾತು ಯಮುನಮ್ಮಳಿಗೂ ಯೋಚಿಸುವಂತೆ ಮಾಡುತ್ತದೆ. ಅಷ್ಟರಲ್ಲೇ ಯಮುನಮ್ಮಳನ್ನು ಕಂಡ ಕಂಬಳಿಹಾಳದ ಜನ ದೊಡ್ಡಬಸವಾರ್ಯರಿಗೆ ಇವರ ಬಗ್ಗೆ ತಿಳಿಸುತ್ತಾರೆ. ಆಯ್ತು ಮೂರು ದಿನ ಪರೀಕ್ಷಿಸಿ ನೋಡುವೆನೆಂದ ದೊಡ್ಡಬಸವಾರ್ಯರು ಅಲ್ಲೇ ಈರಮ್ಮ ಎಂಬ ಮಹಿಳೆಯ ಮನೆಯಲ್ಲಿ ಮೂರುದಿನ ಇರಲು ಹೇಳಿ, ಈರಮ್ಮನನ್ನು ಕರೆದು ಯಮುನಮ್ಮನ ಪರೀಕ್ಷಿಸಲು ದೊಡ್ಡ ಧ್ವನಿಯಲ್ಲಿ ಹೇಳುತ್ತಾರೆ, ‘ನಾನೆ ಬದುಕೋದು ಕಷ್ಟವಾಗಿದೆ ಊಟ ಕೊಟ್ಟು ಈ ಹುಡುಗಿಯನ್ನೂ ಸಾಕೋದು ನನಗೆ ಹೊರೆ ಆಗುತ್ತೆ’ ‘ಈಕೆಗೆ ಮೂರುದಿನ ಊಟ ಕೊಡಬೇಡ ಅನ್ನದ ಬೆಲೆ ಗೊತ್ತಾಗಲಿ ತಾನೇ ಇಲ್ಲಿಂದ ತನ್ನ ಮನೆಗೆ ಹೋಗ್ತಾಳೆ’ ಎಂದು ಜೋರಾಗಿ ಹೇಳಿ, ಮತ್ತೆ ಈರಮ್ಮನಿಗೆ ಕಿವಿಗೆ ಮೆಲ್ಲಗೆ ಹೇಳುತ್ತಾರೆ, ದಿನಕ್ಕ ಒಂದ ರೊಟ್ಟಿ ಕೊಡು ಯಮುನಮ್ಮಳಿಗೆ ಎಂದ ತಿಳಿದರು.
ಅದರಂತೆ ದಿನಕ್ಕೊಂದು ರೊಟ್ಟಿ ಸೇವಿಸಿ, ಅಷ್ಟೇ ಉತ್ಸಾಹದಿಂದ, ಕಾತುರದಿಂದ, ಆಧ್ಯಾತ್ಮದ ಹಂಬಲದಿಂದ ಕಾಯುತ್ತಿದ್ದ ಯಮುನಮ್ಮಳ ದೃಢತೆಗೆ ಮೆಚ್ಚಿದ ಗುರು ದೊಡ್ಡಬಸವಾರ್ಯರು, ಅವರ ತಾಯಿಯಾದ ಲಿಂಗಮ್ಮನನ್ನು ಕರೆದು ಯಮುನಮ್ಮಳನ್ನು ಕರೆದುಕೊಂಡು ಗುಡದೂರಿಗೆ ಬನ್ನಿರೆಂದು ಹೇಳುತ್ತಾರೆ. ನಂತರ ‘ಗುಡದೂರಿಗೆ’ ಬಂದ ಯಮುನಮ್ಮ ಮತ್ತವರ ತಾಯಿ ಲಿಂಗಮ್ಮನವರು, ಗಿಡದ ಕೆಳಗೆ ಮಕ್ಕಳಿಗೆ ಶಿಕ್ಷಣ ನೀಡುತ್ತಲಿರುವ ದೊಡ್ಡಬಸವಾರ್ಯರ ಪಾದಗಳಿಗೆ ನಮಸ್ಕರಿಸಿ, ತಾಯಿ ಲಿಂಗಮ್ಮ ಹೇಳುತ್ತಾಳೆ ಈ ದಿಕ್ಕುದೆಸೆಯಿಲ್ಲದ ನಿಸ್ವಾರ್ಥಿ ಮಗಳನ್ನು ನಿನ್ನ ಮಡಿಲಿಗೆ ಹಾಕುತ್ತಿರುವೆನು ಗುರುವೆ ಇವಳಿನ್ನು ನಿನ್ನ ಮಗಳು, ನೀ ಏನಾದರೂ ಮಾಡು ಮನುಷ್ಯಳನ್ನಾಗಿಯಾದರೂ ಮಾಡು, ಮೃಗವನ್ನಾಗಿಯಾದರು ಮಾಡು, ದೇವರನ್ನಾಗಿಯಾದರು ಮಾಡು ದೆವ್ವವನ್ನಾಗಿಯಾದರೂ ಮಾಡು ನಿನ್ನ ಮಗಳು ನಿನ್ನ ಸ್ವತ್ತು ಎಂದು ಗುರು ದೊಡ್ಡಬಸವಾರ್ಯರ ಮಡಿಲಿಗೆ ಹಾಕಿ ಹೊರಟು ಹೋದಳು ತಾಯಿ ಲಿಂಗಮ್ಮ. ನಂತರ ಗುರು ದೊಡ್ಡಬಸವಾರ್ಯರು ಲಿಂಗಮ್ಮಳಿಗೆ ಕೇಳುತ್ತಾರೆ ತಾಯಿ ಏನಾದ್ರು ಅಕ್ಷರ ಕಲಿತಿರುವೆ ಏನಮ್ಮಾ .? ಎಂದರು ಆಗ ಯಮುನಮ್ಮ ‘ಹುಂ ಮುತ್ಯಾ ಅಷ್ಟೋ, ಇಷ್ಟೋ ಕಲಿತಿರುವೆ’ ಎಂದಳು. ಆಗ ಗುರುಗಳು ಷನ್ಮುಖಶಿವಯೋಗಿಗಳ ವಚನಪುಸ್ತಕ ಕೈಗೆ ಕೊಟ್ಟು ಒಂದು ವಚನ ಕಂಠಪಾಠ ಮಾಡಿ ಅರ್ಥ ಸಹಿತ ಒಪ್ಪಿಸಬೇಕು ನಾನು ಪೂಜೆ ಮಾಡಿಕೊಂಡು ಬರುವುದರೊಳಗೆ ತಯ್ಯಾರಿ ಮಾಡಿಕೋ ಎಂದೇಳಿ ಪೂಜೆಗೆ ಹೋದರು.
ಯಮುನಮ್ಮನವರು ಪುಸ್ತಕ ತೆರೆದಾಗ ಕಂಡ ಮೊದಲ ವಚನ ಹೀಗಿದೆ->
ಗುರುವೆ ಪರತತ್ವವು ತಾನೆ ನೋಡಾ.
ಗುರುವೆ ಪರವಸ್ತುವು ತಾನೆ ನೋಡಾ.
ಗುರುವೆ ಪರಬ್ರಹ್ಮವು ತಾನೆ ನೋಡಾ.
ಗುರುವೆ ಪರಶಿವನು ತಾನೆ ನೋಡಾ.
ಗುರುವಿನಿಂದೆ ಪರವಿಲ್ಲವೆಂದು ಸಕಲ ಶ್ರುತಿಗಳು
ಹೊಗಳುತಿಪ್ಪುವು ನೋಡಾ.
ಇಂತಪ್ಪ ಶ್ರೀಗುರುವಿಂಗೆ ನಮೋ ನಮೋ ಎಂಬೆನಯ್ಯಅಖಂಡೇಶ್ವರಾ. ಎಂಬ ವಚನವನ್ನು ಮೊದಲನೇ ವಚನವಾಗಿ ಓದಿ ಉತ್ಸುಕಳಾದ ‘ಯಮುನಮ್ಮ’ ಗುರುಗಳು ಬರುತ್ತಲೇ ವಚನ ಹೇಳಿ ಅರ್ಥ ವಿಶ್ಲೇಷಣೆ ಮಾಡಿ ಗುರು ದೊಡ್ಡಬಸವಾರ್ಯರಿಂದ ಸೈ ಎನಿಸಿಕೊಳ್ಳುತ್ತಾಳೆ. ನಂತರ ಗುರುಗಳು ಇಲ್ಲೇ ಇರು ಮಗಳೇ ನೀನು ಭುವನದ ಬೆಳಕು ಶರಣ ಜ್ಯೋತಿಯಾಗಿ ಬೆಳಗಬೇಕಿದೆ ಎಂದು ಹರಸಿ ಹಾರೈಸಿ ತಮ್ಮ ಮಠದಲ್ಲೇ ಆಶ್ರಯ ಕೊಟ್ಟರು. ಯಮುನಮ್ಮ ತಾಯಿಯವರು ವಚನಗಳನ್ನು ತುಂಬಾ ಸೊಗಸಾಗಿ ಹಾಡುತಿದ್ದರು, ತಂಬೂರಿ ಬಾರಿಸುತ್ತಿದ್ದರು, ಗುರುಗಳು ಇವರಿಗೆ ‘ಷನ್ಮುಖ ಶಿವಯೋಗಿಗಳ’ ವಚನಗಳ ಪುಸ್ತಕವನ್ನು ಕೊಟ್ಟು ಇದನ್ನು ೩ ವರ್ಷಗಳ ಕಾಲ ಓದಿ ಅಧ್ಯಾಯನ ಮಾಡಬೇಕು, ಶರಣ ವಚನಗಳಲ್ಲದೇ ಬೇರೆ ಯಾವುದನ್ನು ಓದಿದರೂ ತನ್ನ ಪುರುಷನ ಬಿಟ್ಟು ಪರಪುರುಷನ ಸಂಗವ ಮಾಡಿದಂತಾಗುತ್ತದೆ ಎಚ್ಚರ, ವಚನಗಳಲ್ಲೇ ಎಲ್ಲವೂ ಇದೆ ನಿನ್ನ ಬದುಕಿಗೆ ನೆಲೆಯಿದೆ, ಮುಂದೆ ನಿನ್ನ ಜೀವವೇ ಈ ವಚನಗಳಾಗಲಿವೆ ಎಂದು ವಚನ ಪುಸ್ತಕವನ್ನು ಕೊಟ್ಟರು.
ಮೂರು ವರ್ಷಗಳ ಕಾಲ ಅತ್ಯಂತ ನಿಷ್ಠಳಾಗಿ ವಚನಗಳನ್ನು ಓದಿ ಅಧ್ಯಾಯನ ಮಾಡಿದ ಯಮುನಮ್ಮ ತಾಯಿ ಕ್ಷಣಕ್ಷಣವೂ ವಚನಗಳನ್ನೇ ಗುನುಗುತ್ತಿದ್ದರು, ಅಷ್ಟರ ಮಟ್ಟಿಗೆ ಸಮಗ್ರ ವಚನ ಸಂಪುಟವೇ ಅವರ ಮನದಲ್ಲಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಯಾವಾಗ ಕೇಳಿದರೂ ತಾಯಿಯ ಬಾಯಲ್ಲಿ ವಚನಗಳೇ ಬರುತ್ತಿದ್ದವು.
‘ಯಮುನಮ್ಮ ಸಜ್ಜಲಗುಡ್ಡದ ಶ್ರೀಶರಣಮ್ಮಳಾಗಿದ್ದು’ ‘ಯಮುನಮ್ಮ’ ಸಂಪೂರ್ಣವಾಗಿ ಭವಿತ್ವದಿಂದ ವಿಮುಖಳಾಗಿ ಅಕ್ಕಮಹಾದೇವಿಯಂತೆ ಚೊಕ್ಕ ಶರಣೆಯಾಗಿದ್ದಳು. ಇದನ್ನು ಕಂಡ ದೊಡ್ಡಬಸವಾರ್ಯರು ಜಾತಿಯಿಂದ ಹಾಲುಮತದ ಕುರುಬ ಸಮುದಾಯದವರಾದ ಯಮುನಮ್ಮಳಿಗೆ ಲಿಂಗವಿರಲಿಲ್ಲ, ಆಗ ದೊಡ್ಡಬಸವಾರ್ಯರು ‘ಯಮುನಮ್ಮಳಿಗೆ ಕರೆದು ಲಿಂಗದೀಕ್ಷೆಯನ್ನು ಕೊಡುತ್ತಾರೆ’ ನಂತರ ‘ಯಮುನಮ್ಮ ‘ಮಹಾಸಾದ್ವಿ ಶ್ರೀಶರಣಮ್ಮಳಾಗಿ ಪ್ರಖ್ಯಾತಿ ಪ್ರಖ್ಯಾತಳಾಗುತ್ತಾಳೆ’ ಈ ವಿಷಯ ಆ ದಿನಮಾನಗಳ ಜಾತಿ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲತೆಯನ್ನೇ ಸೃಷ್ಠಿಸುತ್ತದೆ, ಜಾತಿವಾದಿಗಳು ಪಟ್ಟಭದ್ರರು ಕೆಲ ಸ್ವಾಮಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸುತ್ತಾರೆ, ಇವರನ್ನು ಗಡಿಪಾರು ಮಾಡುವ ನಿರ್ಣಯಕ್ಕೆ ಬರುತ್ತಾರೆ. ಆಗ ಶರಣಮ್ಮನವರು ನನ್ನಿಂದ ನನ್ನಪ್ಪನಿಗೆ ಬಹಿಷ್ಕಾರ ಹಾಕುವ ಪರಿಸ್ಥಿತಿ ಬಂತಲ್ಲ, ಎಂದು ಕೊರಗುತ್ತಾರೆ. ಅಷ್ಟರಲ್ಲೇ ಇಲಕಲ್ಲ ವಿಜಯಮಹಾಂತಪ್ಪರ ಒಡನಾಡಿಯಾದ ‘ಕಂದಗಲ್ಲಿನ ಪರ್ವತಯ್ಯ ಶಾಸ್ತ್ರಿಗಳು’ ಗುರುಬಸವಾರ್ಯರ ಕ್ರಾಂತಿಕಾರಿ ನಿಲುವನ್ನು ಒಪ್ಪಿ ಮೆಚ್ಚುಗೆಯ ನುಡಿಗಳನ್ನಾಡುತ್ತಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸುವ ಯಾವುದೇ ಸ್ವಾಮಿಗಳ ಜೊತೆ ಬೇಕಾದರೂ ಚರ್ಚೆ ಮಾಡಿ ಮಾತಾಡ್ತಿನಿ, ‘ಇಷ್ಟಲಿಂಗ’ ಇಷ್ಟಪಟ್ಟು ಬಂದ ಬೇಕಾದ್ದವರಿಗೆ ಕೊಡು ಬೇಡ ಅನ್ನೋರನ್ನ ನಾನ್ ನೋಡ್ಕೊತೀನಿ ದೊಡ್ಡಬಸವಾರ್ಯ, ಚೊಲೋ ಕೆಲ್ಸ ಮಾಡಿದಿ ತಾಯಿಗೆ ದೀಕ್ಷೆ ಮಾಡಿ, ಎಂದು ಪ್ರಶಂಸಿಸಿ ಬೆನ್ನೆಲುಬಾಗಿ ನಿಲ್ಲುತ್ತಾರೆ.
ಅದರಿಂದ ಗುರುಗಳಿಗೆ ಟೀಕೆಗಳು ಬಂದ ಕಾರಣ ಅವ್ವ ಶ್ರೀಶರಣಮ್ಮನವರು ಯಾರೂ ಹುಹಿಸದ ರೀತಿಯಲ್ಲಿ ಹೊಸ ಪರಿಕಲ್ಪನೆಯಲ್ಲಿ ತನ್ನ ತುರುಬಿಲ್ಲಿ ಇಷ್ಟಲಿಂಗವನ್ನು ಇಟ್ಟುಕೊಂಡು, ತಲೆ ತುಂಬಾ ಸೆರಗು ಹೊದ್ದುಕೊಂಡು ಶಿರಬಾಗಿ ಕೈಯಲ್ಲಿ ವಚನ ಪುಸ್ತಕವಿಡಿದು ಓದುತ್ತಾ ಕೂಡುತ್ತಿದ್ದರು. ನಂತರ ಕಂದಗಲ್ಲ ಪರ್ವತಯ್ಯ ಶಾಸ್ತ್ರಿಗಳ ಬೆಂಬಲ ಸಿಕ್ಕ ಮೇಲೆ ಆನೆಬಲ ಬಂದಂತಾಯಿತು. ತುರುಬಿನಲ್ಲಿನ ಲಿಂಗಯ್ಯನನ್ನು ಎದೆಯ ಮೇಲೆ ಕಟ್ಟಿಕೊಂಡರು. ತದನಂತರ ದಿನದ ಬಹುಪಾಲು ಸಮಯವನ್ನು ಶಿವಯೋಗ ಸಾಧನೆಯಲ್ಲೇ ಕಳೆಯುತ್ತಿದ್ದರು ಮಹಾನ್ ಶಿವತೇಜಸ್ವಿಯಾದ ಶ್ರೀಶರಣಮ್ಮ ತಾಯಿಯವರು. ನಂತರ ಗುರು ದೊಡ್ಡಬಸವಾರ್ಯರು ಇವರನ್ನು ‘ಕಂಬಳಿಹಾಳ’ಮತ್ತು ‘ಸಜ್ಜಲಗುಡ್ಡದಲ್ಲಿ’ ನೆಲಸಿರೆಂದು ಹೇಳಿ ಕಳುಹಿದರು. ಮುಂದೆ ಇವರು ಪರಿಪೂರ್ಣವಾಗಿ ಶಿವಯೋಗಿಣಿಯಾದರು.
ಬಸವಣ್ಣನೆ ಗುರುವೆನಗೆ
ಬಸವಣ್ಣನೆ ಲಿಂಗವೆನಗೆ
ಬಸವಣ್ಣನೆ ಜಂಗಮವೆನಗೆ
ಬಸವಣ್ಣನೆ ಪಾದೋದಕವೆನಗೆ
ಬಸವಣ್ಣನೆ ಪ್ರಸಾದವೆನಗೆ
ಬಸವಣ್ಣನೆ ವಿಭೂತಿಯೆನಗೆ
ಬಸವಣ್ಣನೆ ರುದ್ರಾಕ್ಷಿಯೆನಗೆ
ಬಸವಣ್ಣನೆ ಮೂಲಮಂತ್ರವೆನಗೆ
ಬಸವಣ್ಣನೆ ಅಷ್ಟಾವರಣವೆನಗೆ
ಬಸವಣ್ಣನೆ ಪಂಚಾಚಾರವೆನಗೆ
ಬಸವಣ್ಣನೆ ಷಟ್ಸ್ಥಲಬ್ರಹ್ಮವೆನಗೆ
ಬಸವಣ್ಣನೆ ಸರ್ವಾಚಾರಸಂಪತ್ತಾದನಾಗಿ ಬಸವಣ್ಣನ ಹಾಸಿಕೊಂಡು
ಬಸವಣ್ಣನ ಹೊದ್ದುಕೊಂಡು
ಬಸವಣ್ಣನ ಸುತ್ತಿಕೊಂಡು
ಬಸವಣ್ಣನ ಧರಿಸಿಕೊಂಡು
ಬಸವಣ್ಣನ ಚಿದ್ಗರ್ಭದೊಳಗೆ ಕುಳ್ಳಿರ್ದು ನಾನು ಬಸವ ಬಸವ ಬಸವಾ ಎನುತಿರ್ದೆನಯ್ಯಾ ಅಖಂಡೇಶ್ವರಾ. ಎಂಬ ಷನ್ಮುಖ ಶಿವಯೋಗಿಗಳ ವಚನದಂತೆ ಬಸವಣ್ಣಾದಿ ಶರಣರ ನೆನಹಿನಲ್ಲೇ ಜೀವನ ಕಳೆಯುತ್ತಿವಾಗ, ೧೯೩೪ರಲ್ಲಿ ಅವರ ಗುರುಗಳಾದ ‘ಗುರುಬಸವಾರ್ಯರು’ ಲಿಂಗೈಕ್ಯರಾಗುತ್ತರೆ. ಈ ವಿಷಯ ತಿಳಿದ ಜಾತಿವಾದಿಗಳು ಮತ್ತೆ ಶರಣಮ್ಮನವರನ್ನು ಟೀಕಿಸುವುದಕ್ಕೆ ಶುರುಮಾಡಿದರು, ಆಗ ಇವರ ಬೆಂಬಲಕ್ಕೆ ನಿಂತವರು ‘ಹಾಲಕೆರೆಯ ಅನ್ನದಾನ ಸ್ವಾಮಿಗಳು’ ಸಜ್ಜಲಗುಡ್ಡಕ್ಕೆ ಬಂದು ತಾಯಿಯ ಬೆಂಬಲ ನಿಂತರು. ಇತ್ತ ತಾಯಿಯವರು ಲಿಂಗ ಧ್ಯಾನದಲ್ಲೇ ಅಂತರ್ಮುಖಿಗಳಾಗಿರುತ್ತಿದ್ದರು. ಅವರ ಮಲಗಿದಾಗ ಅವರ ಉಸಿರಾಟವೂ ಓಂಕಾರ ನಾದವಾಗಿಯೇ ಕೇಳುತ್ತಿತ್ತೆಂದು ಅವರ ಒಡನಾಡಿಗಳು ಹಿರಿಯ ಭಕ್ತರು ಹೇಳುತ್ತಿದ್ದರು.
ಅವರಿಗೆ ‘ಬಸವಣ್ಣ’ ಎಂದರೆ ಅಚ್ಚುಮೆಚ್ಚಿನ ಶರಣ ಅವರು ಎಲ್ಲರಲ್ಲೂ ಬಸವನನ್ನೇ ಕಾಣುತ್ತಿದ್ದರು. ಅವರಿಗೆ ಹಣದ ಪರಿವೇ ಇರಲಿಲ್ಲ ನಾಣ್ಯಗಳಿಗೆ ಒಂದು ನಾಣ್ಯಕ್ಕೆ ಒಂದು ಬಸವ, ಎರಡು ನಾಣ್ಯಕ್ಕೆ ಎರಡು ಬಸವ, ಎಂಬಂತೆ ನಾಣ್ಯಗಳು ಅವರ ಕಣ್ಣಿಗೆ ಕಾಣಲಿಲ್ಲ. ಎಲ್ಲೆಲ್ಲೂ ಕಂಡದ್ದು ಬರಿ ಬಸವನೆ ಬಸವನೇ…
೧೯೫೦ರಲ್ಲಿ ‘ಅಣ್ಣನ ಬಳಗ ಮತ್ತು ಅಕ್ಕನ ಬಳಗ’ ಸ್ಥಾಪಿಸಿ ಸೋಮವಾರ ಮತ್ತು ಗುರುವಾರ ಎಂಬಂತೆ ವಾರದಲ್ಲಿ ಎರೆಡು ದಿನ, ಕಂಬಳಿಹಾಳ ಮತ್ತು ಸಜ್ಜಲಗುಡ್ಡದಲ್ಲಿ ಅನುಭಾವ ಕಾರ್ಯಕ್ರಮ ನೆಡೆಯುತ್ತಿದ್ದವು ವಚನ ಚಿಂತನೆಗಳು ಹಿಂದುಳಿದ ಅನಕ್ಷರಸ್ಥ ಮಹಿಳೆಯರ ಕರೆತಂದು ಅಕ್ಕನ ಬಳಗದ ಮಹಾದೇವಿಕ್ಕ ನೀವೆಂದು ಕರೆದು ಅವರಿಗೆ ವಚನಗಳ ಕಲಿಸಿ ಒಬ್ಬೊಬ್ಬರೂ ವಾರದಲ್ಲಿ ಹತ್ತು ವಚನ ಬಾಯಿಪಾಠ ಮಾಡಿ ಹೇಳುವ ರೂಡಿ ಹಾಕಿದರು.
ಗ್ರಾಮದ ಬಡ ಜನರಿಗೂ ಅಕ್ಷರ ಕಲಿಸಲು ವಚನಗಳ ತಿಳಿಸಲು ಪ್ರಯತ್ನಿಸಿ ೧೯೫೦ರಲ್ಲೇ ಯಶಸ್ಸು ಕಂಡರು ಶ್ರೀಶರಣಮ್ಮ ತಾಯಿ. ಪೈಸೆ ಪೈಸೆಯೂ ಕೂಡಿಸಿ ದಾಸೋಹ ಮಾಡಿ, ಅಕ್ಕಮಹಾದೇವಿಯ ಮೂರ್ತಿ ತಂದರು ಬಂಥನಾಳದ ಶಿವಯೋಗಿಗಳು ಬಂದು ಉದ್ಘಾಟನೆ ಮಾಡಿದರು. ಶ್ರೀಶರಣಮ್ಮನವರು ಶಿವಯೋಗದಲ್ಲಿ ಕುಳಿತರೆ ಅತ್ಯಂತ ತಲ್ಲೀನರು, ಅವರು ಶಿವಯೋಗ ಮುಗಿಸಿ ಬಂದಾಗ ಅವರ ಮುಖವನ್ನು ನೋಡುವುದೇ ಭಕ್ತರಿಗೆ ಮಹದಾನಂದವಾಗಿತ್ತು. ಅಮ್ಮನವರು ಪೂಜೆಗೆ ಕುಳಿತಾಗ ತುರ್ತು ಕಾರ್ಯ ನಿಮಿತ್ಯ ಬಾಗಿಲು ತಗೆದು ಒಳಹೋದ ಅವರ ಸಖಿಯರಿಗೆ ಅವರ ಕೈಯಲ್ಲಿ ಕಂಡದ್ದು, ‘ಇಷ್ಟಲಿಂಗದ ಬದಲು ಅತ್ಯಂತ ಪ್ರಕಾಶಮಾನವಾದ ಬೆಳಕು’ ಅವರ ಅಂಗೈಯಲ್ಲಿ ಕಂಡವರಿದ್ದಾರೆ, ಶಿವಯೋಗದಲ್ಲಿ ಉನ್ನತ ಸ್ಥಾನ ತಲುಪಿದ ಅಮ್ಮನವರ ನಡೆ ಪರುಷ, ನುಡಿಪರುಷ, ದೃಷ್ಠಿಪರುಷ, ಪಾದಪರುಷವಾಗಿದ್ದವು, ಅವರು ನುಡಿಯುವುದೇ ಅಪರೂಪ ಅವರ ಪ್ರತಿ ಮಾತು ಸತ್ಯವಾಗುತ್ತಿದ್ದವಂತೆ, ಅವ್ವ ಶ್ರೀಶರಣಮ್ಮತಾಯಿ ಮಾಳಿಗಿ ಕಸ ಗುಡಿಸಿದರೆ ಊರ ಜನರು ಶೀಘ್ರದಲ್ಲೇ ಮಳೆ ಬರುವುದು ಖಾತರಿ ಎಂದು ಒಣ ನೆಲದಲ್ಲೇ ಬೀಜ ಬಿತ್ತಿ ಬಿಡುತ್ತಿದ್ದರು, ಸಜ್ಜಲಗುಡ್ಡದ ಜನರು ನಂತರ ಉತ್ತಮ ಮಳೆಯಾಗಿ ಫಲವತ್ತಾದ ಬೆಳೆ ಬೆಳೆದ ರೈತರು ಖುಷಿಯಿಂದ ಅಮ್ಮನವರನ್ನು ಕಂಡು ಗೌರವಿಸುತ್ತಿದ್ದರು.
ಮತ್ತು ಅನೇಕ ಜನರು ಮದುವೆಯಾಗಿ ಹತ್ತು ಹನ್ನೆರಡು ವರ್ಷಗಳಾದರೂ ಮಕ್ಕಳಾಗದೇ ಇದ್ದವರು ಅಮ್ಮನ ಕೃಪೆಗೆ ಪಾತ್ರರಾಗಿ ಮಕ್ಕಳಿಗೆ ಜನ್ಮ ನೀಡಿದ ಉದಾಹರಣೆಗಳು ಸಾಕಷ್ಟಿವೆ, ಮತ್ತು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮಕ್ಕಳಿಗೆ ಹೆಸರು ಸೂಚಿಸಿ ಎಂದು ಹಲವಾರು ಜನ ಅಮ್ಮನವರಲ್ಲಿಗೆ ಬರುತ್ತಿದ್ದರು ಅವರಿಗೆ ಅಮ್ಮನವರು, ‘ಬಸವ ಚೆನ್ನಬಸವ ಬಸಮ್ಮ ನೀಲಮ್ಮ ನಾಗಮ್ಮ ಸಿದ್ದರಾಮ ಶಿವಕುಮಾರ’ ಎಂದು ಹೆಚ್ಚಾಗಿ ಬಸವಾದಿ ಶರಣರ ಹೆಸರುಗಳನ್ನೇ ಸೂಚಿಸುತ್ತಿದ್ದರು ಅಮ್ಮನರು. ಸಜ್ಜಲಗುಡ್ಡದ ಗ್ರಾಮೀಣ ಭಾಗದ ಜನರ ಬಗ್ಗೆ ಅಮ್ಮನವರಿಗೆ ಎಲ್ಲಿಲ್ಲದ ಪ್ರೀತಿ ಇಲ್ಲಿನ ಮಕ್ಕಳು ಶಿಕ್ಷಣ ವಂಚಿತರಾಗುವುದನ್ನು ತಡೆಯಲು ಎಸ್,ಆರ್ ಕಂಠಿಯವರು ಅಮ್ಮನ ದರುಶನಕ್ಕೆ ಬಂದಾಗ, ಸಜ್ಜಲಗುಡ್ಡಕ್ಕೆ ಒಂದು ಪ್ರೌಢಶಾಲೆಯನ್ನು ಮಂಚೂರು ಮಾಡಿಲು ಕೇಳಿದರು. ಅದರಂತೆ ಸಜ್ಜಲಗುಡ್ಡದಲ್ಲಿ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ಇತ್ತ ಅಮ್ಮನವರ ದರುಶನಕ್ಕೆಂದು ಬಂದ ಹಲವಾರು ಸ್ವಾಮಿಗಳು ರಾಜಕೀಯ ದುರೀಣರು ಅಮ್ಮನವರ ದರುಶನ ಪಡೆಯುತ್ತಿದ್ದರು.
ಯಾರೇ ಬಂದರೂ ಅಮ್ಮನವರು ಒಳೆದಾಗ್ಲಿ ಶರಣು. ಎನ್ನುತ್ತಿದ್ದರು ಯಾರಲ್ಲೂ ಬಿನ್ನತೆ ಕಾಣದೆ ಬಂದ ಪ್ರತಿ ಭಕ್ತರಲ್ಲೂ ಶಿವನನ್ನೇ ಕಾಣುತ್ತಿದ್ದರು.
‘ಬಸವಣ್ಣನವರ ತತ್ವವನ್ನು’ ಅಕ್ಷರ ಸಹ ಚಾಚೂ ತಪ್ಪದೇ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದವರು ಶ್ರೀ ಶರಣಮ್ಮ ತಾಯಿಯವರು. ಜೀವನದುದ್ದಕ್ಕೂ ಗುರುವಾಕ್ಯ ಪಾಲಿಸಿದರು ದಿನಕ್ಕೆ ಐದು ಮನೆಯಲ್ಲಿ ಬಿಕ್ಷೆ ಬೇಡಿ ತಂದು ದಿನಕ್ಕೆ ಒಂದೇ ಬಾರಿ ಪ್ರಸಾದ, ಒಂದೇ ಬಾರಿ ನೀರು ಸೇವನೆ ಮಾಡುತ್ತಿದ್ದರೆ. ಸಂಪೂರ್ಣ ೧೦೨ ವರ್ಷಗಳ ಮೌಲ್ಯಯುತ ತತ್ವಪೂರ್ಣ ಜೀವನವನ್ನು ಸಾಗಿಸಿ, ನೂರು ವರ್ಷ ತುಂಬಿದಾಗಲೂ ಮನದುಂಬಿ ವಚನಗಳ ಹಾಡುತ್ತಿದ್ದರು.
ಬಸವ ನಾಮವೇ ಕಾಮದೇನು ಕಾಣಿರೋ,
ಬಸವ ನಾಮವೇ ಕಲ್ಪವೃಕ್ಷ ಕಾಣಿರೋ,
ಬಸವ ನಾಮವೇ ಚಿಂತಾಮಣಿ ಕಾಣಿರೋ,
ಬಸವ ನಾಮವೇ ಪರುಷದಖಣಿ ಕಾಣಿರೋ,
ಬಸವ ನಾಮವೇ ಸಂಜೀವನಮೂಲಿಕೆ ಕಾಣಿರೋ,
ಇಂತಪ್ಪ ಬಸವನಾಮ ಮನದುಂಬಿ ಹೊರಸೂಸಿ,
ಸಕಲ ಕರಣೇಂದ್ರಿಯಗಳ ತುಂಬಿ ಹೊರಸೂಸಿ,
ಸಕಲ ರೋಮರೋಮವನ್ನೂ ವೇಧಿಸಿತ್ತಾಗಿ ನಾನು ಬಸವಾಕ್ಷರವೆಂಬ ಹಡಗನೇರಿ ಬಸವಾ ಬಸವಾ ಬಸವಾ ಎಂದು ಭವಸಾಗರವ ದಾಂಟಿದೆನು ಕಾಣಾ ಅಖಂಡೇಶ್ವರಾ. ಎಂದು ಬದಕಿನ ಕೊನೆವರೆಗೂ ಬಸವಣ್ಣನವರನ್ನು ಅತ್ಯಂತ ಭಕ್ತಿಯಿಂದ ಹಾಡಿ ಕೊಂಡಾಡುತ್ತಲಿದ್ದರು, ಶ್ರೀಶರಣಮ್ಮತಾಯಿಯವರು ಬದುಕಿನುದ್ದಕ್ಕೂ ಎಂದೂ ಸಹ ಭಕ್ತರಿಂದ ತಮ್ಮ ಕಾಲು ಮುಟ್ಟಿಸಿ ನಮಸ್ಕರಿಸಿಕೊಂಡವರಲ್ಲ, ತಾವೇ ಭಕ್ತರಿಗೆ ಅಪ್ಪ ಶರಣು, ಅಮ್ಮಾ ಶರಣು, ಎಂದು ಕೈಮುಗಿದು ನಮಸ್ಕರಿಸುತ್ತಿದ್ದ ಮಹಾನ್ ಸರಳ ಜೀವಯಾದ ಅವ್ವ ಶರಣಮ್ಮನವರು, ಬಸವಣ್ಣನವರಂತೆ ಬಾಗಿದ ಶಿರವಾಗಿ ಮುಗಿದ ಕೈಯಾಗಿ ಸದಾ ವಚನ ಪುಸ್ತಕ ಹಿಡಿದು, ತುಂಬು ಸೆರಗುಹೊದ್ದು, ಬಸವಣ್ಣ ಬಸವಪ್ಪ ಬಸವರಸ ಎಂದು ಬಂದ ಭಕ್ತರಿಗೆ ತಾನೇ ಭಕ್ತಿಯಿಂದ ಶರಣು ಎನ್ನುತ್ತಿದ್ದಳು ಅವ್ವ ಶ್ರೀಶರಣಮ್ಮನವರು,
ಬಾಗಿಲ ವಸ್ತಲಲ್ಲೇ ಜನ ತಾಯಿಯನ್ನು ಕಂಡು ಶರಣೆನ್ನುತ್ತಿದ್ದರು,
ಅವ್ವ ಎಂದೂ ಪಾದ ಮುಟ್ಟಿಸಿಕೊಂಡು ನಮಸ್ಕರಿಸಿಕೊಂಡವರಲ್ಲ. ತಾನು ದೇವರಲ್ಲ ಭಕ್ತೆ ಮಾತ್ರ, ತನ್ನ ಸಂದರ್ಶಿಸ ಬಂದ ಭಕ್ತರೆಲ್ಲರೂ ಶಿವನ ಸ್ವರೂಪರೆಂದು, ಭಕ್ತರಿಗೇ ಕೈಮುಗಿಯುತ್ತಿದ್ದಳು ಅವ್ವ ಸಜ್ಜಲಾಂಬೆ. ಸದಾ ಗುರುಲಿಂಗಜಂಗಮ ಪ್ರಿಯರಾಗಿ ೧೦೨ ವರ್ಷ ಬದುಕಿ ಈ ನಾಡ ಜನರ ಬಾಳಿಗೆ ಬೆಳಕಾಗಿ ಪ್ರಜ್ವಲಿಸಿದ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರು ೧೯೮೧ರ ಎಪ್ರೀಲ್ ೨೪ರಂದು ಅದೇ ಸಜ್ಜಲಗುಡ್ಡ ಸುಕ್ಷೇತ್ರದಲ್ಲೇ ಲಿಂಗದಲ್ಲಿ ಲೀಯವಾದರು ಬಸವ ಬಯಲಿನಲ್ಲಿ ಬಯಲಾಗಿ ಭಕ್ತಾವಳಿಗಳ ಮನದಲ್ಲಿ ಅಜರಾಮರವಾಗಿ ಉಳಿದರು, ಪ್ರತಿಯೊಬ್ಬ ಭಕ್ತರೊಳಗೂ ಉಸಿರಾಗಿ ನೆಲೆನಿಂತರು ‘ಮಾತೋಶ್ರೀ ಸಜ್ಜಲದುಡ್ಡದ ಶ್ರೀಶರಣಮ್ಮ ತಾಯಿಯವರು’ 🙏🏻🙏🏻❤️😢
ಮಾತೋಶ್ರೀ ಶ್ರೀಶರಣಮ್ಮ ತಾಯಿಯ ಬಗ್ಗೆ ಬೆರೆಯಲು ನನಗೆ ಎಷ್ಟಾದರೂ ಕಡಿಮೆಯೇ ನಮ್ಮ ಅನೇಕ ಹಿರಿಯರಿಂದ ಕೇಳಿ ತಿಳಿದ ನೈಜ ಸಂಗತಿಗಳೇ ನನಗೆ ಮಾತೋಶ್ರೀಯವರ ಸರಳ ಜೀವನದ, ನೈಜ ಚಿತ್ರಣವನ್ನು ಈ ಚಿಕ್ಕ ಲೇಖನದ ಮೂಲಕ ತೆರೆದಿಡುವಂತೆ ಪ್ರೇರೇಪಿಸಿತು. ಅಮ್ಮನ ಬಗ್ಗೆ ತಿಳಿದಷ್ಟು ಕುತೂಹಲ, ಮತ್ತು ಭಕ್ತಿ ಹೆಚ್ಚಾಗುತ್ತಾ ಸಾಗುತ್ತದೆ ಶರಣರ ಬದುಕೆಂದರೆ ಆಳಕ್ಕೆ ಆಳ, ಮುಗಿಯದ ವಿಸ್ತಾರವೇ ಸರಿ. ಅಮ್ಮ ಎಂದರೆ ಸಮುದ್ರವಿದ್ದಂತೆ, ನಾನಿಲ್ಲಿ ಬೊಗಸೆ ನೀರು ತುಂಬುವ ಪ್ರಯತ್ನ ಮಾಡಿದ್ದೇನಷ್ಟೆ. ‘ಅಮ್ಮನ ಸ್ಮರಣೆಯಿಂದ ಪ್ರಾರಂಭಿಸಿದ ನನ್ನೆರೆಡು ತೊದಲು ನುಡಿಗಳನ್ನು’ ‘ಮಾತೋಶ್ರೀ ಶ್ರೀಶರಣಮ್ಮ ತಾಯಿಯ ಪಾದಕ್ಕೆ ಅರ್ಪಿಸಿದ್ದೇನೆ. ಉರಿ ಬರಲಿ, ಸಿರಿ ಬರಲಿ, ಅಮ್ಮನ ಕರುಣೆಯೇ ನಮ್ಮ ಕಾಪಾಡಲಿ..🙏🏻💞🙏🏻‘
ಎಲ್ಲರಿಗೂ ಶರಣು ಶರಣಾರ್ಥಿಗಳೊಂದಿಗೆ.
✍🏾ಲೇಖನ-;ಲೋಕೇಶ್ ಎನ್ ಮಾನ್ವಿ. ೯೯೭೨೫೩೬೧೭೬. 9972536176
Google Map-👇🏻👇🏻👇🏻
Sir, it's very good Article u present, thank u ver much,,I am very happy by studying this article
ReplyDeleteThank you sir Sharanarthi.🙏🏻💞🙏🏻
Deleteಶರಣರ ಜೀವನ ತೆರೆದ ಪುಸ್ತಕ. ಪರಿಚಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಶರಣಮ್ಮ ತಾಯಿಗೆ ತಮಗೆ ಪ್ರೇಮಪೂರ್ವಕ ಶರಣು ಶರಣಾರ್ಥಿಗಳು. ������
ReplyDeleteಧನ್ಯವಾದಗಳೊಂದಿಗೆ, ಶರಣು ಶರಣಾರ್ಥಿಗಳು ಅಣ್ಣಾವರೆ.🙏🏻💞🙏🏻
DeleteVery insightful
ReplyDeleteThank you, Sharanarthi.🙏🏻💞🙏🏻
Deleteಶರಣು ಶರಣಾರ್ಥಿ. 🙏🙏🌹
ReplyDeleteಶರಣು ಶರಣಾರ್ಥಿಗಳು.🙏🏻💞🙏🏻
Deleteಈ ಲೇಖನ ಓದಿ ನನಗೆ ಅತ್ಯಂತ ಆನಂದವಾಯಿತು. ಆಡಿಯೋ ಧ್ವನಿ ಕೇಳಿ ತುಂಬಾ ಪುಳಕಿತಾನಾದೇನು
ReplyDeleteಧನ್ಯವಾದಗಳು ತಮಗೆ 🙏🙏
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,
Deleteಶರಣು ಶರಣಾರ್ಥಿ.🙏🏻🙏🏻🙏🏻
Very happy to know that Amma avara lekhana is available online!! Good one Lokesh ,👌👌🙏🙏
ReplyDeleteತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,
Deleteಶರಣು ಶರಣಾರ್ಥಿ.🙏🏻🙏🏻🙏🏻
ಈ ಸುಂದರ ಲೇಖನ ಓದಿ ಮನಸ್ಸಿಗೆ ಬಹಳ ಆನಂದವಾಯಿತು ಶಿವಶರಣರ ಇನ್ನೂ ಅನೇಕ ಲೇಖನಗಳು ಬರಲಿ
ReplyDeleteತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,
Deleteಶರಣು ಶರಣಾರ್ಥಿ.🙏🏻🙏🏻🙏🏻
ಶರಣೆಯ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ಮೂಡಿಬಂದಿದೆ.
ReplyDeleteಧನ್ಯವಾದಗಳು ಸರ್.🙏🏻
DeleteSharanu.guru gale.
ReplyDeleteಧನ್ಯವಾದಗಳು.🙏🏻
DeleteGreat enlightening and insightful story. Makes everyone feel content and proud. Many more thanks sir. 🙏
ReplyDeleteಧನ್ಯವಾದಗಳು ಸರ್.🙏🏻
DeleteVery nice article.....
ReplyDeleteThank you sir.
Deleteಲೋಕೇಶ್ ಅವರೆ,ಪೂಜ್ಯ ಅಮ್ಮನವರ ಶರಧಿಯಂತಿತಿರುವ ಜೀವನ ಚರಿತ್ರೆಯ ಅಮೃತ ನಿಮ್ಮ ಬೊಗಸೆ ಯಿಂದ ನಮ್ಮೆಲ್ಲರಿಗೆ ಉಣಬಡಿಸಿದ್ದೀರಿ.ನಿಮಗೆ ಧನ್ಯವಾದಗಳು. ನಿಮ್ಮಿಂದ ಇನ್ನೂ ಅನೇಕ ಅಮ್ಮನವರ ಪವಾಡಗಳು ಹೊರಬರಲಿ.
ReplyDeleteಧನ್ಯವಾದಗಳು ಸರ್.🙏🏻
Deleteಅಮೃತವನ್ನು ಉಣ ಬಡಿಸುವ ನಿಮ್ಮ ಕಾಯಕ ಕ್ಕೆ ಶರಣು ಶರಣು,...
ReplyDeleteಧನ್ಯವಾದಗಳು ಸರ್.🙏🏻
Delete🙏🙏💐💐🙏🙏
ReplyDeleteSuper sir.
ReplyDeleteಶರಣು ಶರಣಾರ್ಥಿ,
ReplyDeleteಅಮ್ಮನವರ ಜೀವನ ಚರಿತ್ರೆ ಓದಿ ಮನಸ್ಸು ಖುಷಿ ಮತ್ತು ಶಾಂತಿ ಆಯಿತು